ಅಂಬೇಡ್ಕರ್ ವಾದಿ, ಬಹುಜನಪರ ಚಿಂತಕ, ಸಂಘಟನಾ ಚತರು ಉಡಚಪ್ಪ ಮಾಳಗಿ

Date:

ಅಂಬೇಡ್ಕರ್ ವಾದಿ, ಬಹುಜನಪರ ಚಿಂತಕ, ಸಂಘಟನಾ ಚತರು ಉಡಚಪ್ಪ ಮಾಳಗಿ


ಹಾವೇರಿಜಿಲ್ಲೆಯಲ್ಲಿ ದಲಿತ ಚಳುವಳಿಯಲ್ಲಿ ಕೇಳಿ ಬರುವ ಪ್ರಮುಖ ಹೆಸರು ಉಡಚಪ್ಪ ಮಾಳಗಿ ಅವರದ್ದು, ಜಿಲ್ಲೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಅಹಿಂದ್ ಎಂಬ ಹೋರಾಟದ ಕಿಚ್ಚಿನ ಬೀಜವನ್ನು ದಲಿತರ ಗುಡಿಸಲುಗಳಲ್ಲಿ ಬಿತ್ತಿದವರಲ್ಲಿ ಇವರು ಪ್ರಮುಖರು. ವಿದ್ಯಾರ್ಥಿ ಜೀವನದಲ್ಲಿ ಅಂಬೇಡ್ಕರ್ ವಿಚಾರಗಳಿಂದ ಪ್ರಭಾವಿತರಾಗಿ ಅಂಬೇಡ್ಕರ್ ಚಿಂತನೆಯೊಂದಿಗೆ ಶೋಷಿತ ಸಮುದಾಯದ ವಿಮೋಚನೆಗಾಗಿ ಶೋಷತ ವರ್ಗದ ಮನಪರಿವರ್ತನೆಗಾಗಿ ಒಟ್ಟು ಸಮಾಜ ಪರಿವರ್ತನೆಗಾಗಿ ಸಾಮಾಜಿಕ ಸಂಘಟನೆಗಳ ಮೂಲಕ ಸಾಕ್ಷರತಾ ಆಂದೋಲನದ ಮೂಲಕ ಚಿಕಿತ್ಸಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ದಲಿತ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಮೂಲಕ ನಾಡಿನಲ್ಲಿ ಭರವಸೆಯ ನಾಯಕರಾಗಿ ಹೊರ ಹೊಮ್ಮಿದವರು ಉಡಚಪ್ಪ ಮಾಳಗಿ .
ಸಮರ್ಥ ನಾಯಕತ್ವದಿಂದ ಸಮಕಾಲೀನ ದಲಿತ ಮತ್ತು ದಲಿತೇತರ ಅಹಿಂದ್ ವಿದ್ಯಾವಂತರನ್ನು ಈ ವರ್ಗದ ಜನರ ಜೊತೆಗೆ ನಿರಂತರ ಒಡನಾಟ, ಮನಪರಿವರ್ತನೆಯ ಮಾರ್ಗದಲ್ಲಿ ತಮ್ಮ ಚಿಂತನೆಯತ್ತ ವಾಲುವಂತೆ ಮಾಡಿ ಹಾವೇರಿ ಜಿಲ್ಲೆಯಲ್ಲಿ ಗಣನೀಯ ಸಂಖ್ಯೆಯ ಚಿಂತಕ ಬಳಗವನ್ನು ಸಂಘಟಿಸಿಕೊಳ್ಳುತ್ತಿದ್ದ ಸಂಘಟನಾ ಚತುರ ಎನ್ನುವುದರಲ್ಲಿ ಎರಡು ಮಾತಿಲ್ಲ.
ಜನಜಾಗೃತಿ ಜಾಥಾ, ತರಬೇತಿ ಶಿಬಿರ, ವಿಚಾರ ಸಂಕಿರಣ, ಮೂಢನಂಬಿಕೆ,ಅಂಧಶೃದ್ಧೆಯ ಬಗ್ಗೆ ಕಮ್ಮಟಗಳಂಥ ವಿಚಾರ ಕೇಂದ್ರಿತ ಕಾರ್ಯಕ್ರಮಗಳ ಮೂಲಕ ತಾವು ನಂಬಿದ ವಿಚಾರಧಾರೆಯತ್ತ ಅಹಿಂದ ವರ್ಗವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಬುದ್ಧ, ಬಸವ ಅಂಬೇಡ್ಕರರನ್ನು ಎದೆಗಿಳಿಸಿಕೊಂಡಿರುವ ಇವರು ರಾಜ್ಯಮಟ್ಟ, ರಾಷ್ಟ್ರ ಮಟ್ಟದ ಸಮಾವೇಶ, ಸಮ್ಮೇಳನಗಳ ಅಧಿವೇಶನಗಳಲ್ಲಿ ಪ್ರಬುದ್ಧ ವಿಚಾರ ಮಂಡನೆಗೈದು ಓರಗೆಯ ಸಮಾನ ಚಿಂತಕರ ಬಳಗವನ್ನೇ ಸೃಷ್ಠಿಸಿಕೊಂಡಿಇವರು ವಿದ್ಯೆಗೂ ಚಿಂತಕರಾಗಿ ತಮ್ಮದೇ ಅಭಿಮಾನಿ, ಅನುಯಾಯಿಗಳನ್ನು ಸಂಪಾದಿಸಿಕೊಂಡವರೂ ಹೌದು.
