“ಉರಗ ರಕ್ಷಕ. ಹಾವೇರಿಯ  ಗೃಹರಕ್ಷಕ ಶ್ರೀಕಾಂತ್ ಮರೆಯಮ್ಮನವರ”

Date:

“ಉರಗ ರಕ್ಷಕ. ಹಾವೇರಿಯ  ಗೃಹರಕ್ಷಕ ಶ್ರೀಕಾಂತ್ ಮರೆಯಮ್ಮನವರ”

೬ಸಾವಿರಕ್ಕೂ ಅಧಿಕ ಹಾವುಗಳ ರಕ್ಷಣೆ
ಹಾವೇರಿ: ಈತನ ಹೆಸರು ಶ್ರೀಕಾಂತ್ ಮರೆಯಮ್ಮನವರ ಎಂದು, ವೃತ್ತಿಯಿಂದ  ಗೃಹರಕ್ಷನಾಗಿದ್ದು, ಇಲ್ಲಿನ ಜಿಲ್ಲಾಡಳಿತಭವನದಲ್ಲಿ ಗೃಹರಕ್ಷಕ ಸೇವೆಯಲ್ಲಿದ್ದಾರೆ. ವೃತ್ತಿಯಿಂದ ಗೃಹರಕ್ಷನಾಗಿರುವ ಇವರು

