ಜ.೨೭ರಿಂದ ಕೂಡಲದಿಂದ ದೃಢಸಂಕಲ್ಪ ಮಹಾಯಾತ್ರೆ: ಶಾಸಕ ಶ್ರೀನಿವಾಸ ಮಾನೆ ಪ್ರಕಟ
ಹಾವೇರಿ: ಹಾನಗಲ್ಲ ಕ್ಷೇತ್ರದಲ್ಲಿ ಸಿಕ್ಕ ಕಡಿಮೆ ಅವಧಿಯಲ್ಲಿ ತಾವು ಜನತೆಗೆ ಸ್ಪಂದಿಸಿದ ಹಾಗೂ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು, ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನತೆಗೆ ತಿಳಿಸಲು ಜನೆವರಿ ೨೭ ರಿಂದ ಕೂಡಲದಿಂದ ದೃಢಸಂಕಲ್ಪ ಮಹಾಯಾತ್ರೆ ಕೈಗೊಂಡಿರುವುದಾಗಿ ಆರಂಭಿಸಲಾಗುವುದು ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದ್ದಾರೆ.
ಭಾನುವಾರ ಹಾವೇರಿಯಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವರದಾ-ಧರ್ಮಾ ನದಿಗಳ ಸಂಗಮ ಕೂಡಲ ಗ್ರಾಮದಿಂದ ಇದೇ ೨೭ ರಿಂದ ದೃಢಸಂಕಲ್ಪ ಮಹಾಯಾತ್ರೆ ಆಯೋಜಿಸಲಾಗಿದೆ. ಬಿಜೆಪಿಯ ಭ್ರಷ್ಟಾಚಾರ, ಜನವಿರೋಧಿ ನೀತಿಗಳಿಂದ ಜನ ನೊಂದಿದ್ದಾರೆ. ಬೆಲೆ ಏರಿಕೆ ಬಿಸಿಯಿಂದ ಬೇಸತ್ತಿದ್ದಾರೆ. ಸಂಕಷ್ಟದ ಸಮಯದಲ್ಲಿಯೂ ಸರ್ಕಾರ ಸ್ಪಂದಿಸಿಲ್ಲ ಎಂದು ಬೇಸರದಲ್ಲಿದ್ದಾರೆ. ಹಿಂದೆ ಕಾಂಗ್ರೆಸ್ ಜಾರಿಗೆ ತಂದಿದ್ದ ಜನಪರ ಯೋಜನೆಗಳನ್ನೂ ಈ ಸರ್ಕಾರ ನಿಲ್ಲಿಸಿದೆ. ಜನಪರ ನಿಲುವಿನ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎನ್ನುವ ಭಾವನೆ ಮೂಡಿದೆ. ಈ ಕುರಿತು ಯಾತ್ರೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶವಿದೆ ಎಂದರು.
ಹಾನಗಲ್ಲ ತಾಲೂಕಿನ ಸಮಗ್ರ ವಿಕಾಸ, ಜನಕಲ್ಯಾಣಕ್ಕೆ ಹಲವು ದೃಢಸಂಕಲ್ಪ ಮಾಡಲಾಗಿದ್ದು, ಈ ಎಲ್ಲ ಉದ್ದೇಶಗಳ ಸಾಕಾರಕ್ಕೆ ಮಹಾಯಾತ್ರೆ ಮಾಡುತ್ತಿದ್ದು, ಜ.೨೭ರಿಂದ ಪ್ರತಿದಿನ ಬೆಳಿಗ್ಗೆ ೭.೩೦-೧೦-೩೦ರವರೆಗೆ, ಸಂಜೆ ೪ ರಿಂದ ಆರಂಭಿಸಿ ಕ್ಷೇತದಲ್ಲಿ ದೃಢ ಸಂಕಲ್ಪ ಮಹಾಯಾತ್ರೆ ಮೂಲಕ ಸಂಚರಿಸಿ ಪ್ರತಿಹಳ್ಳಿಯ ಪ್ರತಿಮನೆಗಳಿಗೂ ಭೇಟಿ ಜನಪರ ನಿಲುವಿನ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು. ಈ ಕುರಿತು ಯಾತ್ರೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶವಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದ್ದಾರೆ.
