
ಕನ್ನಡದ ಕಂದ ಈರಣ್ಣ ಜಿ. ಕುಂದರಗಿಮಠರ ನಾನಾ ಭಂಗಿಗಳು
ನುಡಿಜಾಗೃತಿಗಾಗಿ “ಹ್ಯಾಂಡಲ್ ಇಲ್ಲದ ಬೈಕ್ ಮೇಲೆ ಹಾವೇರಿಗೆ ಬರುತ್ತಿದ್ದಾನೆ ಕನ್ನಡದ ಕಂದ” ಈರಣ್ಣ ಕುಂದರಗಿಮಠ
ಹಾವೇರಿ : ಹಾವೇರಿಯಲ್ಲಿ ನಡೆಯುತ್ತಿರುವ ೮೬ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಹಲವು ಹತ್ತು ಹೊಸತುಗಳಿಗೆ ಕಾರಣವಾಗುತ್ತಿದೆ. ಇದಿಗ ನುಡಿಜಾಗೃತಿಗಾಗಿ “ಹ್ಯಾಂಡಲ್ ಇಲ್ಲದ ಬೈಕ್ ಮೇಲೆ ಸವಾರಿ ಮಾಡುತ್ತಾ ಹಾವೇರಿಗೆ ಬರುತ್ತಿದ್ದಾನೆ ಕನ್ನಡದ ಕಂದ ಈರಣ್ಣ ಜಿ. ಕುಂದರಗಿಮಠ.
೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಬಾಗಲಕೋಟೆ ಜಿಲ್ಲಾ ಭವನದಿಂದ ವಿಶೇಷ ಬೈಕ್ ಸಾಹಸ ಕ್ರೀಡೆಯನ್ನು ಹಮ್ಮಿಕೊಂಡು ಕನ್ನಡ ನಾಡು,ನುಡಿಗೆವಿಶಿಷ್ಠ ಜಾಗೃತಿ ಅಭಿಯಾನ ಕೈಗೊಂಡು ಈರಣ್ಣ ಜಿ. ಕುಂದರಗಿಮಠ
ಸವಾರಿ ಮಾಡುವ ಬೈಕ್ಗೆ ಹ್ಯಾಂಡಲ್ ಇಲ್ಲ. ಬಾಗಲಕೋಟೆ ಯಿಂದ ಹಾವೇರಿವರೆಗೆ ೩೬೦ ಕಿ.ಮೀ ಬೈಕ್ ಓಡಿಸಿ ನಾಡು ನುಡಿಗೆ ಜಾಗೃತಿ ಮೂಡಿಸುವದು ಇವರ ಕೈಕಂರ್ಯ,
ಬಾಗಲಕೋಟೆ ಯಿಂದ ಹಾವೇರಿಗೆ ಕೆ.ಎ.೨೯ ಆರ್.೬೦೦೬ ಹ್ಯಾಂಡಲ್ ಇಲ್ಲದ ನಮ್ ಕನ್ನಡಿಗನ ಬೈಕ್ ನಾಡು ನುಡಿಗೆ ವಿಶಿಷ್ಠ ಜಾಗೃತಿಗೆ ವಿಶೇಷ ಸಾಹಸ ಕ್ರೀಡೆ ಮೂಲಕ ಹ್ಯಾಂಡಲ್ ಇಲ್ಲದ ಬೈಕ್ನ್ನು ಓಡಿಸುವ ಕುಂದರಗಿಮಠ ರಾಜ್ಯದ ಅಪ್ರತಿಮಸಾಹಸ ಕ್ರೀಡಾ ಪ್ರತಿಭೆಯಾಗಿರುವ ಇಲಕಲ್ಲ ನಗರದ ಈರಣ್ಣ.ಜಿ.ಕುಂದರಗಿಮಠ ಮೂಲತ ಕೃಷಿ ಕುಟುಂಬದಿಂದ ಬಂದ ಸಾಹಸಿ ಯುವಕ.
