“ಕನ್ನಡದ ನಾಲ್ಕಕ್ಷರಗಳು ನಮ್ಮೆದೆಗೆ ಬಿದ್ದರೆ ಬದುಕು ಬಂಗಾರವಾಗಲಿದೆ. ಜ್ಞಾನದ ಬೆಳಕಿನೆಡೆಗೆ ಹೋಗಲು ಸಾಧ್ಯವಾಗಲಿದೆ” ಸಾಹಿತಿ ಪ್ರೊ.ದೊಡ್ಡರಂಗೇಗೌಡ ಬಣ್ಣನೆ

Date:

ಹಾವೇರಿಯ ಪ್ರಸಿದ್ಧ ಮಿರ್ಚಿ, ಮಂಡಕ್ಕಿ ಸವಿದ ಸಮ್ಮೇಳನದ ಸರ್ವಾಧ್ಯಕ್ಷ ದೊಡ್ಡರಂಗೇಗೌಡ್ರು.

 


“ಕನ್ನಡದ ನಾಲ್ಕಕ್ಷರಗಳು ನಮ್ಮೆದೆಗೆ ಬಿದ್ದರೆ ಬದುಕು ಬಂಗಾರವಾಗಲಿದೆ. ಜ್ಞಾನದ ಬೆಳಕಿನೆಡೆಗೆ ಹೋಗಲು ಸಾಧ್ಯವಾಗಲಿದೆ” ಸಾಹಿತಿ ಪ್ರೊ.ದೊಡ್ಡರಂಗೇಗೌಡ ಬಣ್ಣನೆ
ಹಾವೇರಿ : ಹಾವೇರಿ ನೆಲವು ಪುಣ್ಯಭೂಮಿ, ತಪೋಭೂಮಿಯಾಗಿದೆ ಎಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೊ.ದೊಡ್ಡರಂಗೇಗೌಡ ಅವರು ಬಣ್ಣಿಸಿದರು.
ಜನವರಿ ೫ರಂದು ಪುರ ಪ್ರವೇಶ ಮಾಡಿದ ವೇಳೆ ಜಿಲ್ಲಾಡಳಿತದಿಂದ ಸನ್ಮಾನ ಸ್ವೀಕರಿಸಿ, ಬಳಿಕ ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಹಾವೇರಿ ನೆಲವು ಕವಿ ಸರ್ವಜ್ಞ ಹಾಡಿದ, ಕನಕದಾಸರು ನಡೆದಾಡಿದ ನೆಲವಾಗಿದೆ. ಗಳಗನಾಥರಂತವರಿಗೆ ರಂಗಭೂಮಿಕೆಯಾಗಿದೆ. ಸಾಕಷ್ಟು ವಿರೋಧಗಳ ನಡುವೆಯೂ ದಾರ್ಶನಿಕರು ಸಾಹಸ ತೋರಿದ ನೆಲದಲ್ಲಿ ನಡೆಯುತ್ತಿರುವ ಈ ಅಕ್ಷರ ಜಾತ್ರೆಯ ಅಧ್ಯಕ್ಷನಾಗಿರುವುದು ತಮ್ಮ ಸಾಹಿತ್ಯ ತಪಸ್ಸಿನ ಫಲವಾಗಿದೆ ಎಂದು ತಿಳಿಸಿದರು.
ಹಾವೇರಿ ನೆಲ ಜಲದಲ್ಲಿ ತನ್ನದೇ ವಿಶೇಷತೆ ಇದೆ ಎಂದು ಹೇಳಿದ ದೊಡ್ಡರಂಗೇಗೌಡ ಅವರು, ಈ ಹಿಂದೆ ತಾವು ಶರೀಫರ ಸಮಾಧಿಯನ್ನು ನೋಡಲು ಹಾವೇರಿಗೆ ಬಂದಿದ್ದನ್ನು, ನಿಮ್ಮ ಅಗಾದ ಸಾಹಿತ್ಯದ ಒಂದು ಸಣ್ಣ ಕಿಡಿಯು ನನಗೂ ತಾಗಲಿ ಎಂದು ಶರೀಫರಲ್ಲಿ
ಸಂಕಲ್ಪ ಮಾಡಿಕೊಂಡಿದ್ದನ್ನು ಸ್ಮರಿಸಿದರು.
