ಯಲ್ಲಾಪುರದ ಬಳಿ ಭೀಕರ ಅಪಘಾತ: ಸವಣೂರಲ್ಲಿ ಸ್ಮಶಾನ ಮೌನ, ಹತ್ತೂ ಮೃತರದ್ದು ಒಂದೊಂದು ಕಥೆ..!

Date:

ಯಲ್ಲಾಪುರದ ಬಳಿ ಭೀಕರ ಅಪಘಾತ: ಸವಣೂರಲ್ಲಿ ಸ್ಮಶಾನ ಮೌನ, ಹತ್ತೂ ಮೃತರದ್ದು ಒಂದೊಂದು ಕಥೆ..!
ಮದುವೆಯಾಗಿ ನಾಲ್ಕುತಿಂಗಳದಾವ, ಮದುವೆಯಾಗಬೇಕಿದ್ದವ, ಬದುಕಿ ಬಾಳಬೇಕಿದ್ದವರು ಬಾರದಲೋಕಕ್ಕೆ
ಹಾವೇರಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಬುಧವಾರ ಬಡಳಗಿನಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದವರಾಗಿದ್ದು, ಅಪಘಾತದಲ್ಲಿ ಮೃತಪಟ್ಟ ಹತ್ತೂ ಮಂದಿಯದ್ದು ಒಂದೊಂದು ಕಥೆ. ಒಬ್ಬ ಮನೆಗೆ ಆಧಾರವಾಗಿದ್ದ, ಇನ್ನೊಬ್ಬ ತಂದೆಗೆ ಆಸರೆಯಾಗಲು ಎದೆ ಎತ್ತರಕ್ಕೆ ಬೆಳೆದು ನಿಂತಿದ್ದ, ಮದುವೆಯಾಗಿ ನಾಲ್ಕುತಿಂಗಳದಾವ, ಮದುವೆಯಾಗಬೇಕಿದ್ದವ, ಬದುಕಿ ಬಾಳಬೇಕಿದ್ದವರು
ಅದೆಷ್ಟೋ ಕನಸು ಕಂಡಿದ್ದ ಮನೆ ಮಕ್ಕಳು ವಿಧಿಯ ಕ್ರೂರ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಸವಣೂರಿನಲ್ಲಿ ಸ್ಮಶಾನ ಮೌನ ಆವರಿಸಿದ್ದು, ವಿವಿಧ ಓಣಿ, ಮೊಹಲ್ಲಾಗಳಲ್ಲಿ ಜನತೆಯಲ್ಲಿ ದುಃಖ ಮಡುಗಟ್ಟಿದೆ.
ಅಪಘಾತದಿಂದ ಪ್ರಾಣ ಕಳೆದುಕೊಂಡ ಒಬ್ಬರ ಪತ್ನಿ ಗರ್ಭಿಣಿ, ಮತ್ತೊರ್ವನ ಮದುವೆಯಾಗಿ ಕೇವಲ ನಾಲ್ಕು ತಿಂಗಳಾಗಿವೆಯಷ್ಟೇ. ಇನ್ನೊಂದು ಕುಟುಂಬದಲ್ಲಿ ಸಣ್ಣ-ಸಣ್ಣ ಮಕ್ಕಳಿವೆ. ಅವುಗಳನ್ನು ನೋಡಿಕೊಳ್ಳುವರಾರು ಎಂಬ ಚಿಂತೆ. ಇದಕ್ಕಿಂತಲೂ ಘನಘೋರವೆಂದರೆ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿದ್ದಾರೆ. ಈ ಮನೆಯಲ್ಲಂತೂ ಆಕ್ರಂದನವನ್ನು ನೋಡಲಾಗುತ್ತಿಲ್ಲ ಎಂದು ಅಪಘಾತದಲ್ಲಿ ಸಾವನ್ನಪ್ಪಿದ ಇಮ್ತಿಯಾಜ್ ಅವರ ಸಹೋದರ ಸಾಧಿಕ್ ಅಹ್ಮದ್ ಹಾಗೂ ಮೃತ ಸಾದಿಕ್ ತಂದೆ ಗೌಸ್ ಮುದ್ದೀನ್ ಪ್ರತಿಕ್ರಿಯೆ ನೀಡಿದಾಗ ಕಣ್ಣಲ್ಲಿ ಕಣ್ಣೀರು ಧಾರೆಹರಿಯುತ್ತಿತ್ತು.
ಹಿಂದೆಂದೂ ಕಾಣದ ಸೂತಕದ ಛಾಯೆ ಸವಣೂರು ಪಟ್ಟಣದಲ್ಲಿ ಆವರಿಸಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತರ ಮನೆಯ ಮುಂದೆ ಜನಸಾಗರವೇ ಹರಿದು ಬಂದಿದೆ.ಮನೆಯ ಮಕ್ಕಳನ್ನು ಕಳೆದುಕೊಂಡ ನೋವನ್ನು ಅರಗಿಸಿಕೊಳ್ಳಲಾಗದೇ ಮನೆಯೊಳಗೆ ಹೆಣ್ಣುಮಕ್ಕಳು ಕಣ್ಣೀರು ಹಾಕುತ್ತಿರುವ ದೃಶ್ಯ ಎಂಥವರ ಮನ ಕಲುಕುವಂತಿದೆ.
ಹೊಟ್ಟೆಪಾಡಿಗಾಗಿ ಹಣ್ಣು- ತರಕಾರಿ ಮಾರಿಕೊಂಡಿದ್ದ ಜನ: ಹೊಟ್ಟೆಪಾಡಿಗಾಗಿ ಹಣ್ಣು, ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ೧೦ ಜನರ ದುರ್ಮರಣದಿಂದ ಕುಟುಂಬಗಳ ಆಧಾರಸ್ಥಂಭವೇ ಕಳಚಿ ಬಿದ್ದಿದೆ. ಸರ್ಕಾರ ತಮಗೆ ಸೂಕ್ತ ಪರಿಹಾರ ನೀಡಬೇಕು, ನೆರವಿಗೆ ಬರುವಂತೆ ಈ ಬಡ ಕುಟುಂಬಗಳು ಮನವಿ ಮಾಡಿಕೊಳ್ಳುತ್ತಿವೆ.
ಬಾಕ್ಸ್
ಎಳನೀರು ಕುಡಿಸಿದ ಮಗ ಮನೆಗೆ ಮರಳಿಲ್ಲ….
