ಬಹುಮುಖ ಪ್ರತಿಭೆಯ ಸಂವೇದನಾಶೀಲ ವ್ಯೆದ್ಯ ಡಾ. ಸಂಜಯ್ ಡಾಂಗೆ
ಸಣ್ಣ ಝರಿಯಾಗಿ ಎಲ್ಲೊ ಹುಟ್ಟುವ ನದಿ ಹರಿಯುತ್ತಾ, ಹರಿಯುತ್ತಾ, ತನ್ನ ಹರಿವು ಹೆಚ್ಚಿಸಿ ಕೊಳ್ಳುತ್ತಾ, ಲಕ್ಷಾಂತರ ಜಲಚರಗಳಿಗೆ, ಪ್ರಾಣಿ-ಪಕ್ಷಿಗಳಿಗೆ, ವೃಕ್ಷಗಳಿಗೆ, ರೈತರ ಕೃಷಿ ಭೂಮಿಗೆ ಆಸರೆಯಾಗುತ್ತಾ ಸಮುದ್ರ ಸೇರಿ ಕೃತಾರ್ಥಭಾವ ಹೊಂದುತ್ತದೆ. ಹಾಗೇ ಎಲ್ಲೋ ಹುಟ್ಟಿದ ವ್ಯಕ್ತಿ ಬೆಳೆಯುತ್ತಾ ಬೆಳೆಯುತ್ತಾ ನದಿಯ ಹಾಗೆ ಹರಿದು, ಇತರರಿಗೆ ಆಸರೆಯಾಗಿ ತನ್ನ ಬದುಕು ಕಟ್ಟಿಕೊಳ್ಳುವುದರ ಜೊತೆಗೆ ಇತರೆಯವರ ಬದುಕಿಗೂ ನೆರಳಾಗುವವರು ಅಪರೂಪ. ಇಂತವರ ಸಂಖ್ಯೆ ಸಮಾಜದಲ್ಲಿ ತುಂಬಾ ವಿರಳ. ಇಂತವರ ಸಾಲಿನಲ್ಲಿದ್ದಾರೆ ನಗರದ ಖ್ಯಾತ ವೈದ್ಯ, ಸಾಮಾಜಿಕ ಚಿಂತಕ, ಬಹುಮುಖ ಪ್ರತಿಭೆಯ, ಸಂವೇದನಾಶೀಲ ರಾಜಕಾರಣಿ ಡಾ.ಸಂಜಯ ಗಣಪತರಾವ್ ಡಾಂಗೆ.
ಸರಕಾರಿ ಶಾಲೆಯಿಂದ ವೈದ್ಯಕೀಯ ಕಾಲೇಜಿನವರೆಗೆ: ಡಾ.ಸಂಜಯ ಡಾಂಗೆ ಮೂಲತಃ ಗಡಿಜಿಲ್ಲೆಯಲ್ಲಿ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತ್ರಿಪುರಾಂತ ಗ್ರಾಮದದವರು. ಡಾ.ಸಂಜಯ ಡಾಂಗೆ ಅವರ ತಂದೆ ತಾಯಿ ಅನಕ್ಷರಸ್ತರು, ಇವರು ಶಾಲೆಯ ಮೆಟ್ಟಿಲನ್ನು ತುಳಿದವರಲ್ಲ. ಆದರೆ ತಮ್ಮ ಮಕ್ಕಳು ವಿದ್ಯಾವಂತರಾಗಬೇಕು ಎನ್ನುವ ಹೆಬ್ಬಯಕೆ ಅವರದು. ಇವರಿಗೆ ಐದು ಜನ ಮಕ್ಕಳು ಇವರಲ್ಲಿ ನಾಲ್ವರು ಗಂಡು ಮಕ್ಕಳಾದರೆ ಓರ್ವ ಪುತ್ರಿ. ಇವರಲ್ಲಿ ಇಬ್ಬರು ಪುತ್ರರನ್ನು ವೈದ್ಯರನ್ನಾಗಿ, ಓರ್ವರನ್ನು ಇಂಜನೀಯರ, ಓರ್ವ ಫಾರ್ಮಾಸಿಸ್ಟರನ್ನಾಗಿ ಮಾಡಿದ್ದರೆ, ಪುತ್ರಿಯನ್ನು ಎಂ.ಎ.ಬಿಎಡ್ ವರೆಗೂ ಶಿಕ್ಷಣವನ್ನು ಕೊಡಿಸಿದ್ದಾರೆ.
ಬಡ ರೈತ ಕುಟುಂಬದವರಾದ ಗಣಪತರಾವ್ ಡಾಂಗೆ, ತಾಯಿ ಲಕ್ಷ್ಮಿಬಾಯಿ ಇವರ ಉದರದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಪುಣ್ಯ ದಿನವಾದ ೧೫-೦೮-೧೯೬೮ರಲ್ಲಿ ಸಂಜಯ್ ಡಾಂಗೆ ಜನಿಸಿದರು. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕನ್ನಡ ಮಾಧ್ಯಮದಲ್ಲಿ ತಮ್ಮ ಹುಟ್ಟೂರು ತ್ರಿಪುರಾಂತ ಗ್ರಾಮದಲ್ಲಿ, ಮಾಧ್ಯಮಿಕ ವಿದ್ಯಾಭ್ಯಾಸವನ್ನು ಬಸವಕಲ್ಯಾಣದ ಸರಕಾರಿ ಪ್ರೌಢಶಾಲೆಯಲ್ಲಿ ಪೂರೈಸಿ, ಕಾಲೇಜು ಶಿಕ್ಷಣವನ್ನು ಬಸವ ಕಲ್ಯಾಣದ ಎಸ್.ಎಸ್. ಕೂಬಾ ಸೈನ್ಸ್ ಬಸವೇಶ್ವರ ಕಾಲೇಜಿನಲ್ಲಿ ಅಭ್ಯಸಿಸಿ, ದಾವಣಗೆರಿಯ ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣ ಅಧ್ಯಯನ ಮಾಡಿ, ನಂತರ ಹುಬ್ಬಳ್ಳಿಯಲ್ಲಿ ಸ್ನಾತಕೋತ್ತರ ಶಿಕ್ಷಣ ಪೂರೈಸಿ, ಚರ್ಮರೋಗ ಹಾಗೂ ಲೈಂಗಿಕ ರೋಗಗಳ ಬಗ್ಗೆ ಅಧ್ಯಯನ ಮಾಡಿ ಹೆಚ್ಚುವರಿ ಪದವಿ ಪಡೆದು ವೈದ್ಯರಾಗಿ ಸರಕಾರಿ ಸೇವೆಗೆ ಸೇರಿದರು. ಸರಕಾರಿ ಶಾಲೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಸರಕಾರಿ ಶಾಲೆಯಲ್ಲಿಯೇ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಪೂರೈಸಿ, ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದು ವೈದ್ಯಕೀಯ ಶಿಕ್ಷಣ ಪಡೆಯುವುದು ಸಣ್ಣ ಸಾಧನೆಯೇನಲ್ಲ.
