ಸೈಬರ್ ವಂಚಕನಿಂದ ಮೋಸ ಹೋದ ಜಾವಿವಿಯ ಕುಲಪತಿ ಡಾ.ಟಿ. ಎಂ. ಭಾಸ್ಕರ್, ೬೦೦೯೮/ವಂಚನೆ
ಹಾವೇರಿ: ಸೈಬರ್ ವಂಚಕನೋರ್ವನ ಮಾತುಗಳನ್ನು ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ. ಎಂ. ಭಾಸ್ಕರ್ ಮೋಸಹೋಗಿರುವ ಘಟನೆ ನಡೆದಿದ್ದು, ವಂಚಕ ಡಾ.ಭಾಸ್ಕರ ಅವರಿಗೆ ೬೦೦೯೮/ರೂಗಳನ್ನು ಪಂಗನಾಮಹಾಕಿದ್ದಾನೆ.
ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಭಾಸ್ಕರ ಅವರಿಗೆ ಯಾರೋ ನವೀನಕುಮಾರ ಎನ್ನುವ ವಂಚಕ (ಬೊಬೈಲ್ ನಂಬರ:೭೬೩೦೮೩೨೧೭೪)೩೧-೦೭-೨೦೨೩ ರಂದು ೧೩-೪೨ ಗಂಟೆ ಸುಮಾರಿಗೆ ಭಾಸ್ಕರ್ ಅವರು ಜಾನಪದ ವಿಶ್ವವಿದ್ಯಾಲಯ ಗೊಟಗೋಡಿಯಲ್ಲಿ ಇರುವಾಗ ಅವರ ಮೊಬೈಲ್ ನಂಬರ: ೯೭೩೮೪೮೪೮೧೦ ನೇದ್ದಕ್ಕೆ ಕರೆಮಾಡಿದ್ದಾನೆ.
ಟ್ರ್ಯೂ ಕಾಲರ್ ತಂತ್ರಾಂಶ ದಲ್ಲಿ “ಬ್ಯಾಂಕ ಬ್ಯಾಂಕ” ಎಂದುಂ ಹೆಸರು ಮೂಡಿದ್ದನ್ನು ನೋಡಿದ ಭಾಸ್ಕರ ಅವರು ಯಾವುದೋ ಬ್ಯಾಂಕಿನ ಕರೆ ಇರಬಹುದೆಂದು ಕಾಲ್ ರಿಸೀವ್ ಮಾಡಿ ಮಾತಾಡಿದಾಗ ಅತ್ತ ಕಡೆಯಿಂದ ಯಾರೋ ನಾವು ಎಸ್.ಬಿ.ಐ ಧಾರವಾಡ ಬ್ಯಾಂಕ ಉದ್ಯೋಗಿ ಮಾತಾಡುತ್ತಿದ್ದು, ನಿಮ್ಮ ಪೋನ್ ಪೇಗೆ ಒಂದು ದಿವಸದ ಟ್ರಾಂಜಾಕ್ಷನ್ ಲಿಮಿಟೇಶನ್ ೬೦.೦೦೦/- ರೂ ಇದ್ದು, ಇದನ್ನು ಮುಂದುವರೆಸಲು ನಾವು ನಿಮ್ಮ ಪೋನ್ ಪೇ ಗೆ ಒಂದು ಲಿಂಕ್ ಕಳಿಸುತ್ತೇವೆ, ಪೋನ್ ಪೇದಲ್ಲಿ ಎಸ್ ಎಂದು ತಿಳಿಸಿದರೇ ಈ ಸೇವೆ ಮುಂದುವರೆಯುತ್ತದೆ ಮತ್ತು ಇದೇ ರೀತಿಯ ಸೇವೆಯನ್ನು ನಿಮ್ಮ ಸ್ನೇಹಿತರಾದ ಅನಸೂಯಾ ಕಾಂಬಳೇ, ಕೃಷ್ಣಾ ನಾಯಕ, ರಾಜೇಂದ್ರ ನಾಯಕ್ ಅವರಿಗೆ ನೀಡಿದ್ದೇವೆಂದು ಭಾಸ್ಕರ ಅವರ ಸ್ನೇಹಿತರ ಹೆಸರುಗಳನ್ನು ಹೇಳಿದ್ದಾರೆ.