ಜ.೨೭ರಿಂದ ಕೂಡಲದಿಂದ ದೃಢಸಂಕಲ್ಪ ಮಹಾಯಾತ್ರೆ: ಶಾಸಕ ಶ್ರೀನಿವಾಸ ಮಾನೆ ಪ್ರಕಟ
Date:
ಜ.೨೭ರಿಂದ ಕೂಡಲದಿಂದ ದೃಢಸಂಕಲ್ಪ ಮಹಾಯಾತ್ರೆ: ಶಾಸಕ ಶ್ರೀನಿವಾಸ ಮಾನೆ ಪ್ರಕಟ
ಹಾವೇರಿ: ಹಾನಗಲ್ಲ ಕ್ಷೇತ್ರದಲ್ಲಿ ಸಿಕ್ಕ ಕಡಿಮೆ ಅವಧಿಯಲ್ಲಿ ತಾವು ಜನತೆಗೆ ಸ್ಪಂದಿಸಿದ ಹಾಗೂ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು, ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನತೆಗೆ ತಿಳಿಸಲು ಜನೆವರಿ ೨೭ ರಿಂದ ಕೂಡಲದಿಂದ ದೃಢಸಂಕಲ್ಪ ಮಹಾಯಾತ್ರೆ ಕೈಗೊಂಡಿರುವುದಾಗಿ ಆರಂಭಿಸಲಾಗುವುದು ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದ್ದಾರೆ.
ಭಾನುವಾರ ಹಾವೇರಿಯಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವರದಾ-ಧರ್ಮಾ ನದಿಗಳ ಸಂಗಮ ಕೂಡಲ ಗ್ರಾಮದಿಂದ ಇದೇ ೨೭ ರಿಂದ ದೃಢಸಂಕಲ್ಪ ಮಹಾಯಾತ್ರೆ ಆಯೋಜಿಸಲಾಗಿದೆ. ಬಿಜೆಪಿಯ ಭ್ರಷ್ಟಾಚಾರ, ಜನವಿರೋಧಿ ನೀತಿಗಳಿಂದ ಜನ ನೊಂದಿದ್ದಾರೆ. ಬೆಲೆ ಏರಿಕೆ ಬಿಸಿಯಿಂದ ಬೇಸತ್ತಿದ್ದಾರೆ. ಸಂಕಷ್ಟದ ಸಮಯದಲ್ಲಿಯೂ ಸರ್ಕಾರ ಸ್ಪಂದಿಸಿಲ್ಲ ಎಂದು ಬೇಸರದಲ್ಲಿದ್ದಾರೆ. ಹಿಂದೆ ಕಾಂಗ್ರೆಸ್ ಜಾರಿಗೆ ತಂದಿದ್ದ ಜನಪರ ಯೋಜನೆಗಳನ್ನೂ ಈ ಸರ್ಕಾರ ನಿಲ್ಲಿಸಿದೆ. ಜನಪರ ನಿಲುವಿನ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎನ್ನುವ ಭಾವನೆ ಮೂಡಿದೆ. ಈ ಕುರಿತು ಯಾತ್ರೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶವಿದೆ ಎಂದರು.
ಹಾನಗಲ್ಲ ತಾಲೂಕಿನ ಸಮಗ್ರ ವಿಕಾಸ, ಜನಕಲ್ಯಾಣಕ್ಕೆ ಹಲವು ದೃಢಸಂಕಲ್ಪ ಮಾಡಲಾಗಿದ್ದು, ಈ ಎಲ್ಲ ಉದ್ದೇಶಗಳ ಸಾಕಾರಕ್ಕೆ ಮಹಾಯಾತ್ರೆ ಮಾಡುತ್ತಿದ್ದು, ಜ.೨೭ರಿಂದ ಪ್ರತಿದಿನ ಬೆಳಿಗ್ಗೆ ೭.೩೦-೧೦-೩೦ರವರೆಗೆ, ಸಂಜೆ ೪ ರಿಂದ ಆರಂಭಿಸಿ ಕ್ಷೇತದಲ್ಲಿ ದೃಢ ಸಂಕಲ್ಪ ಮಹಾಯಾತ್ರೆ ಮೂಲಕ ಸಂಚರಿಸಿ ಪ್ರತಿಹಳ್ಳಿಯ ಪ್ರತಿಮನೆಗಳಿಗೂ ಭೇಟಿ ಜನಪರ ನಿಲುವಿನ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು. ಈ ಕುರಿತು ಯಾತ್ರೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶವಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದ್ದಾರೆ.