ಹಾವುಗಳನ್ನು ಹಿಡಿಯುವುದು, ಅವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಡುವುದು ಇವರ ಪ್ರವೃತ್ತಿಯಾಗಿದೆ.
ಜಿಲ್ಲೆಯ ಹಿರೇಕೆರೂರು ತಾಲೂಕಿನ ಡಮ್ಮಳ್ಳಿಗ್ರಾಮದವಾರದ ಇವರು ೩೬ವರ್ಷದವರಾಗಿದ್ದು, ಹಾವುಗಳ ಹಿಡಿಯುವುದಕ್ಕೆ ಪ್ರೇರಣೆ ಇವರ ಸಹೋದರ ಸ್ನೇಕ ರಮೇಶ ಎಂದು ಖ್ಯಾತರಾಗಿರುವ ಡಿರ್ ಪೊಲೀಸ್ ಆಗಿರುವ ರಮೇಶ ಅವರು,. ತಮ್ಮ ಸಹೋದರ ಹಾವುಗಳನ್ನು ಹಿಡಿಯುವುದನ್ನು ನೋಡಿ, ತಾನು ಏಕೆ ಹಾವುಗಳನ್ನು ಹಿಡಿಯಬೇಕೆನ್ನುವ ಕೂತಹಲದಿಂದ ಹಾವು ಹಿಡಿಯುವುದನ್ನು ಸಹೋದರನಿಂದ ಕಲಿತ ಇವರು  ಇಲ್ಲಿಯವರೆಗೆ  ೬ಸಾವಿರಕ್ಕೂ ಅಧಿಕ ಹಾವುಗಳನ್ನು ರಕ್ಷಣೆ ಮಾಡಿ ಅವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಜಿಲ್ಲಾಡಳಿತಭವನ, ವಿವಿಧ ಸರ್ಕಾರಿ ಕಚೇರಿಗಳಿಗೆ, ಮನೆಗಳಿಗೆ ಹಾವುಗಳು  ಪ್ರವೇಶಿಸಿದ ಸಂದರ್ಭದಲ್ಲಿ ತಮಗೆ ಬರುವ ಕರೆಗಳನ್ನು ಆಧರಿಸಿ ತಮ್ಮ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ ಸಮಯಾವಕಾಶಮಾಡಿಕೊಂಡು ಹಾವು ಬಂದಿರುವ ಸ್ಥಳಕ್ಕೆ ತೆರಳುವ ಶ್ರೀಕಾಂತ್ ಮರೆಯಮ್ಮನವರ ತಮ್ಮ ಚಾಕಚಕ್ಯತೆಯಿಂದ ಹಾವನ್ನು ಹಿಡಿದು ಸಾರ್ವಜನಕರಲ್ಲಿ ಭಯ ನಿವಾರಿಸಿ ಡಬ್ಬದಲ್ಲಿ ಹಾವನ್ನು ಹಾಕಿಕೊಂಡು ಕಾಡಿಗೆ ಹಾವನ್ನು ಬಿಟ್ಟು ಬರುತ್ತಾರೆ.
ಹಾವು ಹಿಡಿದು ರಕ್ಷಣೆ ಮಾಡುವ ಈ ಹವ್ಯಾಸಕ್ಕೆ ಜಿಲ್ಲಾಧಿಕಾರಿ ಡಾ.ಮಹಾಂತೇಶ ದಾನಮ್ಮನವರ, ಗೃಹರಕ್ಷಕದಳದ ಕಮಾಂಡೆಟ್ ಪ್ರಮೋದ ನಲವಾಗಲ, ಸಿಬ್ಬಂದಿ ಇಮ್ತಿಯಾಜ ಸೇರಿದಂತೆ ಗೃಹರಕ್ಷಕ ಇಲಾಖೆಯ ಅಧಿಕಾರಿಗಳು,ಹಾಗೂ ಸಿಬ್ಬಂದಿ, ಸಾರ್ವಜನಿಕರು  ಸಾಕಷ್ಟು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಹಾವುಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ನಿಟ್ಟಿಲ್ಲಿ ಹಲವಾರು ಶಾಲೆಗಳಲ್ಲಿ ಹಾವುಗಳ ಜೀವನ ಕ್ರಮ, ಅವುಗಳ ರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಮಾಡುತ್ತಿರುವ   ಶ್ರೀಕಾಂತ್ ಮರೆಯಮ್ಮನವರ, ಹಾವುಗಳು ಗಾಯಗೊಂಡ ಸಂದರ್ಭದಲ್ಲಿ ಅವುಗಳಿಗೆ ಚಿಕಿತ್ಸೆಯನ್ನು ಸಹ ನೀಡುವ ಇವರು ಎಲ್ಲರ ಸಹಕಾರದಿಂದ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಹಾವುಗಳ ರಕ್ಷಣೆ ಮಾಡಲು ಸಾಧ್ಯವಾಗಿದೆ ಎನ್ನುತ್ತಾರೆ.
