“ಕಸಕ್ಕ ಇಕ್ಕಿದ ಬೆಂಕಿಗೆ ಮರ ಆಹುತಿ”ಯಾದೊಡೆಂತಯ್ಯ?
ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಬಿದ್ದಿರುವ ಕಸದ ರಾಶಿಯನ್ನು ಒಟ್ಟುಗೂಡಿಸಿ ಮರದ ಬುಡದಲ್ಲಿ ಸಂಗ್ರಹಿಸಿ ಕಸಕ್ಕೆ ಹಾಕಿದ ಬೆಂಕಿಯ ಕೆನ್ನಾಲಿಗೆ ಮರವನ್ನು ಸುಡುವ ಮೂಲಕ “ಕಸಕ್ಕಿದ ಬೆಂಕಿಗೆ ಮರ ಆಹುತಿ”ಯಾಗಿರುವ ಘಟನೆ ನಡೆದಿದೆ. ಶಿವರಾತ್ರಿ ಸಂಭ್ರಮ ಕಾರ್ಯಕ್ರಮ ಆಯೋಜಿಸಿದ ಹಿನ್ನೆಲೆಯಲ್ಲಿ ಮೈದಾನದಲ್ಲಿ ಬಿದ್ದಿರುವ ಕಸವನ್ನು ಸಂಗ್ರಹಿಸದ ಕಾರ್ಮಿಕ ನೋರ್ವ ಕಸವನ್ನು ತಂದುಮರದ ಬುಡದಲ್ಲಿ ಹಾಕಿ ಅದಕ್ಕೆ ಬೆಂಕಿ ಹಚ್ಚಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ನಾನು ಮತ್ತು ಮಿತ್ರ ನಿಂಗಪ್ಪ ಚಾವಡಿ ಮರದ ಬುಡಕ್ಕೆ ಬೆಂಕಿ ಬಿದ್ದಿರುವುದನ್ನು ಗಮನಿಸಿ ಕಸವನ್ನು ಬೇರಕಡೆಹಾಕಿ ಸುಡಬಾರದೇ, ಈರೀತಿಮಾಡುವುದರಿಂದ ಮರಕ್ಕೆ ಬೆಂಕಿದ್ದು ಹಲವಾರು ವರ್ಷಗಳ ಮರಕ್ಕೆ ಹಾನಿಯಾಗುತ್ತದೆ ಎಂದ ಸಂದರ್ಭದಲ್ಲಿ ಆವ್ಯಕ್ತಿ ಕಸ ಬೇಗನೆ ಸುಡುತ್ತದೆ, ಮರಕ್ಕೆ ಏನುಆಗುವುದಿಲ್ಲ, ಬೆಂಕಿಯನ್ನು ನೀರುಹಾಕಿ ನಂದಿಸುವುದಾಗಿ ತಿಳಿಸಿದ. ಆದರೆ ಅಷ್ಟರಲ್ಲಾಗಲೇ
ಕಸಕ್ಕೆ ಹಚ್ಚಿದ ಬೆಂಕಿಯ ಕೆನ್ನಾಲಿಗೆ ಮರಕ್ಕೆ ವ್ಯಾಪಿಸಿ ಹಲವಾರು ಜನರಿಗೆ, ವಾಹನಗಳಿಗೆ, ಪ್ರಾಣಿ-ಪಕ್ಷಿಗಳಿಗೆ ನೆರಳಾಗಿದ್ದ ಮರ ಬೆಂದು ಹೋಗಿರುವುದು ವಿಪರ್ಯಾಸವೇ ಸರಿ. ಈ ಅನಾಹುತಕ್ಕೆ ಹೊಣೆಯಾರು?.
“ಕಸಕ್ಕೆ ಇಕ್ಕಿದ ಬೆಂಕಿಗೆ ಮರ ಆಹುತಿ”ಯಾದೊಡೆಂತಯ್ಯ?
Date:
“ಕಸಕ್ಕ ಇಕ್ಕಿದ ಬೆಂಕಿಗೆ ಮರ ಆಹುತಿ”ಯಾದೊಡೆಂತಯ್ಯ?
ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಬಿದ್ದಿರುವ ಕಸದ ರಾಶಿಯನ್ನು ಒಟ್ಟುಗೂಡಿಸಿ ಮರದ ಬುಡದಲ್ಲಿ ಸಂಗ್ರಹಿಸಿ ಕಸಕ್ಕೆ ಹಾಕಿದ ಬೆಂಕಿಯ ಕೆನ್ನಾಲಿಗೆ ಮರವನ್ನು ಸುಡುವ ಮೂಲಕ “ಕಸಕ್ಕಿದ ಬೆಂಕಿಗೆ ಮರ ಆಹುತಿ”ಯಾಗಿರುವ ಘಟನೆ ನಡೆದಿದೆ. ಶಿವರಾತ್ರಿ ಸಂಭ್ರಮ ಕಾರ್ಯಕ್ರಮ ಆಯೋಜಿಸಿದ ಹಿನ್ನೆಲೆಯಲ್ಲಿ ಮೈದಾನದಲ್ಲಿ ಬಿದ್ದಿರುವ ಕಸವನ್ನು ಸಂಗ್ರಹಿಸದ ಕಾರ್ಮಿಕ ನೋರ್ವ ಕಸವನ್ನು ತಂದುಮರದ ಬುಡದಲ್ಲಿ ಹಾಕಿ ಅದಕ್ಕೆ ಬೆಂಕಿ ಹಚ್ಚಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ನಾನು ಮತ್ತು ಮಿತ್ರ ನಿಂಗಪ್ಪ ಚಾವಡಿ ಮರದ ಬುಡಕ್ಕೆ ಬೆಂಕಿ ಬಿದ್ದಿರುವುದನ್ನು ಗಮನಿಸಿ ಕಸವನ್ನು ಬೇರಕಡೆಹಾಕಿ ಸುಡಬಾರದೇ, ಈರೀತಿಮಾಡುವುದರಿಂದ ಮರಕ್ಕೆ ಬೆಂಕಿದ್ದು ಹಲವಾರು ವರ್ಷಗಳ ಮರಕ್ಕೆ ಹಾನಿಯಾಗುತ್ತದೆ ಎಂದ ಸಂದರ್ಭದಲ್ಲಿ ಆವ್ಯಕ್ತಿ ಕಸ ಬೇಗನೆ ಸುಡುತ್ತದೆ, ಮರಕ್ಕೆ ಏನುಆಗುವುದಿಲ್ಲ, ಬೆಂಕಿಯನ್ನು ನೀರುಹಾಕಿ ನಂದಿಸುವುದಾಗಿ ತಿಳಿಸಿದ. ಆದರೆ ಅಷ್ಟರಲ್ಲಾಗಲೇ
ಕಸಕ್ಕೆ ಹಚ್ಚಿದ ಬೆಂಕಿಯ ಕೆನ್ನಾಲಿಗೆ ಮರಕ್ಕೆ ವ್ಯಾಪಿಸಿ ಹಲವಾರು ಜನರಿಗೆ, ವಾಹನಗಳಿಗೆ, ಪ್ರಾಣಿ-ಪಕ್ಷಿಗಳಿಗೆ ನೆರಳಾಗಿದ್ದ ಮರ ಬೆಂದು ಹೋಗಿರುವುದು ವಿಪರ್ಯಾಸವೇ ಸರಿ. ಈ ಅನಾಹುತಕ್ಕೆ ಹೊಣೆಯಾರು?.