ಈ ಕರೆ ಸತ್ಯ ಇರಬಹುದೆಂದು ನಂಬಿ ಸೇವೆಯನ್ನು ಮುಂದುವರೆಸಲು ಭಾಸ್ಕರ ಅವರು ಮಾತಾಡುತ್ತಾ ವಂಚಕನಿಗೆ ತಮ್ಮ ಮೊಬೈಲ್ದಲ್ಲಿ ಪೋನ್ ಪೇ ತಂತ್ರಾಂಶವನ್ನು ಓಪನ್ ಮಾಡಿ, ಪಾಸ್ ವರ್ಡ ಹಾಕಿದಾಗ ೬೦೦೯೮/- ರೂ ಡೆಬಿಟೆಡ್ ಎಂದು ಎಸ್.ಎಂ.ಎಸ್ ಬಂದಿದ್ದು, ನಂತರ ೭೬೩೦೮೩೨೧೭೪ ನೆದ್ದಕ್ಕೆ ಕರೆ ಮಾಡಿದಾಗ ವಂಚಕ ಕರೆ ರಿಸೀವ್ ಮಾಡಿದ್ದು ಸರಿಯಾಗಿ ಸ್ಪಂದಿಸದೇ ಇದ್ದುದರಿಂದ ಹೆಸರು ಕೇಳಿದಾಗ ಆತನು ತನ್ನ ಹೆಸರು ನವೀನಕುಮಾರ ಎಂದು ತಿಳಿಸಿ ಕರೆ ಕಟ್ ಮಾಡಿ ಡಾ.ಭಾಸ್ಕರ ಅವರಿಗೆ ಬ್ಯಾಂಕ ಉದ್ಯೋಗಿ ಎಂದು ನಂಬಿಸಿ ವಂಚನೆಮಾಡಿದ್ದಾನೆ. ಈಬಗ್ಗೆ ಡಾ.ಭಾಸ್ಕರ್ ಅವರು ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸೈಬರ್ ವಂಚಕನಿಂದ ಮೋಸ ಹೋದ ಜಾವಿವಿಯ ಕುಲಪತಿ ಡಾ.ಟಿ. ಎಂ. ಭಾಸ್ಕರ್, ೬೦೦೯೮/ವಂಚನೆ
Date:
ಸೈಬರ್ ವಂಚಕನಿಂದ ಮೋಸ ಹೋದ ಜಾವಿವಿಯ ಕುಲಪತಿ ಡಾ.ಟಿ. ಎಂ. ಭಾಸ್ಕರ್, ೬೦೦೯೮/ವಂಚನೆ
ಹಾವೇರಿ: ಸೈಬರ್ ವಂಚಕನೋರ್ವನ ಮಾತುಗಳನ್ನು ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ. ಎಂ. ಭಾಸ್ಕರ್ ಮೋಸಹೋಗಿರುವ ಘಟನೆ ನಡೆದಿದ್ದು, ವಂಚಕ ಡಾ.ಭಾಸ್ಕರ ಅವರಿಗೆ ೬೦೦೯೮/ರೂಗಳನ್ನು ಪಂಗನಾಮಹಾಕಿದ್ದಾನೆ.
ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಭಾಸ್ಕರ ಅವರಿಗೆ ಯಾರೋ ನವೀನಕುಮಾರ ಎನ್ನುವ ವಂಚಕ (ಬೊಬೈಲ್ ನಂಬರ:೭೬೩೦೮೩೨೧೭೪)೩೧-೦೭-೨೦೨೩ ರಂದು ೧೩-೪೨ ಗಂಟೆ ಸುಮಾರಿಗೆ ಭಾಸ್ಕರ್ ಅವರು ಜಾನಪದ ವಿಶ್ವವಿದ್ಯಾಲಯ ಗೊಟಗೋಡಿಯಲ್ಲಿ ಇರುವಾಗ ಅವರ ಮೊಬೈಲ್ ನಂಬರ: ೯೭೩೮೪೮೪೮೧೦ ನೇದ್ದಕ್ಕೆ ಕರೆಮಾಡಿದ್ದಾನೆ.
ಟ್ರ್ಯೂ ಕಾಲರ್ ತಂತ್ರಾಂಶ ದಲ್ಲಿ “ಬ್ಯಾಂಕ ಬ್ಯಾಂಕ” ಎಂದುಂ ಹೆಸರು ಮೂಡಿದ್ದನ್ನು ನೋಡಿದ ಭಾಸ್ಕರ ಅವರು ಯಾವುದೋ ಬ್ಯಾಂಕಿನ ಕರೆ ಇರಬಹುದೆಂದು ಕಾಲ್ ರಿಸೀವ್ ಮಾಡಿ ಮಾತಾಡಿದಾಗ ಅತ್ತ ಕಡೆಯಿಂದ ಯಾರೋ ನಾವು ಎಸ್.ಬಿ.ಐ ಧಾರವಾಡ ಬ್ಯಾಂಕ ಉದ್ಯೋಗಿ ಮಾತಾಡುತ್ತಿದ್ದು, ನಿಮ್ಮ ಪೋನ್ ಪೇಗೆ ಒಂದು ದಿವಸದ ಟ್ರಾಂಜಾಕ್ಷನ್ ಲಿಮಿಟೇಶನ್ ೬೦.೦೦೦/- ರೂ ಇದ್ದು, ಇದನ್ನು ಮುಂದುವರೆಸಲು ನಾವು ನಿಮ್ಮ ಪೋನ್ ಪೇ ಗೆ ಒಂದು ಲಿಂಕ್ ಕಳಿಸುತ್ತೇವೆ, ಪೋನ್ ಪೇದಲ್ಲಿ ಎಸ್ ಎಂದು ತಿಳಿಸಿದರೇ ಈ ಸೇವೆ ಮುಂದುವರೆಯುತ್ತದೆ ಮತ್ತು ಇದೇ ರೀತಿಯ ಸೇವೆಯನ್ನು ನಿಮ್ಮ ಸ್ನೇಹಿತರಾದ ಅನಸೂಯಾ ಕಾಂಬಳೇ, ಕೃಷ್ಣಾ ನಾಯಕ, ರಾಜೇಂದ್ರ ನಾಯಕ್ ಅವರಿಗೆ ನೀಡಿದ್ದೇವೆಂದು ಭಾಸ್ಕರ ಅವರ ಸ್ನೇಹಿತರ ಹೆಸರುಗಳನ್ನು ಹೇಳಿದ್ದಾರೆ.
ಈ ಕರೆ ಸತ್ಯ ಇರಬಹುದೆಂದು ನಂಬಿ ಸೇವೆಯನ್ನು ಮುಂದುವರೆಸಲು ಭಾಸ್ಕರ ಅವರು ಮಾತಾಡುತ್ತಾ ವಂಚಕನಿಗೆ ತಮ್ಮ ಮೊಬೈಲ್ದಲ್ಲಿ ಪೋನ್ ಪೇ ತಂತ್ರಾಂಶವನ್ನು ಓಪನ್ ಮಾಡಿ, ಪಾಸ್ ವರ್ಡ ಹಾಕಿದಾಗ ೬೦೦೯೮/- ರೂ ಡೆಬಿಟೆಡ್ ಎಂದು ಎಸ್.ಎಂ.ಎಸ್ ಬಂದಿದ್ದು, ನಂತರ ೭೬೩೦೮೩೨೧೭೪ ನೆದ್ದಕ್ಕೆ ಕರೆ ಮಾಡಿದಾಗ ವಂಚಕ ಕರೆ ರಿಸೀವ್ ಮಾಡಿದ್ದು ಸರಿಯಾಗಿ ಸ್ಪಂದಿಸದೇ ಇದ್ದುದರಿಂದ ಹೆಸರು ಕೇಳಿದಾಗ ಆತನು ತನ್ನ ಹೆಸರು ನವೀನಕುಮಾರ ಎಂದು ತಿಳಿಸಿ ಕರೆ ಕಟ್ ಮಾಡಿ ಡಾ.ಭಾಸ್ಕರ ಅವರಿಗೆ ಬ್ಯಾಂಕ ಉದ್ಯೋಗಿ ಎಂದು ನಂಬಿಸಿ ವಂಚನೆಮಾಡಿದ್ದಾನೆ. ಈಬಗ್ಗೆ ಡಾ.ಭಾಸ್ಕರ್ ಅವರು ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.