ಮೃತ ಸಾದಿಕ್ ಮಂಗಳವಾರ ರಾತ್ರಿ ತಂದೆ ಗೌಸ್ ಮುದ್ದೀನ್ ಅವರಿಗೆ ಎಳನೀರು ತಂದು ಕುಡಿಸಿದ್ದ. “ರಾತ್ರಿ ೧೦ ಗಂಟೆಗೆ ಮನೆಯಿಂದ ಉಳಿದವರೊಂದಿಗೆ ಲಾರಿಯಲ್ಲಿ ತರಕಾರಿ ವ್ಯಾಪಾರಕ್ಕೆ ಹೋಗಿದ್ದ, ರಾತ್ರಿ ಮೂರು ಗಂಟೆಗೆ ಲಾರಿ ಪಲ್ಟಿಯಾಗಿದೆ ಎನ್ನುವ ವಿಚಾರ ನನಗೆ ಬೆಳಗ್ಗೆ ೬ ಗಂಟೆಗೆ ತಿಳಿಯಿತು. ನಾನು ಹ್ಯಾಂಡಿಕ್ಯಾಪ್. ನನ್ನ ಮನೆ ನಡೆಸುತ್ತಿದ್ದದ್ದೂ ನನ್ನ ಮಗನೇ. ಕೊನೆಯದಾಗಿ ನಿನ್ನೆ ರಾತ್ರಿ ೧೦ ಗಂಟೆಗೆ ಮಗನ ಮುಖನೋಡಿದ್ದೆ. ಮುಂದೆ ಜೀವನ ಹೇಗೆ, ನಾನೂ ಏನು ಮಾಡಬೇಕು ಎಂಬುದು ತಿಳಿದಿಲ್ಲ. ಸರ್ಕಾರ ನೆರವಿಗೆ ಬರಬೇಕು” ಎಂದು ಮನವಿ ಮಾಡಿಕೊಂಡರು.

ಮನೆಯ ಜವಬ್ದಾರಿ ನನ್ನ ತಮ್ಮನೇ ಹೊತ್ತಿದ್ದ
ಇನ್ನೋರ್ವ ಮೃತ ಇಮ್ತಿಯಾಜ್ ಅವರ ಸಹೋದರ ಸಾಧಿಕ್ ಅಹ್ಮದ್, “ಕುಮಟಾ, ಕಾರವಾರ, ಹೊನ್ನಾವರ ಸಂತೆಗೆ ಸುಮಾರು ೧೨ ವರ್ಷದಿಂದ ಹಣ್ಣು-ತರಕಾರಿ ಮಾರಲು ಸವಣೂರಿನಿಂದ ೪೦ರಿಂದ ೫೦ಜನರು ಇವರೆಲ್ಲ ಹೋಗುತ್ತಿದ್ದರು. ತರಕಾರಿ, ಹಣ್ಣಿನ ವ್ಯಾಪಾರ ಮಾಡಿ ನಮ್ಮ ಮನೆ ನಡೆಸುತ್ತಿದ್ದದು ಮೃತ ಇಮ್ತಿಯಾಜ್ ಉಳಿದ ನಾವು ಕೂಲಿ ಕೆಲಸಕ್ಕೆ ಹೋಗುತ್ತಿದ್ದೆವು. ಅದು ಕೆಲಸ ಇದ್ದರೆ ಮಾತ್ರ”.
ಮನೆಯ ಜವಾಬ್ದಾರಿ ನನ್ನ ತಮ್ಮನೇ ಹೊತ್ತಿದ್ದ. ಅವನು ನಿನ್ನೆ ಸುಮಾರು ೧೧ ಗಂಟೆಗೆ ಮನೆಯಿಂದ ಹೊರಟಿದ್ದ. ಅಪಘಾತವಾದ ವಿಚಾರ ನಮಗೆ ಬೆಳಗ್ಗೆ ೪ ಗಂಟೆಗೆ ಗೊತ್ತಾಯಿತು. ಹೇಗೆ ಅಪಘಾತವಾಯಿತು ಎಂದಾಗ ಗಾಡಿ ಪಲ್ಟಿಯಾಗಿದೆ, ಏನಾಗಿಲ್ಲ ಎಂದಿದ್ದರು. ಆದರೆ, ಈಗ ಬಂದು ಸಾವನ್ನಪ್ಪಿರುವುದನ್ನು ಹೇಳಿದ್ದಾರೆ. ನಮ್ಮ ಅಕ್ಕ-ಪಕ್ಕದವರು ಘಟನಾ ಸ್ಥಳಕ್ಕೆ ಹೋಗಿದ್ದಾರೆ. ನಮಗೆ ಅಷ್ಟು ಅಡ್ಡಾಡಿ ತಿಳಿದಿಲ್ಲ. ನಮಗೆ ಗೊತ್ತೂ ಆಗುವುದಿಲ್ಲ. ನನ್ನ ತಮ್ಮ ಎಲ್ಲರಿಗಿಂತಲೂ ಸಣ್ಣವ. ಆದರೆ ಮನೆಗೆ ಅವನೇ ಓನರ್ ಇದ್ದ ಹಾಗೆ, ಎಲ್ಲವನ್ನು ಅವನೇ ನಡೆಸುತ್ತಿದ್ದ” ಎಂದು ದುಃಖ ತೋಡಿಕೊಂಡರು.

೧೦ ಮೃತರಲ್ಲಿ ಒಂದೇ ಓಣಿಯ ಮೂವರು
ಯಲ್ಲಾಪುರದ ಬಳಿ ನಡೆದ ಭೀಕರ ಅಪಘಾತ ಮೃತಪಟ್ಟಿರುವ ೧೦ಜನರಲ್ಲಿ ಸವಣೂರು ಪಟ್ಟಣದ ಲಕ್ಸಾರ್ ಬಜಾರ್‌ನ ಓಣಿಯ ಮೂವರು ಸೇರಿದ್ದಾರೆ. ಕುಮಟಾದ ಸಂತೆಗೆ ತೆರಳಿದವರ ಪೈಕಿ ವಾಸಿಮ್ ಗುಡಗೇರಿ (೨೬) ಯುವಕ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾನೆ. ಸಾವಿನ ಸುದ್ದಿ ತಿಳಿದ ಮೃತ ಕುಟುಂಬದಸ್ಥರ ಮನೆ ಸಂಬಂಧಿಕರು ಜಮಾಯಿಸಿ ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳಿತ್ತಿದ್ದಾರೆ. ದುಡಿದು ತಿನ್ನುವ ಕುಟುಂಬದಲ್ಲಿ ಮಗನ ಸಾವಿನ ಸುದ್ದಿ ತಿಳಿದ ಕುಟುಂಬದ ಪೋಷಕರು ಕಣ್ಣಿರು ಹಾಕಿದ್ದಾರೆ.
ಇದೇ ಓಣಿಯ ಇಮ್ತಿಯಾಜ್ ಮುಳಕೇರಿ (೩೪) ಕುಟುಂಬದ ಇದೀಗಾ ಕಣ್ಣಿರಿನ ಕೋಡಿ ಹರಿಸಿದ್ದಾರೆ. ಮೊಹ್ಮದ್ ಜಾಫರ್ ಗೆ ನಾಲ್ವರು ಮಕ್ಕಳಲ್ಲಿ ಇಮ್ತಿಯಾಜ್ ನಾಲ್ಕನೆ ಮಗನಾಗಿದ್ದ. ಹಣ್ಣಿನ ವ್ಯಾಪಾರವನ್ನ ಕಳೆದ ೧೦ ವರ್ಷಗಳಿಂದ ಮಾಡಿಕೊಂಡು ಕುಟುಂಬದ ನಿರ್ವಹಣೆ ಮಾಡ್ತಿದ್ದ ಇದೀಗಾ ಮಗನ ಕಳೆದುಕೊಂಡ ಕುಟುಂಬದಸ್ಥರು ಹಾಗೂ ಬಂಧುಗಳು ದುಃಖದ ಮಡುವಿನಲ್ಲಿ ಮುಳುಗಿದ್ದಾರೆ.
