ಕೊಳೋರು ಪಿಡಿಓ ಮೇಲೆ ಗ್ರಾ.ಪಂ. ಅಧ್ಯಕ್ಷೆಯ ಪತಿಯಿಂದ ಹಲ್ಲೆ: ದೂರು-ಪ್ರತಿದೂರು

Date:

 

ಕೊಳೋರು ಪಿಡಿಓ ಮೇಲೆ ಗ್ರಾ.ಪಂ. ಅಧ್ಯಕ್ಷೆಯ ಪತಿಯಿಂದ ಹಲ್ಲೆ: ದೂರು-ಪ್ರತಿದೂರು
ಹಾವೇರಿ: ತಾಲೂಕಿನ ಕೋಳೂರುಗ್ರಾಮ ಪಂಚಾಯತಿ ಪಿಡಿಓ ಮೇಲೆ ಕೋಳೊರುಗ್ರಾ.ಪಂ. ಅಧ್ಯಕ್ಷೆಯ ಪತಿ ಸಹಿಗೆ ಸಂಬಂಧಿಸಿದಂತೆ ಹಲ್ಲೆ ನಡೆಸಿರುವ ಘಟನೆಗೆ ಡಿ.೪ರಂದು ನಡೆದಿದೆ. ಈಬಗ್ಗೆ ಹಲ್ಲೆಗೊಳಗಾದ ಕೊಳೂರ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಈಶ್ವರಪ್ಪ ಎಮ್ ಓ ಅವರು ಕೊಳೂರ ಗ್ರಾಮ ಪಂಚಾಯತಿಂi ಅಧ್ಯಕ್ಷೆಪದ್ಮಾವತಿ ಅವರ ಪತಿ ವಜ್ರಕುಮಾರ ಹೊಳಗಿ ಮತ್ತಿತರರ ಮೇಲೆ ಸರಕಾರಿ ಕರ್ತವ್ಯಕ್ಕೆ ಅಡ್ಡಿಡಿಸಿದ್ದಾರೆಂದು ಹಾವೇರಿ ಗ್ರಾಮಿಣಸ್‌ಠಾಣೆಯಲ್ಲಿ ದೂರುದಾಖಲಿಸಿದ್ದಾರೆ. ಈ ಬಗ್ಗೆ ಪಿಡಿಓ ಮೇಲೆಯು ಡಿ.೪ರಂದೇ ಅಧ್ಯಕ್ಷೆಯ ಸೀರೆಯನ್ನು ಹಿಡಿದು ಎಳೆದಾಡಿ ಅವಮಾನ ಪಡಿಸಿದ್ದಾರೆಂದು ಪ್ರತಿ ದೂರು ದಾಖಲಾಗಿದೆ.
ಕೋಳೂರ ಗ್ರಾಮ ಪಂಚಾಯತಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಈಶ್ವರಪ್ಪ ಡಿ. ೦೪ ರಂದು ಕೊಳೂರ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಪದ್ಮಾವತಿ ವಜ್ರಕುಮಾರ ಹೊಳಗಿ ಇವರಿಗೆ ಪೋನ ಮಾಡಿ ಪಂಚಾಯತಿಯ ದಾಖಲಾತಿಗಳಿಗೆ ಸಹಿ ಮಾಡುವಂತೆ ಕರೆ ಮಾಡಿದಾಗ ಸದರಿ ಕರೆಯನ್ನು ಅಧ್ಯಕ್ಷರ ಪತಿ ವಜ್ರಕುಮಾರ ಹೊಳಗಿ ಸ್ವೀಕರಿಸಿದ್ದು, ಪಿಡಿಓ ಅಧ್ಯಕ್ಷರಿಗೆ ಪಂಚಾಯತಿಗೆ ಬಂದು ಸಹಿ ಮಾಡುವಂತೆ ಕೋರಿಕೊಂಡಿದ್ದಾರೆ.
