ಹಾವೇರಿಯಲ್ಲಿ ಲಿಡ್ಕರ್ ಮಳಿಗೆ, ಚರ್ಮ ಕೈಗಾರಿಕಾ ಕೇಂದ್ರ ಸ್ಥಾಪನೆ: ಡಿ.ಎಸ್.ಮಾಳಗಿ
ಹಾವೇರಿ: ಹಾವೇರಿಯಲ್ಲಿ ಡಾ.ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಮಾರಾಟಮಳಿಗೆಯನ್ನು ಆರಂಭಿಸಲಾಗುವುದು. ನಗರಕ್ಕೆ ಸಮೀಪದಲ್ಲಿರುವ ನೆಲೋಗಲ್ಲಗುಡ್ಡದಲ್ಲಿ ಚರ್ಮ ಕೈಗಾರಿಕಾ ಕೇಂದ್ರ ಸ್ಥಾಪನೆ ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಡಿ.ಎಸ್.ಮಾಳಗಿ ತಿಳಿಸಿದರು.
ಮಂಗಳವಾರ ಇಲ್ಲಿನ ಖಾಸಗಿ ಹೋಟೆಲ್ನಲ್ಲಿ ಡಿಎಸ್ಎಸ್ , ಆದಿಜಾಂಬವ ಮಾದಿಗರ ಸಂಘ ಹಾವೇರಿಜಿಲ್ಲಾ ಘಟಕದ ಸಂಯುಕ್ತ ಆಶ್ರಯ ದಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸರ್ಕಾರ ನನ್ನ ಸೇವೆಯನ್ನು ಗುರುತಿಸಿ ಡಾ.ಜಗಜೀವನರಾiಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷನೆಂದ ನೇಮಕಮಾಡಿದೆ.
ಮಾದಿಗ ಜನಾಂಗದಲ್ಲಿ ಹುಟ್ಟಿ ಮೂರು ದಶಕದಿಂದ ನಮ್ಮ ಜನಾಂಗದಿಂದ ಹಿಡಿದು ಎಲ್ಲ ಕೆಳಸಮುದಾಯದ ಏಳಿಗೆಗೆ ಶ್ರಮವಹಿಸಿಕೊಂಡ ಬಂದ ನನ್ನ ಹೋರಾಟದ ಸೇವೆ ಬಿಜೆಪಿಯಲ್ಲಿನ ಪಕ್ಷ ನಿಷ್ಠೆ ಇದೆಲ್ಲವನ್ನು ಗಮನಿಸಿ ಸಿ.ಎಂ ಬಸವರಾಜ ಬೊಮ್ಮಾಯಿ ಅವರ ಸರಕಾರ ನನಗೆ ಡಾ. ಜಗಜೀವನರಾಮ್ ಚರ್ಮ ಕೈಗಾರಿಕಾ ನಿಗಮದ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಇದು ಚಮ್ಮಾರರ ಅಭಿವೃದ್ಧಿಗೆ ನಿರ್ಮಿಸಲಾಗಿರುವ ನಿಗಮ ಈ ಅಲ್ಪ ಅವಧಿಯಲ್ಲಿ ಹೆಚ್ಚು ಕಾರ್ಯ ಮಾಡುತ್ತೇನೆ. ಅರ್ಹರಿಗೆ ಸೌಲಭ್ಯ ಕೊಡಿಸಿ ಅವರನ್ನು ಆರ್ಥಿಕವಾಗಿ ಬಲಿಷ್ಠ ವಾಗಿಸುತ್ತೇನೆ ಎಂದು ಡಿ.ಎಸ್ ಮಾಳಗಿ ಹೇಳಿದರು.