ಜೂ.೨೦ರಂದು ಹಾವೇರಿಯ ತಹಶೀಲ್ದಾರ ಕಚೇರಿಗೆ ನುಗ್ಗಿದ್ದ ಹಾವನ್ನು ಇವರು ರಕ್ಷಿಸಿದ ಪರಿ ರೋಚಕವಾಗಿದೆ. ತಹಶೀಲ್ದಾರ ಕಚೇರಿಗೆ ಸಾಮಾನ್ಯವಾಗಿ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಸಾರ್ವಜನಿಕರು  ವಿವಿಧ ಪ್ರಮಾಣ ಪತ್ರದ ಅವಶ್ಯಕತೆಗೆ  ಬರುವುದು ಸರ್ವೇ ಸಾಮಾನ್ಯ, ಆದರೆ ನಾಗರಹಾವೊಂದು ಯಹಶೀಲ್ದಾರ ಕಚೇರಿಗೆ ಆಗಮಿಸುವ ಮೂಲಕ ಕಚೇರಿಯಲ್ಲಿಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಶನಿವಾರ ಬೆಚ್ಚಿ ಬಿಳಿಸಿತ್ತು.
ಸಾರ್ವಜನಿಕರಿಂದ ತುಂಬಿ ತುಳುಕುತ್ತಿದ್ದ ಹಾವೇರಿ ತಹಶೀಲ್ದಾರ್ ಕಛೇರಿಗೆ ನಾಗರ ಹಾವೊಂದು ಬಂದಿದ್ದು, ಜನರಲ್ಲಿ ಆತಂಕ ಮೂಡಿಸಿತ್ತು. ಕಛೇರಿಯ ಸಿಬ್ಬಂದಿಯೊಬ್ಬರು ತಕ್ಷಣವೇ ಎಚ್ಚೆತ್ತುಕೊಂಡು  ಉರಗ ರಕ್ಷಕ ಹಾಗೂ ಸ್ನೇಕ್ ಪ್ರೇಮಿ  ಶ್ರೀಕಾಂತ್ ಮರೆಯಮ್ಮನವರಗೆ ಕರೆ ಮಾಡಿ ವಿಷಯ ತಿಳಿಸುತ್ತಿದ್ದಂತೆ ಹಾವು ಹಿಡಿಯುವ ದಂಡದೊಂದಿಗೆ ಸ್ಥಳಕ್ಕೆ ದೌಡಾಯಿಸಿದ  ಶ್ರೀಕಾಂತ್ ಮರೆಯಮ್ಮನವರ  ಎರಡು ಗಂಟೆಗೂ ಹೆಚ್ಚು ಕಾಲ ಕಾರ್ಯಚರಣೆ ನಡೆಸಿ ಕಲ್ಲಿನ ಪೊಟರೆಯಲ್ಲಿ ಅವಿತುಕೊಂಡಿದ್ದ ನಾಗರಹಾವನ್ನು ಸುರಕ್ಷಿತವಾಗಿ ಹಿಡಿಯುವಲ್ಲಿ ಯಶಸ್ವಿಯಾದರು.
ನಾಗರ ಹಾವೊಂದು ಅತಿ ಸೂಕ್ಷ್ಮ ಜೀವಿ (ಸರೀಸೃಪ) ಅದು  ಸಾಮಾನ್ಯವಾಗಿ ಜನದಟ್ಟನೆ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವುದಿಲ್ಲ. ಇದೀಗ ಹೆಚ್ಚು ಮಳೆಯಾಗುತ್ತಿದ್ದರಿಂದ ಅವುಗಳ ವಾಸಸ್ಥಾನ ನೀರಿನಿಂದ ತುಂಬಿದ್ದರಿಂದ ಹೊರಬರುತ್ತಿವೆ. ಅವುಗಳು ಅನಾವಶ್ಯಕವಾಗಿ ಯಾವುದೇ ತೊಂದರೆ ಕೊಡುವುದಿಲ್ಲ. ಮನುಷ್ಯರು ಅವುಗಳಿಗೆ ತೊಂದರೆ ನೀಡಿದರೆ ಮಾತ್ರಾವೇ ಅವುಗಳು ಕಚ್ಚಲು ಬರುತ್ತವೆ ಹಾಗಾಗಿ ಸಾರ್ವಜನಿಕರಿಗೆ ಯಾವುದೇ ಹಾವು ಕಾಣಿಸಿಕೊಂಡರು ಅವುಗಳಿಗೆ ಹಿಂಸೆ ನೀಡದೆ ನನ್ನನ್ನು ಸಂಪರ್ಕಿಸಿದರೆ ನಾನು ಅವುಗಳನ್ನು ಸಂರಕ್ಷಿಸಿ ಸುರಕ್ಷಿತವಾಗಿ ಕಾಡಿನಲ್ಲಿ ಬಿಡುತ್ತೇನೆ ಎಂದು  ಶ್ರೀಕಾಂತ್ ಮರೆಯಮ್ಮನವರ ತಿಳಿಸಿದರು.
ಇತ್ತೀಚೆಗೆ ಜಿಲ್ಲಾಧಿಕಾರಿಗಳ ಕಛೇರಿಯ ಹಿಂಭಾಗದಲ್ಲಿ ನಾಗರ ತಾಯಿ ಹಾವೊಂದು ಸುಮಾರು ೪೫ ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಟ್ಟು ಯಾವುದೋ ಇತರೆ ಜೀವಿಯ ದಾಳಿಯಿಂದ ಅಸ್ತವ್ಯಸ್ತವಾಗಿತ್ತು. ನಂತರ ಅದನ್ನು ರಕ್ಷಣೆ ಮಾಡಿ ಅದರ ೫೦ ಹೆಚ್ಚು ಮೊಟ್ಟೆಗಳಿಗೆ ಕೃತಕವಾಗಿ ಕಾವು ನೀಡುವ ವ್ಯವಸ್ಥೆ ಮಾಡಿ ಅದರಲ್ಲಿ ೪೨ ಮರಿಗಳು ಬದುಕುಳಿದವು. ನಂತರ ಅವುಗಳನ್ನು ಒಂದು ವಾರದ ಕಾಲ ಆರೈಕೆ ಮಾಡಿ ಅವುಗಳನ್ನು ಜೋಪಾನವಾಗಿ ಕಾಡಿನಲ್ಲಿ  ಶ್ರೀಕಾಂತ್ ಮರೆಯಮ್ಮನವರ ಬಿಟ್ಟಿದ್ದಾರೆ. ನಿಮಗೇನಾದರೂ ಹಾವುಗಳು ಕಂಡರೆ ಅವುಗಳ ರಕ್ಷಣೆಗಾಗಿ  ಶ್ರೀಕಾಂತ್ ಮರೆಯಮ್ಮನವರ ಮೊ:೮೯೭೧೧೯೧೩೮೦ ಕರೆಮಾಡಿ. ನೀವು ಸಹ ಹಾವುಗಳ ರಕ್ಷಣೆಗೆ ಕೈಜೋಡಿಸಿರಿ.
ಮಾಲತೇಶ ಅಂಗೂರ, ಹಾವೇರಿ.