ತಮ್ಮ ಪ್ರಬುದ್ಧ ಭಾಷಣ, ವಿಚಾರಮಂಡನೆಗಳಿಂದ ನಾಡಿನ ಅನೇಕ ಅಂಬೇಡ್ಕರ್ ವಾದಿಗಳ, ಸಮಾಜವಾದಿಗಳ, ಹೋರಾಟಗಾರರ ಚಿಂತಕರ, ಬುದ್ಧಿಜೀವಿಗಳ, ವಿಚಾರವಾದಿಗಳ, ಸಾಹಿತಿಗಳ, ಜನಪದ ಚಿಂತಕರ, ಪತ್ರಕರ್ತರ, ಬರಹಗಾರರ ಆತ್ಮೀಯ ಒಡನಾಟ ಸಂಪಾದಿಸಿರುವ ಉಡಚಪ್ಪ ಮಾಳಗಿ ದಲಿತರ ಮೇಲೆ ದಬ್ಬಾಳಿಕೆ, ಹಲ್ಲೆ ನಡೆದ ಸಂದರ್ಭಲ್ಲಿ ಗಟ್ಟಿ ನಿಲುವು ತಳೆದು ಧಿಕ್ಕಾರ ಕೂಗುವವರಲ್ಲಿ ಇವರು ಮೊದಲಿಗರಾಗಿದ್ದಾರೆ.
ಚಳುವಳಿಯ ಹಾದಿಯಲ್ಲಿ ೧೯೮೦-೯೦, ೧೯೯೦ ರಿಂದ ೨೦೨೨ರ ಅವಧಿಯಲ್ಲಿ ಇವರು ಡಿಎಸ್‌ಎಸ್‌ನ ಮುಖಂಡರೊಂದಿಗೆ ಹೋರಾಟಗಳಲ್ಲಿ ಭಾಗವಹಿಸುವ ಮೂಲಕ ಒಬ್ಬ ಜವಾಬ್ದಾರಿಯುತ ದಲಿತ ಮುಖಂಡರಾಗಿ ರೂಪಗೊಂಡರು. ದಲಿತ ಕೇರಿಯಲ್ಲಿ ವಾಸವಿದ್ದು ಅನ್ನ, ಅಕ್ಷರಗಳಿಂದ ದೂರ ಉಳಿದಿದ್ದ ದಲಿತ ಬಂಧುಗಳ ಜೀವನದ ಕಡುಕಷ್ಟಗಳ ಅನುಭವ ಮತ್ತು ಅರಿವಿದ್ದ ಉಡಚಪ್ಪ ಮಾಳಗಿ ಕೇರಿಗಳಲ್ಲಿನ ಬಂಧುಗಳಲ್ಲಿ ಶಿಕ್ಷಣದ ಬಗ್ಗೆ ಜಾಗ್ರತಿ ಮೂಡಿಸುತ್ತಾ ರಾತ್ರಿವೇಳೆ ದೆವಸ್ಥಾನಗಳಲ್ಲಿ ಸಾಕ್ಷರತಾ ಚಳುವಳಿಯ ಕಾರ್ಯಕರ್ತರೊಂದಿಗೆ ದಲಿತ ಬಂಧುಗಳಿಗೆ ಅಕ್ಷರಕಲಿಕೆಯಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದರು.
ತಾಲೂಕು, ಜಿಲ್ಲಾ, ರಾಜ್ಯಮಟ್ಟದಲ್ಲಿ ಹಂತಹಂತವಾಗಿ ಬೆಳೆಯುತ್ತಾ ದಲಿತ ಚಳವಳಿಯಭಾಗವಾಗಿ ಸಂಘಟನೆಯನ್ನು ಬಲಪಡಿಸಲು ಶ್ರಮಿಸಿದ್ದಾರೆ. ಡಿಎಸ್‌ಎಸ್ ರಾಜ್ಯ ಸಮಿತಿಯ ಸದಸ್ಯರಾಗಿ, ಮಾನವ ಹಕ್ಕುಗಳ ದಂಘಟನೆಯ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಇವರು ಹಾವೇರಿನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿಯು ಕಾರ್ಯನಿರ್ವಹಿಸಿದ್ದಾರೆ. ಇಂದು ಯಾವುದೇ ಉತ್ತಮ ಕಾರ್ಯಮಾಡಲಿ ಕಾಲೇಳೆಯುವವರ ಸಂಖ್ಯೆಯೇ ಹೆಚ್ಚು, ಅವನನ್ನು ಮಾತನಾಡಿಸಬೇಡ, ಇವನನ್ನು ಬೆಂಬಲಿಸಬೇಡ, ಅವನು ಹಾಗೇ, ಇವನು ಹೀಗೆ…ಎಂದೇಲ್ಲಾ ಚಾಡಿಹೇಳುವರು, ಕಿವಿಕಡಿಯುವವರ ಮಧ್ಯೆ ಸಂಘಟನೆ ಕಟ್ಟುವುದು ಸುಲಭದ ಕೆಲಸವಲ್ಲ. ಆದರೆ ಉತ್ತಮ ಕೆಲಸ-ಕಾರ್ಯಗಳನ್ನು ಮಾಡಿದಾಗ ಹೇಳುವ ಒಂದು ಪ್ರೋತ್ಸಾದ ಮಾತು ಮುಖಂಡನಿಗೆ ಆನೆ ಬಲ ನೀಡುತ್ತದೆ.