ಇದರಿಂದ ಕುಪಿತಗೊಂಡ ವಜ್ರಕುಮಾರ “ನೀನೆ ಮನೆಗೆ ಬಂದು ಸಹಿಮಾಡಿಸಿಕೊಂಡು ಹೋಗು ಅಲ್ಲಿ ಕುಂತೂ ಏನ ಸೆಂಟಾ ಹರಿತಿ ಬೋಳಿ ಮಗನೇ” ಎಂದು ಅವಾಚ್ಯವಾಗಿ ಬೈದಾಡಿದ್ದಲ್ಲದೇ, ಅಂದು ಮಧ್ಯಾಹ್ನ ೧-೩೦ ಗಂಟೆಗೆ ಕೋಳೂರ ಪಂಚಾಯತಿಗೆ ಇನ್ನೂಳಿದ ನಾಲ್ವರ ಜೊತೆಗೆ ಬಂದು ಪಿಡಿಓಗೆ ಅವಾಚ್ಯ ಬೈದಾಡಿ, ಮಂಜುನಾಥ ಅಣ್ಣಿಗೇರಿ ಎನ್ನುವವ ಪಿಡಿಓ ಬsಜಗಳನ್ನು ಹಿಡಿದು ಎಳೆದಾಡಿ ಕೈಯಿಂದ ಗುದ್ದಿದ್ದಲ್ಲದೇ ಪಂಚಾಯತಿಯಿಂದ ಹೊರಗೆ ಹಾಕಿ ಗುಂಡಾ ವರ್ತನೆ ತೋರಿ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ವಜ್ರಕುಮಾರ ಹೊಳಗಿ, ಮಂಜುನಾಥ ಅಣ್ಣಿಗೇರಿ, ನೂರಅಹ್ಮದ ಮುಲ್ಲಾ, ಭರಮಪ್ಪ ಕಾಮಿಣಿ ಅವರ ದೂರು ದಾಖಲಾಗಿದೆ.
ಈ ಬಗ್ಗೆ ಪದ್ಮಾವತಿ ವಜ್ರಕುಮಾರ ಹೊಳಗಿ ಅವರು ಪ್ರತಿ ದೂರು ದಾಖಲಿಸಿದ್ದು, ಡಿ.೦೪ ರಂದು ಮಧ್ಯಾಹ್ನ ೧೨-೦೦ ಗಂಟೆಗೆ ಇತರೇ ಗ್ರಾಮ ಪಂಚಾಯತಿ ಸದಸ್ಯರೊಂದಿಗೆ ತಾವು ಪಂಚಾಯತಿಯಲ್ಲಿದ್ದಾಗ ಪಿಡಿಓ ಈಶ್ವರ ಎನ್ ಓ ಇವರಿಗೆ “ನೀವು ಪಂಚಾಯತಿಯ ಹಣಕಾಸಿನ ವ್ಯವಹಾರವನ್ನು ನಮ್ಮ ಗಮನಕ್ಕೆ ಬಾರದೇ ನಿಮ್ಮ ಇಚ್ಚಾನುಸಾರ ನಿರ್ದಾರ ಮಾಡುತ್ತಿದ್ದೀರಿ ಎಂದು ಹೇಳಿದ್ದಕ್ಕೆ ಸಿಟ್ಟಾದ ಪಿಡಿಓ ಈಶ್ವರ ಎನ್.ಓ. ಅಧ್ಯಕ್ಷರಿಗೆ ಎಕವಚನದಲ್ಲಿ ಮಾತನಾಡಿ ಗದರಿಸಿ ಅವರ ಕೈಹಿಡಿದು, ಸೀರೆ ಹಿಡಿದು ಎಳೆದಾಡಿ ಸಾರ್ವಜನಿಕವಾಗಿ ಅವಮಾನ ಪಡಿಸಿದ್ದಾರೆಂದು ದೂರು ದಾಖಲಿಸಿದ್ದಾರೆ. ದೂರು-ಹಾಗೂ ಪ್ರತಿ ದೂರನ್ನು ದಾಖಲಿಸಿಕೊಂಡಿರುವ ಗ್ರಾಮೀಣ ಪೊಲೀಸ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

 