LEAVE A REPLY

Please enter your comment!
Please enter your name here

Subscribe

spot_imgspot_img

Popular

“ಉರಗ ರಕ್ಷಕ. ಹಾವೇರಿಯ  ಗೃಹರಕ್ಷಕ ಶ್ರೀಕಾಂತ್ ಮರೆಯಮ್ಮನವರ”

೬ಸಾವಿರಕ್ಕೂ ಅಧಿಕ ಹಾವುಗಳ ರಕ್ಷಣೆ
ಹಾವೇರಿ: ಈತನ ಹೆಸರು ಶ್ರೀಕಾಂತ್ ಮರೆಯಮ್ಮನವರ ಎಂದು, ವೃತ್ತಿಯಿಂದ  ಗೃಹರಕ್ಷನಾಗಿದ್ದು, ಇಲ್ಲಿನ ಜಿಲ್ಲಾಡಳಿತಭವನದಲ್ಲಿ ಗೃಹರಕ್ಷಕ ಸೇವೆಯಲ್ಲಿದ್ದಾರೆ. ವೃತ್ತಿಯಿಂದ ಗೃಹರಕ್ಷನಾಗಿರುವ ಇವರು

ಹಾವುಗಳನ್ನು ಹಿಡಿಯುವುದು, ಅವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಡುವುದು ಇವರ ಪ್ರವೃತ್ತಿಯಾಗಿದೆ.
ಜಿಲ್ಲೆಯ ಹಿರೇಕೆರೂರು ತಾಲೂಕಿನ ಡಮ್ಮಳ್ಳಿಗ್ರಾಮದವಾರದ ಇವರು ೩೬ವರ್ಷದವರಾಗಿದ್ದು, ಹಾವುಗಳ ಹಿಡಿಯುವುದಕ್ಕೆ ಪ್ರೇರಣೆ ಇವರ ಸಹೋದರ ಸ್ನೇಕ ರಮೇಶ ಎಂದು ಖ್ಯಾತರಾಗಿರುವ ಡಿರ್ ಪೊಲೀಸ್ ಆಗಿರುವ ರಮೇಶ ಅವರು,. ತಮ್ಮ ಸಹೋದರ ಹಾವುಗಳನ್ನು ಹಿಡಿಯುವುದನ್ನು ನೋಡಿ, ತಾನು ಏಕೆ ಹಾವುಗಳನ್ನು ಹಿಡಿಯಬೇಕೆನ್ನುವ ಕೂತಹಲದಿಂದ ಹಾವು ಹಿಡಿಯುವುದನ್ನು ಸಹೋದರನಿಂದ ಕಲಿತ ಇವರು  ಇಲ್ಲಿಯವರೆಗೆ  ೬ಸಾವಿರಕ್ಕೂ ಅಧಿಕ ಹಾವುಗಳನ್ನು ರಕ್ಷಣೆ ಮಾಡಿ ಅವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಜಿಲ್ಲಾಡಳಿತಭವನ, ವಿವಿಧ ಸರ್ಕಾರಿ ಕಚೇರಿಗಳಿಗೆ, ಮನೆಗಳಿಗೆ ಹಾವುಗಳು  ಪ್ರವೇಶಿಸಿದ ಸಂದರ್ಭದಲ್ಲಿ ತಮಗೆ ಬರುವ ಕರೆಗಳನ್ನು ಆಧರಿಸಿ ತಮ್ಮ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ ಸಮಯಾವಕಾಶಮಾಡಿಕೊಂಡು ಹಾವು ಬಂದಿರುವ ಸ್ಥಳಕ್ಕೆ ತೆರಳುವ ಶ್ರೀಕಾಂತ್ ಮರೆಯಮ್ಮನವರ ತಮ್ಮ ಚಾಕಚಕ್ಯತೆಯಿಂದ ಹಾವನ್ನು ಹಿಡಿದು ಸಾರ್ವಜನಕರಲ್ಲಿ ಭಯ ನಿವಾರಿಸಿ ಡಬ್ಬದಲ್ಲಿ ಹಾವನ್ನು ಹಾಕಿಕೊಂಡು ಕಾಡಿಗೆ ಹಾವನ್ನು ಬಿಟ್ಟು ಬರುತ್ತಾರೆ.
