ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರಿಂದ ಮೃತರ ಕುಟುಂಬಕ್ಕೆ ರೂ.೨ ಲಕ್ಷ ವೈಯಕ್ತಿಕ ಪರಿಹಾರ
ಹಾವೇರಿ: ಸವಣೂರು ತಾಲೂಕು ಮಾದಾಪುರ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಮೃತಪಟ್ಟವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದ ಜವಳಿ, ಕಬ್ಬು ಅಭಿವೃದ್ಧಿ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ವೈಯಕ್ತಿವಾಗಿ ರೂ.೨ ಲಕ್ಷ ನಗದು ಪರಿಹಾರ ನೀಡಿದರು.
ಶುಕ್ರವಾರಸಂಜೆ ಮಾದಾಪುರ ಗ್ರಾಮಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಮನೆ ನಿರ್ಮಾಣಕ್ಕೆ ಎನ್ ಡಿ ಆರ್ ಎಫ್ ಮಾರ್ಗಸೂಚಿ ಅನ್ವಯ ರೂ.೧.೨೦ ಲಕ್ಷ ಮೊತ್ತ ಹಾಗೂ ಮೃತರ ಕುಟುಂಬದವರಿಗೆ ತಲಾ ಐದು ಲಕ್ಷ ರೂ. ಪರಿಹಾರ ವಿತರಣೆ ಆದೇಶಪತ್ರಗಳನ್ನು ವಿತರಣೆ ಮಾಡಿದ ಅವರು, ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮದಲ್ಲಿ ೫೦ ವರ್ಷಕ್ಕಿಂತ ಹಳೆ ಮನೆಗಳ, ವಸತಿ ಹಾಗೂ ನಿವೇಶನ ರಹಿತರ ಸರ್ವೇ ಮಾಡಲು ಮಾಡಲು ಸಂಬAಧಿಸಿದ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಇಂತಹ ಅವಘಡಗಳು ಸಂಭವಿಸಿದ ತಕ್ಷಣ ಆರೋಗ್ಯ ಸೇವೆ ನೀಡಬೇಕು. ಅವಘಡ ಸಂಭವಿಸಿದ ಸ್ಥಳಕ್ಕೆ ಆಗಮಿಸಲು ವಿಳಂಬ ಮಾಡಿದ ಕುರಿತು ಅಧಿಕಾರಿಗಳಿಗೆ ನೋಟೀಸ್ ಜಾರಿಮಾಡುವಂತೆ ಸೂಚನೆ ನೀಡಿದರು.
ಇಂತಹ ಘಟನೆಗಳು ಸಂಭವಿಸದAತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಬಸವ ವಸತಿ ಯೋಜನೆಯಡಿ ಮನೆ ನಿರ್ಮಾಣ ಮೊತ್ತ ಹೆಚ್ಚಿಸಲು ಹಾಗೂ ಬ್ಯಾಂಕ್ಗಳಿAದ ಸಾಲ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಘಟನೆ ವಿವರ: ಮಾದಾಪೂರ ಗ್ರಾಮದಲ್ಲಿ ಜುಲೈ ೧೯ ರಂದು ಬೆಳಗಿನಜಾವ ೩ ಗಂಟೆಗೆ ಸುಮಾರು ೫೦ ವರ್ಷದಷ್ಟು ಹಳೆಯಾದ ಮನೆ ಕುಸಿದ ಸಮಯದಲ್ಲಿ ಮನೆಯಲ್ಲಿದ್ದ ೩೮ ವರ್ಷದ ಚನ್ನಮ್ಮ ದೊಡಬಸಪ್ಪ ಹರಕುಣಿ ಹಾಗೂ ಅವಳಿ ಮಕ್ಕಳಾದ ಎರಡು ವರ್ಷದ ಅಮೂಲ್ಯ ಹಾಗೂ ಅನುಶ್ರೀ ಮೃತಪಟ್ಟಿದ್ದರು.
ಸವಣೂರು ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ೩೫ ವರ್ಷದ ಮುತ್ತಪ್ಪ ದೊಡಬಸಪ್ಪ ಹರಕುಣಿ ಹಾಗೂ ಶ್ರೀಮತಿ ಸುನಿತಾ ಮುತ್ತಪ್ಪ ಹರಕುಣಿ ಅವರು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಮೃತ ಅವಳಿ ಮಕ್ಕಳು ಮುತ್ತಪ್ಪ ಹಾಗೂ ಸುನಿತಾ ದಂಪತಿಗಳ ಮಕ್ಕಳಾಗಿದ್ದಾರೆ ಹಾಗೂ ಮೃತ ಚನ್ನಮ್ಮ ಹರಕುಣಿ ಮುತ್ತಪ್ಪ ಅವರ ಸಹೋದರಿಯಾಗಿದ್ದಾಳೆ.
೭೦ ವರ್ಷದ ವೃದ್ಧೆ ಯಲ್ಲವ್ವ ಹರಕುಣಿ ಅವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿದೆ.
ತಾಲೂಕಾ ಆಸ್ಪತ್ರೆಗೆ ಭೇಟಿ: ನಂತರ ಸವಣೂರ ತಾಲೂಕಾ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು ಆಸ್ಪತ್ರೆ ಮೂಲ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ, ಸವಣೂರು ಉಪವಿಭಾಗಾಧಿಕಾರಿ ಮಹ್ಮದ ಖಿಜರ್, ಡಿವೈಎಸ್ಪಿ ಮಂಜುನಾಥ್, ಹುಲಗೂರ ಪಿಎಸ್ಐ ಪರಶುರಾಮ ಕಟ್ಟಿಮನಿ, ತಹಶೀಲ್ದಾರ ಭರತರಾಜ್, ಮುಖಂಡರಾದ ಅಜ್ಜಂಪೀರ ಖಾದ್ರಿ, ಪಠಾಣ ಇತರರು ಉಪಸ್ಥಿತರಿದ್ದರು.