ರಟ್ಟಿಹಳ್ಳಿ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳ ಮೇಲೆ ಹಲ್ಲೆ- ಮೂವರ ವಿರುದ್ಧ ಪ್ರಕರಣ ದಾಖಲು
ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳ ಮೇಲೆ ಮಂಗಳವಾರ ವಾರಸುದಾರ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿ ಹಲವರೊಂದಿಗೆ ಸೇರಿ ಹಲ್ಲೆ ನಡೆಸಿದ್ದು, ಹಲ್ಲೆ ಘಟನೆಯನ್ನು ಜಿಲ್ಲಾ ಕಂದಾಯ ಸಂಘ ತೀವೃವಾಗಿ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಂಡು ನೌಕರರಿಗೆ ಸೂಕ್ತ ಭದ್ರತೆ ನೀಡುವಂತೆ ಬುಧವಾರ ರಟ್ಟೀಹಳ್ಳಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದೆ.
ಏ. ೧೫ ರಂದು ರಟ್ಟಿಹಳ್ಳಿಯ ತಹಶೀಲ್ದಾರ ಕಚೇರಿಗೆ ಶಂಕರಗೌಡ ಚನ್ನಗೌಡ ಪಾಟೀಲ ಎನ್ನುವವರು ವಾರಸುದಾರ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅವರು ಅದೇ ದಿನವೇ ವಾರಸುದಾರ ಪ್ರಮಾಣಪತ್ರವನ್ನು ನೀಡುವಂತೆ ಸಿಬ್ಬಂದಿಯ ಮೇಲೆ ಒತ್ತಡ ಹಾಕಿದ್ದರು. ಸಿಬ್ಬಂದಿ ನಿಯಮಾನುಸಾರ ಸಮಯ ಬೇಕು ಎಂದು ತಿಳಿಸಿದರೂ ಕೂಡ ಸಹಕರಿಸದೆ, ಇನ್ನಿಬ್ಬರು ವ್ಯಕ್ತಿಗಳೊಂದಿಗೆ ಸೇರಿ ಕರ್ತವ್ಯ ನಿರ್ವಹಿಸುತ್ತಿದ್ದ ತಹಶೀಲ್ದಾರ ಕಚೇರಿಯ ಲಿಂಗರಾಜ ಲಮಾಣಿ ಮತ್ತು ವೀಣಾ ಸುಣಗಾರ ಅವರ ಮೇಲೆ ಕಚೇರಿಯೊಳಗೇ ಹಲ್ಲೆ ನಡೆಸಿದ್ದಾನೆ. ಕಚೇರಿಯಲ್ಲಿದ್ದ ಜನರು ಹಲ್ಲತಡೆಯಲು ಮುಂದಾದವೇಳೆ ಕಚೇರಿಯಲ್ಲಿನ ಕುರ್ಚಿಯನ್ನು ಎತ್ತಿಕೊಂಡು ಸಿಬ್ಬಂದಿಯನ್ನು ಹೊಡೆಯಲು ಮುಂದಾದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸರೆಯಾಗಿದೆ.
ಈ ಘಟನೆಯನ್ನು ಖಂಡಿಸಿರುವ ಜಿಲ್ಲಾ ಕಂದಾಯ ಸಂಘದ ಅಧ್ಯಕ್ಷ ಡಿ.ಎಂ. ಪಾಟೀಲ, ಗೌರವಾಧ್ಯಕ್ಷ ವರುಣ್ ನಾಯ್ಕ್, ಗ್ರಾಮ ಆಡಳಿತಾಧಿಕಾರಿಗಳ ಜಿಲ್ಲಾ ಅಧ್ಯಕ್ಷ ರುದ್ರೇಶ್ ಎ.ಸಿ., ಲಿಪಿಕ್ ಸಿಬ್ಬಂದಿ ಸಂಘದ ಅಧ್ಯಕ್ಷ ನವೀನ್ ಹಿಂಚಿಗೇರಿ, ತಾಲೂಕು ಕಂದಾಯ ಸಂಘದ ಅಧ್ಯಕ್ಷ ಬಸವರಾಜ ಕುಸಗೂರ್, ಶಿರಸ್ತೆದಾರ ಜಿ.ಎನ್. ಕಟ್ಟಿಮಣಿ, ಕಚೇರಿಯ ಹಿರಿಯ ಸಿಬ್ಬಂದಿ ಹಾಗೂ ಇತರ ಎಲ್ಲಾ ಸಿಬ್ಬಂದಿ ಸದಸ್ಯರು ಸರ್ಕಾರಿ ಸಿಬ್ಬಂದಿಯ ಗೌರವ, ಕಚೇರಿ ಶಿಸ್ತಿನ ರಕ್ಷಣೆಗೆ ಹಾಗೂ ಭಯಮುಕ್ತವಾಗಿ ಕಾರ್ಯ ನಿರ್ವಹಿಸಲು ಸುಸಜ್ಜಿತ ಪರಿಸರವನ್ನು ಒದಗಿಸಲು, ಸಂಬAಧಪಟ್ಟ ದೋಷಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಟ್ಟಿಹಳ್ಳಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಮೂವರ ಮೇಲೆ ಎಫ್ಐಆರ್ ದಾಖಲು: ತಹಶೀಲ್ದಾರ ಕಚೇರಿಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬAಧಿಸಿದAತೆ ಹಲ್ಲೆಮಾಡಿರುವ ಆರೋಪಿತರೆನ್ನಲಾದ ಶಂಕರಗೌಡ ಪಾಟೀಲ, ಪ್ರಕಾಶ ಕುಂಚೂರ, ಬಸವರಾಜ ಗುಬ್ಬೇರ ಎನ್ನುವವರ ಮೇಲೆ ರಟ್ಟೀಹಳ್ಳಿ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳ ಮೇಲೆ ಮಂಗಳವಾರ ವಾರಸುದಾರ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿ ಹಲವರೊಂದಿಗೆ ಸೇರಿ ಹಲ್ಲೆ ನಡೆಸಿದ್ದು, ಹಲ್ಲೆ ಘಟನೆಯನ್ನು ಜಿಲ್ಲಾ ಕಂದಾಯ ಸಂಘ ತೀವೃವಾಗಿ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಂಡು ನೌಕರರಿಗೆ ಸೂಕ್ತ ಭದ್ರತೆ ನೀಡುವಂತೆ ಬುಧವಾರ ರಟ್ಟೀಹಳ್ಳಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದೆ.