ಮುಖ್ಯಅತಿಥಿಯಾಗಿದ್ದ ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಎಸ್. ಕೋರಿಶೆಟ್ಟರ್ ಮಾತನಾಡಿ ಇಂದು ರಾಜಕೀಯ ವ್ಯಾಪಾರೀಕರಣವಾಗಿದೆ. ಇಂದಿನ ರಾಜಕಾರಣಿಗಳು ಮೊದಲು ನಾವು, ನಂತರ ಜನ ಅಂತಾರೆ, ಈ ರಾಷ್ಟ್ರದಲ್ಲಿ ಪಂಚಾಯತ ಮಟ್ಟದಿಂದ ಹಿಡಿದು ಪಾರ್ಲಿಮೆಂಟ್ ವರೆಗೆ ಆಯ್ಕೆ ಆಗುವವರಿಗಾಗಿ ಕಾನೂನು ಬರಬೇಕು. ಇಂದು ಜಾತಿ, ಹಣಬಲದಿಂದ ರಾಜಕೀಯ ಧರ್ಮ, ಶೈಕ್ಷಣಿಕ ರಂಗ ಈ ಅಡ್ಡ ದಾರಿ ಹಿಡಿದಿವೆ, ಇದೊಂದು ನೋವಿನ ಸಂಗತಿ. ಇದನ್ನು ಕಿತ್ತು ಹಾಕಬೇಕಾಗಿದೆ ಡಿ.ಎಸ್ ಮಾಳಗಿ ಅವರು ಜಾತ್ಯಾತೀತ ನಾಯಕರು ಅವರು ನೇರ ನಿಷ್ಠುರ ವಾದಿ ಅಂತವರು ಅಧಿಕಾರ ಪಡಿಯೋದು ಕಷ್ಟವೆ ಆಗಿರುತ್ತದೆ. ಆದರು ಡಿ.ಎಸ್ ಮಾಳಗಿ ಅವರ ಸಾಮಾಜಿಕ ಸೇವೆಗೆ ಬಿಜೆಪಿ ಸರಕಾರ ಗುರ್ತಿಸಿ ಲಿಡ್ಕರ ನಿಗಮದ ಉಪಾಧ್ಯಕ್ಷ ನೀಡಿದ್ದು ನನಗೂ ಸಂತಸ ತಂದಿದೆ ಎಂದರು.
ಗುತ್ತಲ ಪಟ್ಟಣ ಪಂಚಾಯತ ಸದಸ್ಯರು ಹಾಗೂ ನ್ಯಾಯವಾದಿ ಎಸ್.ಜಿ ಹೊನ್ನಪ್ಪನವರ ಮಾತನಾಡಿ ಅಖಂಡ ಧಾರವಾಡ ಜಿಲ್ಲೆಯಲ್ಲಿ ಮಾಳಗಿ ಅವರು ಕಳೆದ ೩ ದಶಕದಿಂದ ಶೋಷಿತ ಸಮಾಜದ ಏಳಿಗೆಗೆ ಜೀವನವನ್ನೆ ತ್ಯಾಗ ಮಾಡಿ ದುಡಿದಿದ್ದಾರೆ. ಡಿ.ಎಸ್ ಮಾಳಗಿ ಅವರನ್ನು ಡಾ. ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ರನ್ನಾಗಿ ನೇಮಿಸಿರುವುದು ಬಹಳ ಸಂತಸ ತಂದಿದೆ. ಮುಂದಿನ ದಿನಮಾನದಲ್ಲಿ ಅವರ ನಾಯಕತ್ವದಲ್ಲಿ ಸಮಾಜದ ಕೆಲಸ ಕಾರ್ಯಗಳನ್ನು ಮಾಡಲು ನಾವು ಬದ್ದವಾಗಿದ್ದೇವೆ ಎಂದರು.
ಡಿಎಸ್ಎಸ್ ಮುಖಂಡ ಹೊನ್ನಪ್ಪ ತಗಡಿನಮನಿ ಮಾತನಾಡಿ ಮಾದಿಗ ಸಮಾಜದಿಂದ ಡಿ.ಎಸ್ ಮಾಳಗಿ ಅವರಿಗೆ ಶಾಸಕರನ್ನಾಗಿ ಮಾಡಲು ಪ್ರಯತ್ನ ಮಾಡೋಣ ಎಂದರು.