ಇದೇ ಓಣಿಯ ನಿವಾಸಿ ಆಸ್ಲಾಂ ಬೆಣ್ಣಿ ಯ(೨೪) ಮದುವೆಯಾಗಿ ನಾಲ್ಕು ತಿಂಗಳು ಕಳೆದಿದೆ. ಇಂದು ಅಥವಾ ನಾಳೆ ಮಗು ನಿರ್ಲಕ್ಷೆಯಲ್ಲಿ ಇದ್ದ ಅಸ್ಲಾಂ ಸಾವು ಆತನ ಕುಟುಂಬದಲ್ಲಿ ಮುಗಿಲು ಮುಟ್ಟಿದೆ. ಮಂಗಳವಾರ ರಾತ್ರಿ ಹೊಗುವಾಗ ಬೇಗ ಬರುತ್ತೇನೆ ಎಂದು ಹೇಳಿದ್ದರು ಎಂದು ಅಸ್ಲಾಂ ಪತ್ನಿ ಇಯಿತ ಕಣ್ಣೀರಿಡುತ್ತಿದ್ದ ದೃಶ್ಯ ಮನಕಲುಕಿತು. ಅಸ್ಲಾಂ ತಂದೆ ವಿಕಲಚೇತನರಾಗಿದ್ದು, ಆಸ್ಲಾಂನೇ ಮನೆಗೆ ಅಧಾರವಾಗಿದ್ದ, ಅಪಘಾತದ ದುರಂತದಲ್ಲಿ ಸಾವಾಗಿದ್ದ ಕುಟುಂಬದ ಮನೆಗೆ ಅಜುಂಮ್‌ನ್ ಇಸ್ಲಾಮಿಕ್ ತಾಲೂಕಾ ಅಧ್ಯಕ್ಷ ಬಾಬು ಫರಾಶ್ ಭೇಟಿ ನೀಡಿ ಸಾಂತ್ವನ ಹೇಳಿದರು. ಸವಣೂರು ಪಟ್ಟಣದ ಇತಿಹಾಸದಲ್ಲಿ ಇಂತಹ ದುರ್ಘಟನೆ ನಡೆದಿಲ್ಲ ಇದೊಂದು ಘನಘೋರ ಸಾವಿನಸುದ್ದಿಯಾಗಿದೆ. ಸರ್ಕಾರ ಅದಷ್ಟು ಮೃತ ಕುಟುಂಬದ ಮನೆಗಳಿಗೆ ಪರಿಹಾರ ನೀಡುಬೇಕು ಎಂದು ಅಗ್ರಹಿಸಿದರು.

 

ಮೃತಪಟ್ಟವರಲ್ಲಿ ಬಹುತೇಕ ಯುವಕರಿದ್ದು, ಒಬ್ಬೊಬ್ಬರದ್ದು ಒಂದೊಂದು ಕರುಣಾಜನಕ ಕಥೆ ವ್ಯಥೆ
* ಮೃತರ ಪೈಕಿ ಫಯಾಜ್ ಇಮಾಮಸಾಬ್ ಜಮಖಂಡಿ (೪೫) ದಂಟಿನ ಪೇಟೆಯಲ್ಲಿನ ಸ್ವಂತ ಮನೆ ಬಿದ್ದ ಕಾರಣ ಮಂಗಳವಾರ ಪೇಟೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಈತನಿಗೆ ನಾಲ್ಕು ಮಕ್ಕಳು, ಮೂರು ಹೆಣ್ಣು ಮಕ್ಕಳ ಪೈಕಿ ಇಬ್ನರನ್ನು ಮದುವೆ ಮಾಡಿಕೊಟ್ಟಿದ್ದ ಫಯಾಜ್ ಒರ್ವ ಪುತ್ರಿ (೧೫) ಪುತ್ರ ೧೮ ಇಬ್ಬರೂ ಶಾಲೆ ಕಲಿಯುತ್ತಿದ್ದಾರೆ ಫಯಾಜ್ ದುಡುಮೆಯನ್ನೆ ನಂಬಿದ್ದ ಕುಟುಂಬ ಇದೀಗ ಬೀದಿಗೆ ಬಿದ್ದಂತಾಗಿದೆ.
* ವಸೀಮ್ ಅಲ್ಲಾಬಕ್ಷ ಗುಡಗೇರಿ (೨೫) ಯುವಕ ಮುದುವೆ ಆಗಿರಲಿಲ್ಲ. ತಂದೆಯೊಂದಿಗೆ ಇಬ್ಬರು ಅಣ್ಣಂದಿರ ಕುಟುಂಬದೊಂದಿಗೆ ವಾಸವಾಗಿದ್ದ. ಇಬ್ನರೂ ಅಣ್ಣಂದಿರು ಕೆಲಸ ಮಾಡುತ್ತಿರಲಿಲ್ಲ ಈತನಿಂದಲೇ ಕುಟುಂಬ ನಿರ್ವಹಣೆ ನಡೆಯುತ್ತಿತ್ತು. ಇದೀಗ ತಂದೆ ದುಡಿಯುವ ಮಗನೆ ಅಪಘಾತದಲ್ಲಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅನಾಥ ಪ್ರಜ್ಞೆ ಎದುರಾಗಿದೆ.
* ಇಜಾಜ್ ಮಸ್ತಾಕ್ ಮುಲ್ಲಾ (೨೩) ಮೃತ ಯುವಕ ಲಾಲಶಾಕಟ್ಟೆ ನಿವಾಸಿ, ತಂದೆ, ತಾಯಿ, ಸಹೋದರಿ,ಸಹೋದರನೊಂದಿಗೆ ವಾಸವಾಗಿದ್ದ ಈತನೆ ಮನೆಗೆ ಚಿಕ್ಕ ವಯಸ್ಸಿನಲ್ಲಿಯೇ ಮನೆಯ ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡಿದ್ದ, ಇಜಾಜನ ದುಡಿಮೆಯಿಂದ ಕುಟುಂಬ ನಿರ್ವಹಣೆ ನಡೆಯುತಿತ್ತು ಇದೀಗ ಈ ಕುಟುಂಬ ಆಸರೆಯಿಲ್ಲದ ಬಳ್ಳಿಯಂತಾಗಿದೆ.
* ಪಟ್ಟಣದ ಕಾರಿಗರ ಪ್ಲಾಟಿನ ನಿವಾಸಿ ಸಾದಿಕ ಬಾಷಾಸಾಬ ಪರಾಶ್ (೩೦) ಹಮಾಲಿ ಕೆಲಸಕ್ಕೂ ಸೈ, ವ್ಯಾಪಾರಕ್ಕೂ ಸೈ, ಆಗಾಗ ಗೌಂಡಿ ಕೆಲಸವನ್ನು ಮಾಡುತ್ತಿದ್ದ. ಸಹೋದರ ಕೂಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಕಳೆದ ೨ ವರ್ಷದಿಂದ ತರಕಾರಿ ವ್ಯಾಪಾರ ಆರಂಭಿಸಿದ್ದ. ತಂದೆ ತಾಯಿ ತಮ್ಮ, ಹೆಂಡತಿ ಹಾಗೂ ಮೂರು ಮಕ್ಕಳೊಂದಿಗೆ ವಾಸವಾಗಿದ್ದ, ಇಬ್ಬರು ಪುತ್ರರ ಪೈಕಿ ಒರ್ವ ೪ ವರ್ಷ ಇನ್ನೊರ್ವ ೨ ವರ್ಷ ಹಾಗೂ ಪುತ್ರಿ ೩ ವರ್ಷ ಮಕ್ಕಳಿದ್ದು ತಂದೆಗೆ ವಯಸ್ಸಾದ ಹಿನ್ನೆಲೆಯಲ್ಲಿ ಕುಟುಂಬದ ನಿರ್ವಹಣೆ ಈತನೇ ಮಾಡುತ್ತಿದ್ದ ಇದೀಗ ಆತನ ಮಡದಿಯ ಆಕ್ರಂದನ ಹೇಳ ತೀರದಾಗಿದ್ದು, ತಂದೆ ತಾಯಿ ಆಕಾಶವೇ ತಲೆ ಮೇಲೆ ಬಿದ್ದಂತೆ ಅಸಾಹಯಕರಾಗಿದ್ದಾರೆ.
