ಪಟಾಕಿ ಗೋದಾಮಿಗೆ ಬೆಂಕಿ ತಗುಲಿ ಅಪಾರ ಹಾನಿ, ಓರ್ವನಿಗೆ ಗಾಯ, ಹಾವೇರಿಯ ಆಲದಕಟ್ಟಿಯಲ್ಲಿ ಘಟನೆ
ಹಾವೇರಿ : ನಗರಕ್ಕೆ ಸಮೀಪದ ಅಲದಕಟ್ಟಿ ಗ್ರಾಮದಲ್ಲಿನ ಪಟಾಕಿ ದಾಸ್ತಾನು ಮಾಡಿದ್ದ ಗೋದಾಮಿಗೆ ಬೆಂಕಿ ತಗಲಿ ಲಕ್ಷಾಂತರ ಮೌಲ್ಯದ ಪಟಾಕಿಗಳು, ದ್ವಿಚಕ್ರ ವಾಹನ ಸುಟ್ಟಿರುವ ಘಟನೆ ಮಂಗಳವಾರ ನಡೆದಿದೆ.
ಕುಮಾರ ಸಾತೆನಹಳ್ಳಿ ಎಂಬುವರಿಗೆ ಸೇರಿದ ಪಟಾಕಿ ಅಂಗಡಿಗೆ ಬೆಂಕಿ ತಗುಲಿಅಂದಾಜು ಮೂರು ಲಾರಿಗಳಷ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪಟಾಕಿಗಳು ಸುಟ್ಟು ಭಸ್ಮವಾಗಿವೆ.ಪಟಾಕಿಗಳಿಗೆ ಬೆಂಕಿ ತಗಲಿದ ವೇಳೆ ಪಟಾಕಿ ಸದ್ದಿನ ಮೊರೆತಕ್ಕೆ ದಿಕ್ಕೆಟ್ಟು ಓಡಿದರು.
ಆಲದಕಟ್ಟಿ ಗ್ರಾಮದ ಎರೆಡು ಅಂತಸ್ತಿನ ಪಟಾಕಿ ಗೋಡೌನ್ಗೆ ಬೆಂಕಿ ತಗುಲಿದ್ದು, ಕೊಟ್ಯಾಂತರ ರೂ. ಮೌಲ್ಯದ ಪಟಾಕಿಗಳು ಸುಟ್ಟು ಭಸ್ಮವಾಗಿದೆ ಎನ್ನಲಾಗಿದೆ.
ಪಟಾಕಿ ಗೋಡೌನ್ಗೆ ಬೆಂಕಿ ತಗುಲುತ್ತಿದ್ದಂತೆಯೇ ಸಮೀಪದ ಹಾವೇರಿ-ಹಾನಗಲ್ ರಾಷ್ಟ್ರೀಯ ಹೆದ್ದಾರಿಯನ್ನು ಬಹುಹೊತ್ತು ಬಂದ್ ಮಾಡಲಾಗಿತ್ತು. ಗೋಡೌನ್ ಹತ್ತಿರ ಕೆಲಸಮಾಡುತ್ತಿದ್ದ ವಾಸಿಮ್ ಹರಹರ ಎಂಬ ವ್ಯಕ್ತಿ ಕಟ್ಟಡದಿಂದ ಜಿಗಿದಿರುವುದರಿಂದ ಕಾಲು ಮತ್ತು ಬೆನ್ನಿನ ಭಾಗಕ್ಕೆ ಪೆಟ್ಟು ಬಿದ್ದಿರುವುದರಿಂದ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಬ್ಯಾಡಗಿಯ ಶಾಸಕರಾದ ಬಸವರಾಜ್ ಶಿವಣ್ಣನವರ ಸ್ಥಳಕ್ಕೆ ಭೇಟಿ ನೀಡಿ ಅಗ್ನಿಶಾಮಕ ದಳದ ಕಾರ್ಯಚಣೆ ವೀಕ್ಷಣೆ ಮಾಡಿ ಮಾಲೀಕರ ಜೊತೆಗೆ ಮಾತನಾಡಿದರು.
ಘಟನಾ ಸ್ಥಳಕ್ಕೆ ಧಾವಿಸಿದ ಸಂಚಾರಿ ಠಾಣೆ ಹಾಗೂ ಗ್ರಾಮೀಣ ಠಾಣೆ ಪೊಲೀಸರು ಪರಿಶೀಲನೆ ನಡೆಸಿದರು, ರಸ್ತೆಯಲ್ಲಿ ಓಡಾಡುವ ಜನರನ್ನು ನಿಯಂತ್ರಿಸಲು ಹರಸಾಹಸ ಮಾಡಿದರು.