ಸಾವಯವಕೃಷಿ ಸಲಹೆಗಾರ ಡಾ.ಕುಲಕರ್ಣಿಗೆ ಕಾರು ಉಡುಗೊರೆ ನೀಡಿದ ಅನ್ನದಾತ ಶೇಖರಗೌಡ ಪಾಟೀಲ
ಮಾಲತೇಶ ಅಂಗೂರ
ಹಾವೇರಿ: ಇಂದಿನ ಅನಿಶ್ಚಿತೆಯ ಮಳೆಗಾಲದ ಸಂದರ್ಭದಲ್ಲಿ ಅತಿವೃಷ್ಟಿ-ಅನಾವೃಷ್ಟಿ, ಬರದಂತಹ ಅನೇಕ ತಲ್ಲಣಗಳನ್ನು ಕೃಷಿ ಕ್ಷೇತ್ರ ಎದುರಿಸುತ್ತಿದೆ. ಈ ಮಧ್ಯೆ ಅಲ್ಲೊಂದು, ಇಲ್ಲೊಂದು ಉಳಿದಿರುವ ಸಾವಯವ ಕೃಷಿಪದ್ದತಿಯಲ್ಲಿ ಅನೇಕ ಸಾಧಕ ರೈತರು ಸಾವಯವ ಕೃಷಿಯಲ್ಲಿ ಸಾಧನೆ ಮಾಡುವ ಮೂಲಕ “ಸಾವಯವಕ್ಕೆ ಸಾವಿಲ್ಲ, ಅದು ಸದಾ ರೈತನ ಕೈಹಿಡಿಯುತ್ತದೆ” ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ. ಇಂತ ಸಾಧಕರು ಹಾವೇರಿಜಿಲ್ಲೆಯ ರಟ್ಟಿಹಳ್ಳಿತಾಲೂಕಿನ ಸಾವಿರ ವಚನಗಳ ಸರದಾರ, ಸಾವಯವ ಕೃಷಿ ತಜ್ಞ, ಅಧ್ಯಾತ್ಮ ಚಿಂತಕ, ಪ್ರಗತಿಪರ ರೈತರಾಗಿರುವ ಶೇಖರಗೌಡ ಬಿ ಪಾಟೀಲ ಒಬ್ಬರಾಗಿದ್ದಾರೆ.
ಇದೀಗ ಶೇಖರಗೌಡ ಪಾಟೀಲರು ಹಾವೇರಿ ತಾಲೂಕಿನ ಕೋಣನತಂಬಿಗೆಗ್ರಾಮದ “ಸಾವಯವ ಕೃಷಿ ಸಲಹೆಗಾರ ಡಾ. ಗಂಗಯ್ಯ ಶಾಂತಯ್ಯ ಕುಲಕರ್ಣಿ ಅವರಿಗೆ ಹೋಂಡಾಯ ಕಂಪನಿಯ ಅಯ್ಟೆನ್ ಕಾರನ್ನು ಪ್ರೀತಿಯಿಂದ ಉಡಿಗೊರೆಯಾಗಿ ನೀಡುವ ಮೂಲಕ ಸಾವಯವ ಕೃಷಿ ಸಲಹೆಗಾರ ಕುಲಕರ್ಣಿಅವರ ಸಾವಯವ ಕೃಷಿ ಪ್ರೀತಿಗೆ ಆದರ, ಆತಿಥ್ಯ ನೀಡುವ ಮೂಲಕ ತಮ್ಮ ಸಾವಯವ ಕೃಷಿ ಪ್ರೀತಿಯನ್ನು ತೋರಿಸಿದ್ದಾರೆ”.