ಚಟಗಳದಾಸರಾಗಿದ್ದ ಅನೇಕರನ್ನು ಬದಾಲಾಯಿಸಲು ಇವರು ಪ್ರಯತ್ನಿಸಿದ್ದಾರೆ. ಪೇಜಾವರಮಠದಶ್ರೀಗಳನ್ನು ಕರೆಸಿ ದಲಿತ ಕೇರೆಯಲ್ಲಿ ಪಾದಯಾತ್ರೆ ನಡೆಸಿ ದಲಿತ ಬಂಧುಗಳ ಮನ ಪರಿವರ್ತನೆಯಕಾರ್ಯದಲ್ಲಿಯೂ ಸಹ ಇವರು ಶ್ರಮಿಸಿದ್ದಾರೆ. ಹಾಗೇನೆ ನಾಡಿನ ಅನೇಕಮಠಾಧಿಶರನ್ನು, ಚಿಂತಕರನ್ನು, ಬುದ್ದಿಜೀವಿಗಳನ್ನು ಕೇರಿಗಳಿಗೆ ಆಹ್ವಾನಿಸಿ ಜನಜಾಗೃತಿಕಾರ್ಯವನ್ನು ಸಹ ಇವರು ಕೈಗೊಂಡಿದ್ದಾರೆ.
ಹೋರಾಟಗಾರ, ಚಿಂತಕ, ಹೋರಾಟದ ಹಾದಿಯಲ್ಲಿ ಚಳುವಳಿಯ ಪುಟಗಳಲ್ಲಿ ಇಂಥ ಅನೇಕ ಮಹತ್ವದ ಘಟನೆಗಳು, ಸ್ಮರಣಾರ್ಹ ಸಂಗತಿಗಳು, ಶ್ಲಾಘನಾರ್ಹ ಪ್ರಸಂಗಗಳು, ಉಲ್ಲೇಖಾರ್ಹ ಚಿತ್ರಣಗಳು ಅಗೆದಷ್ಟೂ ಇರಬಹುದೆಂಬುದೂ ಗಮನಾರ್ಹ.ಸಾಮಾಜಿಕ ಪಿಡುಗುಗಳಿಂದ ಪೀಡಿತರಾಗಿ ಧಾರ್ಮಿಕ , ಸಾಂಸ್ಕೃತಿಕ ಸಂತ್ರಸ್ತರಂತೆ ಬದುಕುತ್ತಿರುವ ಕೆಲವು ದಲಿತರಿಗೆ ತಮ್ಮದೇ ರೀತಿಯಲ್ಲಿ ತಿಳುವಳಿಕೆ ನೀಡುವಲ್ಲಿ ಮಾದರಿಯಾಗಿದ್ದಾರೆ.
ಚಳುವಳಿಯ ನಂಟು ಬಿಡದೆ ರಾಜ್ಯದ ಮೂಲೆ ಮೂಲೆಗಳ ಚಳುವಳಿಯ ಸಹಪಾಠಿಗಳು ಮತ್ತು ರಾಜ್ಯ ನಾಯಕರೊಂದಿಗಿನ ಮೂರು ದಶಕದ ಒಡನಾಟವನ್ನು ಜೋಪಾನವಾಗಿ ಉಳಿಸಿಕೊಂಡವರು. ಸಮಾಜ ಪರಿವರ್ತನಾ ಚಳುವಳಿಯ ಅನೇಕ ಪೂರಕ ಕಾರ್ಯಕ್ರಮಗಳಲ್ಲಿ ಅಪಾರ ಅಭಿಮಾನದಿಂದ ಉಡಚ್ಪಮಾಳಗಿ ಪಾಲ್ಗೊಳ್ಳುತ್ತಿದ್ದಾರೆ.
ಒಳ ಮೀಸಲಾತಿಜಾರಿಗಾಗಿ ನ್ಯಾ.ಸದಾಶಿವ ಆಯೋಗದ ಜಾರಿಗೆ ನಡೆದ ಹೋರಾಟದಲ್ಲಿ ಹಾವೆರಿಜಿಲ್ಲೆಯಲ್ಲಿ ಮೂಂಚೂಣಿಯ ನಾಯಕತ್ವ ವಹಿಸಿದವರನ್ನು ಉಡಚಪ್ಪ ಮಾಳಗಿ ಅವರು ಒಬ್ಬರಾಗಿದ್ದಾರೆ. ಒಳ ಮೀಸಲಾತಿಯಿಂದ ತನ್ನ ಸಮುದಾಯ ಯಾವುದೇ ಕಾರಣಕ್ಕೂ ವಂಚಿತವಾಗಬಾರದೆಂಬ ಮುಂದಾಲೋಚನೆಯಲ್ಲಿ ಅಂಬೇಡ್ಕರ್ ಸಿದ್ಧಾಂತಕ್ಕೆ ಧಕ್ಕೆಯಾಗದಂತೆ ದಲಿತರು ಜಾಗೃತಿಗಾಗಿ, ವಿಮೋಚನೆಗಾಗಿ, ಸ್ವಾವಲಂಬನೆಗಾಗಿ ಸ್ವಾಭಿಮಾನಕ್ಕಾಗಿ ಒಂದಾಗಿ ಜಾತಿ ಸಂಘಟನೆಯನ್ನೂ ಕಟ್ಟಿ ಜಾತಿ ಸ್ವಾಭಿಮಾನ ಮೂಡಿಸಲು ಶ್ರಮಿಸಿದ್ದಾರೆ.
