ಮಾ.೧೯ಕ್ಕೆ “ಕಾಡು-ಮೇಡು” ಕೃತಿ ಬಿಡುಗಡೆ, ಆಮಂತ್ರಣ ಪತ್ರಿಕೆಯಲ್ಲಿ ಮತದಾನ ಜಾಗೃತಿ- ಪರಿಸರ ಕಾಳಜಿ
ಹಾವೇರಿ: ಲೇಖಕ, ಪತ್ರಕರ್ತ, ವನ್ಯಜೀವಿ ಛಾಯಾಗ್ರಾಹಕ ಮಾಲತೇಶ ಅಂಗೂರ ಅವರ ನಾಲ್ಕನೆಯ ಕೃತಿ ವನ್ಯಜೀವಿಗಳ ಹಾಗೂ ಪರಿಸರದ ಬಗೆಗಿನ ಲೇಖನಗಳನ್ನು ಒಳಗೊಂಡಿರುವ ಶ್ರಮಿಕಾ ಪ್ರಕಾಶನ ಪ್ರಕಟಿಸಿರುವ “ಕಾಡು-ಮೇಡು” ಕೃತಿಯ ಬಿಡುಗಡೆ ಸಮಾರಂಭ ಮಾ.೧೯ರಂದು ಬೆಳಿಗ್ಗೆ ೧೦-೩೦ಕ್ಕೆ ನಗರದ ಮುನ್ಸಿಪಲ್ ಹೈಸ್ಕೂಲ್ ಹತ್ತಿರ ಇರುವ ಜಿಲ್ಲಾ ಸರಕಾರಿ ನೌಕರರ ಸಭಾ ಭವನದಲ್ಲಿ ನಡೆಯಲಿದೆ.
ಪುಸ್ತಕ ಬಿಡುಗಡೆ ಸಮಾರಂಭದ ಸಾನಿಧ್ಯವನ್ನು ಶ್ರೀಹುಕ್ಕೇರಿಮಠದ ಪೂಜ್ಯಶ್ರೀ ಸದಾಶಿವ ಮಹಾಸ್ವಾಮಿಜಿ ಹಾಗೂ ಶ್ರೀಹೊಸಮಠದದ ಪೂಜ್ಯಶ್ರೀ ಬಸವಶಾಂತಲಿಂಗ ಮಹಾಸ್ವಾಮಿಜಿ ವಹಿಸುವರು. “ಕಾಡು-ಮೇಡು” ಪುಸ್ತಕವನ್ನು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಬಿಡುಗಡೆಗೊಳಿಸುವರು, ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ ವಹಿಸುವರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಕೆ.ಮಂಜಣ್ಣ, ನಗರಸಭೆಯ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾ ಕ.ಸಾ.ಪ ಅಧ್ಯಕ್ಷ ಲಿಂಗಯ್ಯ ಹಿರೇಮಠ, ತಾ.ಕ.ಸಾ.ಪ ಅಧ್ಯಕ್ಷ ವೈ.ಬಿ.ಆಲದಕಟ್ಟಿ ಆಗಮಿಸುವರು. ಸಾಹಿತಿ ಡಾ.ರಮೇಶ ತೆವರಿ ಪುಸ್ತಕ ಪರಿಚಯಿಸುವರು.
ಸಾಹಿತ್ಯಾಸಕ್ತರು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಆಗಮಿಸಲು ಶ್ರಮಿಕ ಪ್ರಕಾಶನ ಹಾಗೂ ಸಾಹಿತಿ ಕಲಾ ಬಳಗದವರು ಕೋರಿದ್ದಾರೆ.