ಡಿಎಸ್ ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಮಾತನಾಡಿ ಕಳೆದ ಮೂರು ದಶಕದಿಂದ ದಲಿತ ಚಳುವಳಿ ಮಾಡಿಕೊಂಡು ಸರ್ವ ಸಮಾಜದ ಪ್ರೀತಿ ಪಾತ್ರರಾದ ಮಾಳಗಿ ಅವರನ್ನು ಬಿಜೆಪಿ ಪಕ್ಷ ಗುರ್ತಿಸಿ ಡಾ. ಜಗಜೀವನರಾಮ ಚರ್ಮ ಕೈಗಾರಿಕಾ ಅಭಿತ ನಿಗಮದ ಉಪಾಧ್ಯಕ್ಷ ರನ್ನಾಗಿ ಮಾಡಿರುವುದು ಬಹಳ ಸಂತೋಷ ತಂದಿದೆ. ಇಂತಹ ಒಬ್ಬ ನಾಯಕರು ಅಸೆಂಬ್ಲಿ ಚುನಾವಣೆಯಲ್ಲಿ ಹಾವೇರಿ ಮೀಸಲು ಕ್ಷೇತ್ರಕ್ಕೆ ಎಡಗೈ ಸಮುದಾಯದ ಡಿ.ಎಸ್ ಮಾಳಗಿ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು. ಸದಾಶಿವ ಆಯೋಗವನ್ನು ಜಾರಿ ಮಾಡಬೇಕು. ರಾಜಕೀಯ ವಾಗಿ ಮಾದಿಗ ಸಮಾಜ ಬಹಳ ಹಿಂದುಳಿದಿದೆ ನಮ್ಮ ರಾಜಕೀಯ ಹಕ್ಕನ್ನು ನೀಡಲೇಬೇಕು ಎಂದು ಆಗ್ರಹಿಸಿದರು.
ಮಾಜಿ ತಾ.ಪಂ ಅಧ್ಯಕ್ಷ ಚಂದ್ರಪ್ಪ ಹರಿಜನ, ಮಾದಿಗ ಸಮಾಜದ ಜಿಲ್ಲಾಧ್ಯಕ್ಷ ಸಂಜೀವಗಾಂಧಿ ಸಂಜೀವಣ್ಣನವರ ಮಾತನಾಡಿ ನಮ್ಮ ಸಮುದಾಯದ ಜನರು ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ೩೫ ಸಾವಿರ ಮತದಾರರಿದ್ದಾರೆ. ಡಿ.ಎಸ್ ಮಾಳಗಿ ಅವರಿಗೆ ನಿಗಮದ ಉಪಾಧ್ಯಕ್ಷ ಆದರೆ ಸಾಲದು, ಅವರಿಗೆ ಹಾವೇರಿ ಮೀಸಲು ಅಸೆಂಬ್ಲಿ ಕ್ಷೇತ್ರಕ್ಕೆ ಸ್ಪರ್ಧಿಸಲು ಬಿಜೆಪಿ ಪಕ್ಷದಿಂದ ಟಿಕೆಟ್ ನೀಡಬೇಕು. ಕಳೆದ ಮೂರು ದಶಕದಲ್ಲಿ ಅಖಂಡ ಧಾರವಾಡ ಜಿಲ್ಲೆ ಯಲ್ಲಿರುವ ಬಹು ಜನಾಂಗ ಇರುವ ಮಾದಿಗ ಸಮಾಜಕ್ಕೆ ಸಾಮಾಜಿಕ ಅನ್ಯಾಯವಾಗಿದೆ. ಅದು ಈ ಸಂದರ್ಭದಲ್ಲಿ ಬರುವ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಡಿ.ಎಸ್ ಮಾಳಗಿ ಅವರಿಗೆ ಹಾವೇರಿಯಿಂದ ಸ್ಪರ್ದಿಸಲು ಅವಕಾಶ ಕೊಡಲೇಬೇಕು ಎಂದರು.