* ಮಝಹರ್ ರಝಾ (ಅಸ್ಲಂ) ಗೌಸಮೋದಿನ್ ಬೆಣ್ಣಿ (೨೪) ಈತನ ಕಥೆ ಕರುಣಾಜನಕವಾಗಿದ್ದು ಮನೆಯಲ್ಲಿ ತಂದೆ ವಿಕಲಾಂಗನಾಗಿದ್ದು ಕಣ್ಣು ಸಹ ಸರಿಯಾಗಿ ಕಾಣದು. ತಾಯಿ ಮನೆ ಕೆಲಸ, ಅಣ್ಣ ಮಡಿಕಲ್ ಸ್ಟೋರ್ನಲ್ಲಿ ಕೆಲಸ ಮಾಡುತ್ತಿದ್ದು ಮದುವೆ ಆಗಿಲ್ಲ. ಅಸ್ಲಂ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಕುಟುಂಬದ ಸಂಪೂರ್ಣ ಜವಾಬ್ದಾರಿ ಹೊಂದಿದ ಕಾರಣ ಈತನಿಗೆ ಕಳೆದ ಮೂರು ತಿಂಗಳ ಹಿಂದೆ ಸುಮಾರು ೫-೬ ಲಕ್ಷ ಸಾಲ ಮಾಡಿ ಮದುವೆ ಮಾಡಲಾಗಿತ್ತು. ನವ ದಾಂಪತ್ಯಕ್ಕೆ ಕಾಲಿಟ್ಟ ಮೂರು ತಿಂಗಳಲ್ಲಿಯೇ ಅಸ್ಲಂ ದಂಪತಿಗಳ ಬಾಳು ಬರುಡಾಯಿತು. ಪತಿಯನ್ನು ಕಳೆದುಕೊಂಡ ಮಡದಿ ಹಾಗೂ ಕುಟುಂಬದ ಆಕ್ರಂದನ ಎಲ್ಲೆ ಮೀರಿತ್ತು.
*ಅಲ್ಪಾಜ್ ತಂದೆ ಜಾಪರಸಾಬ ರಮಣೇದ (ಮಂಡಕ್ಕಿ) ೨೫ ವರ್ಷ ಟೀಚರ್ಸ್ ಕಾಲನಿ ನಿವಾಸಿ ತಂದೆ, ತಾಯಿ ತಮ್ಮನೊಂದಿಗೆ ವಾಸವಾಗಿದ್ದು, ತಂದೆ ಗೌಂಡಿ ಕೆಲಸ ಮಾಡುತಿದ್ದು, ಕುಟುಂಬ ನಿರ್ವಹಣೆಗೆ ಆರ್ಥಿಕ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಅಲ್ಪಾಜ್ ತರಕಾರಿ ವ್ಯಾಪಾರ ಮಾಡುತ್ತಿದ್ದರಿಂದ ಕುಟುಂಬ ನಿರ್ವಹಣೆ ಒಂದು ಹಂತಕ್ಕೆ ತಲುಪಿತ್ತು. ಆದ್ದರಿಂದ ಈತನಿಗೆ ಕಳೆದ ಒಂದು ವರ್ಷದ ಹಿಂದೆ ಮದುವೆ ಮಾಡಲಾಗಿತ್ತು. ಹೆಂಡಿತಿ ಗರ್ಭಿಣಿಯಾಗಿದ್ದಾಳೆ ಎಂದು ಭವಿಷ್ಯದ ನೂರಾರು ಕನಸ್ಸು ಕಂಡಿದ್ದ ಅಲ್ಫಾಜ್ ಇದೀಗ ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿದ್ದಾನೆ.
* ದಂಡಿನ ಪೇಟೆ ನಿವಾಸಿ ಇಮ್ತಿಯಾಜ್ ಮೊಹಮ್ಮದ್ ಜಾಪರ್ ಮುಳಕೇರಿ (೩೫) ತಂದೆ ಮೊಹ್ಮದ್ ಜಾಫರ್ ಗೆ ನಾಲ್ವರ ಮಕ್ಕಳಲ್ಲಿ ಇಮ್ತಿಯಾಜ್ ನಾಲ್ಕನೆ ಮಗನಾಗಿದ್ದ ಹಣ್ಣಿನ ವ್ಯಾಪರವನ್ನ ಕಳೆದ ೧೦ ವರ್ಷಗಳಿಂದ ಮಾಡಿಕೊಂಡು ಕುಟುಂಬದ ನಿರ್ವಣೆ ಮಾಡ್ತಿದ್ದ ಇದೀಗಾ ಮಗನ ಕಳೆದುಕೊಂಡ ಕುಟುಂಬದಸ್ಥರು ಹಾಗೂ ಬಂಧುಗಳು ದುಃಖದ ಮಡುವಿನಲ್ಲಿ ಮುಳುಗಿದೆ.
ಇನ್ನುಳಿದಂತೆ ಖಾದರಬಾಗ ನಿವಾಸಿ ಗುಲಾಮ್ ಹುಸೇನ್ ಗುಡುಸಾಬ್ ಜವಳಿ(೨೫), ಶುಕ್ರವಾರಪೇಟೆ ನಿವಾಸಿ ಜಿಲಾನಿ ತಂದೆ ಅಬ್ದುಲ್ ಗಪಾರ್ ಜಕಾತಿ(೨೦) ಹುಬ್ಬಳಿ ನಿವಾಸಿ ಜಲಾಲ್ ತಾರಾ ಖಾದರಗೌಸ ಮಂಚಗಿ (೩೦) ಈ ಎಲ್ಲ ಯುವಕರ ದುಡಿಮೆಯಿಂದಲೇ ಕುಟುಂಬಸ್ಥರು ನಂಬಿದ್ದರು. ಆದರೆ ದುಡಿಯುವ ಹರೆಯದ ಮಕ್ಕಳ ಅಗಲಿಕೆಯಿಂದಾಗಿ ಎಲ್ಲರ ಮನೆಗಳಲ್ಲಿ ಸ್ಮಶಾನ ಮೌನ ಆವರಿಸಿದೆ.