ನಾನು ಜಾತ್ರೆಯ ಪರವಾಗಿದ್ದೇನೆ ಎಂದು ಒತ್ತಿ ಹೇಳಿದ ದೊಡ್ಡ ರಂಗೇಗೌಡ ಅವರು, ಗ್ರಾಮೀಣ ಭಾಗದಲ್ಲಿನ ಸಂತೆಗಿರುವ ಮಹತ್ವವೇ ಅಕ್ಷರ ಜಾತ್ರೆಗೂ ಇದೆ. ಸಾಹಿತ್ಯ ಸಮ್ಮೇಳನದಲ್ಲಿ
ಸಾಹಿತಿಗಳ ಸಮ್ಮೀಲನವಾಗಲಿದೆ. ಇದು ಓದುಗರ ಸಮ್ಮೇಳನ. ಎಷ್ಟೋ ಜನರು ಕವಿಗಳನ್ನು ನೋಡಲಿಕ್ಕೆ, ಕವಿಗಳೊಂದಿಗೆ ಮಾತನಾಡಲು ಬರುತ್ತಾರೆ. ಇಂತಹ ಕನ್ನಡಾಭಿಮಾನಿಗಳ ಪ್ರೀತಿಯನ್ನು ವರ್ಣಿಸಲು ಆಗದು ಎಂದು ಅವರು ತಿಳಿಸಿದರು.
ನಾನು ಬರಹ ಆರಂಭಿಸಿ ೬ ದಶಕಗಳೇ ಕಳಿದಿದೆ. ದೊಡ್ಡ ರಂಗೇಗೌಡ ಒಳ್ಳೆಯದಕ್ಕಾಗಿ ಹೋರಾಡುತ್ತಾನೆ, ಒಳ್ಳೆಯದರ ಪರ ಇರುತ್ತಾನೆ ಎಂದು ಅವರು ತಿಳಿಸಿದರು.
ಬೆಳಗಾವಿ ನಮ್ಮದು ಅನ್ನುವ ಮರಾಠಿ ಜನರ ತಪ್ಪು ತಿಳಿವಳಿಕೆ ಕಂಡು ಅವರಿಗೆ ತಿಳಿ ಹೇಳಬೇಕು ಅನಿಸುತ್ತದೆ. ಕನ್ನಡಿಗರ ನೆಲವಾಗಿರುವ ಬೆಳಗಾವಿಯನ್ನು ಬಿಟ್ಟುಕೊಟ್ಟರೆ ನಮ್ಮ ವ್ಯಕ್ತಿತ್ವವನ್ನು ಮಾರಿಕೊಂಡ ಹಾಗೆ ಎಂದು ಗಡಿತಗಾದೆಯ ಬಗೆಗಿನ ತಮ್ಮ ನಿಲುವನ್ನು ಅವರು ಪ್ರಕಟಿಸಿದರು.
ಕಾಸರಗೋಡು ಕೇರಳ ಗಡಿಯ ಶಾಲೆಗಳಲ್ಲಿ ಕನ್ನಡ ಭಾಷಾ ವಿಷಯವಿದೆ. ಆದರೆ, ಅಲ್ಲಿ ಕನ್ಮಡ ಬೋಧಿಸಲು ಕನ್ನಡ ಅಧ್ಯಾಪಕರಿಲ್ಲದಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕನ್ನಡವು ನಮ್ಮ ತಾಯಿಯ ಭಾಷೆಯಾಗಿದೆ. ನಮ್ಮೆದೆಗೆ ನಾಲ್ಕಕ್ಷರಗಳು ಬಿದ್ದರೆ
ಬದುಕು ಬಂಗಾರವಾಗಲಿದೆ. ಜ್ಞಾನದ ಬೆಳಕಿನೆಡೆಗೆ ಹೋಗಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.