ನ್ಯಾಯವಾದಿ ಆರ್. ಲೋಕೇಶ ಮಾತನಾಡಿ ಲಿಡ್ಕರ್ ನಿಗಮ ಎಂದರೆ ಸಾಮಾನ್ಯವಲ್ಲ, ಒಂದು ಎಮ್ಮೆಯ ಹದ ಮಾಡಿದ ಚರ್ಮ ೧೮ ಸಾವಿರ ಬೆಲೆ ಇದೆ. ಈ ನಿಗಮ ೪೦ ಕೋಟಿ ಲಾಭದಲ್ಲಿದೆ. ಡಾ. ಜಗಜೀವವನರಾಮ್ ಚರ್ಮ ಕೈಗಾರಿಕಾ ನಿಗಮದ ಅಭಿವೃದ್ಧಿ ನಿಗಮದ ಡಿ.ಎಸ್ ಮಾಳಗಿ ಅವರು ಹೊಸ ವರ್ಷದಲ್ಲಿ ಉಪಾಧ್ಯಕ್ಷರಾಗಿದ್ದಾರೆ ಬಹಳ ಸಂತಸ ಎಂದರು.
ಸನ್ಮಾನ ಸಮಾರಂಭದ ಅಧ್ಯಕ್ಷತೆವಹಿಸಿದ್ದ ದಲಿತ ಮುಖಂಡ ಬಸವರಾಜ ಹೆಡಿಗೊಂಡ ಮಾತನಾಡಿ ಶೋಷಿತರಿಗೆ ರಾಜಕೀಯ ವಾಗಿ ಅಪ್ಪಿಕೊಳ್ಳೋದು ಬಹಳ ಕಷ್ಟ. ನಮ್ಮ ಜಿಲ್ಲೆಯ ಬಸವರಾಜ ಬೊಮ್ಮಾಯಿ ಅವರು ಸಿ.ಎಂ ಆಗಿ ಇಂದು ಈ ಜಿಲ್ಲೆಯ ವಿವಿಧ ಶೋಷಿತ ಸಮಾಜಗಳಿಗೆ ನ್ಯಾಯ ದೊರಕಿಸಿ ಕೊಡಿತ್ತಿದ್ದಾರೆ. ಅವರಿಗೆ ಅಭಿನಂದನೆ ತಿಳುಸುತ್ತೇನೆ. ಮಾದಿಗ ಸಮಾಜದ ಹಿರಿಯರು ಸದಾ ಹೋರಾಟಗಾರರಾದ ಡಿ.ಎಸ್ ಮಾಳಗಿ ಅವರಿಗೆ ಲಿಡ್ಕರ್ ಉಪಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಮಾದಿಗ ಸಮಾಜಕ್ಕೆ ಈಗ ಒಂದು ಸಣ್ಣ ಅವಕಾಶ ಸಿಕ್ಕಿದೆ. ಮುಂದೆ ಡಿ.ಎಸ್ ಮಾಳಗಿ ಅವರನ್ನು ಬರುವ ಸಾರ್ವತ್ರಿಕ ವಿಧಾಸಭೆ ಚುನಾವಣೆಯಲ್ಲಿ ಹಾವೇರಿ ಅಸೆಂಬ್ಲಿ ಗೆ ಬಿಜೆಪಿ ಯಿಂದ ಸ್ಪರ್ಧಿಸಲು ಅವಕಾಶ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ನ್ಯಾಯವಾದಿ ನಾಗರಾಜ ಮಾಳಗಿ, ನಿಂಗಪ್ಪ ಗಾಳೇಮ್ಮನವರ, ಅಶೋಕ ಮರೆಣ್ಣವರ, ಮೋಹನ ಚೂರಿ, ಎಮ್.ಬಿ.ಭೈರಮ್ಮನವರ,ಶೆಟ್ಟಿ ವಿಭೂತಿ, ಆಂಜನೇಯ ಎಂ. ಸೇರಿದಂತೆ ಅನೇಕ ದಲಿತ ಮುಖಂಡರು, ಅಭಿಮಾನಿಗಳು ಹಾಜರಿದ್ದರು.
ಹಾವೇರಿಯಲ್ಲಿ ಲಿಡ್ಕರ್ ಮಳಿಗೆ, ಚರ್ಮ ಕೈಗಾರಿಕಾ ಕೇಂದ್ರ ಸ್ಥಾಪನೆ: ಡಿ.ಎಸ್.ಮಾಳಗಿ
Date:
ಹಾವೇರಿಯಲ್ಲಿ ಲಿಡ್ಕರ್ ಮಳಿಗೆ, ಚರ್ಮ ಕೈಗಾರಿಕಾ ಕೇಂದ್ರ ಸ್ಥಾಪನೆ: ಡಿ.ಎಸ್.ಮಾಳಗಿ
ಹಾವೇರಿ: ಹಾವೇರಿಯಲ್ಲಿ ಡಾ.ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಮಾರಾಟಮಳಿಗೆಯನ್ನು ಆರಂಭಿಸಲಾಗುವುದು. ನಗರಕ್ಕೆ ಸಮೀಪದಲ್ಲಿರುವ ನೆಲೋಗಲ್ಲಗುಡ್ಡದಲ್ಲಿ ಚರ್ಮ ಕೈಗಾರಿಕಾ ಕೇಂದ್ರ ಸ್ಥಾಪನೆ ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಡಿ.ಎಸ್.ಮಾಳಗಿ ತಿಳಿಸಿದರು.
ಮಂಗಳವಾರ ಇಲ್ಲಿನ ಖಾಸಗಿ ಹೋಟೆಲ್ನಲ್ಲಿ ಡಿಎಸ್ಎಸ್ , ಆದಿಜಾಂಬವ ಮಾದಿಗರ ಸಂಘ ಹಾವೇರಿಜಿಲ್ಲಾ ಘಟಕದ ಸಂಯುಕ್ತ ಆಶ್ರಯ ದಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸರ್ಕಾರ ನನ್ನ ಸೇವೆಯನ್ನು ಗುರುತಿಸಿ ಡಾ.ಜಗಜೀವನರಾiಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷನೆಂದ ನೇಮಕಮಾಡಿದೆ.
ಮಾದಿಗ ಜನಾಂಗದಲ್ಲಿ ಹುಟ್ಟಿ ಮೂರು ದಶಕದಿಂದ ನಮ್ಮ ಜನಾಂಗದಿಂದ ಹಿಡಿದು ಎಲ್ಲ ಕೆಳಸಮುದಾಯದ ಏಳಿಗೆಗೆ ಶ್ರಮವಹಿಸಿಕೊಂಡ ಬಂದ ನನ್ನ ಹೋರಾಟದ ಸೇವೆ ಬಿಜೆಪಿಯಲ್ಲಿನ ಪಕ್ಷ ನಿಷ್ಠೆ ಇದೆಲ್ಲವನ್ನು ಗಮನಿಸಿ ಸಿ.ಎಂ ಬಸವರಾಜ ಬೊಮ್ಮಾಯಿ ಅವರ ಸರಕಾರ ನನಗೆ ಡಾ. ಜಗಜೀವನರಾಮ್ ಚರ್ಮ ಕೈಗಾರಿಕಾ ನಿಗಮದ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಇದು ಚಮ್ಮಾರರ ಅಭಿವೃದ್ಧಿಗೆ ನಿರ್ಮಿಸಲಾಗಿರುವ ನಿಗಮ ಈ ಅಲ್ಪ ಅವಧಿಯಲ್ಲಿ ಹೆಚ್ಚು ಕಾರ್ಯ ಮಾಡುತ್ತೇನೆ. ಅರ್ಹರಿಗೆ ಸೌಲಭ್ಯ ಕೊಡಿಸಿ ಅವರನ್ನು ಆರ್ಥಿಕವಾಗಿ ಬಲಿಷ್ಠ ವಾಗಿಸುತ್ತೇನೆ ಎಂದು ಡಿ.ಎಸ್ ಮಾಳಗಿ ಹೇಳಿದರು.
