ಜುಲೈ.೧೦ಕ್ಕೆ ಬೆಂಗಳೂರಲ್ಲಿ ಕರ್ನಾಟಕದ ದಲಿತ ಚಳುವಳಿಗೆ ೫೦ ವರ್ಷಗಳ ಸಂಭ್ರಮೋತ್ಸವ,ಬೆಂಗಳೂರು ಚಲೋ- ಜಿಲ್ಲೆಯಿಂದ ಸಾವಿರಾರು ದಸಸಂ ಕಾರ್ಯಕರ್ತರು

Date:

ಜುಲೈ.೧೦ಕ್ಕೆ ಬೆಂಗಳೂರಲ್ಲಿ ಕರ್ನಾಟಕದ ದಲಿತ ಚಳುವಳಿಗೆ ೫೦ ವರ್ಷಗಳ ಸಂಭ್ರಮೋತ್ಸವ,ಬೆಂಗಳೂರು ಚಲೋ- ಜಿಲ್ಲೆಯಿಂದ ಸಾವಿರಾರು ದಸಸಂ ಕಾರ್ಯಕರ್ತರು
ಹಾವೇರಿ: ಪ್ರೊ. ಬಿ. ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕದ ದಲಿತ ಚಳುವಳಿಗೆ ಜುಲೈ.೧೦ಕ್ಕೆ ೫೦ ವರ್ಷಗಳು ತುಂಬವ ಹಿನ್ನಲೆಯಲ್ಲಿ ಜುಲೈ ೧೦ ರಬುಧವಾರ ಬೆಂಗಳೂರಿನ ವಸಂತ ನಗgದಲ್ಲಿನ ಡಾ. ಅಂಬೇಡ್ಕರ್ ಭವನದಲ್ಲಿ ಕರ್ನಾಟಕದ ದಲಿತ ಚಳುವಳಿಗೆ ೫೦ ವರ್ಷಗಳ ಸಂಭ್ರಮೋತ್ಸವ ಕಾರ್ಯಾಕ್ರವನ್ನು ಆಯೋಜಿಸಲಾಗಿದ್ದು, ಜಿಲ್ಲೆಯಿಂದ ಸಾವಿರಾರು ದಸಸಂ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ದಸಸಂನ ಜಿಲ್ಲಾ ಸಂಘಟನೆಯ ಸಂಚಾಲಕ ಸಂಜಯಗಾಂಧಿ ಸಂಜೀವಣ್ಣನವರ ಹೇಳಿದರು.
ಮಂಗಳವಾರದಸಸಂನ ಜನಸಂಪರ್ಕ ಕಾರ್ಯಾಲಯದಲ್ಲಿ ಕರ್ನಾಟಕದ ದಲಿತ ಚಳುವಳಿಗೆ ೫೦ ವರ್ಷಗಳ ಸಂಭ್ರಮೋತ್ಸವ ಬೆಂಗಳೂರು ಚಲೋ ಕಾರ್ಯಕ್ರಮದ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಈ ಕಾರ್ಯಕ್ರಮಕ್ಕೆ ಹಾವೇರಿ ಜಿಲ್ಲೆಯಿಂದ ಮಹಿಳಾ ಕಾರ್ಯಕರ್ತರು ಸೇರಿದಂತೆ ದಸಸಂನ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ, ಪ್ರೊಫೆಸರ್ ಬಿ. ಕೃಷ್ಣಪ್ಪನವರಗೆ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು, ಶಿಗ್ಗಾವಿ ಜಾನಪದ ವಿಶ್ವವಿದ್ಯಾಲಯಕ್ಕೆ ಪ್ರೊ. ಬಿ. ಕೃಷ್ಣಪ್ಪನವರ ಹೆಸರನ್ನು ನಾಮ ಕರಣಮಾಡಬೇಕು. ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ನಗರ ಸಭೆ ಪುರಸಭೆ ಪಟ್ಟಣ ಪಂಚಾಯತ, ಗ್ರಾ.ಪಂಗಳಲ್ಲಿ, ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು.