ಹಾವೇರಿತಾಲೂಕಿಗೆ ಪ್ರವೇಶ: ಡಾ. ಸಂಜಯ್ ಡಾಂಗೆ ಅವರು ಹಾವೇರಿ ತಾಲೂಕಿನ ದೇವಿಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಹಾವೇರಿ ತಾಲೂಕಿನಲ್ಲಿ ಸೇವೆ ಆರಂಭಿಸಿದರು. ಗ್ರಾಮೀಣ ಭಾಗದಲ್ಲಿಯ ಜನಜೀವನ ಅರಿತು ಜನರೊಂದಿಗೆ ಬೆರೆತು ಜನಾನುರಾಗಿ ವೈದ್ಯರಾಗಿ ಜನಪ್ರಿಯರಾದರು. ಪ್ರಸೂತಿ ಹಾಗೂ ಹೆರಿಗೆ ತಜ್ಞ ವೈದ್ಯರಾದ ಡಾ.ಲಲಿತಾ ಡಾಂಗೆಯವರೊಂದಿಗೆ ಮೇ.೩೦ ೧೯೯೭ರಂದು ವಿವಾಹವಾದರು.
ಮೂವರು ಪುತ್ರರೊಂದಿಗೆ ತುಂಬು ಜೀವನ ನಡೆಸುತ್ತಿರುವ ಡಾ.ಡಾಂಗೆ ಅವರು ಸತಿಪತಿಗಳೊಂದಾದ ಭಕ್ತಿ ಹಿತವೊಪ್ಪುದು ಶಿವಂಗೆ ಎನ್ನುವ ಗಾದೆ ಮಾತಿನಂತೆ ದಂಪತಿಗಳಿಬ್ಬರೂ ವೈದ್ಯರಾಗಿದ್ದಾರೆ. ಡಾ.ಸಂಜಯ್ ಡಾಂಗೆ ಅವರು ಡಾ.ಡಾಂಗೆ ನರ್ಸಿಂಗ್ ಹೋಮ್ನ್ನು ಆರರಂಭಿಸಿ ಕಳೆದ ಎರಡು ಶಕಗಳಿಗಿಂತ ಹೆಚ್ಚಿನ ಕಾಲ ಯಶಸ್ವಿಯಾಗಿ ಮುನ್ನಡೆಸುತ್ತಾ, ತಮ್ಮ ಸೇವೆಯನ್ನು ವೈದ್ಯಕೀಯ ಕ್ಷೇತ್ರದಲ್ಲಿ ವಿಸ್ತರಿಸುತ್ತಾ, ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜನ್ನು ೨೦೨೦ರಲ್ಲಿ ಆರಂಭಿಸುವ ಮೂಲಕ ವೈದ್ಯೋ ನಾರಾಯಣೋ ಹರಿ ಎನ್ನುವಂತೆ ಬಡ ರೋಗಿಗಳ ಪಾಲಿಗೆ, ಅನೇಕ ವಿದ್ಯಾವಂತ ಯುವಕ, ಯುವತಿಯರಪಾಳಿಗೆ ವೈದ್ಯೋ ನಾರಾಯಣೋಹರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೇ ಹೋರಾಟ: ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣ ಹೊಂದಿದ್ದ ಡಾ.ಡಾಂಗೆಯವರು ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ವಿದ್ಯಾರ್ಥಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ವೈದ್ಯ ವಿದ್ಯಾರ್ಥಿಗಳಿಗೆ ಸಿಗಬೇಕಾದ ಸ್ಟೈಫಂಡರಿ, ಸ್ಕಾಲರ್ಶಿಪ್ ಮತ್ತಿತರರ ಸೌಲಭ್ಯಗಳನ್ನು ಹೋರಾಟದ ಮೂಲಕ ದೊರಕಿಸಿ ಕೊಟ್ಟಿದ್ದರು. ಸದಾ ಕ್ರಿಯಾಶೀಲರಾದ ಇವರು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ತಮ್ಮಿಂದ ನಾಲ್ಕು ಜನರಿಗೆ ಒಳ್ಳೆಯದಾಗಬೇಕು ಎನ್ನುವ ಭಾವನೆಯೇ ಇವರು ಸಾರ್ವಜನಿಕರ ರಂಗಕ್ಕೆ ಪ್ರವೇಶಿಸಲು ಕಾರಣವಾಯಿತು.
ಡಾ.ಸಂಜಯ ಡಾಂಗೆಯವರು ಜನಪ್ರೀಯ ವೈದ್ಯರಾಗಿ ತಾವಾಯಿತು, ತಮ್ಮ ವೃತ್ತಿಯಾಯಿತೂ ಎಂದು ಇದ್ದಿದ್ದರೆ ಬಹುಶಃ ಅವರು ಹೆಚ್ಚಿನ ಪ್ರಮಾಣದಲ್ಲಿ ಹಣ ಸಂಪಾದಿಸಬಹುದಿತ್ತೇ ಹೊರತು, ಇಷ್ಟೊಂದು ಹೆಸರು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೆಸರಿದ್ದರೆ ಹಣ ಇರುವುದಿಲ್ಲ. ಹಣ ಇದ್ದರೆ ಹೆಸರಿರುವುದಿಲ್ಲ. ಆದರೆ ಡಾಂಗೆಯವರು ಹೆಸರನ್ನು,ಹಣವನ್ನು ಸುಲಭವಾಗಿ ಸಂಪಾದಿಸಿಲ್ಲ. ಇದರ ಹಿಂದೆ ಸುದೀರ್ಘ ಎರಡುವರೆ ದಶಕಗಳ ವೃತ್ತಿ ಅನುಭವ, ನಿರಂತರ ದುಡಿಮೆ ಅವರ ಬೆನ್ನಿಗಿದ್ದು, ಹೋರಾಟ, ಸಂಘಟನೆ, ಶಿಕ್ಷಣ, ಪ್ರಗತಿಪರ ಚಿಂತನೆಗಳು ಕೇವಲ ತಾವು ಪಡೆದ ಪದವಿಗೆ ಮಾತ್ರ ಸೀಮಿತವಾಗದೆ ಕಾಯಕವೇ ಕೈಲಾಸ ಎನ್ನುವ ತತ್ವ ಅವರ ಬೆಳವಣಿಗೆಗೆ ಪರೋಕ್ಷ ಕಾರಣವಾಗಿದೆ.
