ಗಾಂಜಾ ಸಾಗಾಟದ ತಂಡದ ಮೇಲೆ ಸೈಬರ್ ದಾಳಿ, ಇಬ್ಬರ ಬಂಧನ
ಹಾವೇರಿ: ಗಾಂಜಾಸಾಗಿಸುತ್ತಿದ್ದ ತಂಡದ ಮೇಲೆ ಹಾವೇರಿಯ ಸೈಬರ್ ಕ್ರೈಂ ಪೊಲೀಸರು ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಏ.೧೦ರಂದು ಹಾವೇರಿಯಲ್ಲಿ ನಡೆದಿದೆ. ಬಂಧಿತರನ್ನು ಭದ್ರಾವತಿ ಮೂಲದ ಅಭಿಲಾಷ ನೀಲಕಂಠಪ್ಪ ಎಸ್, ಅಜಯ ಕ್ರಿಷ್ಣಮೂರ್ತಿ ಎಂದು ತಿಳಿದು ಬಂದಿದೆ.
ಹಾವೇರಿಯ ಎ.ಪಿ.ಎಮ್.ಸಿ. ಮಾರುಕಟ್ಟೆಯ ಹತ್ತಿರ ಅಭಿಲಾಷ ಹಾಗೂ ಅಜಯ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಹಾವೇರಿಯ ಸೈಬರ್ ಕ್ರೈಂ ಪೊಲೀಸರು ದಾಳಿ ಮಾಡಿ ಅವರನ್ನು ಬಂಧಿಸಿ ಅವರಿಂದ ಸುಮಾರು ೪೫೮ ಗ್ರಾಂ ಗಾಂಜಾ ಹಾಗೂ ಒಂದು ಆಟೋ ರಿಕ್ಷಾವನ್ನು ಹಾಗೂ ೨ ಮೊಬೈಲ್ ಫೋನ್ಗಳು ಹೀಗೆ ಒಟ್ಟು ೨.೨೭.೪೦೦/- ರೂ ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ದಾಳಿಯನ್ನು ಪಿ.ಐ. ಎಸ್.ಆರ್. ಗಣಾಚಾರಿ, ಪಿ.ಎಸ್.ಐ. ಎಮ್.ಎಫ್. ದುರ್ಗಪ್ಪನವರ ಹಾಗೂ ಸಿಬ್ಬಂದಿ ಎನ್.ಡಿ.ಮಳಗಾವಿ, ನಿಂಗಪ್ಪ ಮೇಗಲಮನಿ, ಪಿ.ಆರ್.ಬಾವಿಕಟ್ಟಿ, ನಾಗೇಂದ್ರ ಹಾನಗಲ್ಲ, ಜಿ. ವಾಯ್.ದೊಡ್ಡಮನಿ, ಎಚ್.ಜಿ.ಭರಮಗೌಡ್ರ, ಎಂ.ಆರ್.ಚನ್ನಗಿರಿ, ಮಾಲತೇಶ ಹಟ್ಟಿ ಕೈಗೊಂಡಿದ್ದರು. ಈ ಶ್ಲಾಘನೀಯ ಕಾರ್ಯಕ್ಕೆ ಹಾವೇರಿ ಎಸ್.ಪಿ. ಸವರು ಸೂಕ್ತ ಬಹುಮಾನ ಘೋಷಣೆ ಮಾಡಿದ್ದಾರೆ.
ಗಾಂಜಾ ಸಾಗಾಟದ ತಂಡದ ಮೇಲೆ ಸೈಬರ್ ದಾಳಿ, ಇಬ್ಬರ ಬಂಧನ
Date:
ಗಾಂಜಾ ಸಾಗಾಟದ ತಂಡದ ಮೇಲೆ ಸೈಬರ್ ದಾಳಿ, ಇಬ್ಬರ ಬಂಧನ
ಹಾವೇರಿ: ಗಾಂಜಾಸಾಗಿಸುತ್ತಿದ್ದ ತಂಡದ ಮೇಲೆ ಹಾವೇರಿಯ ಸೈಬರ್ ಕ್ರೈಂ ಪೊಲೀಸರು ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಏ.೧೦ರಂದು ಹಾವೇರಿಯಲ್ಲಿ ನಡೆದಿದೆ. ಬಂಧಿತರನ್ನು ಭದ್ರಾವತಿ ಮೂಲದ ಅಭಿಲಾಷ ನೀಲಕಂಠಪ್ಪ ಎಸ್, ಅಜಯ ಕ್ರಿಷ್ಣಮೂರ್ತಿ ಎಂದು ತಿಳಿದು ಬಂದಿದೆ.
ಹಾವೇರಿಯ ಎ.ಪಿ.ಎಮ್.ಸಿ. ಮಾರುಕಟ್ಟೆಯ ಹತ್ತಿರ ಅಭಿಲಾಷ ಹಾಗೂ ಅಜಯ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಹಾವೇರಿಯ ಸೈಬರ್ ಕ್ರೈಂ ಪೊಲೀಸರು ದಾಳಿ ಮಾಡಿ ಅವರನ್ನು ಬಂಧಿಸಿ ಅವರಿಂದ ಸುಮಾರು ೪೫೮ ಗ್ರಾಂ ಗಾಂಜಾ ಹಾಗೂ ಒಂದು ಆಟೋ ರಿಕ್ಷಾವನ್ನು ಹಾಗೂ ೨ ಮೊಬೈಲ್ ಫೋನ್ಗಳು ಹೀಗೆ ಒಟ್ಟು ೨.೨೭.೪೦೦/- ರೂ ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ದಾಳಿಯನ್ನು ಪಿ.ಐ. ಎಸ್.ಆರ್. ಗಣಾಚಾರಿ, ಪಿ.ಎಸ್.ಐ. ಎಮ್.ಎಫ್. ದುರ್ಗಪ್ಪನವರ ಹಾಗೂ ಸಿಬ್ಬಂದಿ ಎನ್.ಡಿ.ಮಳಗಾವಿ, ನಿಂಗಪ್ಪ ಮೇಗಲಮನಿ, ಪಿ.ಆರ್.ಬಾವಿಕಟ್ಟಿ, ನಾಗೇಂದ್ರ ಹಾನಗಲ್ಲ, ಜಿ. ವಾಯ್.ದೊಡ್ಡಮನಿ, ಎಚ್.ಜಿ.ಭರಮಗೌಡ್ರ, ಎಂ.ಆರ್.ಚನ್ನಗಿರಿ, ಮಾಲತೇಶ ಹಟ್ಟಿ ಕೈಗೊಂಡಿದ್ದರು. ಈ ಶ್ಲಾಘನೀಯ ಕಾರ್ಯಕ್ಕೆ ಹಾವೇರಿ ಎಸ್.ಪಿ. ಸವರು ಸೂಕ್ತ ಬಹುಮಾನ ಘೋಷಣೆ ಮಾಡಿದ್ದಾರೆ.