ಮುಖ್ಯಅತಿಥಿಯಾಗಿದ್ದ ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಎಸ್. ಕೋರಿಶೆಟ್ಟರ್ ಮಾತನಾಡಿ ಇಂದು ರಾಜಕೀಯ ವ್ಯಾಪಾರೀಕರಣವಾಗಿದೆ. ಇಂದಿನ ರಾಜಕಾರಣಿಗಳು ಮೊದಲು ನಾವು, ನಂತರ ಜನ ಅಂತಾರೆ, ಈ ರಾಷ್ಟ್ರದಲ್ಲಿ ಪಂಚಾಯತ ಮಟ್ಟದಿಂದ ಹಿಡಿದು ಪಾರ್ಲಿಮೆಂಟ್ ವರೆಗೆ ಆಯ್ಕೆ ಆಗುವವರಿಗಾಗಿ ಕಾನೂನು ಬರಬೇಕು. ಇಂದು ಜಾತಿ, ಹಣಬಲದಿಂದ ರಾಜಕೀಯ ಧರ್ಮ, ಶೈಕ್ಷಣಿಕ ರಂಗ ಈ ಅಡ್ಡ ದಾರಿ ಹಿಡಿದಿವೆ, ಇದೊಂದು ನೋವಿನ ಸಂಗತಿ. ಇದನ್ನು ಕಿತ್ತು ಹಾಕಬೇಕಾಗಿದೆ ಡಿ.ಎಸ್ ಮಾಳಗಿ ಅವರು ಜಾತ್ಯಾತೀತ ನಾಯಕರು ಅವರು ನೇರ ನಿಷ್ಠುರ ವಾದಿ ಅಂತವರು ಅಧಿಕಾರ ಪಡಿಯೋದು ಕಷ್ಟವೆ ಆಗಿರುತ್ತದೆ. ಆದರು ಡಿ.ಎಸ್ ಮಾಳಗಿ ಅವರ ಸಾಮಾಜಿಕ ಸೇವೆಗೆ ಬಿಜೆಪಿ ಸರಕಾರ ಗುರ್ತಿಸಿ ಲಿಡ್ಕರ ನಿಗಮದ ಉಪಾಧ್ಯಕ್ಷ ನೀಡಿದ್ದು ನನಗೂ ಸಂತಸ ತಂದಿದೆ ಎಂದರು.
ಗುತ್ತಲ ಪಟ್ಟಣ ಪಂಚಾಯತ ಸದಸ್ಯರು ಹಾಗೂ ನ್ಯಾಯವಾದಿ ಎಸ್.ಜಿ ಹೊನ್ನಪ್ಪನವರ ಮಾತನಾಡಿ ಅಖಂಡ ಧಾರವಾಡ ಜಿಲ್ಲೆಯಲ್ಲಿ ಮಾಳಗಿ ಅವರು ಕಳೆದ ೩ ದಶಕದಿಂದ ಶೋಷಿತ ಸಮಾಜದ ಏಳಿಗೆಗೆ ಜೀವನವನ್ನೆ ತ್ಯಾಗ ಮಾಡಿ ದುಡಿದಿದ್ದಾರೆ. ಡಿ.ಎಸ್ ಮಾಳಗಿ ಅವರನ್ನು ಡಾ. ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ರನ್ನಾಗಿ ನೇಮಿಸಿರುವುದು ಬಹಳ ಸಂತಸ ತಂದಿದೆ. ಮುಂದಿನ ದಿನಮಾನದಲ್ಲಿ ಅವರ ನಾಯಕತ್ವದಲ್ಲಿ ಸಮಾಜದ ಕೆಲಸ ಕಾರ್ಯಗಳನ್ನು ಮಾಡಲು ನಾವು ಬದ್ದವಾಗಿದ್ದೇವೆ ಎಂದರು.
ಡಿಎಸ್ಎಸ್ ಮುಖಂಡ ಹೊನ್ನಪ್ಪ ತಗಡಿನಮನಿ ಮಾತನಾಡಿ ಮಾದಿಗ ಸಮಾಜದಿಂದ ಡಿ.ಎಸ್ ಮಾಳಗಿ ಅವರಿಗೆ ಶಾಸಕರನ್ನಾಗಿ ಮಾಡಲು ಪ್ರಯತ್ನ ಮಾಡೋಣ ಎಂದರು.