ಸಾರ್ವಜನಿಕ ಸೇವೆ: ಹಾವೇರಿ ಹುಕ್ಕೇರಿಮಠದ ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಪರಮ ಪೂಜ್ಯ ಲಿಂ.ಶಿವಲಿಂಗ ಮಾಹಾಸ್ವಾಮಿಜಿ ಅವರ ಪರಮ ಭಕ್ತರಾಗಿರುವ ಡಾ.ಸಂಜಯ ಡಾಂಗೆಯವರು ಪೂಜ್ಯರ ಆಶೀರ್ವಾದದಂತೆ ಹಾವೇರಿಯಲ್ಲಿಯೇ ನೆಲೆ ಕಂಡುಕೊಂಡು ಸಾಧನೆ ಮಾಡಿದ್ದು, ಕ್ಷೇತ್ರದ ಜನತೆಯ ನೋವು ನಲಿವಿಗೆ ಸ್ಪಂದಿಸುತ್ತ ಬಂದಿದ್ದಾರೆ. ಈಗಾಗಲೇ ಡಾಂಗೆ ಎಜ್ಯುಕೇಶನ್ ಸೊಸೈಟಿ (ರಿ) ಹಾವೇರಿ. ಡಾ. ಡಾಂಗೆ ನರ್ಸಿಂಗ್ ಹೋಂ, ಹಾವೇರಿ. ಡಾ. ಸಂಜಯ ಡಾಂಗೆ ಕಾಲೇಜ್ ಆಫ್ ನರ್ಸಿಂಗ್ ಸೈನ್ಸಸ್, ಸಂಜಯ ಡಾಂಗೆ ಇನ್ಸಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್ ಶಿಕ್ಷಣ ಸಂಸ್ಥೆಯಗಳನ್ನು ಆರಂಭಿಸಿ ಅವುಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ನೂರಾರು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶವವನ್ನು ಕಲ್ಪಿಸುವ ಮೂಲಕ ಅವರ ಬಾಳಿಗೆ ಬೆಳಕಾಗಿದ್ದಾರೆ.
ಭವಿಷ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಆಸ್ಪತ್ರೆ ಆರಂಭಿಸಿ ನೂರಾರು ಜನರಿಗೆ ಒಂದೇ ಸೂರಿನಡಿ ಚಿಕಿತ್ಸೆ ಸಿಗಬೇಕೆನ್ನುವ ಉದ್ದೇಶ ಇವರದ್ದಾಗಿದೆ. ಹೃದಯರೋಗ, ದಂತಚಿಕಿತ್ಸೆ, ಸೇರಿದಂತೆ ಅನೇಕ ರೋಗಗಳಿಗೆ ಚಿಕಿತ್ಸೆ ಪಡೆಯಲು ಜನತೆ ದೂರದ ದಾವಣಗೆರೆ, ಹುಬ್ಬಳ್ಳಿ, ಮಣಿಪಾಲ, ಬೆಂಗಳೂರುಗಳಲ್ಲಿ ಸಿಗುವು ಉನ್ನತ ಹಾಗೂ ಸುಸಜ್ಜಿತ ಚಿಕಿತ್ಸೆ ಹಾವೇರಿಯಲ್ಲಿಯೇ ಜಿಲ್ಲೆಯ ಜನರಿಗೆ ಲಭ್ಯವಾಗಬೇಕೆನ್ನುವುದು ಇವರ ಮಹದಾಸೆಯಾಗಿದೆ. ಡಾಂಗೆ ಅವರು ಬಹುಮುಖ ಪ್ರತಿಭೆ ಹೊಂದಿದ ಸಂವೇದನಾಶೀಲ ರಾಜಕಾರಣಿ, ಸುಸಂಸ್ಕೃತ ಸಾಹಿತ್ಯ ಪ್ರೇಮಿ, ಸ್ನೇಹಜೀವಿ, ಬುದ್ದಿಜೀವಿ ಎಂದು ಗುರುತಿಸಲ್ಪಟ್ಟಿದ್ದಾರೆ. ಅವರ ಸಾಹಿತ್ಯ, ಕಲೆ, ಸಂಗೀತ, ಸಾಂಸ್ಕೃತಿಕ ಮನಸ್ಸು. ದಿನನಿತ್ಯದ ವೃತ್ತಿ ಬದುಕಿನ ಜೊತೆಗೆ ಸಾರ್ವಜನಿಕರೊಂದಿಗಿನ ಒಡನಾಟ, ಸಮಸ್ಯೆಗಳಿಗೆ ಸ್ಪಂದನೆಯಿಂದಾಗಿ ಡಾಂಗೆಯವರು ಪ್ರಬುದ್ದ ವ್ಯಕ್ತಿಯಾಗಿದ್ದಾರೆ. ಕ್ರೀಯಾಶೀಲ ವ್ಯಕ್ತಿ ಹೇಗಿರಬೇಕು ಎನ್ನುವುದಕ್ಕೆ ಮಾದರಿಯಾಗಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ.
ವೈದ್ಯರಾಗಿ ಎರಡುವರೆ ದಶಕಗಳಿಂದ ಹಾವೇರಿ ಜಿಲ್ಲೆಯಲ್ಲಿ ಈವರೆಗೆ ಸಾವಿರಾರು ಉಚಿತ ಆರೋಗ್ಯ ಶಿಬಿರಗಳನ್ನು ಸಂಘಟಿಸಿ, ಬಡ ರೋಗಿಗಳಿಗೆ ಆರೋಗ್ಯ ತಪಾಸಣೆ ನಡೆಸಿ ಉಚಿತ ಔಷಧಿ- ಮಾತ್ರೆಗಳನ್ನು ವಿತರಿಸಿ ಒಬ್ಬ ಮಾನವೀಯ ಮನಸ್ಸಿನ ವ್ಯಕ್ತಿ, ವೈದ್ಯರಾದರೆ ಹೇಗಿರಬೇಕು ಎಂಬುದಕ್ಕೆ ರಾಜಕೀಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ಗುರುತಿಸಿಕೊಂಡು ಇವರು ರಾಜಕಾರಣಿ ಹೇಗಿರಬೇಕು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಇವರು ಸಂಘಟಿಸಿದ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಹಿರಿಯ ಶಿಕ್ಷಣ ಪ್ರೇಮಿ, ಶ್ಯಾಮನೂರು ಶಿವಶಂಕ್ರಪ್ಪ ಅವರು ಆಗಮಿಸಿ ಪಾಲ್ಗೊಂಡು ಇವರಿಗೆ ಶುಭ ಕೋರಿದ್ದರು. ನಾಡಿನ ಹರಗುರು ಚರಮೂ ರ್ತಿಗಳು, ಡಾಂಗೆಯವರ ಸಮಾಜ ಪ್ರೇಮವನ್ನು ನಾಡು-ನುಡಿ, ಸಂಘಟನೆಯನ್ನು ಮೆಚ್ಚಿ ಇವರನ್ನು ಆಶೀರ್ವದಿಸಿದ್ದಾರೆ.
ಇವರ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ನವದೆಹಲಿಯ ಸಂಸ್ಥೆಯೊಂದು ಇವರಿಗೆ ಚಿನ್ನದಪದಕವನ್ನು ನೀಡಿ ಗೌರವಿಸಿದೆ. ನೆರೆ ಹಾವಳಿ ಸಂಭವಿಸಿದಾಗ ಜನರ ನೆರವಿಗೆ ಡಾಂಗೆ ಧಾವಿಸಿ ನೆರವಿನ ಹಸ್ತ ನೀಡಿದ್ದರು. ಈ ಹಿಂದೆ ಕರ್ಜಗಿಯಲ್ಲಿ ಬೆಂಕಿ ಬಿದ್ದು, ಬಣವಿಗಳು ಸುಟ್ಟ ಸಂದರ್ಭದಲ್ಲಿ ರೈತರು ತಮ್ಮ ಎತ್ತುಗಳಿಗೆ ಮೇವಿಲ್ಲದೇ ಪರದಾಟುತ್ತಿದ್ದಾಗ ಡಾಂಗೆಯವರು ಎತ್ತುಗಳಿಗೆ ಮೇವು ಕೊಡಿಸುವ ಮೂಲಕ ರೈತರ ಸಂಕಷ್ಟಕ್ಕೆ ನೆರವಾಗಿದ್ದರು.
