ಹಾವೇರಿಜಿಲ್ಲೆಯಲ್ಲಿ ಬರ ಘೋಷಿಸಿ, ಮಧ್ಯಂತರ ವಿಮಾ ಪರಿಹಾರ ಬಿಡುಗಡೆ ರೈತರಿಂದ ಹೆದ್ದಾರಿ ತಡೆ
ಹಾವೇರಿ: ಜಿಲ್ಲೆಯಲ್ಲಿ ಮಳೆಕೊರತೆಯಿಂದ ಭೀಕರ ಬರ ಎದುರಾಗಿದೆ. ಜಾನುವಾರುಗಳಿಗೆ ಕುಡಿಯಲು ನೀರು ಸಹ ಸಿಗುತ್ತಿಲ್ಲ, ಕೈಗೆ ಬಂದ ದರಕ್ಕೆ ರೈತರು ಎತ್ತುಗಳನ್ನು ಮಾರಾಟಮಾಡುತ್ತಿದ್ದಾರೆ. ಸರ್ಕಾರ ರೈತರ ನೆರವಿಗೆ ಬರದೇ ಬರ ಘೋಷಣೆಯ ಬಗ್ಗೆದಿನಕ್ಕೊಂದು ಹೇಳಿಕೆ ನೀಡುತ್ತಿದೆ. ಸರ್ಕಾರಕ್ಕೆ ನಿಜವಾಗಿ ಕಾಳಜಿ ಇದ್ದರೇ ತಕ್ಷಣ ಹಾವೇರಿಜಿಲ್ಲೆ ಬರ ಘೋಷಣೆ ಮಾಡಿ, ಮಧ್ಯ ವಿಮಾಪರಿಹಾರೆಂದು ೨೫ಸಾವಿರೂಗಳನ್ನು ಬಿಡುಗಡೆಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಆಗ್ರಹಿಸಿದರು.
ಮಂಗಳವಾರ ಇಲ್ಲಿನ ಹೊಸಮನಿಸಿದ್ದಪ್ಪ ವೃತ್ತದಲ್ಲಿ ವಿವಿಧ ರೈತ ಸಂಘಟನೆಗಳ ಸಾಮೋಹಿಕ ನಾಯಕತ್ವದಲ್ಲಿ ನಡೆದ ಹಾವೇರಿಜಿಲ್ಲೆಯಲ್ಲಿ ಬರ ಘೋಷಿಸಿ, ಮಧ್ಯಂತರ ವಿಮಾ ಪರಿಹಾರ ವಿತರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ನಡೆಸಿದ ಹೆದ್ದಾರಿತಡೆಯಲ್ಲಿ ರೈತರನ್ನುದ್ದೇಶಿಸಿ ಅವರು ಮಾತನಾಡಿದರು. ರೈತರ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ರೈತರ ಬೆಳೆ ಸಾಲ ಸಿಬಿಲ್ ನಿಂದ ಹೊರಗೆ ಇಡಬೇಕೆಂದು ಅವರ ಒತ್ತಾಯಿಸಿದರು.
ರೈತರು ೫ಲಕ್ಷರೂ ಪರಿಹಾರಕ್ಕಾಗಿ ಆತ್ಮಹತ್ಯೆಮಾಡಿಕೊಳ್ಳುತ್ತಿದ್ದಾರೆ ಎಂದು ರೈತರ ಬಗ್ಗೆ ಲಘುವಾಗಿ ಮಾತನಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀರನ್ನು ಸಚಿವ ಸ್ಥಾನದಿಂದ ವಜಾಮಾಡಬೇಕು. ಜಿಲ್ಲೆಯಲ್ಲಿ ೨೦೧೬ ರಿಂದ ಇಲ್ಲಿಯವರೆಗೆ ಬಾಕಿ ಉಳಿಸಿಕೊಂಡ ವಿಮಾ ಹಣವನ್ನು ರೈತರಿಗೆ ಕೊಡಬೇಕು. ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಶೀಘ್ರವಾಗಿ ಅನುಷ್ಠಾನಗೊಳಿಸಬೇಕೆಂದು. ಕಳೆದ ೬ ತಿಂಗಳಿನಿಂದ ಬಾಕಿ ಇರುವ ಹಾಲಿನ ಸಹಾಯಧನ ಕೊಡಲೇ ಬಿಡುಗಡೆ ಮಾಡಬೇಕು. ೧೫ ದಿನಗಳಲ್ಲಿ ರೈತರ ಬೇಡಿಕೆಗಳನ್ನು ಈಡೇರಿಸದೇ ಹೋದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕೆಂಚಳ್ಳೇರ ಎಚ್ಚರಿಕೆ ನೀಡಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ ಅನ್ನಭಾಗ್ಯ ಯೋಜನೆಯಡಿ ರೇಷನ್ ಬದಲಾಗಿ ಹಣವನ್ನು ಕೊಡುತ್ತಿದ್ದು, ಜಿಲ್ಲೆಯ ಸುಮಾರು ೨೫ ಸಾವಿರ ಫಲಾನುಭವಿಗಳಿಗೆ ತಾಂತ್ರಿಕ ತೊಂದರೆಯಿಂದ ಹಣ ಜಮಾ ಆಗಿಲ್ಲ. ಕೊಡಲೇ ಹಣ ಹಾಕಬೇಕು. ಹಾವೇರಿ ಜಿಲ್ಲೆಯಲ್ಲಿ ಒಟ್ಟು ೯೭ ಹಳ್ಳಿಗಳಿದ್ದು ಅದರಲ್ಲಿ ಈಗಾಗಲೇ ೩೧ ಹಳ್ಳಿಗಳು ನೀರಿನ ಕೊರತೆ ಅನುಭವಿಸುತ್ತಿದ್ದು ಕೂಡಲೇ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ನರೇಗಾ ಎನ್ ಆರ್ ಐ ಜಿ ಕೆಲಸದ ಸಾಮಗ್ರಿ ಬಿಲ್ಗಳನ್ನು ೨೦೨೧ ರಿಂದ ಇಲ್ಲಿಯವರೆಗೆ ಕೊಟ್ಟಿರುವುದಿಲ್ಲ. ಬಿಲ್ ಗಳನ್ನು ಅತಿ ಜರೂರಾಗಿ ಮಂಜುರಾತಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯ ನಂತರ ಹಕ್ಕೊತ್ತಾಯಗೋಳನ್ನು ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ ಮೂಕ ಸರ್ಕಾರಕ್ಕೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ರೈತ ಸಂಘಟನೆಯ ಪ್ರಮುಖರಾದ ಮಹಮ್ಮದಗೌಸ ಪಾಟೀಲ, ಸುರೇಶ ಚಲವಾದಿ, ದಿಳ್ಳೆಪ್ಪ ಮಣ್ಣೂರ, ಅಡಿವೆಪ್ಪ ಆಲದಕಟ್ಟಿ, ಶಿವಬಸಪ್ಪ ಗೋವಿ, ರುದ್ರಗೌಡ ಕಾಡನಗೌಡ್ರ , ಪ್ರಭುಗೌಡ ಪ್ಯಾಟಿ, ಶಂಕ್ರಪ್ಪ ಶಿರಗಂಬಿ ರಟ್ಟೀಹಳ್ಳಿ, ಚಂದ್ರಶೇಖರ ಜಾವಗಲ್, ಶಿವಯೋಗಿ ಹೊಸಗೌಡ್ರ ಸೇರಿದಂತೆ ಜಿಲ್ಲೆಯ ಹಲವಾರು ರೈತ ಮುಖಂಡರು ಭಾಗವಹಿಸಿದ್ದರು.