ಗಾಯಗೊಂಡ ೧೯ ಜನರ ಪೈಕಿ ೧೨ ಜನರು ಯಲ್ಲಾಪುರದಲ್ಲಿ ಚಿಕಿತ್ಸೆ ಪಡೆದರೆ ಇನ್ನುಳಿದ ೭ ಜನರನ್ನು ಕಿಮ್ಸಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಯಲ್ಲಾಪುರದ ಬಳಿ ಭೀಕರ ಅಪಘಾತ: ಸವಣೂರಲ್ಲಿ ಸ್ಮಶಾನ ಮೌನ, ಹತ್ತೂ ಮೃತರದ್ದು ಒಂದೊಂದು ಕಥೆ..!
ಮದುವೆಯಾಗಿ ನಾಲ್ಕುತಿಂಗಳದಾವ, ಮದುವೆಯಾಗಬೇಕಿದ್ದವ, ಬದುಕಿ ಬಾಳಬೇಕಿದ್ದವರು ಬಾರದಲೋಕಕ್ಕೆ
ಹಾವೇರಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಬುಧವಾರ ಬಡಳಗಿನಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದವರಾಗಿದ್ದು, ಅಪಘಾತದಲ್ಲಿ ಮೃತಪಟ್ಟ ಹತ್ತೂ ಮಂದಿಯದ್ದು ಒಂದೊಂದು ಕಥೆ. ಒಬ್ಬ ಮನೆಗೆ ಆಧಾರವಾಗಿದ್ದ, ಇನ್ನೊಬ್ಬ ತಂದೆಗೆ ಆಸರೆಯಾಗಲು ಎದೆ ಎತ್ತರಕ್ಕೆ ಬೆಳೆದು ನಿಂತಿದ್ದ, ಮದುವೆಯಾಗಿ ನಾಲ್ಕುತಿಂಗಳದಾವ, ಮದುವೆಯಾಗಬೇಕಿದ್ದವ, ಬದುಕಿ ಬಾಳಬೇಕಿದ್ದವರು
ಅದೆಷ್ಟೋ ಕನಸು ಕಂಡಿದ್ದ ಮನೆ ಮಕ್ಕಳು ವಿಧಿಯ ಕ್ರೂರ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಸವಣೂರಿನಲ್ಲಿ ಸ್ಮಶಾನ ಮೌನ ಆವರಿಸಿದ್ದು, ವಿವಿಧ ಓಣಿ, ಮೊಹಲ್ಲಾಗಳಲ್ಲಿ ಜನತೆಯಲ್ಲಿ ದುಃಖ ಮಡುಗಟ್ಟಿದೆ.
ಅಪಘಾತದಿಂದ ಪ್ರಾಣ ಕಳೆದುಕೊಂಡ ಒಬ್ಬರ ಪತ್ನಿ ಗರ್ಭಿಣಿ, ಮತ್ತೊರ್ವನ ಮದುವೆಯಾಗಿ ಕೇವಲ ನಾಲ್ಕು ತಿಂಗಳಾಗಿವೆಯಷ್ಟೇ. ಇನ್ನೊಂದು ಕುಟುಂಬದಲ್ಲಿ ಸಣ್ಣ-ಸಣ್ಣ ಮಕ್ಕಳಿವೆ. ಅವುಗಳನ್ನು ನೋಡಿಕೊಳ್ಳುವರಾರು ಎಂಬ ಚಿಂತೆ. ಇದಕ್ಕಿಂತಲೂ ಘನಘೋರವೆಂದರೆ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿದ್ದಾರೆ. ಈ ಮನೆಯಲ್ಲಂತೂ ಆಕ್ರಂದನವನ್ನು ನೋಡಲಾಗುತ್ತಿಲ್ಲ ಎಂದು ಅಪಘಾತದಲ್ಲಿ ಸಾವನ್ನಪ್ಪಿದ ಇಮ್ತಿಯಾಜ್ ಅವರ ಸಹೋದರ ಸಾಧಿಕ್ ಅಹ್ಮದ್ ಹಾಗೂ ಮೃತ ಸಾದಿಕ್ ತಂದೆ ಗೌಸ್ ಮುದ್ದೀನ್ ಪ್ರತಿಕ್ರಿಯೆ ನೀಡಿದಾಗ ಕಣ್ಣಲ್ಲಿ ಕಣ್ಣೀರು ಧಾರೆಹರಿಯುತ್ತಿತ್ತು.
ಹಿಂದೆಂದೂ ಕಾಣದ ಸೂತಕದ ಛಾಯೆ ಸವಣೂರು ಪಟ್ಟಣದಲ್ಲಿ ಆವರಿಸಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತರ ಮನೆಯ ಮುಂದೆ ಜನಸಾಗರವೇ ಹರಿದು ಬಂದಿದೆ.ಮನೆಯ ಮಕ್ಕಳನ್ನು ಕಳೆದುಕೊಂಡ ನೋವನ್ನು ಅರಗಿಸಿಕೊಳ್ಳಲಾಗದೇ ಮನೆಯೊಳಗೆ ಹೆಣ್ಣುಮಕ್ಕಳು ಕಣ್ಣೀರು ಹಾಕುತ್ತಿರುವ ದೃಶ್ಯ ಎಂಥವರ ಮನ ಕಲುಕುವಂತಿದೆ.
ಹೊಟ್ಟೆಪಾಡಿಗಾಗಿ ಹಣ್ಣು- ತರಕಾರಿ ಮಾರಿಕೊಂಡಿದ್ದ ಜನ: ಹೊಟ್ಟೆಪಾಡಿಗಾಗಿ ಹಣ್ಣು, ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ೧೦ ಜನರ ದುರ್ಮರಣದಿಂದ ಕುಟುಂಬಗಳ ಆಧಾರಸ್ಥಂಭವೇ ಕಳಚಿ ಬಿದ್ದಿದೆ. ಸರ್ಕಾರ ತಮಗೆ ಸೂಕ್ತ ಪರಿಹಾರ ನೀಡಬೇಕು, ನೆರವಿಗೆ ಬರುವಂತೆ ಈ ಬಡ ಕುಟುಂಬಗಳು ಮನವಿ ಮಾಡಿಕೊಳ್ಳುತ್ತಿವೆ.
ಬಾಕ್ಸ್
ಎಳನೀರು ಕುಡಿಸಿದ ಮಗ ಮನೆಗೆ ಮರಳಿಲ್ಲ….
ಮೃತ ಸಾದಿಕ್ ಮಂಗಳವಾರ ರಾತ್ರಿ ತಂದೆ ಗೌಸ್ ಮುದ್ದೀನ್ ಅವರಿಗೆ ಎಳನೀರು ತಂದು ಕುಡಿಸಿದ್ದ. “ರಾತ್ರಿ ೧೦ ಗಂಟೆಗೆ ಮನೆಯಿಂದ ಉಳಿದವರೊಂದಿಗೆ ಲಾರಿಯಲ್ಲಿ ತರಕಾರಿ ವ್ಯಾಪಾರಕ್ಕೆ ಹೋಗಿದ್ದ, ರಾತ್ರಿ ಮೂರು ಗಂಟೆಗೆ ಲಾರಿ ಪಲ್ಟಿಯಾಗಿದೆ ಎನ್ನುವ ವಿಚಾರ ನನಗೆ ಬೆಳಗ್ಗೆ ೬ ಗಂಟೆಗೆ ತಿಳಿಯಿತು. ನಾನು ಹ್ಯಾಂಡಿಕ್ಯಾಪ್. ನನ್ನ ಮನೆ ನಡೆಸುತ್ತಿದ್ದದ್ದೂ ನನ್ನ ಮಗನೇ. ಕೊನೆಯದಾಗಿ ನಿನ್ನೆ ರಾತ್ರಿ ೧೦ ಗಂಟೆಗೆ ಮಗನ ಮುಖನೋಡಿದ್ದೆ. ಮುಂದೆ ಜೀವನ ಹೇಗೆ, ನಾನೂ ಏನು ಮಾಡಬೇಕು ಎಂಬುದು ತಿಳಿದಿಲ್ಲ. ಸರ್ಕಾರ ನೆರವಿಗೆ ಬರಬೇಕು” ಎಂದು ಮನವಿ ಮಾಡಿಕೊಂಡರು.