ಆಡಂಬರದ ಜೀವನದಿಂದ ದೂರವಿರುವ ಇವರು ತುಂಬಾ ಸರಳ ಹಾಗೂ ಸ್ನೇಹಜೀವಿಗಳಾಗಿರುವ ಡಾ.ಡಾಂಗೆ ಅವರು ತಮ್ಮ ಹುಟ್ಟುಹಬ್ಬವನ್ನು ಅಂಧ-ಅನಾಥ, ಬಡ ಮಕ್ಕಳೊಂದಿಗೆ ಆಚರಿಸುತ್ತಾ ಬಂದಿರುವ ಇವರು ತಮ್ಮ ಸರಳ ಜೀವನಕ್ಕೆ ಮಾದರಿಯಾಗಿದ್ದಾರೆ. ಇವರ ಸೇವೆಗೆ ಸಂದ ಪ್ರಶಸ್ತಿ ಸನ್ಮಾನಗಳು, ಗೌರವ ಗಳಿಗೆ ಲೆಕ್ಕವೇ ಇಲ್ಲ. ಕರ್ನಾಟಕ ಸರಕಾರವು ಇವರ ವೈದ್ಯಕೀಯ ರಂಗದ ಸಾಧನೆ ಗುರುತಿಸಿ ಹುಬ್ಬಳ್ಳಿಯ ಪ್ರತಿಷ್ಟಿತ ಕಿಮ್ಸ್ಗೆ ನಿರ್ದೇಶಕರನ್ನಾಗಿ ನೇಮಿಸಿತ್ತು.
ಜೂನ್ ೨೦೦೮ರಂದು ಸಂಭವಿಸಿದ ಗೋಲಿಬಾರ್ನಲ್ಲಿ ಗಾಯಗೊಂಡು ನರಳುತ್ತಿದ್ದ ರೈತರಿಗೆ ಇವರು ಸ್ಪಂಧಿಸಿದ್ದಲ್ಲದೇ ನೆರವಿನ ಹಸ್ತವನ್ನು ಸಹ ನೀಡಿದ್ದರು. ಪ್ರತಿವರ್ಷ ಬಡ ವಿದ್ಯಾರ್ಥಿಗಳಿಗೆ ಬಟ್ಟೆ-ಬರೆ, ಫೀಸು, ನೋಟು ಬುಕ್ಗಳನ್ನು ದೇಣಿಗೆಯ ರೂಪದಲ್ಲಿ ನೀಡುತ್ತಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಸ್ಪಂಧಿಸುತ್ತಾ ಬಂದಿರುವ ಇವರ ಇನ್ನೊಂದು ವಿಶೇಷ ವೆಂದರೆ ಅವರ ವಿನಯವಂತಿಕೆ. ಅವರ ಬಳಿ ಸಮಸ್ಯೆ ಹೇಳಿಕೊಂಡು ಬಂದವರು ದೊಡ್ಡವರಿರಲಿ, ಸಣ್ಣವರಿರಲಿ ವಿನಯವಂತಿಕೆಯಿಂದ, ಸಮಸ್ಯೆಗಳನ್ನು ಆಲಿಸಿ ತಮ್ಮ ಕೈಲಾದರೆ ಬಗೆಹರಿಸುತ್ತಾರೆ.
ಬುದ್ಧ-ಬಸವ ಹಾಗೂ ಡಾ.ಅಂಬೇಡ್ಕರ, ಗಾಂಧೀಜಿ ಅವರ ಉತ್ಕೃಷ್ಟ ವಿಚಾರಗಳನ್ನು ಅರಗಿಸಿ ಕೊಂಡು ಡಾಂಗೆ ಅವರು ಒಂದು ಕಡೆ ಸಾಂಸ್ಕೃತಿಕ ವಲಯದ ವಕ್ತಾರರಾಗಿ ರೂಪಗೊಳ್ಳುತ್ತಾ, ಇನ್ನೊಂದು ಕಡೆ ರಾಜಕೀಯ ಶ್ರೇಷ್ಠ ಮೌಲ್ಯಗಳ ಸೆಳೆತಕ್ಕ ಒಳಗಾಗಿ ರಾಜಕಾರಣಿಯಾಗಿ ರೂಪ ಗೊಂಡ ಅವರು, ಪ್ರಸ್ತುತ ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿದ್ದು, ರಾಜಕಾರಣದಲ್ಲಿ ಇಂತಹವರು ಇರಬೇಕು ಎಂದು ಜನತೆ ಇವರ ಸೇವೆಯನ್ನು ಬಯಸುತ್ತಿದೆ.
ಡಾಸಂಜಯ ಡಾಂಗೆ ಅವರು ಆಗಿನ್ನು ವಿದ್ಯಾರ್ಥಿ ದೆಸೆಯಲ್ಲಿದ್ದರು. ಹುಬ್ಬಳ್ಳಿಯ ಕಿಮ್ಸ್ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ, ಡಾ.ನಾಗಲೋತಿಮಠ ಅವರಂತಹ ವ್ಯಕ್ತಿಗಳ ಸಂಪರ್ಕ ವೈದ್ಯರು ಹಣ ಮಾಡಲು ಮುಂದಾಗಬಾರದು ದೀನ, ದಲಿತರ, ಬಡವರ ಆತಾಕಿರಣವಾಗಬೇಕು ಎಂದು ಹೇಳುತ್ತಿದ್ದ ಆಗಿನ ವೈದ್ಯಕೀಯ ಶಿಕ್ಷಕರ ನುಡಿಗಳು ಡಾ.ಡಾಂಗೆ ಅವರ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿದವು. ಆಗಲೇ ತಮ್ಮ ವೈದ್ಯಕೀಯ ವೃತ್ತಿಯಲ್ಲಿ ಬಡವರ ಪರ ಕೆಲಸಮಾಡಲು ದೃಢವಾದ ಸಂಕಲ್ಪ ಮಾಡಿದರು. ಯಥಾ ಗುರು ತಥಾ ಶಿಷ್ಯ ಎನ್ನುವ ರೀತಿಯಲ್ಲಿ ಡಾ.ನಾಗಲೋತಿಮಠ ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ಡಾಂಗೆ ಅವರು ಇಂದು ತಮ್ಮ ಕೈಲಾದ ಮಟ್ಟಿಗೆ ದೀನ, ದಲಿತರ, ಬಡವರ ಸೇವೆಯನ್ನು ಮಾಡುವ ತವಕವನ್ನು ಹೊಂದಿ ಮುಂದಡಿ ಇಡುತ್ತಿದ್ದಾರೆ.