ತಮಿಳುನಾಡು ರಾಜ್ಯದಲ್ಲಿ ಶಾಸ್ತ್ರೀಯ ಭಾಷೆಗಾಗಿ ಅಲ್ಲಿನ ಸಂಸದರು ಕೇಂದ್ರದಿಂದ
ಕೋಟಿಗಟ್ಟಲೇ ಅನುದಾನ ತಂದಿರುವ ಉದಾಹರಣೆ ನಮ್ಮ ಕಣ್ಮುಂದಿದೆ. ಕನ್ನಡಕ್ಕೆ ಸಹ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಅಂದರೆ ಅದು ನಮ ಘನತೆಯೇ ಆಗಿದೆ. ಹೀಗಾಗಿ ಕೇಂದ್ರದಿಂದ ಅನುದಾನ ತರುವ ಕಾರ್ಯವನ್ನು ರಾಜ್ಯದ ಸಂಸದರು ಸಹ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಮಾತೃಭಾಷೆಯ ಮೂಲಕವೇ ಕಲಿಕೆ ಆರಂಭವಾಗಬೇಕು ಎನ್ನುವ ವಿಚಾರಕ್ಕೆ ತಮ್ಮ ಸಹಮತವೂ ಇದೆ ಎಂಬುದಾಗಿ ತಿಳಿಸಿದ ದೊಡ್ಡರಂಗೇಗೌಡ ಅವರು, ಆಯಾ ಪ್ರಾದೇಶಿಕ ಭಾಷೆಯಲ್ಲಿಯೇ ಏಳನೆ ತರಗತಿವರೆಗೆ ಶಿಕ್ಷಣ ನೀಡುವಂತಹ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಕನ್ನಡಿಗರು ಹೃದಯವಂತರು, ಪರಾಕ್ರಮಿಗಳು, ಪ್ರೀತಿ ಉಳ್ಳವರು. ತಮ್ಮ ಬರೆಹ, ಚಿಂತನೆಯಲ್ಲಿ ಇದನ್ನೇ ತಾವು ಅಭಿವ್ಯಕ್ತಿಸಿದ್ದಾಗಿ ಅವರು ಹೇಳಿದರು.
ನಾನು ಕನ್ನಡಪಂಥೀಯ: ಪರ್ಯಾಯ ಸಾಹಿತ್ಯ ಸಮಾವೇಶವಿರಲಿ, ಇನ್ನಾವುದೇ ಕಾರ್ಯಕ್ರಮವಿರಲಿ ಅದನ್ನು ಮಾಡಲು ಅವರಿಗೆ ಎಲ್ಲ ರೀತಿಯ ಹಕ್ಕಿದೆ. ಭಿನ್ನ ಅಭಿಪ್ರಾಯ ಹೊಂದಿದವರು ಸಹ ನಮ್ಮೊಂದಿಗೆ ಬರಬೇಕು. ಈ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಬೇಕು. ನಮ್ಮ ನಡುವೆ ಯಾವುದೇ
ಭಿನ್ನಭಿಪ್ರಾಯಗಳಿರಲಿ ಅವನ್ನು ವೇದಿಕೆಯಲ್ಲಿ ಬಗೆಹರಿಸಿಕೊಳ್ಳೋಣ ಎಂದು ನಾನು ಮನವಿ ಮಾಡುತ್ತೇನೆ ಎಂದರು. ಲೇಖಕ ಪುರುಷೋತ್ತಮ ಬಿಳಿಮಲೆ ಅವರ ಬಗ್ಗೆ ತಮಗೆ ಹೆಮ್ಮೆ ಮತ್ತು ಗೌರವ ಇದೆ. ನಾನು ಎಡವೂ ಅಲ್ಲ, ಬಲವೂ ಅಲ್ಲ, ಕನ್ನಡ ಪಂಥೀಯ ಎಂದು ದೊಡ್ಡ ರಂಗೇಗೌಡ ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಈ ವೇಳೆ ಶಾಸಕರಾದ ನೆಹರೂ ಓಲೇಕಾರ, ಕಸಾಪ ರಾಜ್ಯಾಧ್ಯಕ್ಷರಾದ ಮಹೇಶ ಜೋಶಿ, ಹಾವೇರಿ ಜಿಲ್ಲಾಧ್ಯಕ್ಷರಾದ ಲಿಂಗಯ್ಯ ಹಿರೇಮಠ, ಜಿಲ್ಲಾಧಿಕಾರಿಗಳಾದ ರಘುನಂದ ಮೂರ್ತಿ, ಜಿಪಂ ಸಿಇಓ ಮಹಮ್ಮದ್ ರೋಷನ್, ಜಿಲ್ಲಾ ಗೃಹರಕ್ಷದ ದಳದ ಸಮಾಧೇಷ್ಟರಾದ ಪ್ರಮೋದ ನೆಲವಾಗಲ, ಘಟಕಾಧಿಕಾರಿಗಳಾದ ಚನ್ನವೀರಪ್ಪ ಬೆಲ್ಲದ,
ಸಾಹಿತಿಗಳಾದ ಸತೀಶ ಕುಲಕರ್ಣಿ, ಮಾಲತೇಶ ಅಂಗೂರ, ಪವನ್ ದೇಸಾಯಿ, ಗಿರೀಶ ತುಪ್ಪದ ಹಾಗೂ ಇತರರು ಇದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಹಾವೇರಿಯ ಪ್ರಸಿದ್ಧ ಮಿರ್ಚಿ, ಮಂಡಕ್ಕಿ ಸವಿದ ಸಮ್ಮೇಳನದ ಸರ್ವಾಧ್ಯಕ್ಷ ದೊಡ್ಡರಂಗೇಗೌಡ್ರು.

