ನೌಕರರ ಹಾವೇರಿ ಜಿಲ್ಲಾ ಸಂಘಕ್ಕೆ ಅದೃಷ್ಟದ ಮೂಲಕ ಅಧ್ಯಕ್ಷರಾದ ಮಲ್ಲೇಶ ಕರಿಗಾರ
ಹಾವೇರಿ: ತೀವೃ ಕುತೂಹಲ ಕೆರಳಿಸಿದ್ದ ಕರ್ನಾ ಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹಾವೇರಿಜಿಲ್ಲಾ ಘಟಕದ ೨೦೨೪-೨೦೨೯ನೇ ಸಾಲಿನ ಅವದಿಯ ಚುನಾವಣೆಯಲ್ಲಿ ಜಿಲ್ಲೆಯ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಹಾವೇರಿ ತಾಲ್ಲೂಕಿನ ಕೂರಗುಂದ ಪ್ರಾಥಮಿಕ ಶಾಲೆಯ ಶಿಕ್ಷಕ ಮಲ್ಲೇಶ ಕರಿಗಾರ ಚೀಟಿ ಅದೃಷ್ಣದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಇಲ್ಲಿನ ಜಿಲ್ಲಾ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು ೬೪ಮತಗಳಲ್ಲಿ ಅಧ್ಯಕ್ಷಸ್ಥಾನಕ್ಕೆ ಸ್ಪರ್ಧಿಸಿದ್ದ ಸಿದ್ದಣ್ಣ ಯಲಿಗಾರ, ಮಲ್ಲೇಶ ಕರಿಗಾರ ಅವರಿಗೆ ತಲಾ ೩೨ ಮತಗಳು ಚಲಾವಣೆಯಾಗಿದ್ದವು. ಇಬ್ಬರು ಸಮ ಸಮ ಮತಗಳನ್ನು ಪಡೆದ ಹಿನ್ನಲೆಯಲ್ಲಿ ಚುನಾವಣೆ ನಿಯಮದಂತೆ ಚುನಾವಣಾಧಿಕಾರಿ ಎಂ.ಎಚ್.ಪಾಟೀಲ ಇಬ್ಬರ ಹೆಸರುಗಳನ್ನು ಚೀಟಿಯಲ್ಲಿ ಬರೆದು ಅಧೃಷ್ಟ ಪರೀಕ್ಷೆ ಮಾಡಿದ ವೇಳೆ ಮಲ್ಲೇಶ ಕರಿಗಾರ ಅವರ ಹೆಸರಿನ ಚೀಟಿ ಬಂದ ಹಿನ್ನಲೆಯಲ್ಲಿ ಅವರನ್ನು ಅಧ್ಯಕ್ಷರೆಂದು ಘೋಷಣೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ಎಂ.ಎಚ್.ಪಾಟೀಲ ತಿಳಿಸಿದ್ದಾರೆ.
ಜಿಲ್ಲಾ ಖಜಾಂಚಿ ಸ್ಥಾನಕ್ಕೆ ಸ್ಥಾನಕ್ಕೆ ಕಮಗಾಲ ದಾವಲಸಾಬ , ಶಂಕರ ನಾಯ್ಕ ಸ್ಪರ್ಧಿಸಿದ್ದರು. ಅಂತಿಮವಾಗಿ ಕಮಗಾಲ ದಾವಲಸಾಬ ೩೬ ಮತಗಳನ್ನು ಖಜಾಂಚಿ ಆಗಿ ಆಯ್ಕೆ ಆಗಿದ್ದಾರೆ. ಇನ್ನು ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಅಕ್ಷಯ ಗುರುನಾಥ ಪಾಟೀಲ, ಮುನೀಶ್ವರ ಚೂರಿ ಸ್ಪರ್ಧಿಸಿದ್ದರು. ಮುನಿಶ್ವರ ಚೂರಿ ೩೩ಮತಗಳನ್ನು ಪಡೆದು ಪಾಟೀಲರಿಗೆ ಒಂದು ಮತದಿಂದ ಸೋಲಿನ ರುಚಿ ತೋರಿಸಿ ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಶಿಕ್ಷಕರೋರ್ವರು ಇದೇ ಮೊದಲಬಾರಿಗೆ ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಶಿಕ್ಷಕರು ನೌಕರರ ಸಂಘದ ಮುಭಾಗದಲ್ಲಿ ಪಟಾಕಿ ಸಿಡಿಸಿ, ಗೂಲಾಲು ಎರಚಿ, ಸಹಿಹಂಚಿ ವಿಜಯೋತ್ಸವ ಆಚರಿಸಿದರು.