ಸಣ್ಣ ಝರಿಯಾಗಿ ಎಲ್ಲೊ ಹುಟ್ಟುವ ನದಿ ಹರಿಯುತ್ತಾ, ಹರಿಯುತ್ತಾ, ತನ್ನ ಹರಿವು ಹೆಚ್ಚಿಸಿ ಕೊಳ್ಳುತ್ತಾ, ಲಕ್ಷಾಂತರ ಜಲಚರಗಳಿಗೆ, ಪ್ರಾಣಿ-ಪಕ್ಷಿಗಳಿಗೆ, ವೃಕ್ಷಗಳಿಗೆ, ರೈತರ ಕೃಷಿ ಭೂಮಿಗೆ ಆಸರೆಯಾಗುತ್ತಾ ಸಮುದ್ರ ಸೇರಿ ಕೃತಾರ್ಥಭಾವ ಹೊಂದುತ್ತದೆ. ಹಾಗೇ ಎಲ್ಲೋ ಹುಟ್ಟಿದ ವ್ಯಕ್ತಿ ಬೆಳೆಯುತ್ತಾ ಬೆಳೆಯುತ್ತಾ ನದಿಯ ಹಾಗೆ ಹರಿದು, ಇತರರಿಗೆ ಆಸರೆಯಾಗಿ ತನ್ನ ಬದುಕು ಕಟ್ಟಿಕೊಳ್ಳುವುದರ ಜೊತೆಗೆ ಇತರೆಯವರ ಬದುಕಿಗೂ ನೆರಳಾಗುವವರು ಅಪರೂಪ. ಇಂತವರ ಸಂಖ್ಯೆ ಸಮಾಜದಲ್ಲಿ ತುಂಬಾ ವಿರಳ. ಇಂತವರ ಸಾಲಿನಲ್ಲಿದ್ದಾರೆ ನಗರದ ಖ್ಯಾತ ವೈದ್ಯ, ಸಾಮಾಜಿಕ ಚಿಂತಕ, ಬಹುಮುಖ ಪ್ರತಿಭೆಯ, ಸಂವೇದನಾಶೀಲ ರಾಜಕಾರಣಿ ಡಾ.ಸಂಜಯ ಗಣಪತರಾವ್ ಡಾಂಗೆ.
ಸರಕಾರಿ ಶಾಲೆಯಿಂದ ವೈದ್ಯಕೀಯ ಕಾಲೇಜಿನವರೆಗೆ: ಡಾ.ಸಂಜಯ ಡಾಂಗೆ ಮೂಲತಃ ಗಡಿಜಿಲ್ಲೆಯಲ್ಲಿ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತ್ರಿಪುರಾಂತ ಗ್ರಾಮದದವರು. ಡಾ.ಸಂಜಯ ಡಾಂಗೆ ಅವರ ತಂದೆ ತಾಯಿ ಅನಕ್ಷರಸ್ತರು, ಇವರು ಶಾಲೆಯ ಮೆಟ್ಟಿಲನ್ನು ತುಳಿದವರಲ್ಲ. ಆದರೆ ತಮ್ಮ ಮಕ್ಕಳು ವಿದ್ಯಾವಂತರಾಗಬೇಕು ಎನ್ನುವ ಹೆಬ್ಬಯಕೆ ಅವರದು. ಇವರಿಗೆ ಐದು ಜನ ಮಕ್ಕಳು ಇವರಲ್ಲಿ ನಾಲ್ವರು ಗಂಡು ಮಕ್ಕಳಾದರೆ ಓರ್ವ ಪುತ್ರಿ. ಇವರಲ್ಲಿ ಇಬ್ಬರು ಪುತ್ರರನ್ನು ವೈದ್ಯರನ್ನಾಗಿ, ಓರ್ವರನ್ನು ಇಂಜನೀಯರ, ಓರ್ವ ಫಾರ್ಮಾಸಿಸ್ಟರನ್ನಾಗಿ ಮಾಡಿದ್ದರೆ, ಪುತ್ರಿಯನ್ನು ಎಂ.ಎ.ಬಿಎಡ್ ವರೆಗೂ ಶಿಕ್ಷಣವನ್ನು ಕೊಡಿಸಿದ್ದಾರೆ.
ಬಡ ರೈತ ಕುಟುಂಬದವರಾದ ಗಣಪತರಾವ್ ಡಾಂಗೆ, ತಾಯಿ ಲಕ್ಷ್ಮಿಬಾಯಿ ಇವರ ಉದರದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಪುಣ್ಯ ದಿನವಾದ ೧೫-೦೮-೧೯೬೮ರಲ್ಲಿ ಸಂಜಯ್ ಡಾಂಗೆ ಜನಿಸಿದರು. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕನ್ನಡ ಮಾಧ್ಯಮದಲ್ಲಿ ತಮ್ಮ ಹುಟ್ಟೂರು ತ್ರಿಪುರಾಂತ ಗ್ರಾಮದಲ್ಲಿ, ಮಾಧ್ಯಮಿಕ ವಿದ್ಯಾಭ್ಯಾಸವನ್ನು ಬಸವಕಲ್ಯಾಣದ ಸರಕಾರಿ ಪ್ರೌಢಶಾಲೆಯಲ್ಲಿ ಪೂರೈಸಿ, ಕಾಲೇಜು ಶಿಕ್ಷಣವನ್ನು ಬಸವ ಕಲ್ಯಾಣದ ಎಸ್.ಎಸ್. ಕೂಬಾ ಸೈನ್ಸ್ ಬಸವೇಶ್ವರ ಕಾಲೇಜಿನಲ್ಲಿ ಅಭ್ಯಸಿಸಿ, ದಾವಣಗೆರಿಯ ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣ ಅಧ್ಯಯನ ಮಾಡಿ, ನಂತರ ಹುಬ್ಬಳ್ಳಿಯಲ್ಲಿ ಸ್ನಾತಕೋತ್ತರ ಶಿಕ್ಷಣ ಪೂರೈಸಿ, ಚರ್ಮರೋಗ ಹಾಗೂ ಲೈಂಗಿಕ ರೋಗಗಳ ಬಗ್ಗೆ ಅಧ್ಯಯನ ಮಾಡಿ ಹೆಚ್ಚುವರಿ ಪದವಿ ಪಡೆದು ವೈದ್ಯರಾಗಿ ಸರಕಾರಿ ಸೇವೆಗೆ ಸೇರಿದರು. ಸರಕಾರಿ ಶಾಲೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಸರಕಾರಿ ಶಾಲೆಯಲ್ಲಿಯೇ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಪೂರೈಸಿ, ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದು ವೈದ್ಯಕೀಯ ಶಿಕ್ಷಣ ಪಡೆಯುವುದು ಸಣ್ಣ ಸಾಧನೆಯೇನಲ್ಲ.
ಹಾವೇರಿತಾಲೂಕಿಗೆ ಪ್ರವೇಶ: ಡಾ. ಸಂಜಯ್ ಡಾಂಗೆ ಅವರು ಹಾವೇರಿ ತಾಲೂಕಿನ ದೇವಿಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಹಾವೇರಿ ತಾಲೂಕಿನಲ್ಲಿ ಸೇವೆ ಆರಂಭಿಸಿದರು. ಗ್ರಾಮೀಣ ಭಾಗದಲ್ಲಿಯ ಜನಜೀವನ ಅರಿತು ಜನರೊಂದಿಗೆ ಬೆರೆತು ಜನಾನುರಾಗಿ ವೈದ್ಯರಾಗಿ ಜನಪ್ರಿಯರಾದರು. ಪ್ರಸೂತಿ ಹಾಗೂ ಹೆರಿಗೆ ತಜ್ಞ ವೈದ್ಯರಾದ ಡಾ.ಲಲಿತಾ ಡಾಂಗೆಯವರೊಂದಿಗೆ ಮೇ.೩೦ ೧೯೯೭ರಂದು ವಿವಾಹವಾದರು.
ಮೂವರು ಪುತ್ರರೊಂದಿಗೆ ತುಂಬು ಜೀವನ ನಡೆಸುತ್ತಿರುವ ಡಾ.ಡಾಂಗೆ ಅವರು ಸತಿಪತಿಗಳೊಂದಾದ ಭಕ್ತಿ ಹಿತವೊಪ್ಪುದು ಶಿವಂಗೆ ಎನ್ನುವ ಗಾದೆ ಮಾತಿನಂತೆ ದಂಪತಿಗಳಿಬ್ಬರೂ ವೈದ್ಯರಾಗಿದ್ದಾರೆ. ಡಾ.ಸಂಜಯ್ ಡಾಂಗೆ ಅವರು ಡಾ.ಡಾಂಗೆ ನರ್ಸಿಂಗ್ ಹೋಮ್ನ್ನು ಆರರಂಭಿಸಿ ಕಳೆದ ಎರಡು ಶಕಗಳಿಗಿಂತ ಹೆಚ್ಚಿನ ಕಾಲ ಯಶಸ್ವಿಯಾಗಿ ಮುನ್ನಡೆಸುತ್ತಾ, ತಮ್ಮ ಸೇವೆಯನ್ನು ವೈದ್ಯಕೀಯ ಕ್ಷೇತ್ರದಲ್ಲಿ ವಿಸ್ತರಿಸುತ್ತಾ, ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜನ್ನು ೨೦೨೦ರಲ್ಲಿ ಆರಂಭಿಸುವ ಮೂಲಕ ವೈದ್ಯೋ ನಾರಾಯಣೋ ಹರಿ ಎನ್ನುವಂತೆ ಬಡ ರೋಗಿಗಳ ಪಾಲಿಗೆ, ಅನೇಕ ವಿದ್ಯಾವಂತ ಯುವಕ, ಯುವತಿಯರಪಾಳಿಗೆ ವೈದ್ಯೋ ನಾರಾಯಣೋಹರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೇ ಹೋರಾಟ: ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣ ಹೊಂದಿದ್ದ ಡಾ.ಡಾಂಗೆಯವರು ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ವಿದ್ಯಾರ್ಥಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ವೈದ್ಯ ವಿದ್ಯಾರ್ಥಿಗಳಿಗೆ ಸಿಗಬೇಕಾದ ಸ್ಟೈಫಂಡರಿ, ಸ್ಕಾಲರ್ಶಿಪ್ ಮತ್ತಿತರರ ಸೌಲಭ್ಯಗಳನ್ನು ಹೋರಾಟದ ಮೂಲಕ ದೊರಕಿಸಿ ಕೊಟ್ಟಿದ್ದರು. ಸದಾ ಕ್ರಿಯಾಶೀಲರಾದ ಇವರು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ತಮ್ಮಿಂದ ನಾಲ್ಕು ಜನರಿಗೆ ಒಳ್ಳೆಯದಾಗಬೇಕು ಎನ್ನುವ ಭಾವನೆಯೇ ಇವರು ಸಾರ್ವಜನಿಕರ ರಂಗಕ್ಕೆ ಪ್ರವೇಶಿಸಲು ಕಾರಣವಾಯಿತು.
ಡಾ.ಸಂಜಯ ಡಾಂಗೆಯವರು ಜನಪ್ರೀಯ ವೈದ್ಯರಾಗಿ ತಾವಾಯಿತು, ತಮ್ಮ ವೃತ್ತಿಯಾಯಿತೂ ಎಂದು ಇದ್ದಿದ್ದರೆ ಬಹುಶಃ ಅವರು ಹೆಚ್ಚಿನ ಪ್ರಮಾಣದಲ್ಲಿ ಹಣ ಸಂಪಾದಿಸಬಹುದಿತ್ತೇ ಹೊರತು, ಇಷ್ಟೊಂದು ಹೆಸರು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೆಸರಿದ್ದರೆ ಹಣ ಇರುವುದಿಲ್ಲ. ಹಣ ಇದ್ದರೆ ಹೆಸರಿರುವುದಿಲ್ಲ. ಆದರೆ ಡಾಂಗೆಯವರು ಹೆಸರನ್ನು,ಹಣವನ್ನು ಸುಲಭವಾಗಿ ಸಂಪಾದಿಸಿಲ್ಲ. ಇದರ ಹಿಂದೆ ಸುದೀರ್ಘ ಎರಡುವರೆ ದಶಕಗಳ ವೃತ್ತಿ ಅನುಭವ, ನಿರಂತರ ದುಡಿಮೆ ಅವರ ಬೆನ್ನಿಗಿದ್ದು, ಹೋರಾಟ, ಸಂಘಟನೆ, ಶಿಕ್ಷಣ, ಪ್ರಗತಿಪರ ಚಿಂತನೆಗಳು ಕೇವಲ ತಾವು ಪಡೆದ ಪದವಿಗೆ ಮಾತ್ರ ಸೀಮಿತವಾಗದೆ ಕಾಯಕವೇ ಕೈಲಾಸ ಎನ್ನುವ ತತ್ವ ಅವರ ಬೆಳವಣಿಗೆಗೆ ಪರೋಕ್ಷ ಕಾರಣವಾಗಿದೆ.