 


“ಕನ್ನಡದ ನಾಲ್ಕಕ್ಷರಗಳು ನಮ್ಮೆದೆಗೆ ಬಿದ್ದರೆ ಬದುಕು ಬಂಗಾರವಾಗಲಿದೆ. ಜ್ಞಾನದ ಬೆಳಕಿನೆಡೆಗೆ ಹೋಗಲು ಸಾಧ್ಯವಾಗಲಿದೆ” ಸಾಹಿತಿ ಪ್ರೊ.ದೊಡ್ಡರಂಗೇಗೌಡ ಬಣ್ಣನೆ
ಹಾವೇರಿ : ಹಾವೇರಿ ನೆಲವು ಪುಣ್ಯಭೂಮಿ, ತಪೋಭೂಮಿಯಾಗಿದೆ ಎಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೊ.ದೊಡ್ಡರಂಗೇಗೌಡ ಅವರು ಬಣ್ಣಿಸಿದರು.
ಜನವರಿ ೫ರಂದು ಪುರ ಪ್ರವೇಶ ಮಾಡಿದ ವೇಳೆ ಜಿಲ್ಲಾಡಳಿತದಿಂದ ಸನ್ಮಾನ ಸ್ವೀಕರಿಸಿ, ಬಳಿಕ ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಹಾವೇರಿ ನೆಲವು ಕವಿ ಸರ್ವಜ್ಞ ಹಾಡಿದ, ಕನಕದಾಸರು ನಡೆದಾಡಿದ ನೆಲವಾಗಿದೆ. ಗಳಗನಾಥರಂತವರಿಗೆ ರಂಗಭೂಮಿಕೆಯಾಗಿದೆ. ಸಾಕಷ್ಟು ವಿರೋಧಗಳ ನಡುವೆಯೂ ದಾರ್ಶನಿಕರು ಸಾಹಸ ತೋರಿದ ನೆಲದಲ್ಲಿ ನಡೆಯುತ್ತಿರುವ ಈ ಅಕ್ಷರ ಜಾತ್ರೆಯ ಅಧ್ಯಕ್ಷನಾಗಿರುವುದು ತಮ್ಮ ಸಾಹಿತ್ಯ ತಪಸ್ಸಿನ ಫಲವಾಗಿದೆ ಎಂದು ತಿಳಿಸಿದರು.
ಹಾವೇರಿ ನೆಲ ಜಲದಲ್ಲಿ ತನ್ನದೇ ವಿಶೇಷತೆ ಇದೆ ಎಂದು ಹೇಳಿದ ದೊಡ್ಡರಂಗೇಗೌಡ ಅವರು, ಈ ಹಿಂದೆ ತಾವು ಶರೀಫರ ಸಮಾಧಿಯನ್ನು ನೋಡಲು ಹಾವೇರಿಗೆ ಬಂದಿದ್ದನ್ನು, ನಿಮ್ಮ ಅಗಾದ ಸಾಹಿತ್ಯದ ಒಂದು ಸಣ್ಣ ಕಿಡಿಯು ನನಗೂ ತಾಗಲಿ ಎಂದು ಶರೀಫರಲ್ಲಿ
ಸಂಕಲ್ಪ ಮಾಡಿಕೊಂಡಿದ್ದನ್ನು ಸ್ಮರಿಸಿದರು.
