ಹಾವೇರಿಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಚುನಾವಣೆ: ಮೂರನೇ ದಿನ 21 ಅಭ್ಯರ್ಥಿಗಳಿಂದ 28 ನಾಮಪತ್ರ ಸಲ್ಲಿಕೆ

Date:

ಹಾವೇರಿಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಚುನಾವಣೆ: ಮೂರನೇ ದಿನ 21 ಅಭ್ಯರ್ಥಿಗಳಿಂದ 28 ನಾಮಪತ್ರ ಸಲ್ಲಿಕೆ

ವಿಧಾನಸಭಾ ಚುನಾವಣೆ: ಮೂರನೇ ದಿನ 21 ಅಭ್ಯರ್ಥಿಗಳಿಂದ 28 ನಾಮಪತ್ರ ಸಲ್ಲಿಕೆ
ಹಾವೇರಿ : ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮೂರನೇ ದಿನವಾದ ಏಪ್ರಿಲ್ 17ರ ಸೋಮವಾರ ದಿನ ಜಿಲ್ಲೆಯ ಆರು ಕ್ಷೇತ್ರಗಳಿಂದ 21 ಅಭ್ಯರ್ಥಿಗಳಿಂದ 28 ನಾಮಪತ್ರಗಳು ಸಲ್ಲಿಕೆಯಾಗಿವೆ.
ಹಾವೇರಿ ಕ್ಷೇತ್ರದಿಂದ ಇಬ್ಬರು ಅಭ್ಯರ್ಥಿಗಳು ಮೂರು ನಾಮಪತ್ರ ಸಲ್ಲಿಸಿದ್ದಾರೆ. ಬ್ಯಾಡಗಿ ಕ್ಷೇತ್ರದಿಂದ ನಾಲ್ಕು ಅಭ್ಯರ್ಥಿಗಳಿಂದ 6 ನಾಮಪತ್ರ, ಶಿಗ್ಗಾಂವ ಕ್ಷೇತ್ರದಿಂದ ಓರ್ವ ಅಭ್ಯರ್ಥಿಯಿಂದ ಎರಡು ನಾಮಪತ್ರ, ರಾಣೇಬೆನ್ನೂರು ಕ್ಷೇತ್ರದಿಂದ ಎಂಟು ಅಭ್ಯರ್ಥಿಗಳಿಂದ ಎಂಟು ನಾಮಪತ್ರ, ಹಾನಗಲ್ ಕ್ಷೇತ್ರದಿಂದ ಆರುಜನ ಅಭ್ಯರ್ಥಿಗಳಿಂದ ಒಂಭತ್ತು ನಾಮಪತ್ರಗಳು ಸಲ್ಲಿಕೆಯಾಗಿವೆ. ಹಿರೇಕೆರೂರು ಕ್ಷೇತ್ರದಿಂದ ಸೋಮವಾರದಂದು ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವುದಿಲ್ಲ.
ಹಾವೇರಿ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ರುದ್ರಪ್ಪ ಲಮಾಣಿ(ಎರಡು ನಾಮಪತ), ಬಹುಜನ ಸಮಾಜ ಪಕ್ಷದಿಂದ ಅಶೋಕ ಮರಿಯಣ್ಣನವರ(ಒಂದು ನಾಮಪತ್ರ) ಹಾಗೂ ಶಿಗ್ಗಾಂವ ಕ್ಷೇತ್ರದಿಂದ ಉತ್ತಮ ಪ್ರಜಾಕೀಯ ಪಕ್ಷದಿಂದ ಶ್ರೀಮತಿ ಮಂಜುಳಾ ಸಬನೂರ(ಎರಡು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ಬ್ಯಾಡಗಿ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ವಿರುಪಾಕ್ಷಪ್ಪ ಬಳ್ಳಾರಿ(ಎರಡು ನಾಮಪತ್ರ), ಆಮ್ ಆದ್ಮಿ ಪಕ್ಷದಿಂದ ಸೂಫಿಯಾಬಾನು ನಾಯಿಕ(ಒಂದು ನಾಮಪತ್ರ), ಇಂಡಿಯನ್ ಮೂಮೆಂಟ್ ಪಾರ್ಟಿಯಿಂದ ಸೈಯದ್ ಫಹೀಮ ಗುಡಗೇರಿ( ಒಂದು ನಾಮಪತ್ರ), ಆಮ್ ಆದ್ಮಿ ಪಕ್ಷದಿಂದ ಮಹ್ಮದ ರಝಾನಾಯಕ(ಎರಡು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ರಾಣೇಬೆನ್ನೂರು ಕ್ಷೇತ್ರದಿಂದ ಆಮ್ ಆದ್ಮಿ ಪಾರ್ಟಿಯಿಂದ ಹನುಮಂತಪ್ಪ ಕಬ್ಬಾರ(ಒಂದು ನಾಮಪತ್ರ) ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿಯಿಂದ ಆರ್ ಶಂಕರ್(ಒಂದು ನಾಮಪತ್ರ), ಭಾರತೀಯ ಜನತಾ ಪಕ್ಷದಿಂದ ಅರುಣಕುಮಾರ ಗುತ್ತೂರು( ಒಂದು ನಾಮಪತ್ರ), ಇಂಡಿಯನ್ ಮೂಮೆಂಟ್ ಪಾರ್ಟಿಯಿಂದ ತಳವಾರ ಶಿವಕುಮಾರ(ಒಂದು ನಾಮಪತ್ರ) ಪಕ್ಷೇತರರಾಗಿ ಸಂತೋಷಕುಮಾರ ಪಾಟೀಲ(ಒಂದು ನಾಮಪತ್ರ) ಯಲ್ಲಪ್ಪ ಓಲೇಕಾರ (ಒಂದು ನಾಮಪತ್ರ), ಶಂಕ್ರಪ್ಪ ದಾನಪ್ಪನವರ (ಒಂದು ನಾಮಪತ್ರ), ನಿರ್ಮಲಾ ಪಾಟೀಲ (ಒಂದು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ಹಾನಗಲ್ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಶ್ರೀನಿವಾಸ ಮಾನೆ(ನಾಲ್ಕು ನಾಮಪತ್ರ), ಭಾರತೀಯ ಜನತಾ ಪಕ್ಷದಿಂದ ಶಿವರಾಜ ಸಜ್ಜನರ(ಒಂದು ನಾಮಪತ್ರ), ಕರ್ನಾಟಕ ರಾಷ್ಟ್ರೀಯ ಸಮಿತಿಯಿಂದ ಉಡಚಪ್ಪ ಉದ್ದನಕಾಲ(ಒಂದು ನಾಮಪತ್ರ), ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಎಸ್.ಕೆ.ಪಂಪಾವತಿ(ಒಂದು ನಾಮಪತ್ರ), ಪಕ್ಷೇತರರಾಗಿ ಮಲ್ಲಿಕಾರ್ಜುನ ಹಾವೇರಿ (ಒಂದು ನಾಮಪತ್ರ), ಹೊನ್ನಪ್ಪ ಅಕ್ಕಿವಳ್ಳಿ(ಒಂದು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.

ಈವರೆಗೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ 31 ಅಭ್ಯರ್ಥಿಗಳಿಂದ 41 ನಾಮಪತ್ರಗಳು ಸಲ್ಲಿಕೆಯಾಗಿವೆ. ಏಪ್ರಿಲ್ 18 ರಂದು ನಾಮಪತ್ರ ಸಲ್ಲಿಕೆ ಮುಂದುವರೆಯಲಿದೆ. ಏಪ್ರಿಲ್ 20 ನಾಮಪತ್ರ ಸಲಿಕೆಗೆ ಕೊನೆಯ ದಿನವಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಹಾವೇರಿಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಚುನಾವಣೆ: ಮೂರನೇ ದಿನ 21 ಅಭ್ಯರ್ಥಿಗಳಿಂದ 28 ನಾಮಪತ್ರ ಸಲ್ಲಿಕೆ

ವಿಧಾನಸಭಾ ಚುನಾವಣೆ: ಮೂರನೇ ದಿನ 21 ಅಭ್ಯರ್ಥಿಗಳಿಂದ 28 ನಾಮಪತ್ರ ಸಲ್ಲಿಕೆ
ಹಾವೇರಿ : ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮೂರನೇ ದಿನವಾದ ಏಪ್ರಿಲ್ 17ರ ಸೋಮವಾರ ದಿನ ಜಿಲ್ಲೆಯ ಆರು ಕ್ಷೇತ್ರಗಳಿಂದ 21 ಅಭ್ಯರ್ಥಿಗಳಿಂದ 28 ನಾಮಪತ್ರಗಳು ಸಲ್ಲಿಕೆಯಾಗಿವೆ.
ಹಾವೇರಿ ಕ್ಷೇತ್ರದಿಂದ ಇಬ್ಬರು ಅಭ್ಯರ್ಥಿಗಳು ಮೂರು ನಾಮಪತ್ರ ಸಲ್ಲಿಸಿದ್ದಾರೆ. ಬ್ಯಾಡಗಿ ಕ್ಷೇತ್ರದಿಂದ ನಾಲ್ಕು ಅಭ್ಯರ್ಥಿಗಳಿಂದ 6 ನಾಮಪತ್ರ, ಶಿಗ್ಗಾಂವ ಕ್ಷೇತ್ರದಿಂದ ಓರ್ವ ಅಭ್ಯರ್ಥಿಯಿಂದ ಎರಡು ನಾಮಪತ್ರ, ರಾಣೇಬೆನ್ನೂರು ಕ್ಷೇತ್ರದಿಂದ ಎಂಟು ಅಭ್ಯರ್ಥಿಗಳಿಂದ ಎಂಟು ನಾಮಪತ್ರ, ಹಾನಗಲ್ ಕ್ಷೇತ್ರದಿಂದ ಆರುಜನ ಅಭ್ಯರ್ಥಿಗಳಿಂದ ಒಂಭತ್ತು ನಾಮಪತ್ರಗಳು ಸಲ್ಲಿಕೆಯಾಗಿವೆ. ಹಿರೇಕೆರೂರು ಕ್ಷೇತ್ರದಿಂದ ಸೋಮವಾರದಂದು ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವುದಿಲ್ಲ.
ಹಾವೇರಿ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ರುದ್ರಪ್ಪ ಲಮಾಣಿ(ಎರಡು ನಾಮಪತ), ಬಹುಜನ ಸಮಾಜ ಪಕ್ಷದಿಂದ ಅಶೋಕ ಮರಿಯಣ್ಣನವರ(ಒಂದು ನಾಮಪತ್ರ) ಹಾಗೂ ಶಿಗ್ಗಾಂವ ಕ್ಷೇತ್ರದಿಂದ ಉತ್ತಮ ಪ್ರಜಾಕೀಯ ಪಕ್ಷದಿಂದ ಶ್ರೀಮತಿ ಮಂಜುಳಾ ಸಬನೂರ(ಎರಡು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ಬ್ಯಾಡಗಿ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ವಿರುಪಾಕ್ಷಪ್ಪ ಬಳ್ಳಾರಿ(ಎರಡು ನಾಮಪತ್ರ), ಆಮ್ ಆದ್ಮಿ ಪಕ್ಷದಿಂದ ಸೂಫಿಯಾಬಾನು ನಾಯಿಕ(ಒಂದು ನಾಮಪತ್ರ), ಇಂಡಿಯನ್ ಮೂಮೆಂಟ್ ಪಾರ್ಟಿಯಿಂದ ಸೈಯದ್ ಫಹೀಮ ಗುಡಗೇರಿ( ಒಂದು ನಾಮಪತ್ರ), ಆಮ್ ಆದ್ಮಿ ಪಕ್ಷದಿಂದ ಮಹ್ಮದ ರಝಾನಾಯಕ(ಎರಡು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ರಾಣೇಬೆನ್ನೂರು ಕ್ಷೇತ್ರದಿಂದ ಆಮ್ ಆದ್ಮಿ ಪಾರ್ಟಿಯಿಂದ ಹನುಮಂತಪ್ಪ ಕಬ್ಬಾರ(ಒಂದು ನಾಮಪತ್ರ) ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿಯಿಂದ ಆರ್ ಶಂಕರ್(ಒಂದು ನಾಮಪತ್ರ), ಭಾರತೀಯ ಜನತಾ ಪಕ್ಷದಿಂದ ಅರುಣಕುಮಾರ ಗುತ್ತೂರು( ಒಂದು ನಾಮಪತ್ರ), ಇಂಡಿಯನ್ ಮೂಮೆಂಟ್ ಪಾರ್ಟಿಯಿಂದ ತಳವಾರ ಶಿವಕುಮಾರ(ಒಂದು ನಾಮಪತ್ರ) ಪಕ್ಷೇತರರಾಗಿ ಸಂತೋಷಕುಮಾರ ಪಾಟೀಲ(ಒಂದು ನಾಮಪತ್ರ) ಯಲ್ಲಪ್ಪ ಓಲೇಕಾರ (ಒಂದು ನಾಮಪತ್ರ), ಶಂಕ್ರಪ್ಪ ದಾನಪ್ಪನವರ (ಒಂದು ನಾಮಪತ್ರ), ನಿರ್ಮಲಾ ಪಾಟೀಲ (ಒಂದು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ಹಾನಗಲ್ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಶ್ರೀನಿವಾಸ ಮಾನೆ(ನಾಲ್ಕು ನಾಮಪತ್ರ), ಭಾರತೀಯ ಜನತಾ ಪಕ್ಷದಿಂದ ಶಿವರಾಜ ಸಜ್ಜನರ(ಒಂದು ನಾಮಪತ್ರ), ಕರ್ನಾಟಕ ರಾಷ್ಟ್ರೀಯ ಸಮಿತಿಯಿಂದ ಉಡಚಪ್ಪ ಉದ್ದನಕಾಲ(ಒಂದು ನಾಮಪತ್ರ), ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಎಸ್.ಕೆ.ಪಂಪಾವತಿ(ಒಂದು ನಾಮಪತ್ರ), ಪಕ್ಷೇತರರಾಗಿ ಮಲ್ಲಿಕಾರ್ಜುನ ಹಾವೇರಿ (ಒಂದು ನಾಮಪತ್ರ), ಹೊನ್ನಪ್ಪ ಅಕ್ಕಿವಳ್ಳಿ(ಒಂದು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.

ಈವರೆಗೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ 31 ಅಭ್ಯರ್ಥಿಗಳಿಂದ 41 ನಾಮಪತ್ರಗಳು ಸಲ್ಲಿಕೆಯಾಗಿವೆ. ಏಪ್ರಿಲ್ 18 ರಂದು ನಾಮಪತ್ರ ಸಲ್ಲಿಕೆ ಮುಂದುವರೆಯಲಿದೆ. ಏಪ್ರಿಲ್ 20 ನಾಮಪತ್ರ ಸಲಿಕೆಗೆ ಕೊನೆಯ ದಿನವಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...