ಹಾವು ಹಿಡಿದು ರಕ್ಷಣೆ ಮಾಡುವ ಈ ಹವ್ಯಾಸಕ್ಕೆ ಜಿಲ್ಲಾಧಿಕಾರಿ ಡಾ.ಮಹಾಂತೇಶ ದಾನಮ್ಮನವರ, ಗೃಹರಕ್ಷಕದಳದ ಕಮಾಂಡೆಟ್ ಪ್ರಮೋದ ನಲವಾಗಲ, ಸಿಬ್ಬಂದಿ ಇಮ್ತಿಯಾಜ ಸೇರಿದಂತೆ ಗೃಹರಕ್ಷಕ ಇಲಾಖೆಯ ಅಧಿಕಾರಿಗಳು,ಹಾಗೂ ಸಿಬ್ಬಂದಿ, ಸಾರ್ವಜನಿಕರು  ಸಾಕಷ್ಟು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಹಾವುಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ನಿಟ್ಟಿಲ್ಲಿ ಹಲವಾರು ಶಾಲೆಗಳಲ್ಲಿ ಹಾವುಗಳ ಜೀವನ ಕ್ರಮ, ಅವುಗಳ ರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಮಾಡುತ್ತಿರುವ   ಶ್ರೀಕಾಂತ್ ಮರೆಯಮ್ಮನವರ, ಹಾವುಗಳು ಗಾಯಗೊಂಡ ಸಂದರ್ಭದಲ್ಲಿ ಅವುಗಳಿಗೆ ಚಿಕಿತ್ಸೆಯನ್ನು ಸಹ ನೀಡುವ ಇವರು ಎಲ್ಲರ ಸಹಕಾರದಿಂದ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಹಾವುಗಳ ರಕ್ಷಣೆ ಮಾಡಲು ಸಾಧ್ಯವಾಗಿದೆ ಎನ್ನುತ್ತಾರೆ.
ಜೂ.೨೦ರಂದು ಹಾವೇರಿಯ ತಹಶೀಲ್ದಾರ ಕಚೇರಿಗೆ ನುಗ್ಗಿದ್ದ ಹಾವನ್ನು ಇವರು ರಕ್ಷಿಸಿದ ಪರಿ ರೋಚಕವಾಗಿದೆ. ತಹಶೀಲ್ದಾರ ಕಚೇರಿಗೆ ಸಾಮಾನ್ಯವಾಗಿ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಸಾರ್ವಜನಿಕರು  ವಿವಿಧ ಪ್ರಮಾಣ ಪತ್ರದ ಅವಶ್ಯಕತೆಗೆ  ಬರುವುದು ಸರ್ವೇ ಸಾಮಾನ್ಯ, ಆದರೆ ನಾಗರಹಾವೊಂದು ಯಹಶೀಲ್ದಾರ ಕಚೇರಿಗೆ ಆಗಮಿಸುವ ಮೂಲಕ ಕಚೇರಿಯಲ್ಲಿಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಶನಿವಾರ ಬೆಚ್ಚಿ ಬಿಳಿಸಿತ್ತು.
ಸಾರ್ವಜನಿಕರಿಂದ ತುಂಬಿ ತುಳುಕುತ್ತಿದ್ದ ಹಾವೇರಿ ತಹಶೀಲ್ದಾರ್ ಕಛೇರಿಗೆ ನಾಗರ ಹಾವೊಂದು ಬಂದಿದ್ದು, ಜನರಲ್ಲಿ ಆತಂಕ ಮೂಡಿಸಿತ್ತು. ಕಛೇರಿಯ ಸಿಬ್ಬಂದಿಯೊಬ್ಬರು ತಕ್ಷಣವೇ ಎಚ್ಚೆತ್ತುಕೊಂಡು  ಉರಗ ರಕ್ಷಕ ಹಾಗೂ ಸ್ನೇಕ್ ಪ್ರೇಮಿ  ಶ್ರೀಕಾಂತ್ ಮರೆಯಮ್ಮನವರಗೆ ಕರೆ ಮಾಡಿ ವಿಷಯ ತಿಳಿಸುತ್ತಿದ್ದಂತೆ ಹಾವು ಹಿಡಿಯುವ ದಂಡದೊಂದಿಗೆ ಸ್ಥಳಕ್ಕೆ ದೌಡಾಯಿಸಿದ  ಶ್ರೀಕಾಂತ್ ಮರೆಯಮ್ಮನವರ  ಎರಡು ಗಂಟೆಗೂ ಹೆಚ್ಚು ಕಾಲ ಕಾರ್ಯಚರಣೆ ನಡೆಸಿ ಕಲ್ಲಿನ ಪೊಟರೆಯಲ್ಲಿ ಅವಿತುಕೊಂಡಿದ್ದ ನಾಗರಹಾವನ್ನು ಸುರಕ್ಷಿತವಾಗಿ ಹಿಡಿಯುವಲ್ಲಿ ಯಶಸ್ವಿಯಾದರು.