ಯಾವುದೇ ವಕ್ತಿಯಿರಲಿ ಅಭಿಪ್ರಾಯ ಭೇದಗಳು ಸರ್ವೆ ಸಾಮಾನ್ಯ, ಉಡಚಪ್ಪ ಮಾಳಗಿ ತಗೆದುಕೊಂಡು ಕೆಲವು ನಿರ್ಧಾರಗಳು ಕೆವೊಮ್ಮೆ ಟೀಕೆಗೆ ಗುರಿಯಾಗಿವೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅನೇಕ ಕಾರಣಗಳಿಂದಾಗಿ ಇವರು ದಲಿತ ಚಳುವಳಿಗೆ ವಿರುದ್ಧವಾಗಿರುವ ಪಕ್ಷದೊಂದಿಗೆ ಗುರತಿಸಿಕೊಂಡು ಪ್ರಚಾರ ನಡೆಸಿದ್ದರ ಬಗ್ಗೆ ಚಳುವಳಿಯ ಚಾವಡಿಯಲ್ಲಿ ಇಂದಿಗೂ ಚರ್ಚೆ ನಡೆಯುತ್ತಿದೆ.
ಉಡಚಪ್ಪ ಭಾಷಣಕ್ಕೆ ನಿಂತರೆ ಸಭಾಂಗಣದಲ್ಲಿ ಸೇರಿದವರು ವಿದ್ಯಾವಂತರಾಗಿರಲಿ, ಅವಿದ್ಯಾವಂತರಾಗಿರಲಿ ಹೇಳಬೇಕಾದ ವಿಚಾರವನ್ನು ಮಸ್ತಕ ಗೋಡೆಯಲ್ಲಿ ಹೋಗಿ ಅಂಟಿಸಿ ಬರುವಂತಿರುತ್ತಾರೆ. ಕೊರೋನಾ ಸಂದರ್ಭದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಅಕ್ಕಿ ಸೇರಿದಂತೆ ಪಡಿತರ ಆಹಾರಧಾನ್ಯಗಳನ್ನು ಬಡದಲಿತ ಕುಟುಂಬಗಳಿಗೆ, ಅಲೆಮಾರಿಗಳಿಗೆ ವಿತರಿಸುವ ಮೂಲಕ ಸದ್ದಿಲ್ಲದೇ ಮಾನವೀಯ ಕಾರ್ಯವನ್ನು ಇವರು ಕೈಗೊಂಡಿದ್ದಾರೆ.
ಇಂದು ಕೆಲವು ದಲಿತ ಮುಖಂಡರು “ಹುದ್ದೆ”ಗೆ , “ಗುರುತಿನ ಚೀಟಿ”ಗೆ ಸಿಮೀತರಾಗಿರುವ ಸಂದರ್ಭದಲ್ಲಿ ದಲಿತ ಚಳುವಳಿಯನ್ನು ಸಕ್ರೀಯವಾಗಿಡಲು ಸಾಕಷ್ಟು ವಿಷಯಗಳಿದ್ದರೂ ಸಹ ದಲಿತ ಮುಖಂಡರಲ್ಲಿ ನಿರಾಸಕ್ತಿ ಕಾಣುತ್ತಿದೆ. ಈ ವೇಳೆಯಲ್ಲಿ ಉಡಚಪ್ಪ ಮಾಳಗಿ ತಾವು ಕೈಗೊಳ್ಳುವ ವಿಭಿನ್ನ ಕಾರ್ಯಗಳ ಮೂಲಕ ಭಿನ್ನವಾಗಿ ನಿಲ್ಲುತ್ತಾರೆ. ಹೀಗಾಗಿ ಇವರ ಸಂಘಟನಾ ಚತುರತೆಯನ್ನು ಅರಿತ ಕರ್ನಾಟಕ ರಾಜ್ಯ ಮಾದಿಗ ಸಮಾಜದ ಸಂಘಟನೆಯ ಮುಖಮಡರು ಉಡಚಪ್ಪ ಮಾಳಗಿ ಅವರಿಗೆ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.
ಉಡಚಪ್ಪ ಮಾಳಗಿ ತಮಗೆ ವಹಿಸಿರುವ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನದ ಗಂಭೀರತೆಯನ್ನು ಅರಿತು, ದಲಿತ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಉತ್ಸಾಹವನ್ನೂ ಮೂಡಿಸುವ ಮೂಲಕ ಆಶಾದಾಯಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದಲಿತ ಚಳುವಳಿಯನ್ನು, ಸಂಘಟನೆಗಳನ್ನು ಕಟ್ಟುವ ಮೂಲಕ ದಲಿತ ಚಳುವಳಿಯನ್ನು ಹರಿಯುವ ನೀರಿನಂತಹ ಚಲನ ಶೀಲತೆ ನೀಡುವ ನಿಟ್ಟಿನಲ್ಲಿ ಕಾರ್ಯಪೃವೃತ್ತರಾಗಲು ಗಂಭೀರವಾಗಿ ಚಿಂತಿಸುವ ಕಾಲ ಇದಾಗಿದೆ.