ಡಿಎಸ್ ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಮಾತನಾಡಿ ಕಳೆದ ಮೂರು ದಶಕದಿಂದ ದಲಿತ ಚಳುವಳಿ ಮಾಡಿಕೊಂಡು ಸರ್ವ ಸಮಾಜದ ಪ್ರೀತಿ ಪಾತ್ರರಾದ ಮಾಳಗಿ ಅವರನ್ನು ಬಿಜೆಪಿ ಪಕ್ಷ ಗುರ್ತಿಸಿ ಡಾ. ಜಗಜೀವನರಾಮ ಚರ್ಮ ಕೈಗಾರಿಕಾ ಅಭಿತ ನಿಗಮದ ಉಪಾಧ್ಯಕ್ಷ ರನ್ನಾಗಿ ಮಾಡಿರುವುದು ಬಹಳ ಸಂತೋಷ ತಂದಿದೆ. ಇಂತಹ ಒಬ್ಬ ನಾಯಕರು ಅಸೆಂಬ್ಲಿ ಚುನಾವಣೆಯಲ್ಲಿ ಹಾವೇರಿ ಮೀಸಲು ಕ್ಷೇತ್ರಕ್ಕೆ ಎಡಗೈ ಸಮುದಾಯದ ಡಿ.ಎಸ್ ಮಾಳಗಿ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು. ಸದಾಶಿವ ಆಯೋಗವನ್ನು ಜಾರಿ ಮಾಡಬೇಕು. ರಾಜಕೀಯ ವಾಗಿ ಮಾದಿಗ ಸಮಾಜ ಬಹಳ ಹಿಂದುಳಿದಿದೆ ನಮ್ಮ ರಾಜಕೀಯ ಹಕ್ಕನ್ನು ನೀಡಲೇಬೇಕು ಎಂದು ಆಗ್ರಹಿಸಿದರು.
ಮಾಜಿ ತಾ.ಪಂ ಅಧ್ಯಕ್ಷ ಚಂದ್ರಪ್ಪ ಹರಿಜನ, ಮಾದಿಗ ಸಮಾಜದ ಜಿಲ್ಲಾಧ್ಯಕ್ಷ ಸಂಜೀವಗಾಂಧಿ ಸಂಜೀವಣ್ಣನವರ ಮಾತನಾಡಿ ನಮ್ಮ ಸಮುದಾಯದ ಜನರು ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ೩೫ ಸಾವಿರ ಮತದಾರರಿದ್ದಾರೆ. ಡಿ.ಎಸ್ ಮಾಳಗಿ ಅವರಿಗೆ ನಿಗಮದ ಉಪಾಧ್ಯಕ್ಷ ಆದರೆ ಸಾಲದು, ಅವರಿಗೆ ಹಾವೇರಿ ಮೀಸಲು ಅಸೆಂಬ್ಲಿ ಕ್ಷೇತ್ರಕ್ಕೆ ಸ್ಪರ್ಧಿಸಲು ಬಿಜೆಪಿ ಪಕ್ಷದಿಂದ ಟಿಕೆಟ್ ನೀಡಬೇಕು. ಕಳೆದ ಮೂರು ದಶಕದಲ್ಲಿ ಅಖಂಡ ಧಾರವಾಡ ಜಿಲ್ಲೆ ಯಲ್ಲಿರುವ ಬಹು ಜನಾಂಗ ಇರುವ ಮಾದಿಗ ಸಮಾಜಕ್ಕೆ ಸಾಮಾಜಿಕ ಅನ್ಯಾಯವಾಗಿದೆ. ಅದು ಈ ಸಂದರ್ಭದಲ್ಲಿ ಬರುವ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಡಿ.ಎಸ್ ಮಾಳಗಿ ಅವರಿಗೆ ಹಾವೇರಿಯಿಂದ ಸ್ಪರ್ದಿಸಲು ಅವಕಾಶ ಕೊಡಲೇಬೇಕು ಎಂದರು.
ನ್ಯಾಯವಾದಿ ಆರ್. ಲೋಕೇಶ ಮಾತನಾಡಿ ಲಿಡ್ಕರ್ ನಿಗಮ ಎಂದರೆ ಸಾಮಾನ್ಯವಲ್ಲ, ಒಂದು ಎಮ್ಮೆಯ ಹದ ಮಾಡಿದ ಚರ್ಮ ೧೮ ಸಾವಿರ ಬೆಲೆ ಇದೆ. ಈ ನಿಗಮ ೪೦ ಕೋಟಿ ಲಾಭದಲ್ಲಿದೆ. ಡಾ. ಜಗಜೀವವನರಾಮ್ ಚರ್ಮ ಕೈಗಾರಿಕಾ ನಿಗಮದ ಅಭಿವೃದ್ಧಿ ನಿಗಮದ ಡಿ.ಎಸ್ ಮಾಳಗಿ ಅವರು ಹೊಸ ವರ್ಷದಲ್ಲಿ ಉಪಾಧ್ಯಕ್ಷರಾಗಿದ್ದಾರೆ ಬಹಳ ಸಂತಸ ಎಂದರು.
ಸನ್ಮಾನ ಸಮಾರಂಭದ ಅಧ್ಯಕ್ಷತೆವಹಿಸಿದ್ದ ದಲಿತ ಮುಖಂಡ ಬಸವರಾಜ ಹೆಡಿಗೊಂಡ ಮಾತನಾಡಿ ಶೋಷಿತರಿಗೆ ರಾಜಕೀಯ ವಾಗಿ ಅಪ್ಪಿಕೊಳ್ಳೋದು ಬಹಳ ಕಷ್ಟ. ನಮ್ಮ ಜಿಲ್ಲೆಯ ಬಸವರಾಜ ಬೊಮ್ಮಾಯಿ ಅವರು ಸಿ.ಎಂ ಆಗಿ ಇಂದು ಈ ಜಿಲ್ಲೆಯ ವಿವಿಧ ಶೋಷಿತ ಸಮಾಜಗಳಿಗೆ ನ್ಯಾಯ ದೊರಕಿಸಿ ಕೊಡಿತ್ತಿದ್ದಾರೆ. ಅವರಿಗೆ ಅಭಿನಂದನೆ ತಿಳುಸುತ್ತೇನೆ. ಮಾದಿಗ ಸಮಾಜದ ಹಿರಿಯರು ಸದಾ ಹೋರಾಟಗಾರರಾದ ಡಿ.ಎಸ್ ಮಾಳಗಿ ಅವರಿಗೆ ಲಿಡ್ಕರ್ ಉಪಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಮಾದಿಗ ಸಮಾಜಕ್ಕೆ ಈಗ ಒಂದು ಸಣ್ಣ ಅವಕಾಶ ಸಿಕ್ಕಿದೆ. ಮುಂದೆ ಡಿ.ಎಸ್ ಮಾಳಗಿ ಅವರನ್ನು ಬರುವ ಸಾರ್ವತ್ರಿಕ ವಿಧಾಸಭೆ ಚುನಾವಣೆಯಲ್ಲಿ ಹಾವೇರಿ ಅಸೆಂಬ್ಲಿ ಗೆ ಬಿಜೆಪಿ ಯಿಂದ ಸ್ಪರ್ಧಿಸಲು ಅವಕಾಶ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ನ್ಯಾಯವಾದಿ ನಾಗರಾಜ ಮಾಳಗಿ, ನಿಂಗಪ್ಪ ಗಾಳೇಮ್ಮನವರ, ಅಶೋಕ ಮರೆಣ್ಣವರ, ಮೋಹನ ಚೂರಿ, ಎಮ್.ಬಿ.ಭೈರಮ್ಮನವರ,ಶೆಟ್ಟಿ ವಿಭೂತಿ, ಆಂಜನೇಯ ಎಂ. ಸೇರಿದಂತೆ ಅನೇಕ ದಲಿತ ಮುಖಂಡರು, ಅಭಿಮಾನಿಗಳು ಹಾಜರಿದ್ದರು.