“ಕಾಡು-ಮೇಡು” ಕೃತಿ ಬಿಡುಗಡೆಯ ಆಮಂತ್ರಣ ಪತ್ರಿಕೆಯಲ್ಲಿ ಮತದಾನ ಜಾಗೃತಿ- ಪರಿಸರ ಕಾಳಜಿ
ಹಾವೇರಿ: ಪುಸ್ತಕ ಬಿಡುಗಡೆಯ ಸಮಾರಂಭದ ಆಮಂತ್ರಣ ಪತ್ರಿಕೆ ಪ್ರಕಟಿಸುವುದು ಸಾಮಾನ್ಯ, ಆಮಂತ್ರಣ ಪತ್ರಿಕೆಯಲ್ಲಿ ಹೆಸರುಗಳನ್ನು ಮಾತ್ರ ಕಾಣಬಹುದು. ಆದರೆ ಆಮಂತ್ರಣ ಪತ್ರಿಕೆ ಮೂಲಕ ವಿಶೇಷ ಮಾಹಿತಿ ಒದಗಿಸುವುದು ಉತ್ತಮ ಕಾರ್ಯವಾಗಿದೆ. ಪರಿಸರ ಕಾಳಜಿ ಇರುವಂತಹ ಸಂದೇಶ ಹಾಗೂ ಚುನಾವಣೆಯ ಹೊಸ್ತಿಲಲ್ಲಿ ಮತದಾರರಿಗೆ ಒಡ್ಡುತ್ತಿರುವ ಆಸೆ-ಆಮಿಶ ಸುದ್ದಿ ಸಾಮಾನ್ಯವಾಗಿದ್ದು, ಈ ಸಂದರ್ಭದಲ್ಲಿ ಮತದಾರನ ಜಾಗೃತಿ ಮೂಡಿಸುವ ಸಾಲುಗಳು ಇಲ್ಲಿ ಪ್ರಮುಖವಾಗಿ ಕಾಣುತ್ತಿವೆ.
ಸಾಹಿತಿ, ಪತ್ರಕರ್ತ, ವನ್ಯಜೀವಿ ಛಾಯಾಗ್ರಾಹಕ ಮಾಲತೇಶ ಅಂಗೂರ ಅವರ ನಾಲ್ಕನೆಯ ಕೃತಿಯಾಗಿರುವ ವನ್ಯಜೀವಿಗಳ ಬಗೆಗಿನ ಲೇಖನಗಳನ್ನು ಒಳಗೊಂಡಿರುವ “ಕಾಡು-ಮೇಡು” ಕೃತಿಯ ಬಿಡುಗಡೆ ಸಮಾರಂಭ ಮಾ.೧೯ರಂದು ಬೆಳಿಗ್ಗೆ ೧೦-೩೦ಕ್ಕೆ ಜಿಲ್ಲಾ ಸರಕಾರಿ ನೌಕರರ ಸಭಾ ಭವನದಲ್ಲಿ ನಡೆಯಲಿದ್ದು, ಪುಸ್ತಕ ಬಿಡುಗಡೆಯ ಆಮಂತ್ರಣ ಪತ್ರಿಕೆಯಲ್ಲಿ ಅತಿಥಿ ಅಭ್ಯಾಗತರ ಹೆಸರುಗಳ ಜೊತೆಗೆ ಮತದಾನ ಜಾಗೃತಿ- ಪರಿಸರ ಕಾಳಜಿಯ ಬಗೆಗಿನ ಸಾಲುಗಳು ಗಮನ ಸೆಳೆಯುತ್ತವೆ.
