![]()
“ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಜನ ಜಾಗೃತಿ ಪಾದಯಾತ್ರೆ”ದುಶ್ಚಟ ತ್ಯಜಿಸಲು ಜೋಳಿಗೆ ಹಿಡಿದಸದಾಶಿವಶ್ರೀಗಳುಹಾವೇರಿ:ಹಾವೇರಿ ಶ್ರೀಹುಕ್ಕೇರಿಮಠದ ಜಾತ್ರಾ ಮಹೋತ್ಸವ, ಶಾಲಾ ಸುವರ್ಣ ಮಹೋತ್ಸವ, ಪ್ರಸಾದ ನಿಲಯ ಅಮೃತ ಮಹೋತ್ಸವ, ವಿದ್ಯಾರ್ಥಿ ಸಂಘದ ರಜತೋತ್ಸವ ಹಾಗೂ ಗುರು ವಂದನಾ ಮಹೋತ್ಸವ ನಿಮಿತ್ಯಹುಕ್ಕೇರಿಮಠ ಪೂಜ್ಯರಾದ ಸದಾಶಿವ ಶ್ರೀ ಗಳು ಹಮ್ಮಿಕೊಂಡಿರುವ ಜನ ಜಾಗೃತಿ ಪಾದಯಾತ್ರೆ ಗೆ ನ.೬ರಂದು ಜಿಲ್ಲೆಯ ಬ್ಯಾಡಗಿ ತಾಲೂಕಿನ ಮಲ್ಲೂರುಗ್ರಾದಲ್ಲಿ ಚಾಲನೆ ನೀಡಲಾಯಿತು.ಗ್ರಾಮದ ಹಿರಿಯರು ಹುಕ್ಕೇರಿ ಮಠದ ಸದಾಶಿವ ಶ್ರೀಗಳು, ಆಲೂರಿನ ಶಿವಬಸವ ಶ್ರೀಗಳು, ಕೂಡಲದ ಗುರುನಂಜೇಶ್ವರ ಶ್ರೀಗಳು , ಹೇರೂರಿನ ನಂಜುಂಡ ಪಂಡಿತಾರಾಧ್ಯ ಶ್ರೀ , ಮಲ್ಲಿಕಾರ್ಜುನ ದೇವರು, ವೀರಬಸವ ದೇವರು ,ವಿರುಪಾಕ್ಷ ದೇವರು ಘನಲಿಂಗ ದೇವರು, ಚನ್ನಬಸವ ದೇವರು ,ರಾಮಕೃಷ್ಣ ದೇವರು ಸೇರಿದಂತೆ ಮಹಿಳೆಯರು ಪಾದಯಾತ್ರೆ ಯಲ್ಲಿ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಸದಾಶಿವ ಶ್ರೀ ಮಾತನಾಡಿ,ಹಾವೇರಿ ಶ್ರೀಹುಕ್ಕೇರಿಮಠದ ಜಾತ್ರಾ ಮಹೋತ್ಸವ, ಶಾಲಾ ಸುವರ್ಣ ಮಹೋತ್ಸವ, ಪ್ರಸಾದ ನಿಲಯ ಅಮೃತ ಮಹೋತ್ಸವ, ವಿದ್ಯಾರ್ಥಿ ಸಂಘದ ರಜತೋತ್ಸವ ಹಾಗೂ ಗುರು ವಂದನಾ ಮಹೋತ್ಸವ ನಿಮಿತ್ಯ ಜನ ಜಾಗೃತಿ ಪಾದಯಾತ್ರೆವ್ಯಸನ ಮುಕ್ತ ಗ್ರಾಮದ ಸೇವಾ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಇಂದು ಅನೇಕರು ದುಶ್ಚಟಗಳಿಗೆ ದಾಸರಾಗಿ ತಮ್ಮ ಕುಟುಂಬಗಳಿಗೆ ಹೊರೆಯಾಗಿ, ಸಮಾಜಕ್ಕೆ ಕಂಟಕ ವಾಗಿದ್ದಾರೆ. ದುಶ್ಚಟಗಳಿಗೆ ದಾಸವಾಗಿರುವವರನ್ನು ದುಶ್ಚಟಗಳನ್ನು ತ್ಯಜಿಸುವಂತೆ ಪಾದಯಾತ್ರೆ ಯಲ್ಲಿ ಜೋಳಿಗೆ ಹಿಡಿದಿದ್ದೇವೆ.ದುಶ್ಚಟಗಳನ್ನು ನಮ್ಮ ಜೋಳಿಗೆಗೆ ಹಾಕುವ ಮೂಲಕ ದುಶ್ಚಟಗಳನ್ನು ತ್ಯಜಿಸುವಂತೆ ಜನರನ್ನು ಪ್ರೇರೇಪಿಸುವ ಮೂಲಕ ಇ ವ್ಯಸನದಿಂದ ಬಳಲುತ್ತಿರುವವರನ್ನು ಗುರುತಿಸಿ, ಸಮಾಜಕ್ಕೆ ಮರಳಿ ತರುವ ಮೂಲಕ ಒಂದು ಉತ್ತಮ ಸಮಾಜವನ್ನು ನಿರ್ಮಿಸುವ ಒಂದು ವಿಶಿಷ್ಟ ಮಾರ್ಗವಾಗಿದೆ.ಸಾರ್ವಜನಿಕರಲ್ಲಿ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, ವ್ಯಸನವನ್ನು ತಮ್ಮ “ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ” ಸಂಗ್ರಹಿಸುತ್ತಿದ್ದೇವೆ.ದುಶ್ಚಟಗಳ ನಿರ್ಮೂಲನೆ: ಸಮಾಜದಲ್ಲಿ ದುಶ್ಚಟಗಳ ಅಸ್ತಿತ್ವವನ್ನು ಕಡಿಮೆ ಮಾಡಲು ಈ ಕಾರ್ಯಕ್ರಮವು ಮುಖ್ಯವಾಗಿದೆ. ಸಾರ್ವಜನಿಕರಿಗೆ ವ್ಯಸನದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದು ಒಂದು ಪ್ರಮುಖ ಉದ್ದೇಶವಾಗಿದೆ.
- ಜೋಳಿಗೆಯಲ್ಲಿ ಭಿಕ್ಷೆ: ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ, ಜನರ ದುಶ್ಚಟಗಳನ್ನು ಒಂದು ರೀತಿಯ ಭಿಕ್ಷೆಯಾಗಿ ಪರಿಗಣಿಸಿ, ಅವುಗಳನ್ನು ತ್ಯಜಿಸುವಂತೆ ಪ್ರೇರೇಪಿಸುವುದೇ ಈ “ಜೋಳಿಗೆ”ಯ ಮೂಲ ಉದ್ದೇಶವಾಗಿದೆ, ಮಲ್ಲೂರಿನಿಂದ ಆರಂಭಗೊಂಡ ಈಪಾದಯಾತ್ರೆ ಡಿ.೫ರವರೆಗೆ ನಡೆಯಲಿದೆ. ಪಾದಯಾತ್ರೆ ಯಲ್ಲಿ ಸಾರ್ವಜನಿಕ ರ ಸಹಭಾಗಿತ್ವ ಅಗತ್ಯ ಎಂದ ಸದಾಶಿವ ಶ್ರೀ ಗಳು ವ್ಯಸನಿಗಳನ್ನು
- ಸಮಾಜದ ಮುಖ್ಯವಾಹಿನಿಗೆ ಕರೆತರಲು ಪ್ರಯತ್ನ ಎಂದು ಹೇಳಿದರು.
“ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಜನ ಜಾಗೃತಿ ಪಾದಯಾತ್ರೆ” ದುಶ್ಚಟ ತ್ಯಜಿಸಲು ಜೋಳಿಗೆ ಹಿಡಿದ ಸದಾಶಿವಶ್ರೀಗಳು
Date:



