
ಮದಕರಿ ಜಯಂತೋತ್ಸವದ ಪ್ರಯುಕ್ತ ಅ.೨೫-೨೬ರಂದು ಬೆಂಗಳೂರಲ್ಲಿ ಮದಕರಿ ಕಪ್ ಕಬ್ಬಡಿ
ಹಾವೇರಿ: ರಾಜವೀರ ಮದಕರಿ ನಾಯಕರ ಜಯಂತೋತ್ಸವದ ಪ್ರಯುಕ್ತ ನಾಡದೊರೆ ರಾಜವೀರ “ಮದಕರಿನಾಯಕ “ಯುವ ಬ್ರೀಗೆಡ್ ಕರ್ನಾಟಕ ಬೆಂಗಳೂರು ಇವರವತಿ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಬೆಂಗಳೂರು ಅರ್ಬನ್ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದಲ್ಲಿ ಬೆಂಗಳೂರನ ವಿಜಯನಗರದ ಬಿ.ಜಿ.ಎಸ್ ಕ್ರಿಡಾಂಗಣದಲ್ಲಿ ಅ.೨೫ ಮತ್ತು ೨೬ರಂದು ಯೋಜಿಸಿರುವ ಮದಕರಿ ಕಪ್ ೨೦೨೫ ಸೀಸನ್-೨ ರಾಜ್ಯ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯ ಬಿತ್ತಿಪತ್ರಗಳನ್ನು ಶುಕ್ತವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನ್ಯಾಯವಾದಿ ಬಸವರಾಜ ಹಾದಿನಮನಿ ಮತ್ತಿತರರು ಬಿಡುಗಡೆಗೊಳಿಸಿದರು.
ಈವೇಳೆ ಮಾತನಾಡಿದ ಅವರು ಬದುಕಿನುದ್ದಕ್ಕೂ ಹುಲಿಯಂತೆ ಹೋರಾಡಿದ, ಕಡುಶತ್ರುಗಳಿಂದಲೂ ಸೈ ಎನಿಸಿಕೊಂಡ ಕನ್ನಡ ನಾಡಿನ ಹೆಮ್ಮೆಯ ರಾಜವೀರ ಮದಕರಿ ನಾಯಕರ ಜಯಂತೋತ್ಸವದ ಪ್ರಯುಕ್ತ ನಡೆಯುತ್ತಿರುವ ಕಬ್ಬಡಿ ಪದ್ಯಾವಳಿಯು ಗ್ರಾಮೀಣ ಪ್ರತಿಭೆಗಳು ಪ್ರತಿಭೆಗೆ ವೇದಿಕೆಯಾಗಲಿ ಎಂದು ಶುಭಹಾರೈಸಿದರು.
“ಮದಕರಿನಾಯಕ “ಯುವ ಬ್ರೀಗೆಡ್ನ ಜಿಲ್ಲಾಧ್ಯಕ್ಷ ಆನಂದ ಬೆಂಡಿಗೇರಿ ಮಾತನಾಡಿ ರಾಜವೀರ ಮದಕರಿ ನಾಯಕರ ಜಯಂತೋತ್ಸವ ಪ್ರಯುಕ್ತ ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಎರಡನೇ ವರ್ಷದ ರಾಜ್ಯ ಮಟ್ಟದ ಹೊನಲು ಬೆಳಕಿನ ಮದಕರಿ ಕಪ್ ಕಬ್ಬಡಿ ಪಂದ್ಯಾವಳಿಯನ್ನು ಅ.೨೫-೨೬ರಂದು ಆಯೋಜಿಸಲಾಗಿದ್ದು, ಬಹುಮಾನಗಳು ಪ್ರಥಮ ರೂ. ೧ ಲಕ್ಷ, ದ್ವಿತೀಯ ರೂ. ೫೦ ಸಾವಿರ, ತೃತೀಯ ರೂ. ೨೫ .ಹಾಗೂ ಚತುರ್ಥ ರೂ. ೨೫ ಸಾವಿರ ಮತ್ತು ಅಕರ್ಷಕ ಟ್ರೋಫಿಗಳು, ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ, ಸರ್ವೋತ್ತಮ ಆಟಗಾರರಿಗೆ ವಿಶೇಷ ಬಹುಮಾನವಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಬಸವರಾಜ ನಾಯಕ, ಮಲ್ಲಿಕಾರ್ಜುನ ಬೂಧಗಟ್ಟಿ, ಹರೀಶಕುಮಾರ್ ಮೇಲ್ಮುರಿ, ಆನಂದ್ ಬೆಂಡಿಗೇರಿ, ವಿರೇಶ್ ಹ್ಯಾಡ್ಲಾ, ಶೇಖರ್ ಬೋಮ್ಮನಕಟ್ಟಿ, ಹನುಮಂತಪ್ಪ ದೀವಿಗಿಹಳ್ಳಿ, ಬಸವರಾಜ ತಳವಾರ, ಹನುಮಂತಪ್ಪ ಹುಚ್ಚಣ್ಣನವರ ಹಾಗೂ ಸಮುದಾಯದ ಹಿರಿಯರು, ಮದಕರಿನಾಯಕ ಯುವ ಬ್ರಿಗೇಡ್ನ ಪದಾಧಿಕಾರಿಗಳು ಹಾಜರಿದ್ದರು.