ಕೊಳೋರು ಪಿಡಿಓ ಮೇಲೆ ಗ್ರಾ.ಪಂ. ಅಧ್ಯಕ್ಷೆಯ ಪತಿಯಿಂದ ಹಲ್ಲೆ: ದೂರು-ಪ್ರತಿದೂರು
ಹಾವೇರಿ: ತಾಲೂಕಿನ ಕೋಳೂರುಗ್ರಾಮ ಪಂಚಾಯತಿ ಪಿಡಿಓ ಮೇಲೆ ಕೋಳೊರುಗ್ರಾ.ಪಂ. ಅಧ್ಯಕ್ಷೆಯ ಪತಿ ಸಹಿಗೆ ಸಂಬಂಧಿಸಿದಂತೆ ಹಲ್ಲೆ ನಡೆಸಿರುವ ಘಟನೆಗೆ ಡಿ.೪ರಂದು ನಡೆದಿದೆ. ಈಬಗ್ಗೆ ಹಲ್ಲೆಗೊಳಗಾದ ಕೊಳೂರ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಈಶ್ವರಪ್ಪ ಎಮ್ ಓ ಅವರು ಕೊಳೂರ ಗ್ರಾಮ ಪಂಚಾಯತಿಂi ಅಧ್ಯಕ್ಷೆಪದ್ಮಾವತಿ ಅವರ ಪತಿ ವಜ್ರಕುಮಾರ ಹೊಳಗಿ ಮತ್ತಿತರರ ಮೇಲೆ ಸರಕಾರಿ ಕರ್ತವ್ಯಕ್ಕೆ ಅಡ್ಡಿಡಿಸಿದ್ದಾರೆಂದು ಹಾವೇರಿ ಗ್ರಾಮಿಣಸ್‌ಠಾಣೆಯಲ್ಲಿ ದೂರುದಾಖಲಿಸಿದ್ದಾರೆ. ಈ ಬಗ್ಗೆ ಪಿಡಿಓ ಮೇಲೆಯು ಡಿ.೪ರಂದೇ ಅಧ್ಯಕ್ಷೆಯ ಸೀರೆಯನ್ನು ಹಿಡಿದು ಎಳೆದಾಡಿ ಅವಮಾನ ಪಡಿಸಿದ್ದಾರೆಂದು ಪ್ರತಿ ದೂರು ದಾಖಲಾಗಿದೆ.
ಕೋಳೂರ ಗ್ರಾಮ ಪಂಚಾಯತಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಈಶ್ವರಪ್ಪ ಡಿ. ೦೪ ರಂದು ಕೊಳೂರ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಪದ್ಮಾವತಿ ವಜ್ರಕುಮಾರ ಹೊಳಗಿ ಇವರಿಗೆ ಪೋನ ಮಾಡಿ ಪಂಚಾಯತಿಯ ದಾಖಲಾತಿಗಳಿಗೆ ಸಹಿ ಮಾಡುವಂತೆ ಕರೆ ಮಾಡಿದಾಗ ಸದರಿ ಕರೆಯನ್ನು ಅಧ್ಯಕ್ಷರ ಪತಿ ವಜ್ರಕುಮಾರ ಹೊಳಗಿ ಸ್ವೀಕರಿಸಿದ್ದು, ಪಿಡಿಓ ಅಧ್ಯಕ್ಷರಿಗೆ ಪಂಚಾಯತಿಗೆ ಬಂದು ಸಹಿ ಮಾಡುವಂತೆ ಕೋರಿಕೊಂಡಿದ್ದಾರೆ.