!

LEAVE A REPLY

Please enter your comment!
Please enter your name here

Subscribe

spot_imgspot_img

Popular

ಅಂಬೇಡ್ಕರ್ ವಾದಿ, ಬಹುಜನಪರ ಚಿಂತಕ, ಸಂಘಟನಾ ಚತರು ಉಡಚಪ್ಪ ಮಾಳಗಿ


ಹಾವೇರಿಜಿಲ್ಲೆಯಲ್ಲಿ ದಲಿತ ಚಳುವಳಿಯಲ್ಲಿ ಕೇಳಿ ಬರುವ ಪ್ರಮುಖ ಹೆಸರು ಉಡಚಪ್ಪ ಮಾಳಗಿ ಅವರದ್ದು, ಜಿಲ್ಲೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಅಹಿಂದ್ ಎಂಬ ಹೋರಾಟದ ಕಿಚ್ಚಿನ ಬೀಜವನ್ನು ದಲಿತರ ಗುಡಿಸಲುಗಳಲ್ಲಿ ಬಿತ್ತಿದವರಲ್ಲಿ ಇವರು ಪ್ರಮುಖರು. ವಿದ್ಯಾರ್ಥಿ ಜೀವನದಲ್ಲಿ ಅಂಬೇಡ್ಕರ್ ವಿಚಾರಗಳಿಂದ ಪ್ರಭಾವಿತರಾಗಿ ಅಂಬೇಡ್ಕರ್ ಚಿಂತನೆಯೊಂದಿಗೆ ಶೋಷಿತ ಸಮುದಾಯದ ವಿಮೋಚನೆಗಾಗಿ ಶೋಷತ ವರ್ಗದ ಮನಪರಿವರ್ತನೆಗಾಗಿ ಒಟ್ಟು ಸಮಾಜ ಪರಿವರ್ತನೆಗಾಗಿ ಸಾಮಾಜಿಕ ಸಂಘಟನೆಗಳ ಮೂಲಕ ಸಾಕ್ಷರತಾ ಆಂದೋಲನದ ಮೂಲಕ ಚಿಕಿತ್ಸಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ದಲಿತ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಮೂಲಕ ನಾಡಿನಲ್ಲಿ ಭರವಸೆಯ ನಾಯಕರಾಗಿ ಹೊರ ಹೊಮ್ಮಿದವರು ಉಡಚಪ್ಪ ಮಾಳಗಿ .
ಸಮರ್ಥ ನಾಯಕತ್ವದಿಂದ ಸಮಕಾಲೀನ ದಲಿತ ಮತ್ತು ದಲಿತೇತರ ಅಹಿಂದ್ ವಿದ್ಯಾವಂತರನ್ನು ಈ ವರ್ಗದ ಜನರ ಜೊತೆಗೆ ನಿರಂತರ ಒಡನಾಟ, ಮನಪರಿವರ್ತನೆಯ ಮಾರ್ಗದಲ್ಲಿ ತಮ್ಮ ಚಿಂತನೆಯತ್ತ ವಾಲುವಂತೆ ಮಾಡಿ ಹಾವೇರಿ ಜಿಲ್ಲೆಯಲ್ಲಿ ಗಣನೀಯ ಸಂಖ್ಯೆಯ ಚಿಂತಕ ಬಳಗವನ್ನು ಸಂಘಟಿಸಿಕೊಳ್ಳುತ್ತಿದ್ದ ಸಂಘಟನಾ ಚತುರ ಎನ್ನುವುದರಲ್ಲಿ ಎರಡು ಮಾತಿಲ್ಲ.
ಜನಜಾಗೃತಿ ಜಾಥಾ, ತರಬೇತಿ ಶಿಬಿರ, ವಿಚಾರ ಸಂಕಿರಣ, ಮೂಢನಂಬಿಕೆ,ಅಂಧಶೃದ್ಧೆಯ ಬಗ್ಗೆ ಕಮ್ಮಟಗಳಂಥ ವಿಚಾರ ಕೇಂದ್ರಿತ ಕಾರ್ಯಕ್ರಮಗಳ ಮೂಲಕ ತಾವು ನಂಬಿದ ವಿಚಾರಧಾರೆಯತ್ತ ಅಹಿಂದ ವರ್ಗವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಬುದ್ಧ, ಬಸವ ಅಂಬೇಡ್ಕರರನ್ನು ಎದೆಗಿಳಿಸಿಕೊಂಡಿರುವ ಇವರು ರಾಜ್ಯಮಟ್ಟ, ರಾಷ್ಟ್ರ ಮಟ್ಟದ ಸಮಾವೇಶ, ಸಮ್ಮೇಳನಗಳ ಅಧಿವೇಶನಗಳಲ್ಲಿ ಪ್ರಬುದ್ಧ ವಿಚಾರ ಮಂಡನೆಗೈದು ಓರಗೆಯ ಸಮಾನ ಚಿಂತಕರ ಬಳಗವನ್ನೇ ಸೃಷ್ಠಿಸಿಕೊಂಡಿಇವರು ವಿದ್ಯೆಗೂ ಚಿಂತಕರಾಗಿ ತಮ್ಮದೇ ಅಭಿಮಾನಿ, ಅನುಯಾಯಿಗಳನ್ನು ಸಂಪಾದಿಸಿಕೊಂಡವರೂ ಹೌದು.