ನಾನು ಜಾತ್ರೆಯ ಪರವಾಗಿದ್ದೇನೆ ಎಂದು ಒತ್ತಿ ಹೇಳಿದ ದೊಡ್ಡ ರಂಗೇಗೌಡ ಅವರು, ಗ್ರಾಮೀಣ ಭಾಗದಲ್ಲಿನ ಸಂತೆಗಿರುವ ಮಹತ್ವವೇ ಅಕ್ಷರ ಜಾತ್ರೆಗೂ ಇದೆ. ಸಾಹಿತ್ಯ ಸಮ್ಮೇಳನದಲ್ಲಿ
ಸಾಹಿತಿಗಳ ಸಮ್ಮೀಲನವಾಗಲಿದೆ. ಇದು ಓದುಗರ ಸಮ್ಮೇಳನ. ಎಷ್ಟೋ ಜನರು ಕವಿಗಳನ್ನು ನೋಡಲಿಕ್ಕೆ, ಕವಿಗಳೊಂದಿಗೆ ಮಾತನಾಡಲು ಬರುತ್ತಾರೆ. ಇಂತಹ ಕನ್ನಡಾಭಿಮಾನಿಗಳ ಪ್ರೀತಿಯನ್ನು ವರ್ಣಿಸಲು ಆಗದು ಎಂದು ಅವರು ತಿಳಿಸಿದರು.
ನಾನು ಬರಹ ಆರಂಭಿಸಿ ೬ ದಶಕಗಳೇ ಕಳಿದಿದೆ. ದೊಡ್ಡ ರಂಗೇಗೌಡ ಒಳ್ಳೆಯದಕ್ಕಾಗಿ ಹೋರಾಡುತ್ತಾನೆ, ಒಳ್ಳೆಯದರ ಪರ ಇರುತ್ತಾನೆ ಎಂದು ಅವರು ತಿಳಿಸಿದರು.
ಬೆಳಗಾವಿ ನಮ್ಮದು ಅನ್ನುವ ಮರಾಠಿ ಜನರ ತಪ್ಪು ತಿಳಿವಳಿಕೆ ಕಂಡು ಅವರಿಗೆ ತಿಳಿ ಹೇಳಬೇಕು ಅನಿಸುತ್ತದೆ. ಕನ್ನಡಿಗರ ನೆಲವಾಗಿರುವ ಬೆಳಗಾವಿಯನ್ನು ಬಿಟ್ಟುಕೊಟ್ಟರೆ ನಮ್ಮ ವ್ಯಕ್ತಿತ್ವವನ್ನು ಮಾರಿಕೊಂಡ ಹಾಗೆ ಎಂದು ಗಡಿತಗಾದೆಯ ಬಗೆಗಿನ ತಮ್ಮ ನಿಲುವನ್ನು ಅವರು ಪ್ರಕಟಿಸಿದರು.
ಕಾಸರಗೋಡು ಕೇರಳ ಗಡಿಯ ಶಾಲೆಗಳಲ್ಲಿ ಕನ್ನಡ ಭಾಷಾ ವಿಷಯವಿದೆ. ಆದರೆ, ಅಲ್ಲಿ ಕನ್ಮಡ ಬೋಧಿಸಲು ಕನ್ನಡ ಅಧ್ಯಾಪಕರಿಲ್ಲದಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕನ್ನಡವು ನಮ್ಮ ತಾಯಿಯ ಭಾಷೆಯಾಗಿದೆ. ನಮ್ಮೆದೆಗೆ ನಾಲ್ಕಕ್ಷರಗಳು ಬಿದ್ದರೆ
ಬದುಕು ಬಂಗಾರವಾಗಲಿದೆ. ಜ್ಞಾನದ ಬೆಳಕಿನೆಡೆಗೆ ಹೋಗಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.