ಮನೆಯ ಜವಬ್ದಾರಿ ನನ್ನ ತಮ್ಮನೇ ಹೊತ್ತಿದ್ದ
ಇನ್ನೋರ್ವ ಮೃತ ಇಮ್ತಿಯಾಜ್ ಅವರ ಸಹೋದರ ಸಾಧಿಕ್ ಅಹ್ಮದ್, “ಕುಮಟಾ, ಕಾರವಾರ, ಹೊನ್ನಾವರ ಸಂತೆಗೆ ಸುಮಾರು ೧೨ ವರ್ಷದಿಂದ ಹಣ್ಣು-ತರಕಾರಿ ಮಾರಲು ಸವಣೂರಿನಿಂದ ೪೦ರಿಂದ ೫೦ಜನರು ಇವರೆಲ್ಲ ಹೋಗುತ್ತಿದ್ದರು. ತರಕಾರಿ, ಹಣ್ಣಿನ ವ್ಯಾಪಾರ ಮಾಡಿ ನಮ್ಮ ಮನೆ ನಡೆಸುತ್ತಿದ್ದದು ಮೃತ ಇಮ್ತಿಯಾಜ್ ಉಳಿದ ನಾವು ಕೂಲಿ ಕೆಲಸಕ್ಕೆ ಹೋಗುತ್ತಿದ್ದೆವು. ಅದು ಕೆಲಸ ಇದ್ದರೆ ಮಾತ್ರ”.
ಮನೆಯ ಜವಾಬ್ದಾರಿ ನನ್ನ ತಮ್ಮನೇ ಹೊತ್ತಿದ್ದ. ಅವನು ನಿನ್ನೆ ಸುಮಾರು ೧೧ ಗಂಟೆಗೆ ಮನೆಯಿಂದ ಹೊರಟಿದ್ದ. ಅಪಘಾತವಾದ ವಿಚಾರ ನಮಗೆ ಬೆಳಗ್ಗೆ ೪ ಗಂಟೆಗೆ ಗೊತ್ತಾಯಿತು. ಹೇಗೆ ಅಪಘಾತವಾಯಿತು ಎಂದಾಗ ಗಾಡಿ ಪಲ್ಟಿಯಾಗಿದೆ, ಏನಾಗಿಲ್ಲ ಎಂದಿದ್ದರು. ಆದರೆ, ಈಗ ಬಂದು ಸಾವನ್ನಪ್ಪಿರುವುದನ್ನು ಹೇಳಿದ್ದಾರೆ. ನಮ್ಮ ಅಕ್ಕ-ಪಕ್ಕದವರು ಘಟನಾ ಸ್ಥಳಕ್ಕೆ ಹೋಗಿದ್ದಾರೆ. ನಮಗೆ ಅಷ್ಟು ಅಡ್ಡಾಡಿ ತಿಳಿದಿಲ್ಲ. ನಮಗೆ ಗೊತ್ತೂ ಆಗುವುದಿಲ್ಲ. ನನ್ನ ತಮ್ಮ ಎಲ್ಲರಿಗಿಂತಲೂ ಸಣ್ಣವ. ಆದರೆ ಮನೆಗೆ ಅವನೇ ಓನರ್ ಇದ್ದ ಹಾಗೆ, ಎಲ್ಲವನ್ನು ಅವನೇ ನಡೆಸುತ್ತಿದ್ದ” ಎಂದು ದುಃಖ ತೋಡಿಕೊಂಡರು.

೧೦ ಮೃತರಲ್ಲಿ ಒಂದೇ ಓಣಿಯ ಮೂವರು
ಯಲ್ಲಾಪುರದ ಬಳಿ ನಡೆದ ಭೀಕರ ಅಪಘಾತ ಮೃತಪಟ್ಟಿರುವ ೧೦ಜನರಲ್ಲಿ ಸವಣೂರು ಪಟ್ಟಣದ ಲಕ್ಸಾರ್ ಬಜಾರ್‌ನ ಓಣಿಯ ಮೂವರು ಸೇರಿದ್ದಾರೆ. ಕುಮಟಾದ ಸಂತೆಗೆ ತೆರಳಿದವರ ಪೈಕಿ ವಾಸಿಮ್ ಗುಡಗೇರಿ (೨೬) ಯುವಕ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾನೆ. ಸಾವಿನ ಸುದ್ದಿ ತಿಳಿದ ಮೃತ ಕುಟುಂಬದಸ್ಥರ ಮನೆ ಸಂಬಂಧಿಕರು ಜಮಾಯಿಸಿ ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳಿತ್ತಿದ್ದಾರೆ. ದುಡಿದು ತಿನ್ನುವ ಕುಟುಂಬದಲ್ಲಿ ಮಗನ ಸಾವಿನ ಸುದ್ದಿ ತಿಳಿದ ಕುಟುಂಬದ ಪೋಷಕರು ಕಣ್ಣಿರು ಹಾಕಿದ್ದಾರೆ.
ಇದೇ ಓಣಿಯ ಇಮ್ತಿಯಾಜ್ ಮುಳಕೇರಿ (೩೪) ಕುಟುಂಬದ ಇದೀಗಾ ಕಣ್ಣಿರಿನ ಕೋಡಿ ಹರಿಸಿದ್ದಾರೆ. ಮೊಹ್ಮದ್ ಜಾಫರ್ ಗೆ ನಾಲ್ವರು ಮಕ್ಕಳಲ್ಲಿ ಇಮ್ತಿಯಾಜ್ ನಾಲ್ಕನೆ ಮಗನಾಗಿದ್ದ. ಹಣ್ಣಿನ ವ್ಯಾಪಾರವನ್ನ ಕಳೆದ ೧೦ ವರ್ಷಗಳಿಂದ ಮಾಡಿಕೊಂಡು ಕುಟುಂಬದ ನಿರ್ವಹಣೆ ಮಾಡ್ತಿದ್ದ ಇದೀಗಾ ಮಗನ ಕಳೆದುಕೊಂಡ ಕುಟುಂಬದಸ್ಥರು ಹಾಗೂ ಬಂಧುಗಳು ದುಃಖದ ಮಡುವಿನಲ್ಲಿ ಮುಳುಗಿದ್ದಾರೆ.