ಏ. ೧೫ ರಂದು ರಟ್ಟಿಹಳ್ಳಿಯ ತಹಶೀಲ್ದಾರ ಕಚೇರಿಗೆ ಶಂಕರಗೌಡ ಚನ್ನಗೌಡ ಪಾಟೀಲ ಎನ್ನುವವರು ವಾರಸುದಾರ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅವರು ಅದೇ ದಿನವೇ ವಾರಸುದಾರ ಪ್ರಮಾಣಪತ್ರವನ್ನು ನೀಡುವಂತೆ ಸಿಬ್ಬಂದಿಯ ಮೇಲೆ ಒತ್ತಡ ಹಾಕಿದ್ದರು. ಸಿಬ್ಬಂದಿ ನಿಯಮಾನುಸಾರ ಸಮಯ ಬೇಕು ಎಂದು ತಿಳಿಸಿದರೂ ಕೂಡ ಸಹಕರಿಸದೆ, ಇನ್ನಿಬ್ಬರು ವ್ಯಕ್ತಿಗಳೊಂದಿಗೆ ಸೇರಿ ಕರ್ತವ್ಯ ನಿರ್ವಹಿಸುತ್ತಿದ್ದ ತಹಶೀಲ್ದಾರ ಕಚೇರಿಯ ಲಿಂಗರಾಜ ಲಮಾಣಿ ಮತ್ತು ವೀಣಾ ಸುಣಗಾರ ಅವರ ಮೇಲೆ ಕಚೇರಿಯೊಳಗೇ ಹಲ್ಲೆ ನಡೆಸಿದ್ದಾನೆ. ಕಚೇರಿಯಲ್ಲಿದ್ದ ಜನರು ಹಲ್ಲತಡೆಯಲು ಮುಂದಾದವೇಳೆ ಕಚೇರಿಯಲ್ಲಿನ ಕುರ್ಚಿಯನ್ನು ಎತ್ತಿಕೊಂಡು ಸಿಬ್ಬಂದಿಯನ್ನು ಹೊಡೆಯಲು ಮುಂದಾದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸರೆಯಾಗಿದೆ.
ಈ ಘಟನೆಯನ್ನು ಖಂಡಿಸಿರುವ ಜಿಲ್ಲಾ ಕಂದಾಯ ಸಂಘದ ಅಧ್ಯಕ್ಷ ಡಿ.ಎಂ. ಪಾಟೀಲ, ಗೌರವಾಧ್ಯಕ್ಷ ವರುಣ್ ನಾಯ್ಕ್, ಗ್ರಾಮ ಆಡಳಿತಾಧಿಕಾರಿಗಳ ಜಿಲ್ಲಾ ಅಧ್ಯಕ್ಷ ರುದ್ರೇಶ್ ಎ.ಸಿ., ಲಿಪಿಕ್ ಸಿಬ್ಬಂದಿ ಸಂಘದ ಅಧ್ಯಕ್ಷ ನವೀನ್ ಹಿಂಚಿಗೇರಿ, ತಾಲೂಕು ಕಂದಾಯ ಸಂಘದ ಅಧ್ಯಕ್ಷ ಬಸವರಾಜ ಕುಸಗೂರ್, ಶಿರಸ್ತೆದಾರ ಜಿ.ಎನ್. ಕಟ್ಟಿಮಣಿ, ಕಚೇರಿಯ ಹಿರಿಯ ಸಿಬ್ಬಂದಿ ಹಾಗೂ ಇತರ ಎಲ್ಲಾ ಸಿಬ್ಬಂದಿ ಸದಸ್ಯರು ಸರ್ಕಾರಿ ಸಿಬ್ಬಂದಿಯ ಗೌರವ, ಕಚೇರಿ ಶಿಸ್ತಿನ ರಕ್ಷಣೆಗೆ ಹಾಗೂ ಭಯಮುಕ್ತವಾಗಿ ಕಾರ್ಯ ನಿರ್ವಹಿಸಲು ಸುಸಜ್ಜಿತ ಪರಿಸರವನ್ನು ಒದಗಿಸಲು, ಸಂಬAಧಪಟ್ಟ ದೋಷಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಟ್ಟಿಹಳ್ಳಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಮೂವರ ಮೇಲೆ ಎಫ್ಐಆರ್ ದಾಖಲು: ತಹಶೀಲ್ದಾರ ಕಚೇರಿಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬAಧಿಸಿದAತೆ ಹಲ್ಲೆಮಾಡಿರುವ ಆರೋಪಿತರೆನ್ನಲಾದ ಶಂಕರಗೌಡ ಪಾಟೀಲ, ಪ್ರಕಾಶ ಕುಂಚೂರ, ಬಸವರಾಜ ಗುಬ್ಬೇರ ಎನ್ನುವವರ ಮೇಲೆ ರಟ್ಟೀಹಳ್ಳಿ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.