ಸಂಘರ್ಷದ ಹಾದಿಯಲ್ಲಿ ಅರಳುತ್ತಿರುವ ಸಾಮಾಜಿಕ ಹೋರಾಟಗಾರ ಶೆಟ್ಟಿ ವಿಭೂತಿ
ನಿರ್ದಿಷ್ಟ ನೆಲೆ, ಮತ್ತು ನೆಲವೇ ಇಲ್ಲದ ವಿಳಾಸವೇ ಇಲ್ಲದ ಹತ್ತಾರು ಅಲೆಮಾರಿ ಕುಟುಂಬಗಳು ಹಾವೇರಿನಗರದ ಹೊರವಲಯದಲ್ಲಿನ ಶಾಂತಿನಗರದ ಬಳಿ ಹಾಗೂ ಜಿಲ್ಲಾಡಳಿತ ಭವನಕ್ಕೆ ಹೋಗುವ ಮಾರ್ಗಕ್ಕೆ ಹೊಂದಿಕೊಂಡಿರುವ ಬಯಲಿನಲ್ಲಿ ವಾಸವಿದ್ದು, ಹಲವಾರು ಸಂದರ್ಭಗಳಲ್ಲಿ ಈ ಅಲೆಮಾರಿಗಳನ್ನು ಭೇಟಿಯಾಗುತ್ತಾ ಕಿಂಚಿತ್ ಸಹಾಯಮಾಡುತ್ತಾ ಬಂದಿರುವ ಹಾವೇರಿಯ ಸಮಾನ ಮನಸ್ಕರಲ್ಲಿ ನಾನು ಒಬ್ಬನಾಗಿರುವೆ. ಕೊರೋನಾ ಸಂದರ್ಭದಲ್ಲಿ ಅಲೆಮಾರಿಗಳಿಗೆ ಅವರ ಮಕ್ಕಳಿಗೆ ಸ್ನೇಹಿತರ ನೆರವಿನಿಂದ ಅಗತ್ಯವಸ್ತುಗಳನ್ನು ಸಂಗ್ರಹಿಸಿ ಅಲೆಮಾರಿಗಳಿಗೆ ವಿತರಿಸುವ ವೇಳೆ ನನಗೆ ಪರಿಚಿತನಾದವ ಅಲೆಮಾರಿ ಸುಡುಗಾಡ ಸಿದ್ದರ ಸಮುದಾಯದ ಯುವಕ ಶೆಟ್ಟಿ ವಿಭೂತಿ.
ಹಾವೇರಿನಗರದ ಡಿಸಿ ಕಚೇರಿರಸ್ತೆಗೆ ಹೊಂದಿಕೊಂಡಿರುವ ತುಂಗಾಮೇಲ್ದಂಡೆ ಕಚೇರಿಯ ಎದುರಿನ ಬಯಲಿನಲ್ಲಿ ಟೆಂಟ್ನಲ್ಲಿ ವಾಸ ಇರುವ ಹಲವಾರು ಅಲೆಮಾರಿ ಕುಟುಂಬಗಳಲ್ಲಿ ಶೆಟ್ಟಿ ವಿಭೂತಿಯ ಕುಟುಂಬವು ಒಂದಾಗಿದ್ದು, ಆತನನ್ನು ಭೇಟಿಯಾದ ವೇಳೆ ಸರ್, “ನಮ್ಮಲ್ಲಿ ಹಲವಾರು ಮಕ್ಕಳಿದ್ದಾರೆ, ಅವರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅವರ ಶಿಕ್ಷಣಕ್ಕೆ ಏನಾದರೂ ಸಹಾಯ ಮಾಡಿ” ಎಂದು ತನ್ನ ತೆಲಗ ಮಿಶ್ರಿತ ವಿಚಿತ್ರಕನ್ನಡದಲ್ಲಿ ಹೇಳಿದ.
ಆ ವೇಳೆ ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಕಾರ್ಮಿಕ ಮುಖಂಡ ಎಂ. ಕರಬಸಪ್ಪ ಮತ್ತಿತರ ಹಿರಿಯರೊಂದಿಗೆ ಚರ್ಚಿಸಿ ಟೆಂಟ್ನಲ್ಲಿಯೇ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಅಲೆಮಾರಿ ಸಮುದಾಯದಲ್ಲಿ ನರ್ಸಿಂಗ್ ಓದುತ್ತಿರುವ ವಿದ್ಯಾರ್ಥಿನಿಗೆ ಮಕ್ಕಳಿಗೆ ಓದು-ಬರಹ ನೀಡುವ ಜವಾಬ್ದಾರಿ ವಹಿಸಿ ಮಕ್ಕಳ ಓದಿಗೆ ಅಗತ್ಯ ಇರುವ ಪಠ್ಯಪುಸ್ತಕಗಳನ್ನು ಹಾಗೂ ಕಲಿಕಾ ಸಾಮಗ್ರಿಗಳನ್ನು ನೀಡಲಾಗಿತ್ತು. ಅಲೆಮಾರಿ ಸಹೋದರಿ ತನ್ನ ಬಿಡುವಿನ ವೇಳೆ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡುವುದರ ಜೊತೆಗೆ ಮಕ್ಕಳಲ್ಲಿ, ಪಾಲಕರಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿ ಹೇಳುವ ಉತ್ತಮ ಕಾರ್ಯಮಾಡುತ್ತಿದ್ದಾಳೆ.
ಇಷ್ಟೇಲ್ಲಾ ವಿವರಣೆ ಯಾಕೆಂದರೇ, ಶೆಟ್ಟಿ ವಿಭೂತಿಯ ಶಿಕ್ಷಣದ ಬಗೆಗಿನ ಕಾಳಜಿಯನ್ನು ಮೆಚ್ಚಲೇಬೇಕು. ಅಸ್ತಿತ್ವವೇ ಇಲ್ಲದೇ ಅಸ್ಮಿತೆಯಂತಿರುವ ಋತುಮಾನಕ್ಕನುಗುಣವಾಗಿ ನೆಲೆ ಬದಲಿಸುವ ಅಲೆಮಾರಿಗಳು ಹೊಟ್ಟೆಪಾಡಿಗಾಗಿ ಸುಗ್ಗಿಕಾಲದಲ್ಲಿ ಸಮೃದ್ಧವಾಗಿ ಮಳೆ, ಬೆಳೆ ಆಗುವ ಕಡೆ ಗುಳೆ ಹೋದರೆ, ಇನ್ನುಳಿದ ಸಂದರ್ಭಗಳಲ್ಲಿ, ಎಲ್ಲಿ ಜಾತ್ರೆಗಳು, ಹಬ್ಬ-ಹರಿದಿನಗಳು ನಡೆಯುತ್ತವೋ ಅತ್ತ ಕಡೆ ಹೋಗಿ ಅಲ್ಲಿನ ಶಾಲಾ ಮೈದಾನದಲ್ಲೋ, ದೇವಸ್ಥಾನಗಳ ಬಳಿಯೋ ಅಥವಾ ಊರಿನ ಹೊರಗೋ ಸಾರ್ವಜನಿಕ ಸ್ಥಳಗಳಲ್ಲಿ ಟೆಂಟ್ ಅಥವಾ ಜೋಪಡಿಗಳನ್ನು ಹಾಕಿಕೊಂಡು ಅಲ್ಲೇ ತೊಗಲು ಗೊಂಬೆ, ದೊಂಬರಾಟ, ಮೋಡಿಯಾಟ, ಕೊರವಂಜಿ ಕಣಿ, ಹಗಲುವೇಷ, ಕೋಲಾಟ, ಹೀಗೆ ಜೀವನ ಮಾಡಲು ಕಲೆಗಳ ಪ್ರದರ್ಶನ ಮಾಡುತ್ತಾ ಬದುಕು ಸವೆಸುತ್ತಾರೆ.
ಇವರಿಗೆ ಖಾಯಂ ನೆಲೆ ಎಂಬುದು ಇಲ್ಲ. ಇವರು ಅಗತ್ಯವಿರುವ ಧವಸ-ಧಾನ್ಯಗಳ ಜೊತೆಗೆ ತಮ್ಮ ನೆಲೆಮೂಲ ಸಂಸ್ಕೃತಿ ಮತ್ತು ಕಲೆಯನ್ನು ಪ್ರಚಾರ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಇವರಲ್ಲಿ ಕೆಲವರು ಪಾರಂಪರಿಕ ಕರಕುಶಲ ಬಿದಿರು, ಮರಗೆಲಸ, ಕಬ್ಬಿಣದ ಸಲಕರಣೆಗಳ ಕಲೆಗಳನ್ನು, ಧಾರ್ಮಿಕ ಸಂಬಂಧಿ ವೃತ್ತಿ, ಪಾರಂಪರಿಕ ಮೂಲ ವೃತ್ತಿಗಳು, ಚಿಕ್ಕ-ಪುಟ್ಟವ್ಯಾಪಾರದಲ್ಲಿ ತೊಡಗಿದ್ದಾರೆ. ಇಂತಹ ನಿಕೃಷ್ಟ ಅಲೆಮಾರಿ ಬದುಕಿನ ಬವಣೆಯನ್ನು ಗಮನಿಸಿ ಪತ್ರಿಕೆಗಳು ವರದಿಗಳನ್ನು ಪ್ರಕಟಿಸಿವೆ, ಹತ್ತಾರು ಸ್ವಯಂಸೇವಾ ಸಂಸ್ಥೆಗಳು ಅಲೆಮಾರಿ ಮಕ್ಕಳ ಶಿಕ್ಷಣ, ಮೂಲಭೂತ ಸೌಕರ್ಯ, ವಸತಿ, ಭೂಮಿ ಹಾಗೂ ಅನೇಕ ನಾಗರೀಕ ಸೌಲಭ್ಯಗಳನ್ನು ಧಕ್ಕಿಸಿಕೊಡುವ ಹೋರಾಡುತ್ತಿವೆ. ಈ ಹೊತ್ತಿನಲ್ಲಿ ಇಂದಿನ ಜಾತಿ ಮತ್ತು ಧರ್ಮರಾಜಕಾರಣ ಸಂಕೀರ್ಣವಾದ ಸಂದಿಗ್ದತೆಯಲ್ಲಿ ರಾಜಕೀಯದ ಕ್ಷೇತ್ರವಂತೂ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳಗೆ ನಿಲುಕದ ನಕ್ಷತ್ರವಾಗಿಯೇ ಉಳಿದಿದೆ.
ಯಾವುದೇ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯವಿಲ್ಲದೇ ಅವರ ಅಮೂಲಾಗ್ರ ಪ್ರಗತಿ ಸಾಧ್ಯವಿಲ್ಲವೆಂಬುದು ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಘೋಷವಾಕ್ಯವಾಗಿತ್ತು. ಯಾವುದೇ ಸರ್ಕಾರ ಅಥವಾ ಅಧಿಕಾರಿಗಳು ಎಷ್ಟೇ ನಿಷ್ಟಾಂತವರಾಗಿ ಏನೇ ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ಅವುಗಳನ್ನು ಅನುಷ್ಠಾನ ಮಾಡುವ ಜಾಗಗಳಲ್ಲಿ ನೊಂದು ಅಲೆಮಾರಿ ಜನರ ಸಹಭಾಗಿತ್ವಕ್ಕೆ ಅವಕಾಶ ವಿಲ್ಲದೇ ಹೋದಲ್ಲಿ ಎಲ್ಲವೂ ಅನರ್ಥವಾದ ವ್ಯರ್ಥ ಪ್ರಯತ್ನವಾಗುತ್ತದೇ ವಿನಃ ಅದು ಎಂದಿಗೂ ಯಶಸ್ವಿಯಾಗುವುದಿಲ್ಲ.
ಅಲೆಮಾರಿ, ಅರೆ ಅಲೆಮಾರಿ, ವಿಮುಕ್ತ ಬುಡಕಟ್ಟು ಸಮುದಾಯಗಳ ಸಾಕಷ್ಟು ಖಿನ್ನತೆಗೆ ಒಳಗಾಗಿವೆ. ಈ ಖಿನ್ನತೆಗೆ ಕಾರಣ ಅವರು ಎದುರಿಸುತ್ತಿರುವ ಕೇವಲ ಬಡತನವಲ್ಲ. ಸಾಮಾಜಿಕ ಕಳಂಕ, ಸಾಮಾಜಿಕ ಅಸ್ಪೃಶ್ಯತೆ ಹಾಗೂ ಜಾಗತೀಕರಣದ ಕರಿನೆರಳಿನಿಂದ ತಮ್ಮೆಲ್ಲ ಸಾಂಪ್ರದಾಯಿಕ ವೃತ್ತಿಗಳು ಅಸ್ತಿತ್ವವನ್ನು ಕಳೆದುಕೊಂಡು ವೃತ್ತಿ ಜೀವಂತಿಕೆಯನ್ನು ಕಳೆದುಕೊಂಡು ಅವನತಿ ಹೊಂದಿ ತಮ್ಮ ನಿತ್ಯದ ಬದುಕು ಅತ್ಯಂತ ಕಠಿಣ ಪರಿಸ್ಥಿತಿಗೆ ದೂಡಲ್ಪಟ್ಟಿದ್ದು. ಜೊತೆಗೆ ಅನಾದಿ ಕಾಲದಿಂದಲೂ ರೂಡಿಸಿಕೊಂಡು ಬಂದಿದ್ದ ಹಲವು ಸಾಂಪ್ರದಾಯಿಕ ಕಲೆಗಳು ನವ ಮಾಧ್ಯಮಗಳ ಆಗಮನದಿಂದಾಗಿ ಅಳವಿನಂಚಿಗೆ ಹೋಗಿದ್ದು ಈ ಸಮುದಾಯಗಳ ಜಂಗಾಬಲವನ್ನೇ ಸರ್ವನಾಶ ಮಾಡಿಬಿಟ್ಟವು.
ಉದಾಹರಣೆಗೆ ಬೇಟೆಗಾರಿಕೆಗೆ. ಸರ್ಕಾರ ತಂದ ಹಲವು ವನ್ಯಜೀವಿ ಕಾಯ್ದೆಗಳ ಫಲವಾಗಿ ಬೇಟಿಗಾರಿಕೆಯಿಂದ ಈ ಸಮುದಾಯಗಳು ಸಂಪೂರ್ಣವಾಗಿ ವಿಮುಖರಾಗಬೇಕಾಯಿತು. ಅದೇ ರೀತಿ ಕರಡಿ ಆಡಿಸಿ ಜೀವನ ನಡೆಸುತ್ತಿದ್ದ ಖಲಂದರ್ ಸಮುದಾಯ, ಹಾವು ಆಡಿಸಿಕೊಂಡು ಬದುಕಿನ ಬಂಡಿ ನಡೆಸುತ್ತಿದ್ದ ಹಾವಾಡಿಗರು, ಕೋತಿ ಆಡಿಸುವವರು, ಗಿಣಿ ಶಾಸ್ತ್ರ ಹೇಳುವವರು ಸೇರಿದಂತೆ ಹಲವು ಈ ರೀತಿಯ ಕಲಾವಿದರು ತಮ್ಮ ವೃತ್ತಿಯಿಂದಲೇ ಸಮಪೂರ್ಣವಾಗಿ ವಿಮುಖರಾಗಬೇಕಾಯಿತು.
ಜಾಗತೀಕರಣ ಮತ್ತು ಆಧುನಿಕರಣದ ಗುಂಗಿನಲ್ಲಿ ಜನರು ಪರ್ಯಾಯ ಆಧುನಿಕ ತಂತ್ರಜ್ಞಾನದತ್ತ ಮುಖ ಮಾಡಿದರು. ಅಲೆಮಾರಿಗಳ ಮೌಖಿಕ ಕಾವ್ಯ, ಮಹಾಕಾವ್ಯ, ಕಥೆ, ಕಲೆಗಳು, ವೃತ್ತಿ ಗಾಯನ, ನೃತ್ಯಗಳು ವಿಧಿಯಿಲ್ಲದೆ ನೆಲೆಕಚ್ಚಿದವು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಿಂದ ತೀರಾ ಹಿಂದುಳಿದ ಈ ಸಮುದಾಯಗಳು ನಿರಂತರ ಶೋಷಣೆಗೆ ಒಳಗಾಗಿ ಅತಂತ್ರ ಸ್ಥಿತಿಯನ್ನು ಎದುರಿಸಿವೆ.
ಅಲೆಮಾರಿಗಳು ಸಾಮಾಜಿಕವಾಗಿ ಹಿಂದುಳಿದಿದ್ದರೂ ಅವರೆಂದಿಗೂ ಸಾಂಸ್ಕೃತಿಕವಾಗಿ ಸೊರಗಿದವರಲ್ಲ. ಪ್ರತಿಯೊಂದು ಅಲೆಮಾರಿ ಸಮುದಾಯವು ತನ್ನದೇ ಆದ ವಿಶಿಷ್ಟವಾದ ಜಾನಪದ ಕಲಾ ಪ್ರಕಾರಗಳನ್ನು ಹೊಂದಿವೆ. ಕಲೆಯೆ ಇವರ ಬದುಕಿನ ಭಾಗವಾಗಿ ಇವುಗಳು ಪಾರಂಪರಿಕವಾಗಿ ಬೆಳೆದು ಬಂದಿವೆ. ಅಲೆಮಾರಿಗಳ ಆರ್ಥಿಕ ಬೆನ್ನೆಲುಬು ಸಹಾ ಈ ಕಲೆಗಳೇ ಆಗಿದ್ದವು. ಈ ಕಲಾ ಪ್ರಕಾರಗಳಲ್ಲಿ ಪುರುಷರಷ್ಟೇ ಸಮವಾಗಿ ಮಹಿಳೆಯರೂ ಕೂಡ ಭಾಗಿಗಳಾಗುತ್ತಿದ್ದುದು ಒಂದು ವಿಶೇಷವೇ ಸರಿ. ಮಹಿಳೆಯರು ಕಲಾ ಪರಂಪರೆಯ ಜತೆ ತಮ್ಮದೇ ಆದ ಅನುಸಂಧಾನವನ್ನು ಮಾಡುತ್ತಲೇ ಬಂದಿದ್ದಾರೆ. ಹಲವು ಪ್ರದರ್ಶನಾತ್ಮಕ ಕಲೆಗಳಲ್ಲಿ ಮಹಿಳೆಯರು ಕಣಿಹೇಳುವುದು,ನೃತ್ಯ ಮಾಡುವುದು, ಸಂಗೀತ ವಾದ್ಯಗಳನ್ನು ನುಡಿಸುವಲ್ಲಿ ವಿಶೇಷವಾದ ಪರಿಣಿತಿಯನ್ನು ಹೊಂದಿರುವುದನ್ನು ಗಮನಿಸಬಹುದು.
ಬುಡುಗ-ಜಂಗಮ ಸಮುದಾಯದ ಮಹಿಳೆಯರು ತಮ್ಮ ಸಮುದಾಯದ ಪ್ರಮುಖ ಜಾನಪದ ಕಲೆಯಾದ ಹಗಲುವೇಷ ಕಲೆಯನ್ನು ಪ್ರಸ್ತುತ ಪಡಿಸುತ್ತಾ, ಊರೂರು ಸುತ್ತುತ್ತಾ, ಜಾನಪದ ಗೀತ, ಕಥನಗೀತೆಗಳು, ರಾಮಾಯಣ, ಮಹಾಭಾರತ ಮತ್ತು ಬುರ್ರಾಕಥೆಗಳನ್ನು ಹೇಳುತ್ತಾ, ನಾಟಕವಾಡುತ್ತಾ ತನ್ನ ಪತಿಗೆ ಸಹಾಯ ಮಾಡುತ್ತಾಳೆ. ಡೊಂಬರು ಪ್ರಮುಖವಾಗಿ ತಂತಿ ಅಥವಾ ಹಗ್ಗದ ಮೇಲೆ ನಡೆಯುವುದು, ಲಾಗ ಹಾಕುವುದು, ತಂತಿ ಮೇಲೆ ತಂಬಿಗೆ-ಕೊಡ ಇಟ್ಟುಕೊಂಡು ನಡೆಯುವುದು. ಮಂಡಿಗಾಲಿನಲ್ಲಿ ನಡೆಯುವುದು, ಕಬ್ಬಿಣ ಬಗ್ಗಿಸುವುದು, ಮುಂತಾದ ಆಟಗಳನ್ನು ಹಾಡುವುದರಲ್ಲಿ ನಿಸ್ಸೀಮರು. ಈ ಎಲ್ಲಾ ಕಲೆಗಳನ್ನು ಪ್ರದರ್ಶಿಸುವವರು ಮಹಿಳೆಯರೇ ಆಗಿರುತ್ತಾರೆ. ಚಿಕ್ಕ ಹುಡುಗಿಯಿಂದ ವಯಸ್ಕ ಮಹಿಳೆಯವರೆಗೂ ಎಲ್ಲಾ ಹೆಂಗಸರು ಈ ಕ್ಲಿಷ್ಠಕರ ಕಲೆಗಳನ್ನು ಪ್ರದರ್ಶಿಸುತ್ತಾರೆ.
ಇಲ್ಲಿ ಪುರುಷರು ಪ್ರಧಾನವಾಗಿ ಡೋಲು ಬಡಿಯುವ ಮತ್ತು ಕೊಳಲು ಊದುವ ಮೂಲಕ ಮಹಿಳೆಯರಿಗೆ ಉತ್ತೇಜನ ನೀಡುತ್ತಾರೆ. ಹೆಚ್ಚಿನ ಅಲೆಮಾರಿ ಸಮುದಾಯಗಳಲ್ಲಿ ಹಚ್ಚೆ ಹಾಕುವ ಕಲೆ ಕರಗತವಾಗಿರುತ್ತದೆ. ಪ್ರಮುಖವಾಗಿ ಹಚ್ಚೆ ಹಾಕುವ ಕಲೆಯಲ್ಲಿ ಕೊರಚ, ಕೊರಮ ಸಿಳ್ಳೇಕ್ಯಾತಾಸ್, ಹಕ್ಕಿ-ಪಿಕ್ಕಿ ಬುಡಕಟ್ಟು ಮಹಿಳೆಯರದೇ ಪ್ರಧಾನ ಪಾತ್ರ ವಹಿಸುತ್ತಾರೆ. ಹೀಗೆ ಪ್ರತಿಯೊಂದು ಕಲಾ ಪ್ರಕಾರದಲ್ಲಿಯೂ ಅಲೆಮಾರಿ ಜನಾಂಗದ ಮಹಿಳೆ ಶ್ರೀಮಂತಿಕೆಯನ್ನು ಹೊಂದಿರುವುದನ್ನು ನೋಡಬಹುದು. ಜಾನಪದ ಹೇಗೆ ಅಲೆಮಾರಿಗಳ ಆರ್ಥಿಕ ಶಕ್ತಿಯಾಗಿತ್ತೋ ಅದೇ ರೀತಿ ಧಾರ್ಮಿಕತೆಯ ಭಾಗವೂ ಆಗಿತ್ತು. ಹಲವು ಜಾನಪದ ಕಲಾ ಪ್ರಕಾರಗಳು ಅಲೆಮಾರಿಗಳ ಆರಾಧನಾ ಪರಂಪರೆಯ ಭಾಗವಾಗಿರುವುದನ್ನು ಗಮನಿಸಬಹುದು.
ಇಂತ ಅಲೆಮಾರಿ ಬೇಡ ಜಂಗಮ ಸಮಾಜವನ್ನು ಪ್ರತಿನಿಧಿಸುವ ಶೆಟ್ಟಿ ವಿಭೂತಿ ಅಲ್ಪಸ್ವಲ್ಪ ಓದಿದ್ದು, ಈ ಓದು ಇವರಿಗೆ ನೆರವಾಗಿದೆ. ಜಿಲ್ಲಾ ಅಲೆಮಾರಿ ಬುಡಕಟ್ಟು ಮಹಾಸಭಾದ ಅಧ್ಯಕ್ಷನಾಗಿರುವ ಶೆಟ್ಟಿ ವಿಭೂತಿ ಅಲೆಮಾರಿಗಳ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುವುದು, ಅನ್ಯಾಯವನ್ನು ಖಂಡಿಸುವುದು, ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ದೊರೆಕಿಸಿಕೊಡುವುದು, ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ತಮ್ಮ ಜನಾಂಗದವರಿಗೆ ನ್ಯಾಯದೊರಕಿಸಿಕೊಡುವುದು, ಸಾಮಾಜಿಕ ಹೋರಾಟಗಳನ್ನು ಸಂಘಟಿಸುವುದು, ಮೂಢನಂಬಿಕೆಗಳ ಜಾಗೃತಿ, ಶಿಕ್ಷಣಕ್ಕೆ ಆದ್ಯತೆ ಸೇರಿದಂತೆ ಸಮುದಾಯಕ್ಕೆ ಅಗತ್ಯವಿರುವ ಮೂಲಭೂತ ಅಗತ್ಯಗಳನ್ನು ಪಡೆಯುವ ಸಂಬಂಧ ವಿವಿಧ ಪ್ರಗತಿಪರ ಸಂಘಸಂಸ್ಥೆಗಳ ಸಹಕಾರದೊಂದಿಗೆ ಹಾವೇರಿಜಿಲ್ಲೆಯಲ್ಲಿ ಸಕ್ರಿಯರಾಗಿದ್ದಾರೆ.
ನಿರಂತರಹೋರಾಗಳ ಮೂಲಕ ಅಲೆಮಾರಿ ಸಮುದಾಯಗಳಿಗೆ ಸಂವಿಧಾನಾತ್ಮಕವಾಗಿ ಸಿಗಬೇಕಾದ ಎಲ್ಲಾ ಅವಕಾಶಗಳನ್ನು ಪಡೆಯುವಲ್ಲಿ ಹಂತಹಂತವಾಗಿ ಯಶಸ್ವಿಯಾಗಿದ್ದಾರೆ. ಆರಂಭದಲ್ಲಿ ಕೆಲವು ಅಲೆಮಾರಿಗಳಿಗೆ ಮತದಾರರ ಚೀಟಿಯನ್ನು ಮಾಡಿಸಿದರು. ಜೊತೆಗೆ ಮತದಾನದ ಮಹತ್ತ್ವವನ್ನು ತಾವೇ ಸಾರಿದರು. ಬಡಬಗ್ಗರಿಗೆ ರೇಷನ್ ಕಾರ್ಡ್, ಪೆನ್ಷನ್, ಆಧಾರ್ ಕಾರ್ಡ್ ಮಾಡಿಸಿ ಕೊಡುವಲ್ಲಿ ನೆರವಾಗಿದ್ದಾರೆ. ಹೀಗೆ ಹೋರಾಟದ ಬದುಕನ್ನು ರೂಪಿಸಿಕೊಂಡ ಶೆಟ್ಟಿ ವಿಭೂತಿ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾಧ್ಯಕ್ಷನಾಗಿ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುತ್ತಾ ಬಂದಿದ್ದಾರೆ. ಸಾಮಾಜಿಕ ಬದಲಾವಣೆಯ ಹೋರಾಟಗಳಲ್ಲಿ ತೊಡಗಿಸಿಕೊಳ್ಳುತ್ತಾ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹೆಸರಿನಲ್ಲಿ ನಖಲಿಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಇವರು ನಿರಂತರವಾಗಿ ಹೋರಾಟನಡೆಸಿದ್ದಾರೆ. ಅಲೆಮಾರಿಗಳ ಹಕ್ಕುಗಳನ್ನು ರಕ್ಷಿಸುವಲ್ಲಿ ಯಶಸ್ಸು ಕಂಡಿದ್ದಾರೆ.
ಶೆಟ್ಟಿ ವಿಭೂತಿ ಅವರ ದಿಟ್ಟ ವ್ಯಕ್ತಿತ್ವ ಸಮಾಜಕ್ಕೆ ಮಾದರಿಯಾಗಿದೆ. ಶಿಕ್ಷಣದಿಂದ ವಂಚಿತವಾಗಿರುವ ಅಲೆಮಾರಿ ಸಮಾಜದ ಮಕ್ಕಳಿಗೆ ಶಿಕ್ಷಣ ಕೊಡಿಸಲು ಶ್ರಮಿಸುತ್ತಿರವ ತಮ್ಮ ಅಲೆಮಾರಿ ಸಮಾಜದ ಮಕ್ಕಳಿಗೆ ತಮ್ಮ ಹರಕು-ಮುರಕ ಗುಡಿಸಲುಗಳ ಮುಂದೆ ತಾವೇ ಕೆಲವೊಮ್ಮೆ ಪಾಠ ಹೇಳಿಕೊಡುತ್ತಾರೆ. ಶಾಲೆಗೆ ಹೋಗುವ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ನಮ್ಮಂತವರನ್ನು ಕಾಡಿ-ಬೇಡಿ ಪಡೆದು ಅವರಿಗೆ ತಲುಪಿಸುತ್ತಾರೆ. ಶಿಕ್ಷಣದಿಂದ ಮಾತ್ರ ತಮ್ಮ ಅಲೆಮಾರಿ ಸಮಾಜದ ಪ್ರಗತಿ ಸಾಧ್ಯ ಎನ್ನುವುದನ್ನು ಅರಿತಿರುವ ಶೆಟ್ಟಿ ವಿಭೂತಿ ಮಕ್ಕಳಿಗೆ ಶಿಕ್ಷಣ ಒದಗಿಸಿದ್ದಾರೆ.
ಸರ್ಕಾರಿ ಸೌಲಭ್ಯಗಳನ್ನು ಅಲೆಮಾರಿಗಳ ಮನೆಬಾಗಿಲಿಗೇ ತಲುಪಿಸಿದ್ದಾರೆ. ಇಂದೂ ಈಗಲೂ ನ್ಯಾಯಕ್ಕಾಗಿ ಹೋರಾಡುತ್ತಾರೆ, ಎಲ್ಲಾ ಸಾಂವಿಧಾನಿಕ ಹಕ್ಕು ಮತ್ತು ಅವಕಾಶಗಳನ್ನು ಪಡೆಯಲು ಸಂಘಟನೆ ಕಟ್ಟುತ್ತಾರೆ. ಇವರ ಈ ಎಲ್ಲಾ ಹೋರಾಟಗಳಿಗೆ ಸ್ಥಳೀಯ ದಲಿತ ಸಂಘಟನೆಗಳ ಮುಖಂಡರು, ಸಾಮಾಜಿಕ ಚಿಂತಕರು ಇವರ ಬೆಂಬಲಕ್ಕೆ ನಿಂತಿದ್ದಾರೆ. ತಮ್ಮ ಅಲೆಮಾರಿ ಸಮಾಜದ ಕಟುಂಬಳಿಗೆ ಸೂರು ಒದಗಿಸಿಕೊಡಲು ಶೆಟ್ಟಿ ವಿಭೂತಿ ದೂರದ ಮುಂಬೈ ಮಹಾನಗರಕ್ಕೆ ಹೋಗಿ ಅಲ್ಲಿ ಸಾಮಾಜಿಕ ಕಳಕಳಿಯ ನಟ ಸೋನು ಸೂದ ಅವರನ್ನು ಭೇಟಿಯಾಗಿ ಬಂದದ್ದು ಉಂಟು. ತಮ್ಮ ಕಷ್ಟಕಾಲದಲ್ಲಿಯು ಸಹ ತಮ್ಮ ಇಬ್ಬರು ಮಕ್ಕಳನ್ನು ಸರಕಾರಿ ಶಾಲೆಯಲ್ಲಿ ಓದಿಸುವ ಮೂಲಕ ಈಗ ಸಮುದಾಯದ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ. ಶಿಕ್ಷಣ, ಸಂಘಟನೆ, ಹೋರಾಟ ಎಂಬ ಬಾಬಾಸಾಹೇಬ್ ಅಂಬೇಡ್ಕರರ ಚಿಂತನೆಯನ್ನು ಬದುಕಾಗಿಸಿಕೊಂಡು ಸಂಘರ್ಷದ ಹಾದಿಯಲ್ಲಿ ಅರಳುತ್ತಿರುವ ಶೆಟ್ಟಿ ವಿಭೂತಿ ನಮಗೆಲ್ಲ ಮಾದರಿಯಾಗಿದ್ದಾರೆ.
ಲೇಖನ: ಮಾಲತೇಶ ಅಂಗೂರ, ಹಾವೇರಿ
ಸಂಘರ್ಷದ ಹಾದಿಯಲ್ಲಿ ಅರಳುತ್ತಿರುವ ಸಾಮಾಜಿಕ ಹೋರಾಟಗಾರ ಶೆಟ್ಟಿ ವಿಭೂತಿ
Date:
ಸಂಘರ್ಷದ ಹಾದಿಯಲ್ಲಿ ಅರಳುತ್ತಿರುವ ಸಾಮಾಜಿಕ ಹೋರಾಟಗಾರ ಶೆಟ್ಟಿ ವಿಭೂತಿ
ನಿರ್ದಿಷ್ಟ ನೆಲೆ, ಮತ್ತು ನೆಲವೇ ಇಲ್ಲದ ವಿಳಾಸವೇ ಇಲ್ಲದ ಹತ್ತಾರು ಅಲೆಮಾರಿ ಕುಟುಂಬಗಳು ಹಾವೇರಿನಗರದ ಹೊರವಲಯದಲ್ಲಿನ ಶಾಂತಿನಗರದ ಬಳಿ ಹಾಗೂ ಜಿಲ್ಲಾಡಳಿತ ಭವನಕ್ಕೆ ಹೋಗುವ ಮಾರ್ಗಕ್ಕೆ ಹೊಂದಿಕೊಂಡಿರುವ ಬಯಲಿನಲ್ಲಿ ವಾಸವಿದ್ದು, ಹಲವಾರು ಸಂದರ್ಭಗಳಲ್ಲಿ ಈ ಅಲೆಮಾರಿಗಳನ್ನು ಭೇಟಿಯಾಗುತ್ತಾ ಕಿಂಚಿತ್ ಸಹಾಯಮಾಡುತ್ತಾ ಬಂದಿರುವ ಹಾವೇರಿಯ ಸಮಾನ ಮನಸ್ಕರಲ್ಲಿ ನಾನು ಒಬ್ಬನಾಗಿರುವೆ. ಕೊರೋನಾ ಸಂದರ್ಭದಲ್ಲಿ ಅಲೆಮಾರಿಗಳಿಗೆ ಅವರ ಮಕ್ಕಳಿಗೆ ಸ್ನೇಹಿತರ ನೆರವಿನಿಂದ ಅಗತ್ಯವಸ್ತುಗಳನ್ನು ಸಂಗ್ರಹಿಸಿ ಅಲೆಮಾರಿಗಳಿಗೆ ವಿತರಿಸುವ ವೇಳೆ ನನಗೆ ಪರಿಚಿತನಾದವ ಅಲೆಮಾರಿ ಸುಡುಗಾಡ ಸಿದ್ದರ ಸಮುದಾಯದ ಯುವಕ ಶೆಟ್ಟಿ ವಿಭೂತಿ.
ಹಾವೇರಿನಗರದ ಡಿಸಿ ಕಚೇರಿರಸ್ತೆಗೆ ಹೊಂದಿಕೊಂಡಿರುವ ತುಂಗಾಮೇಲ್ದಂಡೆ ಕಚೇರಿಯ ಎದುರಿನ ಬಯಲಿನಲ್ಲಿ ಟೆಂಟ್ನಲ್ಲಿ ವಾಸ ಇರುವ ಹಲವಾರು ಅಲೆಮಾರಿ ಕುಟುಂಬಗಳಲ್ಲಿ ಶೆಟ್ಟಿ ವಿಭೂತಿಯ ಕುಟುಂಬವು ಒಂದಾಗಿದ್ದು, ಆತನನ್ನು ಭೇಟಿಯಾದ ವೇಳೆ ಸರ್, “ನಮ್ಮಲ್ಲಿ ಹಲವಾರು ಮಕ್ಕಳಿದ್ದಾರೆ, ಅವರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅವರ ಶಿಕ್ಷಣಕ್ಕೆ ಏನಾದರೂ ಸಹಾಯ ಮಾಡಿ” ಎಂದು ತನ್ನ ತೆಲಗ ಮಿಶ್ರಿತ ವಿಚಿತ್ರಕನ್ನಡದಲ್ಲಿ ಹೇಳಿದ.
ಆ ವೇಳೆ ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಕಾರ್ಮಿಕ ಮುಖಂಡ ಎಂ. ಕರಬಸಪ್ಪ ಮತ್ತಿತರ ಹಿರಿಯರೊಂದಿಗೆ ಚರ್ಚಿಸಿ ಟೆಂಟ್ನಲ್ಲಿಯೇ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಅಲೆಮಾರಿ ಸಮುದಾಯದಲ್ಲಿ ನರ್ಸಿಂಗ್ ಓದುತ್ತಿರುವ ವಿದ್ಯಾರ್ಥಿನಿಗೆ ಮಕ್ಕಳಿಗೆ ಓದು-ಬರಹ ನೀಡುವ ಜವಾಬ್ದಾರಿ ವಹಿಸಿ ಮಕ್ಕಳ ಓದಿಗೆ ಅಗತ್ಯ ಇರುವ ಪಠ್ಯಪುಸ್ತಕಗಳನ್ನು ಹಾಗೂ ಕಲಿಕಾ ಸಾಮಗ್ರಿಗಳನ್ನು ನೀಡಲಾಗಿತ್ತು. ಅಲೆಮಾರಿ ಸಹೋದರಿ ತನ್ನ ಬಿಡುವಿನ ವೇಳೆ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡುವುದರ ಜೊತೆಗೆ ಮಕ್ಕಳಲ್ಲಿ, ಪಾಲಕರಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿ ಹೇಳುವ ಉತ್ತಮ ಕಾರ್ಯಮಾಡುತ್ತಿದ್ದಾಳೆ.
ಇಷ್ಟೇಲ್ಲಾ ವಿವರಣೆ ಯಾಕೆಂದರೇ, ಶೆಟ್ಟಿ ವಿಭೂತಿಯ ಶಿಕ್ಷಣದ ಬಗೆಗಿನ ಕಾಳಜಿಯನ್ನು ಮೆಚ್ಚಲೇಬೇಕು. ಅಸ್ತಿತ್ವವೇ ಇಲ್ಲದೇ ಅಸ್ಮಿತೆಯಂತಿರುವ ಋತುಮಾನಕ್ಕನುಗುಣವಾಗಿ ನೆಲೆ ಬದಲಿಸುವ ಅಲೆಮಾರಿಗಳು ಹೊಟ್ಟೆಪಾಡಿಗಾಗಿ ಸುಗ್ಗಿಕಾಲದಲ್ಲಿ ಸಮೃದ್ಧವಾಗಿ ಮಳೆ, ಬೆಳೆ ಆಗುವ ಕಡೆ ಗುಳೆ ಹೋದರೆ, ಇನ್ನುಳಿದ ಸಂದರ್ಭಗಳಲ್ಲಿ, ಎಲ್ಲಿ ಜಾತ್ರೆಗಳು, ಹಬ್ಬ-ಹರಿದಿನಗಳು ನಡೆಯುತ್ತವೋ ಅತ್ತ ಕಡೆ ಹೋಗಿ ಅಲ್ಲಿನ ಶಾಲಾ ಮೈದಾನದಲ್ಲೋ, ದೇವಸ್ಥಾನಗಳ ಬಳಿಯೋ ಅಥವಾ ಊರಿನ ಹೊರಗೋ ಸಾರ್ವಜನಿಕ ಸ್ಥಳಗಳಲ್ಲಿ ಟೆಂಟ್ ಅಥವಾ ಜೋಪಡಿಗಳನ್ನು ಹಾಕಿಕೊಂಡು ಅಲ್ಲೇ ತೊಗಲು ಗೊಂಬೆ, ದೊಂಬರಾಟ, ಮೋಡಿಯಾಟ, ಕೊರವಂಜಿ ಕಣಿ, ಹಗಲುವೇಷ, ಕೋಲಾಟ, ಹೀಗೆ ಜೀವನ ಮಾಡಲು ಕಲೆಗಳ ಪ್ರದರ್ಶನ ಮಾಡುತ್ತಾ ಬದುಕು ಸವೆಸುತ್ತಾರೆ.
ಇವರಿಗೆ ಖಾಯಂ ನೆಲೆ ಎಂಬುದು ಇಲ್ಲ. ಇವರು ಅಗತ್ಯವಿರುವ ಧವಸ-ಧಾನ್ಯಗಳ ಜೊತೆಗೆ ತಮ್ಮ ನೆಲೆಮೂಲ ಸಂಸ್ಕೃತಿ ಮತ್ತು ಕಲೆಯನ್ನು ಪ್ರಚಾರ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಇವರಲ್ಲಿ ಕೆಲವರು ಪಾರಂಪರಿಕ ಕರಕುಶಲ ಬಿದಿರು, ಮರಗೆಲಸ, ಕಬ್ಬಿಣದ ಸಲಕರಣೆಗಳ ಕಲೆಗಳನ್ನು, ಧಾರ್ಮಿಕ ಸಂಬಂಧಿ ವೃತ್ತಿ, ಪಾರಂಪರಿಕ ಮೂಲ ವೃತ್ತಿಗಳು, ಚಿಕ್ಕ-ಪುಟ್ಟವ್ಯಾಪಾರದಲ್ಲಿ ತೊಡಗಿದ್ದಾರೆ. ಇಂತಹ ನಿಕೃಷ್ಟ ಅಲೆಮಾರಿ ಬದುಕಿನ ಬವಣೆಯನ್ನು ಗಮನಿಸಿ ಪತ್ರಿಕೆಗಳು ವರದಿಗಳನ್ನು ಪ್ರಕಟಿಸಿವೆ, ಹತ್ತಾರು ಸ್ವಯಂಸೇವಾ ಸಂಸ್ಥೆಗಳು ಅಲೆಮಾರಿ ಮಕ್ಕಳ ಶಿಕ್ಷಣ, ಮೂಲಭೂತ ಸೌಕರ್ಯ, ವಸತಿ, ಭೂಮಿ ಹಾಗೂ ಅನೇಕ ನಾಗರೀಕ ಸೌಲಭ್ಯಗಳನ್ನು ಧಕ್ಕಿಸಿಕೊಡುವ ಹೋರಾಡುತ್ತಿವೆ. ಈ ಹೊತ್ತಿನಲ್ಲಿ ಇಂದಿನ ಜಾತಿ ಮತ್ತು ಧರ್ಮರಾಜಕಾರಣ ಸಂಕೀರ್ಣವಾದ ಸಂದಿಗ್ದತೆಯಲ್ಲಿ ರಾಜಕೀಯದ ಕ್ಷೇತ್ರವಂತೂ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳಗೆ ನಿಲುಕದ ನಕ್ಷತ್ರವಾಗಿಯೇ ಉಳಿದಿದೆ.
ಯಾವುದೇ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯವಿಲ್ಲದೇ ಅವರ ಅಮೂಲಾಗ್ರ ಪ್ರಗತಿ ಸಾಧ್ಯವಿಲ್ಲವೆಂಬುದು ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಘೋಷವಾಕ್ಯವಾಗಿತ್ತು. ಯಾವುದೇ ಸರ್ಕಾರ ಅಥವಾ ಅಧಿಕಾರಿಗಳು ಎಷ್ಟೇ ನಿಷ್ಟಾಂತವರಾಗಿ ಏನೇ ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ಅವುಗಳನ್ನು ಅನುಷ್ಠಾನ ಮಾಡುವ ಜಾಗಗಳಲ್ಲಿ ನೊಂದು ಅಲೆಮಾರಿ ಜನರ ಸಹಭಾಗಿತ್ವಕ್ಕೆ ಅವಕಾಶ ವಿಲ್ಲದೇ ಹೋದಲ್ಲಿ ಎಲ್ಲವೂ ಅನರ್ಥವಾದ ವ್ಯರ್ಥ ಪ್ರಯತ್ನವಾಗುತ್ತದೇ ವಿನಃ ಅದು ಎಂದಿಗೂ ಯಶಸ್ವಿಯಾಗುವುದಿಲ್ಲ.
ಅಲೆಮಾರಿ, ಅರೆ ಅಲೆಮಾರಿ, ವಿಮುಕ್ತ ಬುಡಕಟ್ಟು ಸಮುದಾಯಗಳ ಸಾಕಷ್ಟು ಖಿನ್ನತೆಗೆ ಒಳಗಾಗಿವೆ. ಈ ಖಿನ್ನತೆಗೆ ಕಾರಣ ಅವರು ಎದುರಿಸುತ್ತಿರುವ ಕೇವಲ ಬಡತನವಲ್ಲ. ಸಾಮಾಜಿಕ ಕಳಂಕ, ಸಾಮಾಜಿಕ ಅಸ್ಪೃಶ್ಯತೆ ಹಾಗೂ ಜಾಗತೀಕರಣದ ಕರಿನೆರಳಿನಿಂದ ತಮ್ಮೆಲ್ಲ ಸಾಂಪ್ರದಾಯಿಕ ವೃತ್ತಿಗಳು ಅಸ್ತಿತ್ವವನ್ನು ಕಳೆದುಕೊಂಡು ವೃತ್ತಿ ಜೀವಂತಿಕೆಯನ್ನು ಕಳೆದುಕೊಂಡು ಅವನತಿ ಹೊಂದಿ ತಮ್ಮ ನಿತ್ಯದ ಬದುಕು ಅತ್ಯಂತ ಕಠಿಣ ಪರಿಸ್ಥಿತಿಗೆ ದೂಡಲ್ಪಟ್ಟಿದ್ದು. ಜೊತೆಗೆ ಅನಾದಿ ಕಾಲದಿಂದಲೂ ರೂಡಿಸಿಕೊಂಡು ಬಂದಿದ್ದ ಹಲವು ಸಾಂಪ್ರದಾಯಿಕ ಕಲೆಗಳು ನವ ಮಾಧ್ಯಮಗಳ ಆಗಮನದಿಂದಾಗಿ ಅಳವಿನಂಚಿಗೆ ಹೋಗಿದ್ದು ಈ ಸಮುದಾಯಗಳ ಜಂಗಾಬಲವನ್ನೇ ಸರ್ವನಾಶ ಮಾಡಿಬಿಟ್ಟವು.
ಉದಾಹರಣೆಗೆ ಬೇಟೆಗಾರಿಕೆಗೆ. ಸರ್ಕಾರ ತಂದ ಹಲವು ವನ್ಯಜೀವಿ ಕಾಯ್ದೆಗಳ ಫಲವಾಗಿ ಬೇಟಿಗಾರಿಕೆಯಿಂದ ಈ ಸಮುದಾಯಗಳು ಸಂಪೂರ್ಣವಾಗಿ ವಿಮುಖರಾಗಬೇಕಾಯಿತು. ಅದೇ ರೀತಿ ಕರಡಿ ಆಡಿಸಿ ಜೀವನ ನಡೆಸುತ್ತಿದ್ದ ಖಲಂದರ್ ಸಮುದಾಯ, ಹಾವು ಆಡಿಸಿಕೊಂಡು ಬದುಕಿನ ಬಂಡಿ ನಡೆಸುತ್ತಿದ್ದ ಹಾವಾಡಿಗರು, ಕೋತಿ ಆಡಿಸುವವರು, ಗಿಣಿ ಶಾಸ್ತ್ರ ಹೇಳುವವರು ಸೇರಿದಂತೆ ಹಲವು ಈ ರೀತಿಯ ಕಲಾವಿದರು ತಮ್ಮ ವೃತ್ತಿಯಿಂದಲೇ ಸಮಪೂರ್ಣವಾಗಿ ವಿಮುಖರಾಗಬೇಕಾಯಿತು.
ಜಾಗತೀಕರಣ ಮತ್ತು ಆಧುನಿಕರಣದ ಗುಂಗಿನಲ್ಲಿ ಜನರು ಪರ್ಯಾಯ ಆಧುನಿಕ ತಂತ್ರಜ್ಞಾನದತ್ತ ಮುಖ ಮಾಡಿದರು. ಅಲೆಮಾರಿಗಳ ಮೌಖಿಕ ಕಾವ್ಯ, ಮಹಾಕಾವ್ಯ, ಕಥೆ, ಕಲೆಗಳು, ವೃತ್ತಿ ಗಾಯನ, ನೃತ್ಯಗಳು ವಿಧಿಯಿಲ್ಲದೆ ನೆಲೆಕಚ್ಚಿದವು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಿಂದ ತೀರಾ ಹಿಂದುಳಿದ ಈ ಸಮುದಾಯಗಳು ನಿರಂತರ ಶೋಷಣೆಗೆ ಒಳಗಾಗಿ ಅತಂತ್ರ ಸ್ಥಿತಿಯನ್ನು ಎದುರಿಸಿವೆ.
ಅಲೆಮಾರಿಗಳು ಸಾಮಾಜಿಕವಾಗಿ ಹಿಂದುಳಿದಿದ್ದರೂ ಅವರೆಂದಿಗೂ ಸಾಂಸ್ಕೃತಿಕವಾಗಿ ಸೊರಗಿದವರಲ್ಲ. ಪ್ರತಿಯೊಂದು ಅಲೆಮಾರಿ ಸಮುದಾಯವು ತನ್ನದೇ ಆದ ವಿಶಿಷ್ಟವಾದ ಜಾನಪದ ಕಲಾ ಪ್ರಕಾರಗಳನ್ನು ಹೊಂದಿವೆ. ಕಲೆಯೆ ಇವರ ಬದುಕಿನ ಭಾಗವಾಗಿ ಇವುಗಳು ಪಾರಂಪರಿಕವಾಗಿ ಬೆಳೆದು ಬಂದಿವೆ. ಅಲೆಮಾರಿಗಳ ಆರ್ಥಿಕ ಬೆನ್ನೆಲುಬು ಸಹಾ ಈ ಕಲೆಗಳೇ ಆಗಿದ್ದವು. ಈ ಕಲಾ ಪ್ರಕಾರಗಳಲ್ಲಿ ಪುರುಷರಷ್ಟೇ ಸಮವಾಗಿ ಮಹಿಳೆಯರೂ ಕೂಡ ಭಾಗಿಗಳಾಗುತ್ತಿದ್ದುದು ಒಂದು ವಿಶೇಷವೇ ಸರಿ. ಮಹಿಳೆಯರು ಕಲಾ ಪರಂಪರೆಯ ಜತೆ ತಮ್ಮದೇ ಆದ ಅನುಸಂಧಾನವನ್ನು ಮಾಡುತ್ತಲೇ ಬಂದಿದ್ದಾರೆ. ಹಲವು ಪ್ರದರ್ಶನಾತ್ಮಕ ಕಲೆಗಳಲ್ಲಿ ಮಹಿಳೆಯರು ಕಣಿಹೇಳುವುದು,ನೃತ್ಯ ಮಾಡುವುದು, ಸಂಗೀತ ವಾದ್ಯಗಳನ್ನು ನುಡಿಸುವಲ್ಲಿ ವಿಶೇಷವಾದ ಪರಿಣಿತಿಯನ್ನು ಹೊಂದಿರುವುದನ್ನು ಗಮನಿಸಬಹುದು.
ಬುಡುಗ-ಜಂಗಮ ಸಮುದಾಯದ ಮಹಿಳೆಯರು ತಮ್ಮ ಸಮುದಾಯದ ಪ್ರಮುಖ ಜಾನಪದ ಕಲೆಯಾದ ಹಗಲುವೇಷ ಕಲೆಯನ್ನು ಪ್ರಸ್ತುತ ಪಡಿಸುತ್ತಾ, ಊರೂರು ಸುತ್ತುತ್ತಾ, ಜಾನಪದ ಗೀತ, ಕಥನಗೀತೆಗಳು, ರಾಮಾಯಣ, ಮಹಾಭಾರತ ಮತ್ತು ಬುರ್ರಾಕಥೆಗಳನ್ನು ಹೇಳುತ್ತಾ, ನಾಟಕವಾಡುತ್ತಾ ತನ್ನ ಪತಿಗೆ ಸಹಾಯ ಮಾಡುತ್ತಾಳೆ. ಡೊಂಬರು ಪ್ರಮುಖವಾಗಿ ತಂತಿ ಅಥವಾ ಹಗ್ಗದ ಮೇಲೆ ನಡೆಯುವುದು, ಲಾಗ ಹಾಕುವುದು, ತಂತಿ ಮೇಲೆ ತಂಬಿಗೆ-ಕೊಡ ಇಟ್ಟುಕೊಂಡು ನಡೆಯುವುದು. ಮಂಡಿಗಾಲಿನಲ್ಲಿ ನಡೆಯುವುದು, ಕಬ್ಬಿಣ ಬಗ್ಗಿಸುವುದು, ಮುಂತಾದ ಆಟಗಳನ್ನು ಹಾಡುವುದರಲ್ಲಿ ನಿಸ್ಸೀಮರು. ಈ ಎಲ್ಲಾ ಕಲೆಗಳನ್ನು ಪ್ರದರ್ಶಿಸುವವರು ಮಹಿಳೆಯರೇ ಆಗಿರುತ್ತಾರೆ. ಚಿಕ್ಕ ಹುಡುಗಿಯಿಂದ ವಯಸ್ಕ ಮಹಿಳೆಯವರೆಗೂ ಎಲ್ಲಾ ಹೆಂಗಸರು ಈ ಕ್ಲಿಷ್ಠಕರ ಕಲೆಗಳನ್ನು ಪ್ರದರ್ಶಿಸುತ್ತಾರೆ.
ಇಲ್ಲಿ ಪುರುಷರು ಪ್ರಧಾನವಾಗಿ ಡೋಲು ಬಡಿಯುವ ಮತ್ತು ಕೊಳಲು ಊದುವ ಮೂಲಕ ಮಹಿಳೆಯರಿಗೆ ಉತ್ತೇಜನ ನೀಡುತ್ತಾರೆ. ಹೆಚ್ಚಿನ ಅಲೆಮಾರಿ ಸಮುದಾಯಗಳಲ್ಲಿ ಹಚ್ಚೆ ಹಾಕುವ ಕಲೆ ಕರಗತವಾಗಿರುತ್ತದೆ. ಪ್ರಮುಖವಾಗಿ ಹಚ್ಚೆ ಹಾಕುವ ಕಲೆಯಲ್ಲಿ ಕೊರಚ, ಕೊರಮ ಸಿಳ್ಳೇಕ್ಯಾತಾಸ್, ಹಕ್ಕಿ-ಪಿಕ್ಕಿ ಬುಡಕಟ್ಟು ಮಹಿಳೆಯರದೇ ಪ್ರಧಾನ ಪಾತ್ರ ವಹಿಸುತ್ತಾರೆ. ಹೀಗೆ ಪ್ರತಿಯೊಂದು ಕಲಾ ಪ್ರಕಾರದಲ್ಲಿಯೂ ಅಲೆಮಾರಿ ಜನಾಂಗದ ಮಹಿಳೆ ಶ್ರೀಮಂತಿಕೆಯನ್ನು ಹೊಂದಿರುವುದನ್ನು ನೋಡಬಹುದು. ಜಾನಪದ ಹೇಗೆ ಅಲೆಮಾರಿಗಳ ಆರ್ಥಿಕ ಶಕ್ತಿಯಾಗಿತ್ತೋ ಅದೇ ರೀತಿ ಧಾರ್ಮಿಕತೆಯ ಭಾಗವೂ ಆಗಿತ್ತು. ಹಲವು ಜಾನಪದ ಕಲಾ ಪ್ರಕಾರಗಳು ಅಲೆಮಾರಿಗಳ ಆರಾಧನಾ ಪರಂಪರೆಯ ಭಾಗವಾಗಿರುವುದನ್ನು ಗಮನಿಸಬಹುದು.
ಇಂತ ಅಲೆಮಾರಿ ಬೇಡ ಜಂಗಮ ಸಮಾಜವನ್ನು ಪ್ರತಿನಿಧಿಸುವ ಶೆಟ್ಟಿ ವಿಭೂತಿ ಅಲ್ಪಸ್ವಲ್ಪ ಓದಿದ್ದು, ಈ ಓದು ಇವರಿಗೆ ನೆರವಾಗಿದೆ. ಜಿಲ್ಲಾ ಅಲೆಮಾರಿ ಬುಡಕಟ್ಟು ಮಹಾಸಭಾದ ಅಧ್ಯಕ್ಷನಾಗಿರುವ ಶೆಟ್ಟಿ ವಿಭೂತಿ ಅಲೆಮಾರಿಗಳ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುವುದು, ಅನ್ಯಾಯವನ್ನು ಖಂಡಿಸುವುದು, ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ದೊರೆಕಿಸಿಕೊಡುವುದು, ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ತಮ್ಮ ಜನಾಂಗದವರಿಗೆ ನ್ಯಾಯದೊರಕಿಸಿಕೊಡುವುದು, ಸಾಮಾಜಿಕ ಹೋರಾಟಗಳನ್ನು ಸಂಘಟಿಸುವುದು, ಮೂಢನಂಬಿಕೆಗಳ ಜಾಗೃತಿ, ಶಿಕ್ಷಣಕ್ಕೆ ಆದ್ಯತೆ ಸೇರಿದಂತೆ ಸಮುದಾಯಕ್ಕೆ ಅಗತ್ಯವಿರುವ ಮೂಲಭೂತ ಅಗತ್ಯಗಳನ್ನು ಪಡೆಯುವ ಸಂಬಂಧ ವಿವಿಧ ಪ್ರಗತಿಪರ ಸಂಘಸಂಸ್ಥೆಗಳ ಸಹಕಾರದೊಂದಿಗೆ ಹಾವೇರಿಜಿಲ್ಲೆಯಲ್ಲಿ ಸಕ್ರಿಯರಾಗಿದ್ದಾರೆ.
ನಿರಂತರಹೋರಾಗಳ ಮೂಲಕ ಅಲೆಮಾರಿ ಸಮುದಾಯಗಳಿಗೆ ಸಂವಿಧಾನಾತ್ಮಕವಾಗಿ ಸಿಗಬೇಕಾದ ಎಲ್ಲಾ ಅವಕಾಶಗಳನ್ನು ಪಡೆಯುವಲ್ಲಿ ಹಂತಹಂತವಾಗಿ ಯಶಸ್ವಿಯಾಗಿದ್ದಾರೆ. ಆರಂಭದಲ್ಲಿ ಕೆಲವು ಅಲೆಮಾರಿಗಳಿಗೆ ಮತದಾರರ ಚೀಟಿಯನ್ನು ಮಾಡಿಸಿದರು. ಜೊತೆಗೆ ಮತದಾನದ ಮಹತ್ತ್ವವನ್ನು ತಾವೇ ಸಾರಿದರು. ಬಡಬಗ್ಗರಿಗೆ ರೇಷನ್ ಕಾರ್ಡ್, ಪೆನ್ಷನ್, ಆಧಾರ್ ಕಾರ್ಡ್ ಮಾಡಿಸಿ ಕೊಡುವಲ್ಲಿ ನೆರವಾಗಿದ್ದಾರೆ. ಹೀಗೆ ಹೋರಾಟದ ಬದುಕನ್ನು ರೂಪಿಸಿಕೊಂಡ ಶೆಟ್ಟಿ ವಿಭೂತಿ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾಧ್ಯಕ್ಷನಾಗಿ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುತ್ತಾ ಬಂದಿದ್ದಾರೆ. ಸಾಮಾಜಿಕ ಬದಲಾವಣೆಯ ಹೋರಾಟಗಳಲ್ಲಿ ತೊಡಗಿಸಿಕೊಳ್ಳುತ್ತಾ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹೆಸರಿನಲ್ಲಿ ನಖಲಿಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಇವರು ನಿರಂತರವಾಗಿ ಹೋರಾಟನಡೆಸಿದ್ದಾರೆ. ಅಲೆಮಾರಿಗಳ ಹಕ್ಕುಗಳನ್ನು ರಕ್ಷಿಸುವಲ್ಲಿ ಯಶಸ್ಸು ಕಂಡಿದ್ದಾರೆ.
ಶೆಟ್ಟಿ ವಿಭೂತಿ ಅವರ ದಿಟ್ಟ ವ್ಯಕ್ತಿತ್ವ ಸಮಾಜಕ್ಕೆ ಮಾದರಿಯಾಗಿದೆ. ಶಿಕ್ಷಣದಿಂದ ವಂಚಿತವಾಗಿರುವ ಅಲೆಮಾರಿ ಸಮಾಜದ ಮಕ್ಕಳಿಗೆ ಶಿಕ್ಷಣ ಕೊಡಿಸಲು ಶ್ರಮಿಸುತ್ತಿರವ ತಮ್ಮ ಅಲೆಮಾರಿ ಸಮಾಜದ ಮಕ್ಕಳಿಗೆ ತಮ್ಮ ಹರಕು-ಮುರಕ ಗುಡಿಸಲುಗಳ ಮುಂದೆ ತಾವೇ ಕೆಲವೊಮ್ಮೆ ಪಾಠ ಹೇಳಿಕೊಡುತ್ತಾರೆ. ಶಾಲೆಗೆ ಹೋಗುವ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ನಮ್ಮಂತವರನ್ನು ಕಾಡಿ-ಬೇಡಿ ಪಡೆದು ಅವರಿಗೆ ತಲುಪಿಸುತ್ತಾರೆ. ಶಿಕ್ಷಣದಿಂದ ಮಾತ್ರ ತಮ್ಮ ಅಲೆಮಾರಿ ಸಮಾಜದ ಪ್ರಗತಿ ಸಾಧ್ಯ ಎನ್ನುವುದನ್ನು ಅರಿತಿರುವ ಶೆಟ್ಟಿ ವಿಭೂತಿ ಮಕ್ಕಳಿಗೆ ಶಿಕ್ಷಣ ಒದಗಿಸಿದ್ದಾರೆ.
ಸರ್ಕಾರಿ ಸೌಲಭ್ಯಗಳನ್ನು ಅಲೆಮಾರಿಗಳ ಮನೆಬಾಗಿಲಿಗೇ ತಲುಪಿಸಿದ್ದಾರೆ. ಇಂದೂ ಈಗಲೂ ನ್ಯಾಯಕ್ಕಾಗಿ ಹೋರಾಡುತ್ತಾರೆ, ಎಲ್ಲಾ ಸಾಂವಿಧಾನಿಕ ಹಕ್ಕು ಮತ್ತು ಅವಕಾಶಗಳನ್ನು ಪಡೆಯಲು ಸಂಘಟನೆ ಕಟ್ಟುತ್ತಾರೆ. ಇವರ ಈ ಎಲ್ಲಾ ಹೋರಾಟಗಳಿಗೆ ಸ್ಥಳೀಯ ದಲಿತ ಸಂಘಟನೆಗಳ ಮುಖಂಡರು, ಸಾಮಾಜಿಕ ಚಿಂತಕರು ಇವರ ಬೆಂಬಲಕ್ಕೆ ನಿಂತಿದ್ದಾರೆ. ತಮ್ಮ ಅಲೆಮಾರಿ ಸಮಾಜದ ಕಟುಂಬಳಿಗೆ ಸೂರು ಒದಗಿಸಿಕೊಡಲು ಶೆಟ್ಟಿ ವಿಭೂತಿ ದೂರದ ಮುಂಬೈ ಮಹಾನಗರಕ್ಕೆ ಹೋಗಿ ಅಲ್ಲಿ ಸಾಮಾಜಿಕ ಕಳಕಳಿಯ ನಟ ಸೋನು ಸೂದ ಅವರನ್ನು ಭೇಟಿಯಾಗಿ ಬಂದದ್ದು ಉಂಟು. ತಮ್ಮ ಕಷ್ಟಕಾಲದಲ್ಲಿಯು ಸಹ ತಮ್ಮ ಇಬ್ಬರು ಮಕ್ಕಳನ್ನು ಸರಕಾರಿ ಶಾಲೆಯಲ್ಲಿ ಓದಿಸುವ ಮೂಲಕ ಈಗ ಸಮುದಾಯದ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ. ಶಿಕ್ಷಣ, ಸಂಘಟನೆ, ಹೋರಾಟ ಎಂಬ ಬಾಬಾಸಾಹೇಬ್ ಅಂಬೇಡ್ಕರರ ಚಿಂತನೆಯನ್ನು ಬದುಕಾಗಿಸಿಕೊಂಡು ಸಂಘರ್ಷದ ಹಾದಿಯಲ್ಲಿ ಅರಳುತ್ತಿರುವ ಶೆಟ್ಟಿ ವಿಭೂತಿ ನಮಗೆಲ್ಲ ಮಾದರಿಯಾಗಿದ್ದಾರೆ.
ಲೇಖನ: ಮಾಲತೇಶ ಅಂಗೂರ, ಹಾವೇರಿ