ಇದೇ ಓಣಿಯ ನಿವಾಸಿ ಆಸ್ಲಾಂ ಬೆಣ್ಣಿ ಯ(೨೪) ಮದುವೆಯಾಗಿ ನಾಲ್ಕು ತಿಂಗಳು ಕಳೆದಿದೆ. ಇಂದು ಅಥವಾ ನಾಳೆ ಮಗು ನಿರ್ಲಕ್ಷೆಯಲ್ಲಿ ಇದ್ದ ಅಸ್ಲಾಂ ಸಾವು ಆತನ ಕುಟುಂಬದಲ್ಲಿ ಮುಗಿಲು ಮುಟ್ಟಿದೆ. ಮಂಗಳವಾರ ರಾತ್ರಿ ಹೊಗುವಾಗ ಬೇಗ ಬರುತ್ತೇನೆ ಎಂದು ಹೇಳಿದ್ದರು ಎಂದು ಅಸ್ಲಾಂ ಪತ್ನಿ ಇಯಿತ ಕಣ್ಣೀರಿಡುತ್ತಿದ್ದ ದೃಶ್ಯ ಮನಕಲುಕಿತು. ಅಸ್ಲಾಂ ತಂದೆ ವಿಕಲಚೇತನರಾಗಿದ್ದು, ಆಸ್ಲಾಂನೇ ಮನೆಗೆ ಅಧಾರವಾಗಿದ್ದ, ಅಪಘಾತದ ದುರಂತದಲ್ಲಿ ಸಾವಾಗಿದ್ದ ಕುಟುಂಬದ ಮನೆಗೆ ಅಜುಂಮ್‌ನ್ ಇಸ್ಲಾಮಿಕ್ ತಾಲೂಕಾ ಅಧ್ಯಕ್ಷ ಬಾಬು ಫರಾಶ್ ಭೇಟಿ ನೀಡಿ ಸಾಂತ್ವನ ಹೇಳಿದರು. ಸವಣೂರು ಪಟ್ಟಣದ ಇತಿಹಾಸದಲ್ಲಿ ಇಂತಹ ದುರ್ಘಟನೆ ನಡೆದಿಲ್ಲ ಇದೊಂದು ಘನಘೋರ ಸಾವಿನಸುದ್ದಿಯಾಗಿದೆ. ಸರ್ಕಾರ ಅದಷ್ಟು ಮೃತ ಕುಟುಂಬದ ಮನೆಗಳಿಗೆ ಪರಿಹಾರ ನೀಡುಬೇಕು ಎಂದು ಅಗ್ರಹಿಸಿದರು.

 

ಮೃತಪಟ್ಟವರಲ್ಲಿ ಬಹುತೇಕ ಯುವಕರಿದ್ದು, ಒಬ್ಬೊಬ್ಬರದ್ದು ಒಂದೊಂದು ಕರುಣಾಜನಕ ಕಥೆ ವ್ಯಥೆ
* ಮೃತರ ಪೈಕಿ ಫಯಾಜ್ ಇಮಾಮಸಾಬ್ ಜಮಖಂಡಿ (೪೫) ದಂಟಿನ ಪೇಟೆಯಲ್ಲಿನ ಸ್ವಂತ ಮನೆ ಬಿದ್ದ ಕಾರಣ ಮಂಗಳವಾರ ಪೇಟೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಈತನಿಗೆ ನಾಲ್ಕು ಮಕ್ಕಳು, ಮೂರು ಹೆಣ್ಣು ಮಕ್ಕಳ ಪೈಕಿ ಇಬ್ನರನ್ನು ಮದುವೆ ಮಾಡಿಕೊಟ್ಟಿದ್ದ ಫಯಾಜ್ ಒರ್ವ ಪುತ್ರಿ (೧೫) ಪುತ್ರ ೧೮ ಇಬ್ಬರೂ ಶಾಲೆ ಕಲಿಯುತ್ತಿದ್ದಾರೆ ಫಯಾಜ್ ದುಡುಮೆಯನ್ನೆ ನಂಬಿದ್ದ ಕುಟುಂಬ ಇದೀಗ ಬೀದಿಗೆ ಬಿದ್ದಂತಾಗಿದೆ.
* ವಸೀಮ್ ಅಲ್ಲಾಬಕ್ಷ ಗುಡಗೇರಿ (೨೫) ಯುವಕ ಮುದುವೆ ಆಗಿರಲಿಲ್ಲ. ತಂದೆಯೊಂದಿಗೆ ಇಬ್ಬರು ಅಣ್ಣಂದಿರ ಕುಟುಂಬದೊಂದಿಗೆ ವಾಸವಾಗಿದ್ದ. ಇಬ್ನರೂ ಅಣ್ಣಂದಿರು ಕೆಲಸ ಮಾಡುತ್ತಿರಲಿಲ್ಲ ಈತನಿಂದಲೇ ಕುಟುಂಬ ನಿರ್ವಹಣೆ ನಡೆಯುತ್ತಿತ್ತು. ಇದೀಗ ತಂದೆ ದುಡಿಯುವ ಮಗನೆ ಅಪಘಾತದಲ್ಲಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅನಾಥ ಪ್ರಜ್ಞೆ ಎದುರಾಗಿದೆ.
* ಇಜಾಜ್ ಮಸ್ತಾಕ್ ಮುಲ್ಲಾ (೨೩) ಮೃತ ಯುವಕ ಲಾಲಶಾಕಟ್ಟೆ ನಿವಾಸಿ, ತಂದೆ, ತಾಯಿ, ಸಹೋದರಿ,ಸಹೋದರನೊಂದಿಗೆ ವಾಸವಾಗಿದ್ದ ಈತನೆ ಮನೆಗೆ ಚಿಕ್ಕ ವಯಸ್ಸಿನಲ್ಲಿಯೇ ಮನೆಯ ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡಿದ್ದ, ಇಜಾಜನ ದುಡಿಮೆಯಿಂದ ಕುಟುಂಬ ನಿರ್ವಹಣೆ ನಡೆಯುತಿತ್ತು ಇದೀಗ ಈ ಕುಟುಂಬ ಆಸರೆಯಿಲ್ಲದ ಬಳ್ಳಿಯಂತಾಗಿದೆ.
* ಪಟ್ಟಣದ ಕಾರಿಗರ ಪ್ಲಾಟಿನ ನಿವಾಸಿ ಸಾದಿಕ ಬಾಷಾಸಾಬ ಪರಾಶ್ (೩೦) ಹಮಾಲಿ ಕೆಲಸಕ್ಕೂ ಸೈ, ವ್ಯಾಪಾರಕ್ಕೂ ಸೈ, ಆಗಾಗ ಗೌಂಡಿ ಕೆಲಸವನ್ನು ಮಾಡುತ್ತಿದ್ದ. ಸಹೋದರ ಕೂಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಕಳೆದ ೨ ವರ್ಷದಿಂದ ತರಕಾರಿ ವ್ಯಾಪಾರ ಆರಂಭಿಸಿದ್ದ. ತಂದೆ ತಾಯಿ ತಮ್ಮ, ಹೆಂಡತಿ ಹಾಗೂ ಮೂರು ಮಕ್ಕಳೊಂದಿಗೆ ವಾಸವಾಗಿದ್ದ, ಇಬ್ಬರು ಪುತ್ರರ ಪೈಕಿ ಒರ್ವ ೪ ವರ್ಷ ಇನ್ನೊರ್ವ ೨ ವರ್ಷ ಹಾಗೂ ಪುತ್ರಿ ೩ ವರ್ಷ ಮಕ್ಕಳಿದ್ದು ತಂದೆಗೆ ವಯಸ್ಸಾದ ಹಿನ್ನೆಲೆಯಲ್ಲಿ ಕುಟುಂಬದ ನಿರ್ವಹಣೆ ಈತನೇ ಮಾಡುತ್ತಿದ್ದ ಇದೀಗ ಆತನ ಮಡದಿಯ ಆಕ್ರಂದನ ಹೇಳ ತೀರದಾಗಿದ್ದು, ತಂದೆ ತಾಯಿ ಆಕಾಶವೇ ತಲೆ ಮೇಲೆ ಬಿದ್ದಂತೆ ಅಸಾಹಯಕರಾಗಿದ್ದಾರೆ.