ಸಾರ್ವಜನಿಕ ಸೇವೆ: ಹಾವೇರಿ ಹುಕ್ಕೇರಿಮಠದ ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಪರಮ ಪೂಜ್ಯ ಲಿಂ.ಶಿವಲಿಂಗ ಮಾಹಾಸ್ವಾಮಿಜಿ ಅವರ ಪರಮ ಭಕ್ತರಾಗಿರುವ ಡಾ.ಸಂಜಯ ಡಾಂಗೆಯವರು ಪೂಜ್ಯರ ಆಶೀರ್ವಾದದಂತೆ ಹಾವೇರಿಯಲ್ಲಿಯೇ ನೆಲೆ ಕಂಡುಕೊಂಡು ಸಾಧನೆ ಮಾಡಿದ್ದು, ಕ್ಷೇತ್ರದ ಜನತೆಯ ನೋವು ನಲಿವಿಗೆ ಸ್ಪಂದಿಸುತ್ತ ಬಂದಿದ್ದಾರೆ. ಈಗಾಗಲೇ ಡಾಂಗೆ ಎಜ್ಯುಕೇಶನ್ ಸೊಸೈಟಿ (ರಿ) ಹಾವೇರಿ. ಡಾ. ಡಾಂಗೆ ನರ್ಸಿಂಗ್ ಹೋಂ, ಹಾವೇರಿ. ಡಾ. ಸಂಜಯ ಡಾಂಗೆ ಕಾಲೇಜ್ ಆಫ್ ನರ್ಸಿಂಗ್ ಸೈನ್ಸಸ್, ಸಂಜಯ ಡಾಂಗೆ ಇನ್ಸಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್ ಶಿಕ್ಷಣ ಸಂಸ್ಥೆಯಗಳನ್ನು ಆರಂಭಿಸಿ ಅವುಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ನೂರಾರು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶವವನ್ನು ಕಲ್ಪಿಸುವ ಮೂಲಕ ಅವರ ಬಾಳಿಗೆ ಬೆಳಕಾಗಿದ್ದಾರೆ.
ಭವಿಷ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಆಸ್ಪತ್ರೆ ಆರಂಭಿಸಿ ನೂರಾರು ಜನರಿಗೆ ಒಂದೇ ಸೂರಿನಡಿ ಚಿಕಿತ್ಸೆ ಸಿಗಬೇಕೆನ್ನುವ ಉದ್ದೇಶ ಇವರದ್ದಾಗಿದೆ. ಹೃದಯರೋಗ, ದಂತಚಿಕಿತ್ಸೆ, ಸೇರಿದಂತೆ ಅನೇಕ ರೋಗಗಳಿಗೆ ಚಿಕಿತ್ಸೆ ಪಡೆಯಲು ಜನತೆ ದೂರದ ದಾವಣಗೆರೆ, ಹುಬ್ಬಳ್ಳಿ, ಮಣಿಪಾಲ, ಬೆಂಗಳೂರುಗಳಲ್ಲಿ ಸಿಗುವು ಉನ್ನತ ಹಾಗೂ ಸುಸಜ್ಜಿತ ಚಿಕಿತ್ಸೆ ಹಾವೇರಿಯಲ್ಲಿಯೇ ಜಿಲ್ಲೆಯ ಜನರಿಗೆ ಲಭ್ಯವಾಗಬೇಕೆನ್ನುವುದು ಇವರ ಮಹದಾಸೆಯಾಗಿದೆ. ಡಾಂಗೆ ಅವರು ಬಹುಮುಖ ಪ್ರತಿಭೆ ಹೊಂದಿದ ಸಂವೇದನಾಶೀಲ ರಾಜಕಾರಣಿ, ಸುಸಂಸ್ಕೃತ ಸಾಹಿತ್ಯ ಪ್ರೇಮಿ, ಸ್ನೇಹಜೀವಿ, ಬುದ್ದಿಜೀವಿ ಎಂದು ಗುರುತಿಸಲ್ಪಟ್ಟಿದ್ದಾರೆ. ಅವರ ಸಾಹಿತ್ಯ, ಕಲೆ, ಸಂಗೀತ, ಸಾಂಸ್ಕೃತಿಕ ಮನಸ್ಸು. ದಿನನಿತ್ಯದ ವೃತ್ತಿ ಬದುಕಿನ ಜೊತೆಗೆ ಸಾರ್ವಜನಿಕರೊಂದಿಗಿನ ಒಡನಾಟ, ಸಮಸ್ಯೆಗಳಿಗೆ ಸ್ಪಂದನೆಯಿಂದಾಗಿ ಡಾಂಗೆಯವರು ಪ್ರಬುದ್ದ ವ್ಯಕ್ತಿಯಾಗಿದ್ದಾರೆ. ಕ್ರೀಯಾಶೀಲ ವ್ಯಕ್ತಿ ಹೇಗಿರಬೇಕು ಎನ್ನುವುದಕ್ಕೆ ಮಾದರಿಯಾಗಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ.
ವೈದ್ಯರಾಗಿ ಎರಡುವರೆ ದಶಕಗಳಿಂದ ಹಾವೇರಿ ಜಿಲ್ಲೆಯಲ್ಲಿ ಈವರೆಗೆ ಸಾವಿರಾರು ಉಚಿತ ಆರೋಗ್ಯ ಶಿಬಿರಗಳನ್ನು ಸಂಘಟಿಸಿ, ಬಡ ರೋಗಿಗಳಿಗೆ ಆರೋಗ್ಯ ತಪಾಸಣೆ ನಡೆಸಿ ಉಚಿತ ಔಷಧಿ- ಮಾತ್ರೆಗಳನ್ನು ವಿತರಿಸಿ ಒಬ್ಬ ಮಾನವೀಯ ಮನಸ್ಸಿನ ವ್ಯಕ್ತಿ, ವೈದ್ಯರಾದರೆ ಹೇಗಿರಬೇಕು ಎಂಬುದಕ್ಕೆ ರಾಜಕೀಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ಗುರುತಿಸಿಕೊಂಡು ಇವರು ರಾಜಕಾರಣಿ ಹೇಗಿರಬೇಕು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಇವರು ಸಂಘಟಿಸಿದ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಹಿರಿಯ ಶಿಕ್ಷಣ ಪ್ರೇಮಿ, ಶ್ಯಾಮನೂರು ಶಿವಶಂಕ್ರಪ್ಪ ಅವರು ಆಗಮಿಸಿ ಪಾಲ್ಗೊಂಡು ಇವರಿಗೆ ಶುಭ ಕೋರಿದ್ದರು. ನಾಡಿನ ಹರಗುರು ಚರಮೂ ರ್ತಿಗಳು, ಡಾಂಗೆಯವರ ಸಮಾಜ ಪ್ರೇಮವನ್ನು ನಾಡು-ನುಡಿ, ಸಂಘಟನೆಯನ್ನು ಮೆಚ್ಚಿ ಇವರನ್ನು ಆಶೀರ್ವದಿಸಿದ್ದಾರೆ.
ಇವರ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ನವದೆಹಲಿಯ ಸಂಸ್ಥೆಯೊಂದು ಇವರಿಗೆ ಚಿನ್ನದಪದಕವನ್ನು ನೀಡಿ ಗೌರವಿಸಿದೆ. ನೆರೆ ಹಾವಳಿ ಸಂಭವಿಸಿದಾಗ ಜನರ ನೆರವಿಗೆ ಡಾಂಗೆ ಧಾವಿಸಿ ನೆರವಿನ ಹಸ್ತ ನೀಡಿದ್ದರು. ಈ ಹಿಂದೆ ಕರ್ಜಗಿಯಲ್ಲಿ ಬೆಂಕಿ ಬಿದ್ದು, ಬಣವಿಗಳು ಸುಟ್ಟ ಸಂದರ್ಭದಲ್ಲಿ ರೈತರು ತಮ್ಮ ಎತ್ತುಗಳಿಗೆ ಮೇವಿಲ್ಲದೇ ಪರದಾಟುತ್ತಿದ್ದಾಗ ಡಾಂಗೆಯವರು ಎತ್ತುಗಳಿಗೆ ಮೇವು ಕೊಡಿಸುವ ಮೂಲಕ ರೈತರ ಸಂಕಷ್ಟಕ್ಕೆ ನೆರವಾಗಿದ್ದರು.
