ಶಿಗ್ಗಾಂವ್ ಕ್ಷೇತ್ರಕ್ಕೆ ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ ನೀಡಿ, ಗೆಲ್ಲಿಸಿ: ಕೈ ವರಿಷ್ಠರಿಗೆ ಮೋಮಿನಗಾರ ಮನವಿ
ಹಾವೇರಿ: ಬರಲಿರುವ ಶಿಗ್ಗಾವ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ವರಿಷ್ಠರು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವ ಮೂಲಕ ಅವರನ್ನು ಗೆಲ್ಲಿಸುವ ಮೂಲಕ ಅಲ್ಪಸಂಖ್ಯಾತರ ಬಗೆಗಿನ ಕಾಳಜಿ ತೋರಬೇಕೆಂದು ಜಿಲ್ಲಾ ಮುಸ್ಲಿಂ ಒಕ್ಕೂಟದ ಪ್ರಧಾನಕಾರ್ಯದರ್ಶಿಬಾಬುಸಾಬ ಮೋಮಿನಗಾರ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಸುಮಾರು ೧೩೦ ಕ್ಕಿಂತ ಹೆಚ್ಚಿಗೆ ಅಭ್ಯರ್ಥಿಗಳು ಶಾಸಕರು ಹಾಗೂ ಎಂ.ಪಿಗಳಾಗಲು ಮುಸ್ಲಿಂ ಸಮುದಾಯದ ಪಾತ್ರ ಮುಖ್ಯವಾಗಿದೆ. ಇತರೆ ಸಮುದಾಯದವರು ಕಾಂಗ್ರೆಸ್ ನಿಂದ ಟಿಕೆಟ ಪಡೆದು ಎಂ.ಎಲ್.ಎ. ಎಂ.ಪಿ ಚುನಾವಣೆಗೆ ನಿಂತಾಗ ಮುಸ್ಲಿಂ ಸಮುದಾಯವು ಸಂಪೂರ್ಣವಾಗಿ ೯೦-೯೫% ಮತವನ್ನು ಇತರೆ ಜಾತಿಯವರಿಗೆ ಬೇಧ ಭಾವ ಮಾಡದೇ ಅಭ್ಯರ್ಥಿಗಳನ್ನು ನೋಡದೇ ಯಾವುದೇ ಜಾತಿಯ ಅಭ್ಯರ್ಥಿಗಳು ಇದ್ದರೂ ಸಹ ಕಾಂಗ್ರೆಸ್ಗೆ ಮುಸ್ಲಿಂರು ಮತ ಹಾಕುತ್ತಾ ಬಂದಿರುತ್ತಾರೆ. ಪ್ರಸಕ್ತ ಎದುರಾಗಲಿರುವ ಶಿಗ್ಗಾವಿ ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಮತ್ತು ಹೈಕಮಾಂಡ ಗೆಲ್ಲಿಸುವ ಜವಾಬ್ದಾರಿಯನ್ನು ಇತರೆ ಸಮಾಜದ ಕಾಂಗ್ರೆಸ್ ಮುಖಂಡರಿಗೆ, ಶಾಸಕರಿಗೆ, ಮಂತ್ರಿಗಳಿಗೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ನಿಂದ ಎಂ.ಎಲ್.ಎ, ಎಂ.ಪಿ ಆದವರು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಆದರೆ, “ಮುಸ್ಲಿಂ ಅಭ್ಯರ್ಥಿಗಳ ಹೆಸರು ಬಂದಾಗ ಮಾತ್ರ ಮುಸ್ಲಿಂರು ಗೆಲ್ಲುವುದಿಲ್ಲ”. ಅವರಿಗೆ ಟಿಕೆಟ ನೀಡಬಾರದು. ಒಂದು ಸೀಟು ಕಳೆದುಕೊಳ್ಳುತ್ತೇವೆ ಎಂದು ಹೈಕಮಾಂಡಿಗೆ ವಿವರಣೆ ವರದಿ ಕೊಡುತ್ತಾರೆ. ಮುಸ್ಲಿಂ ಸಮುದಾಯವರಿಂದ ಮತ ಹಾಕಿಸಿಕೊಂಡು ಅವರು ಗೆದ್ದು ಬಂದಿದ್ದು, ಮುಸ್ಲಿಂ ಅಭ್ಯರ್ಥಿಗಳನ್ನು ಗೆಲ್ಲಿಸಲು ಗೆದ್ದಂತವರು, ಅವರ ಅವರ ಸಮುದಾಯಕ್ಕೆ ಹೇಳಿ ಚುನಾವಣೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಅವರಿಂದ ನಾವು ಗೆದ್ದಿದ್ದೇವೆ, ಈಗ ಅವರನ್ನು ಗೆಲ್ಲಿಸುವುದು ನಮ್ಮ ಕರ್ತವ್ಯ ಎಂದು ಪ್ರಚಾರ ಮಾಡಿ ಗೆಲ್ಲಿಸಿದರೆ ನಿಜವಾಗಲೂ ಮುಸ್ಲಿಂ ಸಮಾಜಕ್ಕೂ ಸಹ ಗೆದ್ದವರು ಋಣ ತೀರಿಸಿದಂತಾಗಿ ನ್ಯಾಯ ಕೊಟ್ಟಂತೆ ಆಗುತ್ತದೆ. ಕಾಂಗ್ರೆಸ್ನಲ್ಲಿ ಸಾಮಾಜಿಕ ನ್ಯಾಯ ಎನ್ನುವದಕ್ಕೆ ಅರ್ಥ ಬರುತ್ತದೆ.
ಮುಸ್ಲಿಂ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಗದಿದ್ದರೇ ಮುಸ್ಲಿಂ ಸಮಾಜವು ಎಚ್ಚೆತ್ತುಕೊಂಡು ರಾಜಕೀಯ ಮಾಡಿ, ಉತ್ತರ ನೀಡಬೇಕಾಗುತ್ತದೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಮತ್ತು ಕಾಂಗ್ರೆಸ್ ಹೈಕಮಾಂಡಿಗೆ ಹಾವೇರಿ ಜಿಲ್ಲಾ ಮುಸ್ಲಿಂ ಒಕ್ಕೂದ ಪದಾಧಿಕಾರಿಗಳಾದ ಬಾಬುಸಾಬ ಮೋಮಿನಗಾರ, ಡಾ. ಟಿಪ್ಪುಸಾಬ ಕಲಕೋಟಿ. ಐ.ಎ.ಹವಾಲ್ದಾರ, ನಜೀರಸಾಬ ಸವಣೂರ ಹಾಗೂ ಎಲ್ಲ ಪಧಾಧಿಕಾರಿಗಳು, ಸದಸ್ಯರು ಒತ್ತಾಯಿಸಿದ್ದಾರೆ.