ಮನೆ ನಿರ್ಮಿಸಲು ಮೀಸಲಿರಿಸಿದ್ದ ಅನುದಾನ ವಾಪಾಸ ಪಡದಿರುವದನ್ನು ಖಂಡಿಸಿ ಸರ್ಕಾರದ ವಿರುದ್ಧ ಅಲೆಮಾರಿಗಳ ಪ್ರತಿಭಟನೆ
ಹಾವೇರಿ:ಅಲೆಮಾರಿ ಸಮುದಾಯಗಳಿಗೆ ಮನೆಗಳನ್ನು ಮನೆ ನಿರ್ಮಿಸಿ (ಸೂರು ನಿಮೀಸಲು) ರಾಜೀವಗಾಂಧಿ ವಸತಿ ನಿಗಮದಿಂದ ಮನೆ ಮಂಜೂರಾದ ಹಣವನ್ನು ಸರ್ಕಾರ ವಾಪಾಸ ಪಡೆದಿರುವುದನ್ನು ಖಂಡಿಸಿ, ೩ ೦೦ ಕೋಟಿ ಅನುದಾನವನ್ನು ಮರಳಿ ನೀಡಬೇಕು ಎಂದು ಒತ್ತಾಸಿ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಘಟಕದ ವತಿಂದ ನಗರದ ಕಾಗಿನೆಲೆ ರೋಡಿನ ಶ್ರೀ ಮುರುಘ ರಾಜೇಂದ್ರಮಠದಿಂದ ಹೊಸಮನಿ ಸಿದ್ದಪ್ಪ ಸರ್ಕಲವರಿಗೆ ಬೃಹತ್ ಪ್ರತಿಭಟನೆ ಮಾಡಿ ತಹಶೀಲ್ದಾರ ಗಿರೀಶ ಸ್ವಾದಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾತು.
ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ ಮಾತನಾಡಿ ಊರಿಲ್ಲದ, ಸೂರಿಲ್ಲದ ಮತ್ತು ವಿಳಾಸವೂ ಇರದ ಲಕ್ಷಾಂತರ ಸಂಖ್ಯೆಯ ಅಲೆಮಾರಿ ಸಮುದಾಯಗಳಾದ ಹಕ್ಕಿಪಿಕ್ಕಿಗಳು, ಹಂದಿಜೋಗಿಗಳು, ಸುಡುಗಾಡು ಸಿದ್ಧರು, ಚನ್ನದಾಸರು, ಬುಡ್ಗಜಂಗಮರು, ದೊಂಬರು, ಕಿಳ್ಳೆಕ್ಯಾತರು, ಕೊರಚ, ಕೊರಮ ಮುಂತಾದ ಜನರಿಗೆ ಮನೆ ಕಟ್ಟಿಕೊಡಲು ಕಳೆದ ಎರಡು ವರ್ಷಗಳಿಂದ ಮೀಸಲಿರಿಸಿದ್ದ ೩೦೦ ಕೋಟಿ ಅನುದಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾ ನೇತೃತ್ವದ ಸರ್ಕಾರ ವಾಪಸು ಪಡೆದಿದೆ.
ಹರುಕು-ಮುರುಕ ಗುಡುಸಲಿನಲ್ಲಿ ವಾಸ ಇರುವ ಅಲೆಮಾರಿಗಳಿಗೆ ಸೂರು ನಿರ್ಮಿಸಿಕೊಡುವುದು ಸರ್ಕಾರ ದ ಜವಾಬ್ದಾರಿಯಾಗಿದೆ. ಆದರೆ ಸರ್ಕಾರವೇ ಈ ಜನರಿಗೆ ಸೂರು ನಿರ್ಮಿಸುವ ಬದಲು ಸೂರು ನಿರ್ಮಿಸಲು ನಿಗದಿಯಾಗಿದ್ದ ಹಣವನ್ನು ವಾಪಾಸ ಪಡೆದಿರುವುದು ದುದೈವದ ಸಂಗತಿಯಾಗಿದೆ. ಅಲೆಮಾರಿಗಳ ಬಗ್ಗೆ ಸರ್ಕಾರಕ್ಕೆ ಕಿಂಚಿತ್ ಕಾಳಜಿ ಇದ್ದರೆ ಕೂಡಲೇ ಹಣವನ್ನು ಮರಳಿ ನೀಡಬೇಕು ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ ಒತ್ತಾಸಿದರು.
ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಮಾತನಾಡಿ ಅತ್ಯಂತ ಕಟ್ಟಕಡೆಯ, ಅಕ್ಷರ ಪಂಚಿತ, ಸಂವಿ”ಧಾನದ ಅರಿವಿಲ್ಲದ ಅಲೆಮಾರಿ ಸಮುದಾಯದವರಾದ ಬೇಡ ಬುಡ್ಡ ಜಂಗಮರಿಗೆ ಸರ್ಕಾರ ನೀಡುತ್ತಿರುವ ಪರಿಶಿಷ್ಜಜಾತಿ ಪ್ರಮಾಣಪತ್ರವನ್ನು ಹಲವು ವೀರಶೈವ ಜಂಗಮರಿಗೆ ನೀಡುತ್ತಿರುವುದು ನಮಗೆ ಆಘಾತ ಮೂಡಿಸಿದೆ.ವೀರಶೈವ ಜಂಗಮರಿಗೆ ಈಗಾಗಲೇ ನೀಡಲಾಗಿರುವ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ರದ್ದುಪಡಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿ ಒತ್ತಾಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಧರ್ಮಣ್ಣ ಹಮಾಂತ,ಶಂಕ್ರಪ್ಪ ಮಹಾಂತ, ಶಂಕ್ರಪ್ಪ ವಿಭೂತಿ, ಮಲ್ಲೇಶ ಕಡಕೋಳ, ಮಂಜ್ಪಪ ಮರೋಳ, ಶಿವರಾಜ ಹರಿಜನ, ಗುಡ್ಡಪ್ಪ ಬಣಕಾರ, ರಮೇಶ ಜಾಲಿಹಾಳ, ಜಗದೀಶ ಹರಿಜನ, ಮಂಜಪ್ಪ ವೇಷಗಾರರು, ಯಲ್ಲಪ್ಪ ಕೋಮಾರಿ,ಈರಪ್ಪ ಮೊತಿ.ಮಾರೆಪ್ಪ ಮೊತಿ,ಶ್ರೀಮತಿ ಅಕ್ಕಮ್ಮ “ಭೂತಿ,ಸುಂಕಮ್ಮ ರಮೇಶ ಮಹಾಂತ,ರಾಜು ಕೋಮಾರಿ,ರ” ಕೊರವರ,ಭೀಮಣ್ಣ ಭಜಂತ್ರಿ,ಗಂಗಾಧರ ಚನ್ನದಾಸರ,ಬಸವರಾಜಪ್ಪ ಚನ್ನದಾಸರ ಮತ್ತಿತರರು ಭಾಗವಹಿಸಿದ್ದರು.