ತಮ್ಮ ಪ್ರಬುದ್ಧ ಭಾಷಣ, ವಿಚಾರಮಂಡನೆಗಳಿಂದ ನಾಡಿನ ಅನೇಕ ಅಂಬೇಡ್ಕರ್ ವಾದಿಗಳ, ಸಮಾಜವಾದಿಗಳ, ಹೋರಾಟಗಾರರ ಚಿಂತಕರ, ಬುದ್ಧಿಜೀವಿಗಳ, ವಿಚಾರವಾದಿಗಳ, ಸಾಹಿತಿಗಳ, ಜನಪದ ಚಿಂತಕರ, ಪತ್ರಕರ್ತರ, ಬರಹಗಾರರ ಆತ್ಮೀಯ ಒಡನಾಟ ಸಂಪಾದಿಸಿರುವ ಉಡಚಪ್ಪ ಮಾಳಗಿ ದಲಿತರ ಮೇಲೆ ದಬ್ಬಾಳಿಕೆ, ಹಲ್ಲೆ ನಡೆದ ಸಂದರ್ಭಲ್ಲಿ ಗಟ್ಟಿ ನಿಲುವು ತಳೆದು ಧಿಕ್ಕಾರ ಕೂಗುವವರಲ್ಲಿ ಇವರು ಮೊದಲಿಗರಾಗಿದ್ದಾರೆ.
ಚಳುವಳಿಯ ಹಾದಿಯಲ್ಲಿ ೧೯೮೦-೯೦, ೧೯೯೦ ರಿಂದ ೨೦೨೨ರ ಅವಧಿಯಲ್ಲಿ ಇವರು ಡಿಎಸ್‌ಎಸ್‌ನ ಮುಖಂಡರೊಂದಿಗೆ ಹೋರಾಟಗಳಲ್ಲಿ ಭಾಗವಹಿಸುವ ಮೂಲಕ ಒಬ್ಬ ಜವಾಬ್ದಾರಿಯುತ ದಲಿತ ಮುಖಂಡರಾಗಿ ರೂಪಗೊಂಡರು. ದಲಿತ ಕೇರಿಯಲ್ಲಿ ವಾಸವಿದ್ದು ಅನ್ನ, ಅಕ್ಷರಗಳಿಂದ ದೂರ ಉಳಿದಿದ್ದ ದಲಿತ ಬಂಧುಗಳ ಜೀವನದ ಕಡುಕಷ್ಟಗಳ ಅನುಭವ ಮತ್ತು ಅರಿವಿದ್ದ ಉಡಚಪ್ಪ ಮಾಳಗಿ ಕೇರಿಗಳಲ್ಲಿನ ಬಂಧುಗಳಲ್ಲಿ ಶಿಕ್ಷಣದ ಬಗ್ಗೆ ಜಾಗ್ರತಿ ಮೂಡಿಸುತ್ತಾ ರಾತ್ರಿವೇಳೆ ದೆವಸ್ಥಾನಗಳಲ್ಲಿ ಸಾಕ್ಷರತಾ ಚಳುವಳಿಯ ಕಾರ್ಯಕರ್ತರೊಂದಿಗೆ ದಲಿತ ಬಂಧುಗಳಿಗೆ ಅಕ್ಷರಕಲಿಕೆಯಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದರು.
ತಾಲೂಕು, ಜಿಲ್ಲಾ, ರಾಜ್ಯಮಟ್ಟದಲ್ಲಿ ಹಂತಹಂತವಾಗಿ ಬೆಳೆಯುತ್ತಾ ದಲಿತ ಚಳವಳಿಯಭಾಗವಾಗಿ ಸಂಘಟನೆಯನ್ನು ಬಲಪಡಿಸಲು ಶ್ರಮಿಸಿದ್ದಾರೆ. ಡಿಎಸ್‌ಎಸ್ ರಾಜ್ಯ ಸಮಿತಿಯ ಸದಸ್ಯರಾಗಿ, ಮಾನವ ಹಕ್ಕುಗಳ ದಂಘಟನೆಯ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಇವರು ಹಾವೇರಿನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿಯು ಕಾರ್ಯನಿರ್ವಹಿಸಿದ್ದಾರೆ. ಇಂದು ಯಾವುದೇ ಉತ್ತಮ ಕಾರ್ಯಮಾಡಲಿ ಕಾಲೇಳೆಯುವವರ ಸಂಖ್ಯೆಯೇ ಹೆಚ್ಚು, ಅವನನ್ನು ಮಾತನಾಡಿಸಬೇಡ, ಇವನನ್ನು ಬೆಂಬಲಿಸಬೇಡ, ಅವನು ಹಾಗೇ, ಇವನು ಹೀಗೆ…ಎಂದೇಲ್ಲಾ ಚಾಡಿಹೇಳುವರು, ಕಿವಿಕಡಿಯುವವರ ಮಧ್ಯೆ ಸಂಘಟನೆ ಕಟ್ಟುವುದು ಸುಲಭದ ಕೆಲಸವಲ್ಲ. ಆದರೆ ಉತ್ತಮ ಕೆಲಸ-ಕಾರ್ಯಗಳನ್ನು ಮಾಡಿದಾಗ ಹೇಳುವ ಒಂದು ಪ್ರೋತ್ಸಾದ ಮಾತು ಮುಖಂಡನಿಗೆ ಆನೆ ಬಲ ನೀಡುತ್ತದೆ.