ನಾಗರ ಹಾವೊಂದು ಅತಿ ಸೂಕ್ಷ್ಮ ಜೀವಿ (ಸರೀಸೃಪ) ಅದು  ಸಾಮಾನ್ಯವಾಗಿ ಜನದಟ್ಟನೆ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವುದಿಲ್ಲ. ಇದೀಗ ಹೆಚ್ಚು ಮಳೆಯಾಗುತ್ತಿದ್ದರಿಂದ ಅವುಗಳ ವಾಸಸ್ಥಾನ ನೀರಿನಿಂದ ತುಂಬಿದ್ದರಿಂದ ಹೊರಬರುತ್ತಿವೆ. ಅವುಗಳು ಅನಾವಶ್ಯಕವಾಗಿ ಯಾವುದೇ ತೊಂದರೆ ಕೊಡುವುದಿಲ್ಲ. ಮನುಷ್ಯರು ಅವುಗಳಿಗೆ ತೊಂದರೆ ನೀಡಿದರೆ ಮಾತ್ರಾವೇ ಅವುಗಳು ಕಚ್ಚಲು ಬರುತ್ತವೆ ಹಾಗಾಗಿ ಸಾರ್ವಜನಿಕರಿಗೆ ಯಾವುದೇ ಹಾವು ಕಾಣಿಸಿಕೊಂಡರು ಅವುಗಳಿಗೆ ಹಿಂಸೆ ನೀಡದೆ ನನ್ನನ್ನು ಸಂಪರ್ಕಿಸಿದರೆ ನಾನು ಅವುಗಳನ್ನು ಸಂರಕ್ಷಿಸಿ ಸುರಕ್ಷಿತವಾಗಿ ಕಾಡಿನಲ್ಲಿ ಬಿಡುತ್ತೇನೆ ಎಂದು  ಶ್ರೀಕಾಂತ್ ಮರೆಯಮ್ಮನವರ ತಿಳಿಸಿದರು.
ಇತ್ತೀಚೆಗೆ ಜಿಲ್ಲಾಧಿಕಾರಿಗಳ ಕಛೇರಿಯ ಹಿಂಭಾಗದಲ್ಲಿ ನಾಗರ ತಾಯಿ ಹಾವೊಂದು ಸುಮಾರು ೪೫ ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಟ್ಟು ಯಾವುದೋ ಇತರೆ ಜೀವಿಯ ದಾಳಿಯಿಂದ ಅಸ್ತವ್ಯಸ್ತವಾಗಿತ್ತು. ನಂತರ ಅದನ್ನು ರಕ್ಷಣೆ ಮಾಡಿ ಅದರ ೫೦ ಹೆಚ್ಚು ಮೊಟ್ಟೆಗಳಿಗೆ ಕೃತಕವಾಗಿ ಕಾವು ನೀಡುವ ವ್ಯವಸ್ಥೆ ಮಾಡಿ ಅದರಲ್ಲಿ ೪೨ ಮರಿಗಳು ಬದುಕುಳಿದವು. ನಂತರ ಅವುಗಳನ್ನು ಒಂದು ವಾರದ ಕಾಲ ಆರೈಕೆ ಮಾಡಿ ಅವುಗಳನ್ನು ಜೋಪಾನವಾಗಿ ಕಾಡಿನಲ್ಲಿ  ಶ್ರೀಕಾಂತ್ ಮರೆಯಮ್ಮನವರ ಬಿಟ್ಟಿದ್ದಾರೆ. ನಿಮಗೇನಾದರೂ ಹಾವುಗಳು ಕಂಡರೆ ಅವುಗಳ ರಕ್ಷಣೆಗಾಗಿ  ಶ್ರೀಕಾಂತ್ ಮರೆಯಮ್ಮನವರ ಮೊ:೮೯೭೧೧೯೧೩೮೦ ಕರೆಮಾಡಿ. ನೀವು ಸಹ ಹಾವುಗಳ ರಕ್ಷಣೆಗೆ ಕೈಜೋಡಿಸಿರಿ.
ಮಾಲತೇಶ ಅಂಗೂರ, ಹಾವೇರಿ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಎಸ್‌ಸಿ-ಎಸ್ಟಿ ದೌರ್ಜನ್ಯ ನಿಯಂತ್ರಣ-ಜಿಲ್ಲಾ ಜಾಗೃತಿ ಸಮಿತಿಗೆ ನೇಮಕ  