೨೦೨೪-೨೫ ನೇ ಸಾಲಿನ ಬಜೆಟ್‌ನಲ್ಲಿ ದಲಿತರ ಉನ್ನತಿಗಾಗಿ ಮೀಸಲಿರಿಸಿದ ಕರ್ನಾಟಕ ಪರಿಶಿಷ್ಟ ಜಾತಿಗಳ ಉಪಯೋಗ ಮತ್ತು ಪ ಪಂಗಡಗಳ ಎಸ್.ಸಿ.ಪಿ.ಟಿ.ಎಸ್.ಪಿ ಉಪಯೋಗಿಯ ಅನುದಾನದಡಿ ಬಡವರಿಗೆ ವಸತಿ ನಿರ್ಮಾಣಕ್ಕಾಗಿ ತಲ ಹತ್ತು ಲಕ್ಷ ರೂ ಸಹಾಯಧನ ಮಂಜೂರು ಮಾಡಬೇಕು. ಬಗರ್ ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸಿ ಹಕ್ಕು ಪತ್ರ ನೀಡಬೇಕು, ಪ್ರತಿ ವಿಧಾನಸಭಾ ಕ್ಷೇತ್ರವಾರು ನಿಗದಿಪಡಿಸುತ್ತಿರುವ ವಾಹನ ಖರೀದಿ, ಭೂ ಒಡೆತನ ಯೋಜನೆ, ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಇತರೆ ಸಾಲ ಸೌಲಭ್ಯಗಳ ಗುರಿಯನ್ನು ಹೆಚ್ಚಿಸಬೇಕು, ಹಾಸ್ಟೆಲ್ ವಿದ್ಯಾರ್ಥಿಗಳ ಭೋಜನ ವೆಚ್ಚವನ್ನು ಬೆಲೆ ಏರಿಕೆ ತಕ್ಕಂತೆ ಮಾಸಿಕ ಬತ್ತೆ ರೂ. ೨,೫೦೦ ರಿಂದ ೩,೦೦೦ ವರೆಗೆ ಹೆಚ್ಚಿಸಬೇಕು ಎಂದು ಆಗ್ರಹಿಸಲಾಗುವುದು ಎಂದು ಸಂಜಯಗಾಂಧಿ ಹೇಳಿದರು.
ಈಸಂದರ್ಭದಲ್ಲಿ ದಸಸಂನ ಪ್ರಮುಖರಾದ ಸುಮಂಗಲ ರಾರಾವಿ, ಆನಂದ್ ಮುರುಡಪ್ಪನವರ್, ನಾಗರಾಜ್ ಸಿಡ್ಲಣ್ಣನವರ್, ಶಿವಣ್ಣ ಕನವಳ್ಳಿ, ಶೇಖಪ್ಪ ಹರಿಜನ್, ಪ್ರಕಾಶ್ ಮರಬದ, ರೇಖಾ ಸಣ್ಣನೀಲಪ್ಪನವರ್, ಲಕ್ಷ್ಮಿ ಹಳ್ಳಳ್ಳಿ. ಸಂಜೀವ್ ಮುಳಗುಂದ, ರಮೇಶ್ ಬುರಡಿ, ಮಾಲತೇಶ್ ತೋಟಣ್ಣನವರ್ ಮುಂತಾದವರು ಇದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಜುಲೈ.೧೦ಕ್ಕೆ ಬೆಂಗಳೂರಲ್ಲಿ ಕರ್ನಾಟಕದ ದಲಿತ ಚಳುವಳಿಗೆ ೫೦ ವರ್ಷಗಳ ಸಂಭ್ರಮೋತ್ಸವ,ಬೆಂಗಳೂರು ಚಲೋ- ಜಿಲ್ಲೆಯಿಂದ ಸಾವಿರಾರು ದಸಸಂ ಕಾರ್ಯಕರ್ತರು
ಹಾವೇರಿ: ಪ್ರೊ. ಬಿ. ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕದ ದಲಿತ ಚಳುವಳಿಗೆ ಜುಲೈ.೧೦ಕ್ಕೆ ೫೦ ವರ್ಷಗಳು ತುಂಬವ ಹಿನ್ನಲೆಯಲ್ಲಿ ಜುಲೈ ೧೦ ರಬುಧವಾರ ಬೆಂಗಳೂರಿನ ವಸಂತ ನಗgದಲ್ಲಿನ ಡಾ. ಅಂಬೇಡ್ಕರ್ ಭವನದಲ್ಲಿ ಕರ್ನಾಟಕದ ದಲಿತ ಚಳುವಳಿಗೆ ೫೦ ವರ್ಷಗಳ ಸಂಭ್ರಮೋತ್ಸವ ಕಾರ್ಯಾಕ್ರವನ್ನು ಆಯೋಜಿಸಲಾಗಿದ್ದು, ಜಿಲ್ಲೆಯಿಂದ ಸಾವಿರಾರು ದಸಸಂ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ದಸಸಂನ ಜಿಲ್ಲಾ ಸಂಘಟನೆಯ ಸಂಚಾಲಕ ಸಂಜಯಗಾಂಧಿ ಸಂಜೀವಣ್ಣನವರ ಹೇಳಿದರು.