ಆಡಂಬರದ ಜೀವನದಿಂದ ದೂರವಿರುವ ಇವರು ತುಂಬಾ ಸರಳ ಹಾಗೂ ಸ್ನೇಹಜೀವಿಗಳಾಗಿರುವ ಡಾ.ಡಾಂಗೆ ಅವರು ತಮ್ಮ ಹುಟ್ಟುಹಬ್ಬವನ್ನು ಅಂಧ-ಅನಾಥ, ಬಡ ಮಕ್ಕಳೊಂದಿಗೆ ಆಚರಿಸುತ್ತಾ ಬಂದಿರುವ ಇವರು ತಮ್ಮ ಸರಳ ಜೀವನಕ್ಕೆ ಮಾದರಿಯಾಗಿದ್ದಾರೆ. ಇವರ ಸೇವೆಗೆ ಸಂದ ಪ್ರಶಸ್ತಿ ಸನ್ಮಾನಗಳು, ಗೌರವ ಗಳಿಗೆ ಲೆಕ್ಕವೇ ಇಲ್ಲ. ಕರ್ನಾಟಕ ಸರಕಾರವು ಇವರ ವೈದ್ಯಕೀಯ ರಂಗದ ಸಾಧನೆ ಗುರುತಿಸಿ ಹುಬ್ಬಳ್ಳಿಯ ಪ್ರತಿಷ್ಟಿತ ಕಿಮ್ಸ್ಗೆ ನಿರ್ದೇಶಕರನ್ನಾಗಿ ನೇಮಿಸಿತ್ತು.
ಜೂನ್ ೨೦೦೮ರಂದು ಸಂಭವಿಸಿದ ಗೋಲಿಬಾರ್ನಲ್ಲಿ ಗಾಯಗೊಂಡು ನರಳುತ್ತಿದ್ದ ರೈತರಿಗೆ ಇವರು ಸ್ಪಂಧಿಸಿದ್ದಲ್ಲದೇ ನೆರವಿನ ಹಸ್ತವನ್ನು ಸಹ ನೀಡಿದ್ದರು. ಪ್ರತಿವರ್ಷ ಬಡ ವಿದ್ಯಾರ್ಥಿಗಳಿಗೆ ಬಟ್ಟೆ-ಬರೆ, ಫೀಸು, ನೋಟು ಬುಕ್ಗಳನ್ನು ದೇಣಿಗೆಯ ರೂಪದಲ್ಲಿ ನೀಡುತ್ತಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಸ್ಪಂಧಿಸುತ್ತಾ ಬಂದಿರುವ ಇವರ ಇನ್ನೊಂದು ವಿಶೇಷ ವೆಂದರೆ ಅವರ ವಿನಯವಂತಿಕೆ. ಅವರ ಬಳಿ ಸಮಸ್ಯೆ ಹೇಳಿಕೊಂಡು ಬಂದವರು ದೊಡ್ಡವರಿರಲಿ, ಸಣ್ಣವರಿರಲಿ ವಿನಯವಂತಿಕೆಯಿಂದ, ಸಮಸ್ಯೆಗಳನ್ನು ಆಲಿಸಿ ತಮ್ಮ ಕೈಲಾದರೆ ಬಗೆಹರಿಸುತ್ತಾರೆ.
ಬುದ್ಧ-ಬಸವ ಹಾಗೂ ಡಾ.ಅಂಬೇಡ್ಕರ, ಗಾಂಧೀಜಿ ಅವರ ಉತ್ಕೃಷ್ಟ ವಿಚಾರಗಳನ್ನು ಅರಗಿಸಿ ಕೊಂಡು ಡಾಂಗೆ ಅವರು ಒಂದು ಕಡೆ ಸಾಂಸ್ಕೃತಿಕ ವಲಯದ ವಕ್ತಾರರಾಗಿ ರೂಪಗೊಳ್ಳುತ್ತಾ, ಇನ್ನೊಂದು ಕಡೆ ರಾಜಕೀಯ ಶ್ರೇಷ್ಠ ಮೌಲ್ಯಗಳ ಸೆಳೆತಕ್ಕ ಒಳಗಾಗಿ ರಾಜಕಾರಣಿಯಾಗಿ ರೂಪ ಗೊಂಡ ಅವರು, ಪ್ರಸ್ತುತ ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿದ್ದು, ರಾಜಕಾರಣದಲ್ಲಿ ಇಂತಹವರು ಇರಬೇಕು ಎಂದು ಜನತೆ ಇವರ ಸೇವೆಯನ್ನು ಬಯಸುತ್ತಿದೆ.
ಡಾಸಂಜಯ ಡಾಂಗೆ ಅವರು ಆಗಿನ್ನು ವಿದ್ಯಾರ್ಥಿ ದೆಸೆಯಲ್ಲಿದ್ದರು. ಹುಬ್ಬಳ್ಳಿಯ ಕಿಮ್ಸ್ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ, ಡಾ.ನಾಗಲೋತಿಮಠ ಅವರಂತಹ ವ್ಯಕ್ತಿಗಳ ಸಂಪರ್ಕ ವೈದ್ಯರು ಹಣ ಮಾಡಲು ಮುಂದಾಗಬಾರದು ದೀನ, ದಲಿತರ, ಬಡವರ ಆತಾಕಿರಣವಾಗಬೇಕು ಎಂದು ಹೇಳುತ್ತಿದ್ದ ಆಗಿನ ವೈದ್ಯಕೀಯ ಶಿಕ್ಷಕರ ನುಡಿಗಳು ಡಾ.ಡಾಂಗೆ ಅವರ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿದವು. ಆಗಲೇ ತಮ್ಮ ವೈದ್ಯಕೀಯ ವೃತ್ತಿಯಲ್ಲಿ ಬಡವರ ಪರ ಕೆಲಸಮಾಡಲು ದೃಢವಾದ ಸಂಕಲ್ಪ ಮಾಡಿದರು. ಯಥಾ ಗುರು ತಥಾ ಶಿಷ್ಯ ಎನ್ನುವ ರೀತಿಯಲ್ಲಿ ಡಾ.ನಾಗಲೋತಿಮಠ ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ಡಾಂಗೆ ಅವರು ಇಂದು ತಮ್ಮ ಕೈಲಾದ ಮಟ್ಟಿಗೆ ದೀನ, ದಲಿತರ, ಬಡವರ ಸೇವೆಯನ್ನು ಮಾಡುವ ತವಕವನ್ನು ಹೊಂದಿ ಮುಂದಡಿ ಇಡುತ್ತಿದ್ದಾರೆ.
malatesh angur