“ಹಸಿರು ಹಸನಾಗಿದ್ದರೆ ಉಸಿರಾಡುವ ಜೀವಿಗಳಿಗೆ ಗಾಳಿ ಗಂಧ”, “ಏರುತ್ತಿರುವ ಜಾಗತಿಕ ತಾಪಮಾನಕ್ಕೆ ಮರ, ಗಿಡಗಳನ್ನು ಬೆಳೆಸುವುದು ಒಂದು ಉತ್ತಮ ಪರಿಹಾರ”, “ನಾವು ನೆಟ್ಟ ಮರಗಳು ನಮ್ಮ ಮುಂದಿನ ತಲೆಮಾರಿನ ತಲೆ ಕಾಯುತ್ತವೆ”, ಜೊತೆಗೆ “ಮರಗಳ ರೂಪದಲ್ಲಿ ನಾವು ಜೀವಂತವಾಗಿರುತ್ತೇವೆ.”ಎನ್ನುವ ಸಾಲುಗಳು ಹಾಗೂ ಮತದಾನ ಜಾಗ್ರತಿಗೆ ಸಂಬಂಧಿಸಿದಂತೆ “ನಾವು ಮಾರಾಟಕ್ಕಿಲ್ಲ, ನಮ್ಮ ಮತ ಮಾರಾಟಕ್ಕಿಲ್ಲ”.”ಮತದಾನ ಮಾಡಿ, ಪ್ರಜಾಪ್ರಭುತ್ವ ಗೆಲ್ಲಿಸಿ”. ಎನ್ನುವ ಸಾಲುಗಳು ಪರಿಸರದ ಬಗ್ಗೆ ಹಾಗೂ ಮತದಾನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳಾಗಿವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿಧ ವಿಧದ ರೀತಿಯ ಆಮಂತ್ರಣ ಪತ್ರ ಪ್ರಕಟಣೆ ಮಾಡುವುದನ್ನು ನೋಡಿದ್ದೇವೆ, ಆದರೆ ಆಮಂತ್ರಣ ಪತ್ರಿಕೆ ಮೂಲಕವೂ ಪರಿಸರದ ಬಗ್ಗೆ ಜಾಗೃತಿ ಕಾರ್ಯ ಮಾಡಬಹುದು ಎನ್ನುವ ವಿಚಾರ ಹೊಳೆದಿರುವುದು ಮಾದರಿ ಸಂಗತಿ.
ಮಾ.೧೯ಕ್ಕೆ “ಕಾಡು-ಮೇಡು” ಕೃತಿ ಬಿಡುಗಡೆ, ಆಮಂತ್ರಣ ಪತ್ರಿಕೆಯಲ್ಲಿ ಮತದಾನ ಜಾಗೃತಿ- ಪರಿಸರ ಕಾಳಜಿ
Date:
ಮಾ.೧೯ಕ್ಕೆ “ಕಾಡು-ಮೇಡು” ಕೃತಿ ಬಿಡುಗಡೆ, ಆಮಂತ್ರಣ ಪತ್ರಿಕೆಯಲ್ಲಿ ಮತದಾನ ಜಾಗೃತಿ- ಪರಿಸರ ಕಾಳಜಿ
ಹಾವೇರಿ: ಲೇಖಕ, ಪತ್ರಕರ್ತ, ವನ್ಯಜೀವಿ ಛಾಯಾಗ್ರಾಹಕ ಮಾಲತೇಶ ಅಂಗೂರ ಅವರ ನಾಲ್ಕನೆಯ ಕೃತಿ ವನ್ಯಜೀವಿಗಳ ಹಾಗೂ ಪರಿಸರದ ಬಗೆಗಿನ ಲೇಖನಗಳನ್ನು ಒಳಗೊಂಡಿರುವ ಶ್ರಮಿಕಾ ಪ್ರಕಾಶನ ಪ್ರಕಟಿಸಿರುವ “ಕಾಡು-ಮೇಡು” ಕೃತಿಯ ಬಿಡುಗಡೆ ಸಮಾರಂಭ ಮಾ.೧೯ರಂದು ಬೆಳಿಗ್ಗೆ ೧೦-೩೦ಕ್ಕೆ ನಗರದ ಮುನ್ಸಿಪಲ್ ಹೈಸ್ಕೂಲ್ ಹತ್ತಿರ ಇರುವ ಜಿಲ್ಲಾ ಸರಕಾರಿ ನೌಕರರ ಸಭಾ ಭವನದಲ್ಲಿ ನಡೆಯಲಿದೆ.
