ರಾಣೆಬೆನ್ನೂರು ಬಳಿ ಭೀಕರ ರಸ್ತೆ ಅಪಘಾತ, ತಿರುಪತಿಗೆ ತೆರಳುತ್ತಿದ್ದ ಹಾವೇರಿಯ ನಾಲ್ವರ ದುರ್ಮರಣ
ಹಾವೇರಿ: ಹಾವೇರಿಯಿಂದ ತಿರುಪತಿಗೆ ತೆರಳುತ್ತಿದ್ದ ಕಾರೊಂದು ರಾಣೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಸಂಭವಿಸಿದ
ಭೀಕರ ರಸ್ತೆಅಪಘಾತದಲ್ಲಿ ಹಾವೇರಿ ನಗರದ ನಾಲ್ವರು ಮೃತಪಟ್ಟಿರುವ ಘಟನೆ ಗುರುವಾರ
ಮಧ್ಯರಾತ್ರಿ 12.30ರ ಸುಮಾರಿಗೆ ನಡೆದಿದೆ.
ಮ್ರತರನ್ನುಹಾವೇರಿಯ ಅಶ್ವಿನಿ ನಗರದ ನಿವಾಸಿಗಳಾಗಿದ್ದ ಸುರೇಶ್ ಜಾಡಿ, (45), ಐಶ್ವರ್ಯ ಬಾರ್ಕಿ
(22), ಚೇತನಾ ಸಮಗಂಡಿ(7),ಪ್ರಭುರಾಜ ಸಮಂಗಡಿ ಎಂದು ಗುರುತಿಸಲಾಗಿದೆ.
ಚನ್ನವೀರಪ್ಪ ಜಾಡಿ, ಸಾವಿತ್ರಾ ಜಾಡಿ, ವಿಕಾಸ ಬಾರ್ಕಿ, ಹೊನ್ನಪ್ಪ ಬಾರ್ಕಿ, ಗೀತಾ ಬಾರ್ಕಿ ತೀವ್ರ
ವಾಗಿಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದಾವಣಗೆರೆ ಹಾಗೂ ಹುಬ್ಬಳ್ಳಿ ಗೆ ಹೆಚ್ಚಿನ ಚಿಕಿತ್ಸೆ ಗೆ ಕಳಿಸಲಾಗಿದೆ.