ಪ್ರೊ.ಕೋರಗಲ್ಲ ವಿರೂಪಾಕ್ಷಪ್ಪನವರ ನಾಟಕ ‘ನುಡಿಯ ಎಡವಿತ್ತು ಕಲ್ಯಾಣ’ ಪುಸ್ತಕ ಲೋಕಾರ್ಪಣೆ
ಹಾವೇರಿ: ಹಿರಿಯ ಲೇಖಕ ಪ್ರೊ ಕೋರಗಲ್ಲ ವಿರೂಪಾಕ್ಷಪ್ಪನವರ ‘ನುಡಿಯ ಎಡವಿತ್ತು ಕಲ್ಯಾಣ’ ನಾಟಕ ಕೃತಿ ಯನ್ನು ಭಾನುವಾರ ಇಲ್ನಿನ ಗೆಳೆಯರ ಬಳಗದ ಶ್ರೀಮತಿ ಮಣಿಬಾಯಿ ಲೋಡಾಯಾ ಸಭಾಂಗಣದಲ್ಲಿ ನಾಡಿನ ಹಿರಿಯ ವಿದ್ವಾಂಸ, ಸಂಸ್ಕೃತ ವಿ.ವಿ.ಯ ವಿಶ್ರಾಂತ ಕುಲಪತಿ ಡಾ. ಮಲ್ಲೇಪುರಂ ಜಿ. ವೆಂಕಟೇಶ ಲೋಕಾರ್ಪಣೆ ಗೊಳಿಸಿದರು.
ಸಾನಿಧ್ಯವನ್ನು ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಜಿ, ಸಮ್ಮುಖವನ್ನು ಹೊಸಮಠದ ಬಸವಶಾಂತಲಿಂಗ ಮಹಾಸ್ವಾಮಿಜಿ ವಹಿಸಿದ್ದರು. ಪುಸ್ತಕ ಪರಿಚಯವನ್ನು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾ ಪ್ರೊ. ಮಾರುತಿ ಶಿಡ್ಲಾಪೂರ ಮಾಡುತ್ತ
ನಾಟಕದ ತಿರಳನ್ನು ತಿಳಿಸುತ್ತಾ ಜಗತ್ತಿಗೆ ಮಾರ್ಗ ದರ್ಶನ ಮಾಡುವ ಸಾಹಿತ್ಯ ಅದು ವಚನ ಸಾಹಿತ್ಯ ಎಂದರು.
ಅಧ್ಯಕ್ಷತೆಯನ್ನು ಗೆಳೆಯರ ಬಳಗದ ಅಧ್ಯಕ್ಷರಾದ ವಿ.ಎಮ್.ಪತ್ರಿವಹಿಸಿದ್ದರು. ವೇದಿಕೆಯಲ್ಲಿ. ಪ್ರಕಾಶಕ ಡಾ. ಬಸವರಾಜ ಹಳ್ಳೂರ , ಗಿರಿಯ ಸಾಹಿತಿ ಸತೀಶ ಕುಲಕರ್ಣಿ ಇದ್ದರು.
ಕಾರ್ಯಕ್ರಮದಲ್ಲಿ ಎಸ್.ವಾಯ್.ಗುಬ್ಬಣ್ಣನವರ, ಹನುಮಂತಗೌಡ ಗೊಲ್ಲರ, ನಂದಿನಿ ಕೋರಗಲ್ಲಮತ್ತಿತರರು ಭಾಗವಹಿದ್ದರು. ಕಾರ್ಯಕ್ರಮ ವನ್ನುಗೆಳೆಯರ ಬಳಗ ಮತ್ತು ಸಾಹಿತಿ ಕಲಾವಿದರ ಬಳಗ ಆಯೋಜಿಸಿವೆ.ವೀರುಪಾಕ್ಷ್ಪ ಪಡಿಗೋದಿ ಸ್ವಾಗತಿಸಿದರು, ನಾಗರಾಜ ನಡುವಿನಮಠ ನಿರೂಪಿಸಿದರು.