* ಮಝಹರ್ ರಝಾ (ಅಸ್ಲಂ) ಗೌಸಮೋದಿನ್ ಬೆಣ್ಣಿ (೨೪) ಈತನ ಕಥೆ ಕರುಣಾಜನಕವಾಗಿದ್ದು ಮನೆಯಲ್ಲಿ ತಂದೆ ವಿಕಲಾಂಗನಾಗಿದ್ದು ಕಣ್ಣು ಸಹ ಸರಿಯಾಗಿ ಕಾಣದು. ತಾಯಿ ಮನೆ ಕೆಲಸ, ಅಣ್ಣ ಮಡಿಕಲ್ ಸ್ಟೋರ್ನಲ್ಲಿ ಕೆಲಸ ಮಾಡುತ್ತಿದ್ದು ಮದುವೆ ಆಗಿಲ್ಲ. ಅಸ್ಲಂ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಕುಟುಂಬದ ಸಂಪೂರ್ಣ ಜವಾಬ್ದಾರಿ ಹೊಂದಿದ ಕಾರಣ ಈತನಿಗೆ ಕಳೆದ ಮೂರು ತಿಂಗಳ ಹಿಂದೆ ಸುಮಾರು ೫-೬ ಲಕ್ಷ ಸಾಲ ಮಾಡಿ ಮದುವೆ ಮಾಡಲಾಗಿತ್ತು. ನವ ದಾಂಪತ್ಯಕ್ಕೆ ಕಾಲಿಟ್ಟ ಮೂರು ತಿಂಗಳಲ್ಲಿಯೇ ಅಸ್ಲಂ ದಂಪತಿಗಳ ಬಾಳು ಬರುಡಾಯಿತು. ಪತಿಯನ್ನು ಕಳೆದುಕೊಂಡ ಮಡದಿ ಹಾಗೂ ಕುಟುಂಬದ ಆಕ್ರಂದನ ಎಲ್ಲೆ ಮೀರಿತ್ತು.
*ಅಲ್ಪಾಜ್ ತಂದೆ ಜಾಪರಸಾಬ ರಮಣೇದ (ಮಂಡಕ್ಕಿ) ೨೫ ವರ್ಷ ಟೀಚರ್ಸ್ ಕಾಲನಿ ನಿವಾಸಿ ತಂದೆ, ತಾಯಿ ತಮ್ಮನೊಂದಿಗೆ ವಾಸವಾಗಿದ್ದು, ತಂದೆ ಗೌಂಡಿ ಕೆಲಸ ಮಾಡುತಿದ್ದು, ಕುಟುಂಬ ನಿರ್ವಹಣೆಗೆ ಆರ್ಥಿಕ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಅಲ್ಪಾಜ್ ತರಕಾರಿ ವ್ಯಾಪಾರ ಮಾಡುತ್ತಿದ್ದರಿಂದ ಕುಟುಂಬ ನಿರ್ವಹಣೆ ಒಂದು ಹಂತಕ್ಕೆ ತಲುಪಿತ್ತು. ಆದ್ದರಿಂದ ಈತನಿಗೆ ಕಳೆದ ಒಂದು ವರ್ಷದ ಹಿಂದೆ ಮದುವೆ ಮಾಡಲಾಗಿತ್ತು. ಹೆಂಡಿತಿ ಗರ್ಭಿಣಿಯಾಗಿದ್ದಾಳೆ ಎಂದು ಭವಿಷ್ಯದ ನೂರಾರು ಕನಸ್ಸು ಕಂಡಿದ್ದ ಅಲ್ಫಾಜ್ ಇದೀಗ ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿದ್ದಾನೆ.
* ದಂಡಿನ ಪೇಟೆ ನಿವಾಸಿ ಇಮ್ತಿಯಾಜ್ ಮೊಹಮ್ಮದ್ ಜಾಪರ್ ಮುಳಕೇರಿ (೩೫) ತಂದೆ ಮೊಹ್ಮದ್ ಜಾಫರ್ ಗೆ ನಾಲ್ವರ ಮಕ್ಕಳಲ್ಲಿ ಇಮ್ತಿಯಾಜ್ ನಾಲ್ಕನೆ ಮಗನಾಗಿದ್ದ ಹಣ್ಣಿನ ವ್ಯಾಪರವನ್ನ ಕಳೆದ ೧೦ ವರ್ಷಗಳಿಂದ ಮಾಡಿಕೊಂಡು ಕುಟುಂಬದ ನಿರ್ವಣೆ ಮಾಡ್ತಿದ್ದ ಇದೀಗಾ ಮಗನ ಕಳೆದುಕೊಂಡ ಕುಟುಂಬದಸ್ಥರು ಹಾಗೂ ಬಂಧುಗಳು ದುಃಖದ ಮಡುವಿನಲ್ಲಿ ಮುಳುಗಿದೆ.
ಇನ್ನುಳಿದಂತೆ ಖಾದರಬಾಗ ನಿವಾಸಿ ಗುಲಾಮ್ ಹುಸೇನ್ ಗುಡುಸಾಬ್ ಜವಳಿ(೨೫), ಶುಕ್ರವಾರಪೇಟೆ ನಿವಾಸಿ ಜಿಲಾನಿ ತಂದೆ ಅಬ್ದುಲ್ ಗಪಾರ್ ಜಕಾತಿ(೨೦) ಹುಬ್ಬಳಿ ನಿವಾಸಿ ಜಲಾಲ್ ತಾರಾ ಖಾದರಗೌಸ ಮಂಚಗಿ (೩೦) ಈ ಎಲ್ಲ ಯುವಕರ ದುಡಿಮೆಯಿಂದಲೇ ಕುಟುಂಬಸ್ಥರು ನಂಬಿದ್ದರು. ಆದರೆ ದುಡಿಯುವ ಹರೆಯದ ಮಕ್ಕಳ ಅಗಲಿಕೆಯಿಂದಾಗಿ ಎಲ್ಲರ ಮನೆಗಳಲ್ಲಿ ಸ್ಮಶಾನ ಮೌನ ಆವರಿಸಿದೆ.
ಗಾಯಗೊಂಡ ೧೯ ಜನರ ಪೈಕಿ ೧೨ ಜನರು ಯಲ್ಲಾಪುರದಲ್ಲಿ ಚಿಕಿತ್ಸೆ ಪಡೆದರೆ ಇನ್ನುಳಿದ ೭ ಜನರನ್ನು ಕಿಮ್ಸಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...