ಜ.೦೫ ರಿಂದ ೧೦ ರವರೆಗೆ ಹಾವೇರಿ ಹುಕ್ಕೇರಿಮಠದ ನಮ್ಮೂರಜಾತ್ರೆ
ಹಾವೇರಿ: ಮರಿ ಕಲ್ಯಾಣ ಖ್ಯಾತಿಯ ಹುಕ್ಕೇರಿಮಠ ಗೌರವ, ಘನತೆ ಹೊಂದಿದೆ. ಕಲೆ, ಸಾಹಿತ್ಯ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಕೊಡುಗೆ ನೀಡಿರುವ ನಾಡಿನ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಹಾವೇರಿನಗರದ ಶ್ರೀ ಹುಕ್ಕೇರಿಮಠದ ಲಿಂ. ಶಿವಬಸವ ಮಹಾಸ್ವಾಮಿಗಳ ೭೯ನೇ ಹಾಗೂ ಶಿವಲಿಂಗಮಹಾಸ್ವಾಮಿಗಳ ೧೬ನೇ ಪುಣ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳು ಜಿ.೦೫ರಿಂದ ಜ.೧೦ರವರಗೆ ನಡೆಯಲಿವೆ ಎಂದು ಹುಕ್ಕೇರಿಮಠದ ಮಠಾಧ್ಯಕ್ಷರಾದ ಸದಾಶಿವ ಮಹಾಸ್ವಾಮೀಜಿ ತಿಳಿಸಿದರು.
ಬುಧವಾರ ಹುಕ್ಕೇರಿಮಠದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಜಾತ್ರೆಯ ವಿವರಗಳನ್ನು ನೀಡಿದ ಅವರು ಉಭಯಶ್ರೀಗಳ ಪುಣ್ಯದಿನಾಚರಣೆಯ ಅಂಗವಾಗಿ ಜ.೦೫ ರಿಂದ ೧೦ ರವರೆಗೆ ಹಾವೇರಿ ಹುಕ್ಕೇರಿಮಠದಲ್ಲಿ ನಮ್ಮೂರಜಾತ್ರೆಯಲ್ಲಿ ವೈಚಾರಿಕ, ಜನೋಪಯೋಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾಧಕರಿಗೆ ಹಾಗೂ ಅಧಿಕಾರ ವರ್ಗಕ್ಕೆ ಗೌರವ ಸನ್ಮಾನ, ಕಲೆ, ಸಂಸ್ಕ್ರತಿಯ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ.
ರೊಟ್ಟಿ ಜಾತ್ರೆಯು ಸಹ ನಡೆಯಲಿದ್ದು, ಭಕ್ತರು ನೀಡುವ ರೊಟ್ಟಿಗಳನ್ನು ಪ್ರಸಾದಕ್ಕೆ ವಿನಯೋಗಿಸಲಾಗುವುದು ಎಂದು ಅವರು ಜಿ.೧೦ರಂದು ಉಭಯ ಶ್ರೀಗಳ ಭಾವಚಿತ್ರದ ಮೆರವಣಿಗೆ ನಗರದಲ್ಲಿ ನಡೆಯಲಿದ್ದು, ನಾಡಿನ ವಿವಿಧ ಖ್ಯಾತ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ೫೦ಸಾವಿರಕ್ಕೂ ಅಧಿಕ ಭಕ್ತಾದಿಗಳು ಉಭಯಶ್ರೀಗಳ ಉತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಾತ್ರಾ ಕಮಿಟಿಯ ಅಧ್ಯಕ್ಷ ಅಶೋಕ್ ಮಗನೂರ್ ಪ್ರಮುಖರಾದ ಎಸ್. ಎಸ್. ಮುಷ್ಟಿ, ಆರ್.ಎಸ್. ಮಾಗನೂರ್, ಮಾಂತಪ್ಪ ಹಲಗಣ್ಣವರ್, ಅಮೃತಮ್ಮ ಶೀಲವಂತರ, ಸಿ.ಜಿ. ತೋಟಣ್ಣನವರ್. ಜಗದೀಶ್ ತುಪ್ಪದ, ಶಿವಯೋಗಿ ವಾಲಿಶೆಟ್ಟರ್, ರಾಜಪ್ಪ ಲಂಬಿ, ಎಸ್.ಸಿ. ಮರಳಿಹಳ್ಳಿ, ಬಿ. ಬಸವರಾಜಪ್ಪ ಮತ್ತಿತರರು ಇದ್ದರು.