ಚಟಗಳದಾಸರಾಗಿದ್ದ ಅನೇಕರನ್ನು ಬದಾಲಾಯಿಸಲು ಇವರು ಪ್ರಯತ್ನಿಸಿದ್ದಾರೆ. ಪೇಜಾವರಮಠದಶ್ರೀಗಳನ್ನು ಕರೆಸಿ ದಲಿತ ಕೇರೆಯಲ್ಲಿ ಪಾದಯಾತ್ರೆ ನಡೆಸಿ ದಲಿತ ಬಂಧುಗಳ ಮನ ಪರಿವರ್ತನೆಯಕಾರ್ಯದಲ್ಲಿಯೂ ಸಹ ಇವರು ಶ್ರಮಿಸಿದ್ದಾರೆ. ಹಾಗೇನೆ ನಾಡಿನ ಅನೇಕಮಠಾಧಿಶರನ್ನು, ಚಿಂತಕರನ್ನು, ಬುದ್ದಿಜೀವಿಗಳನ್ನು ಕೇರಿಗಳಿಗೆ ಆಹ್ವಾನಿಸಿ ಜನಜಾಗೃತಿಕಾರ್ಯವನ್ನು ಸಹ ಇವರು ಕೈಗೊಂಡಿದ್ದಾರೆ.
ಹೋರಾಟಗಾರ, ಚಿಂತಕ, ಹೋರಾಟದ ಹಾದಿಯಲ್ಲಿ ಚಳುವಳಿಯ ಪುಟಗಳಲ್ಲಿ ಇಂಥ ಅನೇಕ ಮಹತ್ವದ ಘಟನೆಗಳು, ಸ್ಮರಣಾರ್ಹ ಸಂಗತಿಗಳು, ಶ್ಲಾಘನಾರ್ಹ ಪ್ರಸಂಗಗಳು, ಉಲ್ಲೇಖಾರ್ಹ ಚಿತ್ರಣಗಳು ಅಗೆದಷ್ಟೂ ಇರಬಹುದೆಂಬುದೂ ಗಮನಾರ್ಹ.ಸಾಮಾಜಿಕ ಪಿಡುಗುಗಳಿಂದ ಪೀಡಿತರಾಗಿ ಧಾರ್ಮಿಕ , ಸಾಂಸ್ಕೃತಿಕ ಸಂತ್ರಸ್ತರಂತೆ ಬದುಕುತ್ತಿರುವ ಕೆಲವು ದಲಿತರಿಗೆ ತಮ್ಮದೇ ರೀತಿಯಲ್ಲಿ ತಿಳುವಳಿಕೆ ನೀಡುವಲ್ಲಿ ಮಾದರಿಯಾಗಿದ್ದಾರೆ.
ಚಳುವಳಿಯ ನಂಟು ಬಿಡದೆ ರಾಜ್ಯದ ಮೂಲೆ ಮೂಲೆಗಳ ಚಳುವಳಿಯ ಸಹಪಾಠಿಗಳು ಮತ್ತು ರಾಜ್ಯ ನಾಯಕರೊಂದಿಗಿನ ಮೂರು ದಶಕದ ಒಡನಾಟವನ್ನು ಜೋಪಾನವಾಗಿ ಉಳಿಸಿಕೊಂಡವರು. ಸಮಾಜ ಪರಿವರ್ತನಾ ಚಳುವಳಿಯ ಅನೇಕ ಪೂರಕ ಕಾರ್ಯಕ್ರಮಗಳಲ್ಲಿ ಅಪಾರ ಅಭಿಮಾನದಿಂದ ಉಡಚ್ಪಮಾಳಗಿ ಪಾಲ್ಗೊಳ್ಳುತ್ತಿದ್ದಾರೆ.
ಒಳ ಮೀಸಲಾತಿಜಾರಿಗಾಗಿ ನ್ಯಾ.ಸದಾಶಿವ ಆಯೋಗದ ಜಾರಿಗೆ ನಡೆದ ಹೋರಾಟದಲ್ಲಿ ಹಾವೆರಿಜಿಲ್ಲೆಯಲ್ಲಿ ಮೂಂಚೂಣಿಯ ನಾಯಕತ್ವ ವಹಿಸಿದವರನ್ನು ಉಡಚಪ್ಪ ಮಾಳಗಿ ಅವರು ಒಬ್ಬರಾಗಿದ್ದಾರೆ. ಒಳ ಮೀಸಲಾತಿಯಿಂದ ತನ್ನ ಸಮುದಾಯ ಯಾವುದೇ ಕಾರಣಕ್ಕೂ ವಂಚಿತವಾಗಬಾರದೆಂಬ ಮುಂದಾಲೋಚನೆಯಲ್ಲಿ ಅಂಬೇಡ್ಕರ್ ಸಿದ್ಧಾಂತಕ್ಕೆ ಧಕ್ಕೆಯಾಗದಂತೆ ದಲಿತರು ಜಾಗೃತಿಗಾಗಿ, ವಿಮೋಚನೆಗಾಗಿ, ಸ್ವಾವಲಂಬನೆಗಾಗಿ ಸ್ವಾಭಿಮಾನಕ್ಕಾಗಿ ಒಂದಾಗಿ ಜಾತಿ ಸಂಘಟನೆಯನ್ನೂ ಕಟ್ಟಿ ಜಾತಿ ಸ್ವಾಭಿಮಾನ ಮೂಡಿಸಲು ಶ್ರಮಿಸಿದ್ದಾರೆ.