ಇವರು ದೇಶದಲ್ಲೆ ಪ್ರಥಮಬಾರಿ ಅತ್ಯಂತ ಕಠಿಣವಾದ ಹಾಗೂ ಅಪಾಯಕಾರಿಯಾದ ಕಾರ್ ಹಾಗೂ ಬೈಕ್ ಸಾಹಸ ಕ್ರೀಡೆಯಲ್ಲಿ ತೊಡಗಿಕೊಂಡಿದ್ದು ಕಳೆದ ೧೫ ವರ್ಷಗಳಿಂದ ಗಣನೀಯ ಸೇವೆ ಸಲ್ಲಿಸುತ್ತಾ ವಿಭಿನ್ನ ಹಾಗೂ ವಿಶಿಷ್ಟ ಶೈಲಿಯ ಸಾಹಸದಲ್ಲಿ ಸಾಧನೆಗೈದು ಹಲವಾರು ದಾಖಲೆಮಾಡಿ ರಾಜ್ಯಾಧ್ಯಂತ ಸಂಚಲನ ಮೂಡಿಸಿ ರಾಷ್ಟ್ರಾದ್ಯಂತ ಗಮನ ಸಳೆದು ಈಗಾಗಲೇ ಎರಡು ಬಾರಿ ದೇಶದ ಪ್ರತಿಷ್ಟಿತ “ಲಿಮ್ಕಾ ದಾಖಲೆ” ಹಾಗೂ ಇಂಡಿಯಾ ಬುಕ್ ಆಫ್ ರೇಕಾರ್ಡನಲ್ಲಿ ನೂತನ ಐತಿಹಾಸಿಕ ರಾಷ್ಟ್ರ ಮಟ್ಟದ ದಾಖಲೆ ಮಾಡಿ ಸಾಹಸ ಕ್ರೀಡೆಗೆ ಹೆಸರಾಗಿ ಕರ್ನಾಟಕ ಸರಕಾರ ಹಾಗೂ ನಾಡಿನ ಹಲವಾರು ಮಠಾಧೀಶರಲ್ಲದೇ ಅನೇಕ ಸಂಘ ಸಂಸ್ಥೆಗಳಿಂದ ಜಿಲ್ಲೆ, ರಾಜ್ಯ, ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದು ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದ ರಾಜ್ಯ ರಾಷ್ಟ್ರದ ಪ್ರಥಮ ಸಾಧಕ ನಮ್ಮ ಹೆಮ್ಮೆಯ ಕನ್ನಡಿಗ.
ಇದೀಗ ಜ. ೬,೭,೮ ರಂದು ನಮ್ಮ ಹಾವೇರಿಯಲ್ಲಿ ನಡೆಯುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಅತ್ಯಂತ ಕಠಿಣವಾದ ಹಾಗೂ ರೋಮಾಂಚನಕಾರಿಯಾಗಿ ಬೈಕ್ ಸಾಹಸ ಕ್ರೀಡೆಗೆ ಸಜ್ಜಾಗಿ ಬಾಗಲಕೋಟೆ ಜಿಲ್ಲಾಡಳಿತ ಭವನದಿಂದ ದಿನಾಂಕ: ೦೩-೦೧-೨೦೨೩ ರಂದು ಬೆಳಿಗ್ಗೆ ೭:೦೦ ಘಂಟೆಗೆ ಶ್ರೀ.ಷ.ಬ್ರ. ನೀಲಕಂಠ ಶಿವಾಚರ್ಯ ಮಹಾಸ್ವಾಮಿಗಳು, ಶ್ರೀ ಅಮರೇಶ್ವರ ಮಠ ಗುಳೇದಗುಡ್ಡ. ಹಾಗೂ ಶ್ರೀ ಹೊಳೆ ಹುಚ್ಚೇಶ್ವರ ಮಹಾಸ್ವಾಮಿಗಳು, ಹೊಳೆ ಹುಚ್ಚೇಶ್ವರ ಸಂಸ್ಥಾನ ಮಠ ಕಮತಗಿ. ಪೂಜ್ಯರ ಸಾನಿಧ್ಯದಲ್ಲಿ ಹಾಗೂ ಹುನಗುಂದ ಮತಕ್ಷೇತ್ರದ ಶಾಸಕರಾದ ದೊಡ್ಡನಗೌಡ ಜಿ. ಪಾಟೀಲರು ಹಾಗೂ ಮುಖ್ಯ ಅತಿಥಿ ಗಳಾಗಿ ಜಯಪ್ರಕಾಶ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಬಾಗಲಕೋಟೆ, ಅಲ್ಲದೇ ಶಿವಾನಂದ ಶೆಲ್ಲಿಕೇರಿ, ಜಿಲ್ಲಾಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬಾಗಲಕೋಟೆ. ಎಂ.ವಿ. ಕಂಬಾಗಿ, ತಾಲೂಕಾ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಇಲಕಲ್ಲ. ಪಾಂಡುರಂಗ ಸಣ್ಣಪ್ಪನವರು, ತಾಲೂಕಾ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬಾಗಲಕೋಟೆ. ಈ ಎಲ್ಲ ಗಣ್ಯ ಮಾನ್ಯರ ಉಪಸ್ಥಿತಿಯಲ್ಲಿ ಕನ್ನಡ ನಾಡು ನುಡಿಗೆ ವಿಶಿಷ್ಠ ಜಾಗೃತಿ ಅಭಿಯಾನಕ್ಕಾಗಿ ವಿಶೇಷ ಬೈಕ್ ಸಾಹಸ ಕ್ರೀಡೆಗೆ ಬಾಗಲಕೋಟೆ ಜಿಲ್ಲಾಧಿಕಾರಿಗಳಾದ ಪಿ.ಸುನೀಲಕುಮಾರಈ ಹ್ಯಾಂಡ್ ಇಲ್ಲದ ಬೈಕ್ಗೆ ಚಾಲನೆ ನೀಡುವರು.
ಹಾವೇರಿ ವರೆಗೆ ಸುಮಾರು ೩೬೦ ಕಿ.ಮೀ.ಗಳನ್ನು ಯಾವುದೇ ಅಂಗ ರಕ್ಷಣೆಯನ್ನು ಧರಿಸದೆ ಪ್ರಾಣವನ್ನು ಪಣಕ್ಕಿಟ್ಟು ಕನ್ನಡ ನಾಡು ನುಡಿ ಜಾಗೃತಿಗಾಗಿ ಹ್ಯಾಂಡಲ್ ಇಲ್ಲದ ಬೈಕ್ನ್ನು ಓಡಿಸುತ್ತ ಎರಡು ಕೈಯಲ್ಲಿ ಕನ್ನಡ ಧ್ವಜವನ್ನು ಹಿಡಿದುಕೊಂಡು ಮಾರ್ಗದುದ್ದಕ್ಕೂ ರಾಜ್ಯ ಹಾಗೂ ರಾಷ್ಟ್ರ ಪ್ರೇಮವನ್ನು ಉಕ್ಕಿಸುತ್ತ ವಿಶೇಷ ಬೈಕ್ ಸಾಹಸ ಕ್ರೀಡೆಯ ಮೂಲಕ ನಾಡು ನುಡಿಗೆ ಜಾಗೃತಿಯನ್ನು ಮೂಡಿಸುತ್ತ ಬರಲಿದ್ದಾರೆ ನಮ್ಮ ರಾಜ್ಯದ ಏಕೈಕ ಹ್ಯಾಂಡಲ್ ಇಲ್ಲದ ಬೈಕ್ ರೈಡರ್ ಎಂಬ ಹೆಗ್ಗಳಿಗೆ ಪಾತ್ರರಾದ ರಾಜ್ಯಾದ್ಯಂತ ಖ್ಯಾತಿ ಪಡೆದ ಧೀರ ಸಾಧಕ ಬಾಗಲಕೋಟೆ ಜಿಲ್ಲೆ ಇಲಕಲ್ಲ ನಗರದ ಈರಣ್ಣ ಜಿ. ಕುಂದರಗಿಮಠ.