ಮಂಗಳವಾರದಸಸಂನ ಜನಸಂಪರ್ಕ ಕಾರ್ಯಾಲಯದಲ್ಲಿ ಕರ್ನಾಟಕದ ದಲಿತ ಚಳುವಳಿಗೆ ೫೦ ವರ್ಷಗಳ ಸಂಭ್ರಮೋತ್ಸವ ಬೆಂಗಳೂರು ಚಲೋ ಕಾರ್ಯಕ್ರಮದ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಈ ಕಾರ್ಯಕ್ರಮಕ್ಕೆ ಹಾವೇರಿ ಜಿಲ್ಲೆಯಿಂದ ಮಹಿಳಾ ಕಾರ್ಯಕರ್ತರು ಸೇರಿದಂತೆ ದಸಸಂನ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ, ಪ್ರೊಫೆಸರ್ ಬಿ. ಕೃಷ್ಣಪ್ಪನವರಗೆ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು, ಶಿಗ್ಗಾವಿ ಜಾನಪದ ವಿಶ್ವವಿದ್ಯಾಲಯಕ್ಕೆ ಪ್ರೊ. ಬಿ. ಕೃಷ್ಣಪ್ಪನವರ ಹೆಸರನ್ನು ನಾಮ ಕರಣಮಾಡಬೇಕು. ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ನಗರ ಸಭೆ ಪುರಸಭೆ ಪಟ್ಟಣ ಪಂಚಾಯತ, ಗ್ರಾ.ಪಂಗಳಲ್ಲಿ, ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು.
೨೦೨೪-೨೫ ನೇ ಸಾಲಿನ ಬಜೆಟ್‌ನಲ್ಲಿ ದಲಿತರ ಉನ್ನತಿಗಾಗಿ ಮೀಸಲಿರಿಸಿದ ಕರ್ನಾಟಕ ಪರಿಶಿಷ್ಟ ಜಾತಿಗಳ ಉಪಯೋಗ ಮತ್ತು ಪ ಪಂಗಡಗಳ ಎಸ್.ಸಿ.ಪಿ.ಟಿ.ಎಸ್.ಪಿ ಉಪಯೋಗಿಯ ಅನುದಾನದಡಿ ಬಡವರಿಗೆ ವಸತಿ ನಿರ್ಮಾಣಕ್ಕಾಗಿ ತಲ ಹತ್ತು ಲಕ್ಷ ರೂ ಸಹಾಯಧನ ಮಂಜೂರು ಮಾಡಬೇಕು. ಬಗರ್ ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸಿ ಹಕ್ಕು ಪತ್ರ ನೀಡಬೇಕು, ಪ್ರತಿ ವಿಧಾನಸಭಾ ಕ್ಷೇತ್ರವಾರು ನಿಗದಿಪಡಿಸುತ್ತಿರುವ ವಾಹನ ಖರೀದಿ, ಭೂ ಒಡೆತನ ಯೋಜನೆ, ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಇತರೆ ಸಾಲ ಸೌಲಭ್ಯಗಳ ಗುರಿಯನ್ನು ಹೆಚ್ಚಿಸಬೇಕು, ಹಾಸ್ಟೆಲ್ ವಿದ್ಯಾರ್ಥಿಗಳ ಭೋಜನ ವೆಚ್ಚವನ್ನು ಬೆಲೆ ಏರಿಕೆ ತಕ್ಕಂತೆ ಮಾಸಿಕ ಬತ್ತೆ ರೂ. ೨,೫೦೦ ರಿಂದ ೩,೦೦೦ ವರೆಗೆ ಹೆಚ್ಚಿಸಬೇಕು ಎಂದು ಆಗ್ರಹಿಸಲಾಗುವುದು ಎಂದು ಸಂಜಯಗಾಂಧಿ ಹೇಳಿದರು.
ಈಸಂದರ್ಭದಲ್ಲಿ ದಸಸಂನ ಪ್ರಮುಖರಾದ ಸುಮಂಗಲ ರಾರಾವಿ, ಆನಂದ್ ಮುರುಡಪ್ಪನವರ್, ನಾಗರಾಜ್ ಸಿಡ್ಲಣ್ಣನವರ್, ಶಿವಣ್ಣ ಕನವಳ್ಳಿ, ಶೇಖಪ್ಪ ಹರಿಜನ್, ಪ್ರಕಾಶ್ ಮರಬದ, ರೇಖಾ ಸಣ್ಣನೀಲಪ್ಪನವರ್, ಲಕ್ಷ್ಮಿ ಹಳ್ಳಳ್ಳಿ. ಸಂಜೀವ್ ಮುಳಗುಂದ, ರಮೇಶ್ ಬುರಡಿ, ಮಾಲತೇಶ್ ತೋಟಣ್ಣನವರ್ ಮುಂತಾದವರು ಇದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...