ಇದರಿಂದ ಕುಪಿತಗೊಂಡ ವಜ್ರಕುಮಾರ “ನೀನೆ ಮನೆಗೆ ಬಂದು ಸಹಿಮಾಡಿಸಿಕೊಂಡು ಹೋಗು ಅಲ್ಲಿ ಕುಂತೂ ಏನ ಸೆಂಟಾ ಹರಿತಿ ಬೋಳಿ ಮಗನೇ” ಎಂದು ಅವಾಚ್ಯವಾಗಿ ಬೈದಾಡಿದ್ದಲ್ಲದೇ, ಅಂದು ಮಧ್ಯಾಹ್ನ ೧-೩೦ ಗಂಟೆಗೆ ಕೋಳೂರ ಪಂಚಾಯತಿಗೆ ಇನ್ನೂಳಿದ ನಾಲ್ವರ ಜೊತೆಗೆ ಬಂದು ಪಿಡಿಓಗೆ ಅವಾಚ್ಯ ಬೈದಾಡಿ, ಮಂಜುನಾಥ ಅಣ್ಣಿಗೇರಿ ಎನ್ನುವವ ಪಿಡಿಓ ಬsಜಗಳನ್ನು ಹಿಡಿದು ಎಳೆದಾಡಿ ಕೈಯಿಂದ ಗುದ್ದಿದ್ದಲ್ಲದೇ ಪಂಚಾಯತಿಯಿಂದ ಹೊರಗೆ ಹಾಕಿ ಗುಂಡಾ ವರ್ತನೆ ತೋರಿ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ವಜ್ರಕುಮಾರ ಹೊಳಗಿ, ಮಂಜುನಾಥ ಅಣ್ಣಿಗೇರಿ, ನೂರಅಹ್ಮದ ಮುಲ್ಲಾ, ಭರಮಪ್ಪ ಕಾಮಿಣಿ ಅವರ ದೂರು ದಾಖಲಾಗಿದೆ.
ಈ ಬಗ್ಗೆ ಪದ್ಮಾವತಿ ವಜ್ರಕುಮಾರ ಹೊಳಗಿ ಅವರು ಪ್ರತಿ ದೂರು ದಾಖಲಿಸಿದ್ದು, ಡಿ.೦೪ ರಂದು ಮಧ್ಯಾಹ್ನ ೧೨-೦೦ ಗಂಟೆಗೆ ಇತರೇ ಗ್ರಾಮ ಪಂಚಾಯತಿ ಸದಸ್ಯರೊಂದಿಗೆ ತಾವು ಪಂಚಾಯತಿಯಲ್ಲಿದ್ದಾಗ ಪಿಡಿಓ ಈಶ್ವರ ಎನ್ ಓ ಇವರಿಗೆ “ನೀವು ಪಂಚಾಯತಿಯ ಹಣಕಾಸಿನ ವ್ಯವಹಾರವನ್ನು ನಮ್ಮ ಗಮನಕ್ಕೆ ಬಾರದೇ ನಿಮ್ಮ ಇಚ್ಚಾನುಸಾರ ನಿರ್ದಾರ ಮಾಡುತ್ತಿದ್ದೀರಿ ಎಂದು ಹೇಳಿದ್ದಕ್ಕೆ ಸಿಟ್ಟಾದ ಪಿಡಿಓ ಈಶ್ವರ ಎನ್.ಓ. ಅಧ್ಯಕ್ಷರಿಗೆ ಎಕವಚನದಲ್ಲಿ ಮಾತನಾಡಿ ಗದರಿಸಿ ಅವರ ಕೈಹಿಡಿದು, ಸೀರೆ ಹಿಡಿದು ಎಳೆದಾಡಿ ಸಾರ್ವಜನಿಕವಾಗಿ ಅವಮಾನ ಪಡಿಸಿದ್ದಾರೆಂದು ದೂರು ದಾಖಲಿಸಿದ್ದಾರೆ. ದೂರು-ಹಾಗೂ ಪ್ರತಿ ದೂರನ್ನು ದಾಖಲಿಸಿಕೊಂಡಿರುವ ಗ್ರಾಮೀಣ ಪೊಲೀಸ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...