ಬೈಕ್ ವಿಶೇಷತೆ:- ಈ ಬೈಕ್ಗೆ ಹ್ಯಾಂಡಲ್ ಇಲ್ಲ. ತಮ್ಮ ಬೈಕ್ಗೆ ನಾಡ ದೇವಿ ಭುವನೇಶ್ವರಿ ದೇವಿ ಭಾವಚಿತ್ರವನ್ನು ಅಳವಡಿಸಿದ್ದಾರೆ. ಅಲ್ಲದೆ ಬಾಳೆಹೊನ್ನೂರ ರಂಭಾಪುರಿ ಪೀಠದ ಲಿಂ, ಶಿವಸ್ವರೂಪಿ ಶ್ರೀವೀರಗಂಗಾಧರ ಜಗದ್ಗುರುಗಳ ಭಾವಚಿತ್ರ, ಇಲಕಲ್ಲಿನ ಲಿಂ, ಚಿತ್ತರಗಿ ಶ್ರೀವಿಜಯ ಮಹಾಂತ ಶಿವಯೋಗಿಗಳ ಭಾವಚಿತ್ರ ಹಾಗೂ ಹಾನಗಲ್ ಲಿಂ, ಗುರು ಕುಮಾರ ಶಿವಯೋಗಿಗಳ ಭಾವಚಿತ್ರ ಹಾಗೂ ತುಮಕೂರು ಶ್ರೀ ಸಿದ್ಧಗಂಗಾಮಠದ ಲಿಂ,ಡಾ.ಶ್ರೀ.ಶ್ರೀ.ಶಿವಕುಮಾರ ಮಹಾಸ್ವಾಮಿಗಳು, ಗದಗಿನ ಲಿಂ,ಡಾ.ಪಂ. ಪುಟ್ಟರಾಜ ಗವಾಯಿಗಳ ಭಾವಚಿತ್ರವನ್ನು ಅಳವಡಿಕೊಂಡಿದ್ದಾರೆ. ಅಲ್ಲದೇ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಮತ್ತು ಡಾ. ಪುನೀತ್ ರಾಜಕುಮಾರ ಅವರ ಭಾವಚಿತ್ರವನ್ನು ಅಳವಡಿಕೊಂಡು ಬೈಕ್ ರೈಡಿಂಗ್ ಮಾಡುತ್ತಾ ಬರುತ್ತಾರೆ.
ಮಾರ್ಗ ಬಾಗಲಕೋಟ, ಶಿರೂರ, ಅಮೀನಗಡ, ಹುನಗುಂದ. ಇಲಕಲ್ಲ, ಕುಷ್ಟಗಿ, ಗಜೇಂದ್ರಗಡ, ನೆರೆಗಲ್,ಬೆಟಗೇರಿ, ಗದಗ, ಹುಲಕೊಟಿ, ಹುಬ್ಬಳ್ಳಿ (ಚನ್ನಮ್ಮ ಸರ್ಕಲ್, ಬಂಕಾಪೂರ ಚೌಕ್, ಗಬ್ಬುರ ಬೈಪಾಸ, ಪಿಬಿ ರೋಡ, ಬಸವೇಶ್ವರ ಸರ್ಕಲ್) ಶಿಗ್ಗಾಂವಿ, ಹಾನಗಲ್, ಹಾವೇರಿಯ ಆರ್.ಟಿ.ಓ. ಕಛೇರಿ ಮುಖಾಂತರ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಸ್ಥಳದ ವರೆಗೆ ವಿಶೇಷ ಬೈಕ್ ಸಾಹಸ ಕ್ರೀಡೆಯೊಂದಿಗೆ ಹ್ಯಾಂಡಲ್ ಇಲ್ಲದ ಬೈಕ್ನ್ನು ಓಡಿಸಿಕೊಂಡು ನಾಡು ನುಡಿಗೆ ವಿಶಿಷ್ಠ ಜಾಗೃತಿ ಮೂಡಿಸುತ್ತಾ ಬರಲಿದ್ದಾರೆ. ಇವರ ಸ್ವಾಗತಕ್ಕೆ ಸಜ್ಜಾಗೋಣ.