ಶೇಖರಗೌಡ ಪಾಟೀಲ ಅವರು ತಮ್ಮ ಜಮೀನಿನಲ್ಲಿ ಸಾವಯವ ಪದ್ದತಿಯಲ್ಲಿ ಬೆಳೆಗಳನ್ನು ಬೆಳೆಯುತ್ತಾ ಬಂದಿದ್ದು, ಇವರಿಗೆ ಕಾಲಕಾಲಕ್ಕೆ ಡಾ.ಗಂಗಯ್ಯ ಕುಲಕರ್ಣಿ ಸಲಹೆ ನೀಡುತ್ತಾ ಬಂದಿದ್ದಾರೆ. “ಸಾವಯವ ಕೃಷಿ ರೈತರನ್ನು ಕೈಹಿಡಿಯುತ್ತಾ ಬಂದಿದ್ದು, ಸದಾ ನಷ್ಟ ಅನುಭವಿಸುತ್ತಿದ್ದ ರೈತರು ಸಾವಯವ ಕೃಷಿಯಿಂದ ಲಾಭವನ್ನು ಕಾಣಬಹುದು ಎನ್ನುವುದಕ್ಕೆ ಕುಲಕರ್ಣಿ ಅವರ ಮಾರ್ಗದರ್ಶನ ಉಪಯುಕ್ತವಾಗಿದೆ”.
ಹಾವೇರಿ ತಾಲೂಕಿನ ಕೋಣನತಂಬಗಿ ಗ್ರಾಮದ ನಿವಾಸಿ, ಯುವ ಬರಹಗಾರರು, ಸಾವಯವ ಕೃಷಿ ಸಲಹೆಗಾರ ಡಾ. ಗಂಗಯ್ಯ ಕೃಷಿ ಕ್ಷೇತ್ರವಲ್ಲದೇ ಸಾಹಿತ್ಯ, ಶಿಕ್ಷಣ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸದ್ದಿಲ್ಲದೇ ಸಾಧನೆ ಮಾಡುತ್ತಾ ಬಂದಿದ್ದಾರೆ. ಅದರಲ್ಲೂ ವಿಶೇಷವಾಗಿ ಸಾವಯ ಕೃಷಿ ಕ್ಷೇತ್ರದದಲ್ಲಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಅಭೂತಪೂರ್ವ ಸೇವೆಯನ್ನು ಗುರುತಿಸಿ ಇವರ ಸೇವೆ ಇನ್ನೊಷ್ಟು ವಿಸ್ತಾರವಾಗಲಿ ಎಂದು ಶೇಖರಗೌಡ ಪಾಟೀಲ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಡಾ. ಗಂಗಯ್ಯ. ಕುಲಕರ್ಣಿಪರಿಚಯ: ಡಾ. ಗಂಗಯ್ಯ. ಕುಲಕರ್ಣಿ ತಮ್ಮ ಡಿಎನ್ವಾಯ್ಎಸ್ ವಿದ್ಯಾಬ್ಯಾಸ ಪೂರ್ಣಗೊಂಡ ನಂತರ ವಿದ್ಯಾರ್ಥಿ ದೆಸೆಯಿಂದಲೇ ವಿದ್ಯಾರ್ಥಿ -ಯುವ ಜನತೆ, ರೈತ-ಕೃಷಿ ಕಾರ್ಮಿಕರ ಪರವಾಗಿ ಹೋರಾಡುತ್ತ ಹಲವಾರು ಐತಿಹಾಸಿಕ ಹೋರಾಟಗಳಲ್ಲಿ ಪಾಲ್ಗೊಂಡು Sಈi ಮತ್ತು ಆಙಈI ಸಂಘಟನೆಯ ಮೂಲಕ ಅನೇಕ ಬಾರಿ ಬೆಂಗಳೂರು ಚಲೋ ಮಾಡಿ ಹಾವೇರಿ ಜಿಲ್ಲಾ ಕೇಂದ್ರಕ್ಕೆ ಪದವಿ ಮತ್ತು ಪದವಿ ಪೂರ್ವ ಮಹಾವಿದ್ಯಾಲಯ ಮಂಜುರಾಗಲು ಹೋರಾಡಿದ್ದಾರೆ.
ಕಳೆದ ಇಪ್ಪತ್ತು ವರ್ಷಗಳಿಂದ ಕೃಷಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಂಪೂರ್ಣ ಕ್ರಿಯಾಶೀಲರಾಗಿದ್ದು, ಕನ್ನಡ ನೆಲೆ, ಜಲ, ಭಾಷೆ, ಸಂಸ್ಕೃತಿ, ಸಾಹಿತ್ಯ ಕ್ಷೇತ್ರದ ಉಳಿವಿಗಾಗಿ, ದೇಶದ ಬೆನ್ನೆಲುಬಾದ ಅನ್ನದಾತನ ಅಭಿರುದ್ದಿಗಾಗಿ ಅದರಲ್ಲೂ ವಿಶೇಷವಾಗಿ ರೈತ ಸಮುದಾಯವನ್ನು ರಾಸಾಯನಿಕ ಕೃಷಿಯಿಂದ ಸಾವಯವ ಕೃಷಿಗೆ ಪ್ರಾಯೋಗಿಕವಾಗಿ ಪರಿವರ್ತನೆ ಮಾಡಿದ ಭಾಗವಾಗಿ ಎಂಬಿಎಫ್ ಸಂಸ್ಥೆಯಿಂದ ರಾಷ್ಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಾಹಿತ್ಯ ಕ್ಷೇತ್ರದ ಜೊತೆಗೆ ಅವಿನಾಭಾವ ಸಂಬಂಧ ಹೊಂದಿರುವ ಗಂಗಯ್ಯ ಕಚುಸಾಪ ರಾಜ್ಯ ಸಂಚಾಲಕ ಕೃಷ್ಣ ಮೂರ್ತಿ ಕುಲಕರ್ಣಿ ಸಹಕಾರದೊಂದಿಗೆ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ನ ಮೂಲಕ ಅನ್ನದಾತನ ಸಮಗ್ರ ಅಭಿರುದ್ಧಿಗಾಗಿ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ರೈತ ಗೋಷ್ಠಿ, ವಿಚಾರ ಸಂಕೀರಣ ಹಾಗೂ ರೈತ ದಿನಾಚರಣೆ ಆಚರಿಸುವ ಮೂಲಕ, ರೈತರ ಚಿತ್ತ ಸಾವಯವ ಕೃಷಿಯತ್ತ, ಸಾವಯವ ಕೃಷಿಯ ಎಲ್ಲ ಪರಿಹಾರಗಳು ಒಂದೆ ಸುರಿನಡಿ, ಹೀಗೆ ಹಲವಾರು ನೂತನ ಕಾರ್ಯಕ್ರಮಗಳನ್ನು ಆಯೋಜಿಸಿ ರಾಜ್ಯಾದ್ಯಂತ ರೈತ ಜಾಗೃತಿ ಕಾರ್ಯಕ್ರಮ ಮಾಡುವುದರ ಮೂಲಕ ರೈತರಿಗೆ ಸಾವಯವ ಕೃಷಿ ಮಹತ್ವ ತಿಳಿಸಿಕೊಡುತ್ತಿರುವುದು ವಿಶೇಷ.
ಇಂದು ಕೃಷಿಯಲ್ಲಿ ಅತಿಯಾದ ರಾಸಾಯನಿಕ ಗೊಬ್ಬರ, ಕೀಟನಾಶ ಮತ್ತು ಕಳೆನಾಶಕಗಳ ಉಪಯೋಗದಿಂದ ಮಣ್ಣಿನಲ್ಲಿ ಸಾವಯವ ಇಂಗಾಲ ಕಡಿಮೆಯಾಗಿ ಭೂಮಿ ಬರಡಾಗುತ್ತಿದೆ. ಆ ಮೂಲಕ ಪ್ರಕೃತಿ ಮತ್ತು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ರೈತ ಸಮುದಾಯವನ್ನು ರಾಸಾಯನಿಕ ಕೃಷಿಯಿಂದ ಸಾವಯವ ಕೃಷಿಗೆ ಪರಿವರ್ತಿಸುವ ಡಾ ಗಂಗಯ್ಯ ಕುಲಕರ್ಣಿಯ ಇಪ್ಪತ್ತು ವರ್ಷಗಳ ಕೃಷಿ ಸೇವೆಯನ್ನು ಗುರುತಿಸಿ ಸಾವಯವ ಕೃಷಿಕ ಶೇಖರಗೌಡ ಪಾಟೀಲರು ಕಾರನ್ನು ಉಡುಗೊರೆಯಾಗಿ ನೀಡಿದ ಕಾರ್ಯವನ್ನು ರೈತ ಬಾಂಧವರು ಶ್ಲಾಘಿಸಿ ಅಭಿನಂದಿಸಿದ್ದಾರೆ.