ಪುಸ್ತಕ ಬಿಡುಗಡೆ ಸಮಾರಂಭದ ಸಾನಿಧ್ಯವನ್ನು ಶ್ರೀಹುಕ್ಕೇರಿಮಠದ ಪೂಜ್ಯಶ್ರೀ ಸದಾಶಿವ ಮಹಾಸ್ವಾಮಿಜಿ ಹಾಗೂ ಶ್ರೀಹೊಸಮಠದದ ಪೂಜ್ಯಶ್ರೀ ಬಸವಶಾಂತಲಿಂಗ ಮಹಾಸ್ವಾಮಿಜಿ ವಹಿಸುವರು. “ಕಾಡು-ಮೇಡು” ಪುಸ್ತಕವನ್ನು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಬಿಡುಗಡೆಗೊಳಿಸುವರು, ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ ವಹಿಸುವರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಕೆ.ಮಂಜಣ್ಣ, ನಗರಸಭೆಯ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾ ಕ.ಸಾ.ಪ ಅಧ್ಯಕ್ಷ ಲಿಂಗಯ್ಯ ಹಿರೇಮಠ, ತಾ.ಕ.ಸಾ.ಪ ಅಧ್ಯಕ್ಷ ವೈ.ಬಿ.ಆಲದಕಟ್ಟಿ ಆಗಮಿಸುವರು. ಸಾಹಿತಿ ಡಾ.ರಮೇಶ ತೆವರಿ ಪುಸ್ತಕ ಪರಿಚಯಿಸುವರು.
ಸಾಹಿತ್ಯಾಸಕ್ತರು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಆಗಮಿಸಲು ಶ್ರಮಿಕ ಪ್ರಕಾಶನ ಹಾಗೂ ಸಾಹಿತಿ ಕಲಾ ಬಳಗದವರು ಕೋರಿದ್ದಾರೆ.
“ಕಾಡು-ಮೇಡು” ಕೃತಿ ಬಿಡುಗಡೆಯ ಆಮಂತ್ರಣ ಪತ್ರಿಕೆಯಲ್ಲಿ ಮತದಾನ ಜಾಗೃತಿ- ಪರಿಸರ ಕಾಳಜಿ
ಹಾವೇರಿ: ಪುಸ್ತಕ ಬಿಡುಗಡೆಯ ಸಮಾರಂಭದ ಆಮಂತ್ರಣ ಪತ್ರಿಕೆ ಪ್ರಕಟಿಸುವುದು ಸಾಮಾನ್ಯ, ಆಮಂತ್ರಣ ಪತ್ರಿಕೆಯಲ್ಲಿ ಹೆಸರುಗಳನ್ನು ಮಾತ್ರ ಕಾಣಬಹುದು. ಆದರೆ ಆಮಂತ್ರಣ ಪತ್ರಿಕೆ ಮೂಲಕ ವಿಶೇಷ ಮಾಹಿತಿ ಒದಗಿಸುವುದು ಉತ್ತಮ ಕಾರ್ಯವಾಗಿದೆ. ಪರಿಸರ ಕಾಳಜಿ ಇರುವಂತಹ ಸಂದೇಶ ಹಾಗೂ ಚುನಾವಣೆಯ ಹೊಸ್ತಿಲಲ್ಲಿ ಮತದಾರರಿಗೆ ಒಡ್ಡುತ್ತಿರುವ ಆಸೆ-ಆಮಿಶ ಸುದ್ದಿ ಸಾಮಾನ್ಯವಾಗಿದ್ದು, ಈ ಸಂದರ್ಭದಲ್ಲಿ ಮತದಾರನ ಜಾಗೃತಿ ಮೂಡಿಸುವ ಸಾಲುಗಳು ಇಲ್ಲಿ ಪ್ರಮುಖವಾಗಿ ಕಾಣುತ್ತಿವೆ.