ಎಸ್‌ಸಿ-ಎಸ್ಟಿ ದೌರ್ಜನ್ಯ ನಿಯಂತ್ರಣ-ಜಿಲ್ಲಾ ಜಾಗೃತಿ ಸಮಿತಿಗೆ ನೇಮಕ   ಹಾವೇರಿ: ಪರಿಶಿಷ್ಟ ಜಾತಿ-...

ಇನಸ್ಟಾಗ್ರಾಮ್ ಜ್ಯೋತಿಷಿಗಳಿಂದ ಹಾವೇರಿಯ ಫಾರ್ಮಸಿಸ್ಟ್ ವಿದ್ಯಾರ್ಥಿನಿ ವೈಷ್ಣವಿಗೆ ೧೫ ಲಕ್ಷರೂ ವಂಚನೆ

ಇನಸ್ಟಾಗ್ರಾಮ್ ಜ್ಯೋತಿಷಿಗಳಿಂದ ಹಾವೇರಿಯ ಫಾರ್ಮಸಿಸ್ಟ್ ವಿದ್ಯಾರ್ಥಿನಿ ವೈಷ್ಣವಿಗೆ ೧೫ ಲಕ್ಷರೂ ವಂಚನೆ ಹಾವೇರಿ:...

ಬಮೂಲ್ ನೂತನ ಅಧ್ಯಕ್ಷ ಡಿ.ಕೆ.ಸುರೇಶ್‌ಗೆ ಸನ್ಮಾನ

ಬಮೂಲ್ ನೂತನ ಅಧ್ಯಕ್ಷ ಡಿ.ಕೆ.ಸುರೇಶ್‌ಗೆ ಸನ್ಮಾನ ಹಾವೇರಿ; ಬಮೂಲ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ...