ಸವಣೂರು ಪುರಸಭೆಯ ಕರವಸೂಲಿಗಾರ ಗಾರ ಸುನೀಲ್ ಪೂಜಾರ್ ಲೋಕಾಯುಕ್ತರ ಬಲೆಗೆ
ಹಾವೇರಿ: ಲಂಚದ ಹಣಕ್ಕೆ ಬೇಡಿಕೆ ಇಟ್ಟ ಹಾವೇರಿ ಜಿಲ್ಲೆ ಸವಣೂರು ಪುರಸಭೆಯ ಸರ್ಕಾರಿ ಉದ್ಯೋಗಿ ಕರವಸೂಲಿಗಾರ ಸುನೀಲ್ ಪೂಜಾರ್ ಬುಧವಾರ ಲಂಚದ ಹಣವನ್ನು ಪಡೆಯುವಾಗ ಲೋಕಾಯುಕ್ತರು ದಾಳಿ ನಡೆಸಿ ಟ್ರ್ಯಾಪ್ ಮಾಡಿ ಕರವಸೂಲಿಗಾರ ಸುನೀಲ್ ಪೂಜಾರ್ ವಶಕ್ಕೆ ಪಡೆದಿದ್ದಾರೆ.
ಸವಣೂರು ಪಟ್ಟಣದ ಎಲಿ ವ್ಯಾಪಾರಿ ಹುಸೇನ್ ಮಿಯಾ ಬಿನ್ ದಸ್ತಗೀರ್ ಸಾಬ್ ರಾಯಚೂರು, ತನ್ನ ಮನೆಯ ಇ-ಸ್ವತ್ತು ಮಾಡಿಸಲು ಹೋದಾಗ ಮನೆಯ ಅಳತೆಯು ದಾಖಲೆಗಳಲ್ಲಿ ವ್ಯತ್ಯಾಸವಾಗಿದ್ದನ್ನು ಸರಿಪಡಿಸಿಕೊಡಲು ಕೋರಿ ಸವಣೂರು ಪುರಸಭೆಗೆ ಮನವಿ ಸಲ್ಲಿಸಿಕೊಂಡಿದ್ದು, ಸದರಿ ಕೆಲಸ ಮಾಡಿಕೊಡಲು ಸವಣೂರು ಪುರಸಭೆಯ ಕರವಸೂಲಿಗಾರ ಸುನೀಲ್ ಪೂಜಾರ್ ರೂ.೧೫,೦೦೦/-ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಸದರಿ ಅಧಿಕಾರಿಯು ದಿ:೦೧/೦೨/೨೦೨೩ ರಂದು ಮಧ್ಯಾಹ್ನ ಪಿರಾದಿದಾರರಿಂದ ರೂ೧೫,೦೦೦/-ಲಂಚದ ಹಣವನ್ನು ಪುರಸಭೆ ಕಾರ್ಯಾಲಯ ಕಟ್ಟಡದ ಮುಖ್ಯದ್ವಾರದ ಮುಂಭಾಗದಲ್ಲಿ ಪಡೆಯುವಾಗ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಎ.ಡಿ.ಜಿ.ಪಿ, ಕ.ಲೋ ಬೆಂಗಳೂರು, ಐ.ಜಿ.ಪಿ. ಕ.ಲೋ. ಬೆಂಗಳೂರು, ಎಸ್.ಪಿ. ಕ.ಲೋ. ದಾವಣಗೆರೆ ಅವರ ಮಾರ್ಗದರ್ಶನದಲ್ಲಿ ಚಂದ್ರಶೇಖರ್.ಬಿ.ಪಿ. ಡಿವೈ.ಎಸ್.ಪಿ. ಕ.ಲೋ, ಹಾವೇರಿ ಅವರ ನೇತೃತ್ವದಲ್ಲಿ ತನಿಖಾಧಿಕಾರಿಯಾದ ಮಧುಸೂದನ್ ಸಿ. ಪಿ.ಐ, ಕ.ಲೋ, ಹಾವೇರಿ ಹಾಗೂ ಸಿಬ್ಬಂದಿಯವರಾದ ಎಂ.ಕೆ.ಲಕ್ಷ್ಮೀಶ್ವರ, ಆನಂದ ಟಿ.ಇ, ತಿರುಮಲೆ ತಳಕಲ್, ಎಸ್.ಎನ್.ಕಡಕೋಳ್, ಎಂ.ಸಿ. ಅರಸೀಕೆರಿ, ಬಿ.ಎಸ್.ಸಂಕಣ್ಣವರ್, ಎಂ.ಎಸ್.ಕೊಂಬಳಿ ಅವರ ತಂಡದವರು ಯಶಸ್ವಿ ಟ್ರಾಪ್ ಕಾರ್ಯಾಚರಣೆ ನಡೆಸಿ ಕರವಸೂಲಿಗಾರ ಟ್ರಾಪ್ ಮಾಡಿ ದಸ್ತಗಿರಿ ಮಾಡಿರುತ್ತಾರೆ ತನಿಖೆ ಮುಂದುವರೆದಿದೆ.
ಸವಣೂರು ಪುರಸಭೆಯ ಕರವಸೂಲಿಗಾರ ಗಾರ ಸುನೀಲ್ ಪೂಜಾರ್ ಲೋಕಾಯುಕ್ತರ ಬಲೆಗೆ
Date:
ಸವಣೂರು ಪುರಸಭೆಯ ಕರವಸೂಲಿಗಾರ ಗಾರ ಸುನೀಲ್ ಪೂಜಾರ್ ಲೋಕಾಯುಕ್ತರ ಬಲೆಗೆ
ಹಾವೇರಿ: ಲಂಚದ ಹಣಕ್ಕೆ ಬೇಡಿಕೆ ಇಟ್ಟ ಹಾವೇರಿ ಜಿಲ್ಲೆ ಸವಣೂರು ಪುರಸಭೆಯ ಸರ್ಕಾರಿ ಉದ್ಯೋಗಿ ಕರವಸೂಲಿಗಾರ ಸುನೀಲ್ ಪೂಜಾರ್ ಬುಧವಾರ ಲಂಚದ ಹಣವನ್ನು ಪಡೆಯುವಾಗ ಲೋಕಾಯುಕ್ತರು ದಾಳಿ ನಡೆಸಿ ಟ್ರ್ಯಾಪ್ ಮಾಡಿ ಕರವಸೂಲಿಗಾರ ಸುನೀಲ್ ಪೂಜಾರ್ ವಶಕ್ಕೆ ಪಡೆದಿದ್ದಾರೆ.
ಸವಣೂರು ಪಟ್ಟಣದ ಎಲಿ ವ್ಯಾಪಾರಿ ಹುಸೇನ್ ಮಿಯಾ ಬಿನ್ ದಸ್ತಗೀರ್ ಸಾಬ್ ರಾಯಚೂರು, ತನ್ನ ಮನೆಯ ಇ-ಸ್ವತ್ತು ಮಾಡಿಸಲು ಹೋದಾಗ ಮನೆಯ ಅಳತೆಯು ದಾಖಲೆಗಳಲ್ಲಿ ವ್ಯತ್ಯಾಸವಾಗಿದ್ದನ್ನು ಸರಿಪಡಿಸಿಕೊಡಲು ಕೋರಿ ಸವಣೂರು ಪುರಸಭೆಗೆ ಮನವಿ ಸಲ್ಲಿಸಿಕೊಂಡಿದ್ದು, ಸದರಿ ಕೆಲಸ ಮಾಡಿಕೊಡಲು ಸವಣೂರು ಪುರಸಭೆಯ ಕರವಸೂಲಿಗಾರ ಸುನೀಲ್ ಪೂಜಾರ್ ರೂ.೧೫,೦೦೦/-ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಸದರಿ ಅಧಿಕಾರಿಯು ದಿ:೦೧/೦೨/೨೦೨೩ ರಂದು ಮಧ್ಯಾಹ್ನ ಪಿರಾದಿದಾರರಿಂದ ರೂ೧೫,೦೦೦/-ಲಂಚದ ಹಣವನ್ನು ಪುರಸಭೆ ಕಾರ್ಯಾಲಯ ಕಟ್ಟಡದ ಮುಖ್ಯದ್ವಾರದ ಮುಂಭಾಗದಲ್ಲಿ ಪಡೆಯುವಾಗ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಎ.ಡಿ.ಜಿ.ಪಿ, ಕ.ಲೋ ಬೆಂಗಳೂರು, ಐ.ಜಿ.ಪಿ. ಕ.ಲೋ. ಬೆಂಗಳೂರು, ಎಸ್.ಪಿ. ಕ.ಲೋ. ದಾವಣಗೆರೆ ಅವರ ಮಾರ್ಗದರ್ಶನದಲ್ಲಿ ಚಂದ್ರಶೇಖರ್.ಬಿ.ಪಿ. ಡಿವೈ.ಎಸ್.ಪಿ. ಕ.ಲೋ, ಹಾವೇರಿ ಅವರ ನೇತೃತ್ವದಲ್ಲಿ ತನಿಖಾಧಿಕಾರಿಯಾದ ಮಧುಸೂದನ್ ಸಿ. ಪಿ.ಐ, ಕ.ಲೋ, ಹಾವೇರಿ ಹಾಗೂ ಸಿಬ್ಬಂದಿಯವರಾದ ಎಂ.ಕೆ.ಲಕ್ಷ್ಮೀಶ್ವರ, ಆನಂದ ಟಿ.ಇ, ತಿರುಮಲೆ ತಳಕಲ್, ಎಸ್.ಎನ್.ಕಡಕೋಳ್, ಎಂ.ಸಿ. ಅರಸೀಕೆರಿ, ಬಿ.ಎಸ್.ಸಂಕಣ್ಣವರ್, ಎಂ.ಎಸ್.ಕೊಂಬಳಿ ಅವರ ತಂಡದವರು ಯಶಸ್ವಿ ಟ್ರಾಪ್ ಕಾರ್ಯಾಚರಣೆ ನಡೆಸಿ ಕರವಸೂಲಿಗಾರ ಟ್ರಾಪ್ ಮಾಡಿ ದಸ್ತಗಿರಿ ಮಾಡಿರುತ್ತಾರೆ ತನಿಖೆ ಮುಂದುವರೆದಿದೆ.