ಚಿತ್ತಿಮಳಿಗೆ ಹಾವೇರಿಯ ಬಳಿ ತುಂಗಾ
ಮೇಲ್ದಂಡೆ ಕಾಲುವೆ ಡಮಾರ, ಸಾವಿರಾರು ಎಕರೆ ಪ್ರದೇಶಕ್ಕೆ ನುಗ್ಗಿರುವ ನೀರು
ಹಾವೇರಿ; ಕಳೆದರಾತ್ರಿ ಎಡಬಿಡದೇ ಸುರಿದ ಭಾರೀಮಳೆಗೆ ಹಾವೇರಿಗೆ ಸಮೀಪದ ಕನಕಪುರ ದ ಹತ್ತಿರತುಂಗಾ ಮೇಲ್ದಂಡೆ ಕಾಲುವೆ ಶನಿವಾರ ಬೆಳಗಿನ ಜಾವ ಡಮಾರ ಎಂದಿದೆ.
ಕಾಲುವೆಯ ನೀರು ಹೊಳೆಯಂತೆ ಹರಿಯುತ್ತಿದ್ದು ಸಾವಿರಾರು ಎಕರೆ ಪ್ರದೇಶಕ್ಕೆ ನುಗ್ಗಿರುವ ನೀರು ಬೆಳೆಗಳನ್ನು ನುಂಗಿಹಾಕಿದೆ.
ಚಿತ್ತಿಮಳಿಗೆ ಹಾವೇರಿಯ ಬಳಿ ತುಂಗಾ ಮೇಲ್ದಂಡೆ ಕಾಲುವೆ ೫೦ ಅಡಿ ಒಡೆದು ಅಪಾರ ಪ್ರಮಾಣದಲ್ಲಿಹಾನಿ ಸಂಭವಿಸಿದೆ.
ಕಳಪೆ ಕಾಮಗಾರಿ, ಆಕ್ರೋಶ: ತುಂಗಾ ಮೇಲ್ದಂಡೆ ಕಾಲುವೆಯ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು ೫ ವರ್ಷಗಳಲ್ಲಿ ಯುಟಿಪಿ ಕಾಲುವೆ ಒಡೆದು ಹೋಗಿದ್ದು, ರೈತರಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಇದರ ನೈತಿಕ ಹೊಣೆಯನ್ನು ತುಂಗಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳು ಹೊತ್ತು ಕಾಲುವೆ ದುರಸ್ತಿ ಪಡಿಸುವುದರ ಜೊತೆಗೆ ಹಾನಿಗೊಳಗಾದ ರೈತರಿಗೆ ತಕ್ಷಣ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಯುಟಿಪಿ ಅಧಿಕಾರಿಗಳನ್ನು ರೈತರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