ಯಾವುದೇ ವಕ್ತಿಯಿರಲಿ ಅಭಿಪ್ರಾಯ ಭೇದಗಳು ಸರ್ವೆ ಸಾಮಾನ್ಯ, ಉಡಚಪ್ಪ ಮಾಳಗಿ ತಗೆದುಕೊಂಡು ಕೆಲವು ನಿರ್ಧಾರಗಳು ಕೆವೊಮ್ಮೆ ಟೀಕೆಗೆ ಗುರಿಯಾಗಿವೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅನೇಕ ಕಾರಣಗಳಿಂದಾಗಿ ಇವರು ದಲಿತ ಚಳುವಳಿಗೆ ವಿರುದ್ಧವಾಗಿರುವ ಪಕ್ಷದೊಂದಿಗೆ ಗುರತಿಸಿಕೊಂಡು ಪ್ರಚಾರ ನಡೆಸಿದ್ದರ ಬಗ್ಗೆ ಚಳುವಳಿಯ ಚಾವಡಿಯಲ್ಲಿ ಇಂದಿಗೂ ಚರ್ಚೆ ನಡೆಯುತ್ತಿದೆ.
ಉಡಚಪ್ಪ ಭಾಷಣಕ್ಕೆ ನಿಂತರೆ ಸಭಾಂಗಣದಲ್ಲಿ ಸೇರಿದವರು ವಿದ್ಯಾವಂತರಾಗಿರಲಿ, ಅವಿದ್ಯಾವಂತರಾಗಿರಲಿ ಹೇಳಬೇಕಾದ ವಿಚಾರವನ್ನು ಮಸ್ತಕ ಗೋಡೆಯಲ್ಲಿ ಹೋಗಿ ಅಂಟಿಸಿ ಬರುವಂತಿರುತ್ತಾರೆ. ಕೊರೋನಾ ಸಂದರ್ಭದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಅಕ್ಕಿ ಸೇರಿದಂತೆ ಪಡಿತರ ಆಹಾರಧಾನ್ಯಗಳನ್ನು ಬಡದಲಿತ ಕುಟುಂಬಗಳಿಗೆ, ಅಲೆಮಾರಿಗಳಿಗೆ ವಿತರಿಸುವ ಮೂಲಕ ಸದ್ದಿಲ್ಲದೇ ಮಾನವೀಯ ಕಾರ್ಯವನ್ನು ಇವರು ಕೈಗೊಂಡಿದ್ದಾರೆ.
ಇಂದು ಕೆಲವು ದಲಿತ ಮುಖಂಡರು “ಹುದ್ದೆ”ಗೆ , “ಗುರುತಿನ ಚೀಟಿ”ಗೆ ಸಿಮೀತರಾಗಿರುವ ಸಂದರ್ಭದಲ್ಲಿ ದಲಿತ ಚಳುವಳಿಯನ್ನು ಸಕ್ರೀಯವಾಗಿಡಲು ಸಾಕಷ್ಟು ವಿಷಯಗಳಿದ್ದರೂ ಸಹ ದಲಿತ ಮುಖಂಡರಲ್ಲಿ ನಿರಾಸಕ್ತಿ ಕಾಣುತ್ತಿದೆ. ಈ ವೇಳೆಯಲ್ಲಿ ಉಡಚಪ್ಪ ಮಾಳಗಿ ತಾವು ಕೈಗೊಳ್ಳುವ ವಿಭಿನ್ನ ಕಾರ್ಯಗಳ ಮೂಲಕ ಭಿನ್ನವಾಗಿ ನಿಲ್ಲುತ್ತಾರೆ. ಹೀಗಾಗಿ ಇವರ ಸಂಘಟನಾ ಚತುರತೆಯನ್ನು ಅರಿತ ಕರ್ನಾಟಕ ರಾಜ್ಯ ಮಾದಿಗ ಸಮಾಜದ ಸಂಘಟನೆಯ ಮುಖಮಡರು ಉಡಚಪ್ಪ ಮಾಳಗಿ ಅವರಿಗೆ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.
ಉಡಚಪ್ಪ ಮಾಳಗಿ ತಮಗೆ ವಹಿಸಿರುವ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನದ ಗಂಭೀರತೆಯನ್ನು ಅರಿತು, ದಲಿತ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಉತ್ಸಾಹವನ್ನೂ ಮೂಡಿಸುವ ಮೂಲಕ ಆಶಾದಾಯಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದಲಿತ ಚಳುವಳಿಯನ್ನು, ಸಂಘಟನೆಗಳನ್ನು ಕಟ್ಟುವ ಮೂಲಕ ದಲಿತ ಚಳುವಳಿಯನ್ನು ಹರಿಯುವ ನೀರಿನಂತಹ ಚಲನ ಶೀಲತೆ ನೀಡುವ ನಿಟ್ಟಿನಲ್ಲಿ ಕಾರ್ಯಪೃವೃತ್ತರಾಗಲು ಗಂಭೀರವಾಗಿ ಚಿಂತಿಸುವ ಕಾಲ ಇದಾಗಿದೆ.

!

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...