ಸಾಹಿತಿ, ಪತ್ರಕರ್ತ, ವನ್ಯಜೀವಿ ಛಾಯಾಗ್ರಾಹಕ ಮಾಲತೇಶ ಅಂಗೂರ ಅವರ ನಾಲ್ಕನೆಯ ಕೃತಿಯಾಗಿರುವ ವನ್ಯಜೀವಿಗಳ ಬಗೆಗಿನ ಲೇಖನಗಳನ್ನು ಒಳಗೊಂಡಿರುವ “ಕಾಡು-ಮೇಡು” ಕೃತಿಯ ಬಿಡುಗಡೆ ಸಮಾರಂಭ ಮಾ.೧೯ರಂದು ಬೆಳಿಗ್ಗೆ ೧೦-೩೦ಕ್ಕೆ ಜಿಲ್ಲಾ ಸರಕಾರಿ ನೌಕರರ ಸಭಾ ಭವನದಲ್ಲಿ ನಡೆಯಲಿದ್ದು, ಪುಸ್ತಕ ಬಿಡುಗಡೆಯ ಆಮಂತ್ರಣ ಪತ್ರಿಕೆಯಲ್ಲಿ ಅತಿಥಿ ಅಭ್ಯಾಗತರ ಹೆಸರುಗಳ ಜೊತೆಗೆ ಮತದಾನ ಜಾಗೃತಿ- ಪರಿಸರ ಕಾಳಜಿಯ ಬಗೆಗಿನ ಸಾಲುಗಳು ಗಮನ ಸೆಳೆಯುತ್ತವೆ.
“ಹಸಿರು ಹಸನಾಗಿದ್ದರೆ ಉಸಿರಾಡುವ ಜೀವಿಗಳಿಗೆ ಗಾಳಿ ಗಂಧ”, “ಏರುತ್ತಿರುವ ಜಾಗತಿಕ ತಾಪಮಾನಕ್ಕೆ ಮರ, ಗಿಡಗಳನ್ನು ಬೆಳೆಸುವುದು ಒಂದು ಉತ್ತಮ ಪರಿಹಾರ”, “ನಾವು ನೆಟ್ಟ ಮರಗಳು ನಮ್ಮ ಮುಂದಿನ ತಲೆಮಾರಿನ ತಲೆ ಕಾಯುತ್ತವೆ”, ಜೊತೆಗೆ “ಮರಗಳ ರೂಪದಲ್ಲಿ ನಾವು ಜೀವಂತವಾಗಿರುತ್ತೇವೆ.”ಎನ್ನುವ ಸಾಲುಗಳು ಹಾಗೂ ಮತದಾನ ಜಾಗ್ರತಿಗೆ ಸಂಬಂಧಿಸಿದಂತೆ “ನಾವು ಮಾರಾಟಕ್ಕಿಲ್ಲ, ನಮ್ಮ ಮತ ಮಾರಾಟಕ್ಕಿಲ್ಲ”.”ಮತದಾನ ಮಾಡಿ, ಪ್ರಜಾಪ್ರಭುತ್ವ ಗೆಲ್ಲಿಸಿ”. ಎನ್ನುವ ಸಾಲುಗಳು ಪರಿಸರದ ಬಗ್ಗೆ ಹಾಗೂ ಮತದಾನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳಾಗಿವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿಧ ವಿಧದ ರೀತಿಯ ಆಮಂತ್ರಣ ಪತ್ರ ಪ್ರಕಟಣೆ ಮಾಡುವುದನ್ನು ನೋಡಿದ್ದೇವೆ, ಆದರೆ ಆಮಂತ್ರಣ ಪತ್ರಿಕೆ ಮೂಲಕವೂ ಪರಿಸರದ ಬಗ್ಗೆ ಜಾಗೃತಿ ಕಾರ್ಯ ಮಾಡಬಹುದು ಎನ್ನುವ ವಿಚಾರ ಹೊಳೆದಿರುವುದು ಮಾದರಿ ಸಂಗತಿ.