ತಮಿಳುನಾಡು ರಾಜ್ಯದಲ್ಲಿ ಶಾಸ್ತ್ರೀಯ ಭಾಷೆಗಾಗಿ ಅಲ್ಲಿನ ಸಂಸದರು ಕೇಂದ್ರದಿಂದ
ಕೋಟಿಗಟ್ಟಲೇ ಅನುದಾನ ತಂದಿರುವ ಉದಾಹರಣೆ ನಮ್ಮ ಕಣ್ಮುಂದಿದೆ. ಕನ್ನಡಕ್ಕೆ ಸಹ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಅಂದರೆ ಅದು ನಮ ಘನತೆಯೇ ಆಗಿದೆ. ಹೀಗಾಗಿ ಕೇಂದ್ರದಿಂದ ಅನುದಾನ ತರುವ ಕಾರ್ಯವನ್ನು ರಾಜ್ಯದ ಸಂಸದರು ಸಹ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಮಾತೃಭಾಷೆಯ ಮೂಲಕವೇ ಕಲಿಕೆ ಆರಂಭವಾಗಬೇಕು ಎನ್ನುವ ವಿಚಾರಕ್ಕೆ ತಮ್ಮ ಸಹಮತವೂ ಇದೆ ಎಂಬುದಾಗಿ ತಿಳಿಸಿದ ದೊಡ್ಡರಂಗೇಗೌಡ ಅವರು, ಆಯಾ ಪ್ರಾದೇಶಿಕ ಭಾಷೆಯಲ್ಲಿಯೇ ಏಳನೆ ತರಗತಿವರೆಗೆ ಶಿಕ್ಷಣ ನೀಡುವಂತಹ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಕನ್ನಡಿಗರು ಹೃದಯವಂತರು, ಪರಾಕ್ರಮಿಗಳು, ಪ್ರೀತಿ ಉಳ್ಳವರು. ತಮ್ಮ ಬರೆಹ, ಚಿಂತನೆಯಲ್ಲಿ ಇದನ್ನೇ ತಾವು ಅಭಿವ್ಯಕ್ತಿಸಿದ್ದಾಗಿ ಅವರು ಹೇಳಿದರು.
ನಾನು ಕನ್ನಡಪಂಥೀಯ: ಪರ್ಯಾಯ ಸಾಹಿತ್ಯ ಸಮಾವೇಶವಿರಲಿ, ಇನ್ನಾವುದೇ ಕಾರ್ಯಕ್ರಮವಿರಲಿ ಅದನ್ನು ಮಾಡಲು ಅವರಿಗೆ ಎಲ್ಲ ರೀತಿಯ ಹಕ್ಕಿದೆ. ಭಿನ್ನ ಅಭಿಪ್ರಾಯ ಹೊಂದಿದವರು ಸಹ ನಮ್ಮೊಂದಿಗೆ ಬರಬೇಕು. ಈ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಬೇಕು. ನಮ್ಮ ನಡುವೆ ಯಾವುದೇ
ಭಿನ್ನಭಿಪ್ರಾಯಗಳಿರಲಿ ಅವನ್ನು ವೇದಿಕೆಯಲ್ಲಿ ಬಗೆಹರಿಸಿಕೊಳ್ಳೋಣ ಎಂದು ನಾನು ಮನವಿ ಮಾಡುತ್ತೇನೆ ಎಂದರು. ಲೇಖಕ ಪುರುಷೋತ್ತಮ ಬಿಳಿಮಲೆ ಅವರ ಬಗ್ಗೆ ತಮಗೆ ಹೆಮ್ಮೆ ಮತ್ತು ಗೌರವ ಇದೆ. ನಾನು ಎಡವೂ ಅಲ್ಲ, ಬಲವೂ ಅಲ್ಲ, ಕನ್ನಡ ಪಂಥೀಯ ಎಂದು ದೊಡ್ಡ ರಂಗೇಗೌಡ ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಈ ವೇಳೆ ಶಾಸಕರಾದ ನೆಹರೂ ಓಲೇಕಾರ, ಕಸಾಪ ರಾಜ್ಯಾಧ್ಯಕ್ಷರಾದ ಮಹೇಶ ಜೋಶಿ, ಹಾವೇರಿ ಜಿಲ್ಲಾಧ್ಯಕ್ಷರಾದ ಲಿಂಗಯ್ಯ ಹಿರೇಮಠ, ಜಿಲ್ಲಾಧಿಕಾರಿಗಳಾದ ರಘುನಂದ ಮೂರ್ತಿ, ಜಿಪಂ ಸಿಇಓ ಮಹಮ್ಮದ್ ರೋಷನ್, ಜಿಲ್ಲಾ ಗೃಹರಕ್ಷದ ದಳದ ಸಮಾಧೇಷ್ಟರಾದ ಪ್ರಮೋದ ನೆಲವಾಗಲ, ಘಟಕಾಧಿಕಾರಿಗಳಾದ ಚನ್ನವೀರಪ್ಪ ಬೆಲ್ಲದ,
ಸಾಹಿತಿಗಳಾದ ಸತೀಶ ಕುಲಕರ್ಣಿ, ಮಾಲತೇಶ ಅಂಗೂರ, ಪವನ್ ದೇಸಾಯಿ, ಗಿರೀಶ ತುಪ್ಪದ ಹಾಗೂ ಇತರರು ಇದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...