ಹಾವೇರಿಯಲ್ಲಿ ೧೦ ಕೆ.ಜಿ ಗಾಂಜಾ ವಶ, ನಾಲ್ವರು ಆರೋಪಿಗಳ ಬಂಧನ    

Date:

 


ಹಾವೇರಿಯಲ್ಲಿ ೧೦ ಕೆ.ಜಿ ಗಾಂಜಾ ವಶ, ನಾಲ್ವರು ಆರೋಪಿಗಳ ಬಂಧನ
ಹಾವೇರಿ: ನಿಷೇಧಿತ ಗಾಂಜಾವನ್ನು ಕಲ್ಕತ್ತ ಮೂಲದ ವ್ಯಕ್ತಿಗಳಿಂದ ಖರೀದಿಸಿ ಹಾವೇರಿ ಜಿಲ್ಲಾ ಪ್ರದೇಶದ ವ್ಯಾಪ್ತಿಯಲ್ಲಿ ಮಾರಾಟದಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ಶನಿವಾರ ರಾತ್ರಿ  ಶಹರ ಪೊಲೀಸ್‌ಠಾಣೆಯ ಪೊಲೀಸ್‌ರು  ಖಚಿತ ಮಾಹಿತಿ ಮೇರೆಗೆ ದಾಳಿ ನಡಿಸಿ ಬಂಧಿಸಿದ್ದು,   ಬಂಧಿತರಿಂದ  ೯.ಕೆಜಿ ೯೦೦ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಗೋಪಾಲ್  ತಿಳಿಸಿದರು.
ಶಹರಠಾಣೆಯಲ್ಲಿ ಭಾನುವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು                                      ಹಾವೇರಿ ಶಹರದ ರೈಲ್ವೆ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿರುವ ತನಿಷ್ಕಾ ಹೋಟಲ್ ಎದುರಿಗೆ ಇರುವ ಬ್ರೀಡ್ಜ್ ಕೆಳಗೆ ಆರೋಪಿಗಳನ್ನು ಬಂಧಿಸಲಾಗಿದೆ. ಹಾವೇರಿ  ಜಿಲ್ಲೆಯಲ್ಲಿ ನಿಷೇಧಿತ ಗಾಂಜಾ ಬೆಳೆ ಉತ್ಪಾದನೆಗೆ ಜಿಲ್ಲಾ ಪೊಲೀಸ್ ಎಂದು ಅವಕಾಶ ನೀಡಿಲ್ಲ. ಆದರೆ ತಮ್ಮ ಪಾಯ್ದೆಗೋಸ್ಕರ್ ಯಾವುದೇ ಪಾಸ್- ಪರವಾನಗಿ ಇಲ್ಲದೇ ಅನಧಿಕೃತವಾಗಿ ಕಲ್ಕತ್ತಾ ವ್ಯಕ್ತಿಗಳ ಪರಿಚಯ ಮಾಡಿಕೊಂಡು ದಂಧೆಯಲ್ಲಿ  ತೊಡಗಿದ್ದ ಹಾವೇರಿ ಶಹರದ  ಆರೋಪಿಗಳ ಬಗ್ಗೆ ನಮ್ಮ ಶಹರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಅವರು ಖಚಿತ ಮಾಹಿತಿ ಸಂಗ್ರಹಿಸಿದ್ದರು.
ಅನಧಿಕೃತವಾಗಿ ಗಾಂಜಾ ದಂಧೆಯಲ್ಲಿ ತೊಡಗಿದ್ದ ಹಾವೇರಿ ಶಹರದ ನಾಗೇಂದ್ರಮಟ್ಟಿ ಓಣಿಯ ಪ್ರಥಮ ಆರೋಪಿ ೨೭ವರ್ಷ ದಿಳ್ಳೇಪ್ಪ ಮಲ್ಲಪ್ಪ ಅಳಲಗೇರಿ, ೨ನೇ ಆರೋಪಿ ನಗರದ ಸುಭಾಸ್ ಸರ್ಕಲ್‌ನ ೨೬ ವರ್ಷ ನವನಾದ  ಪಾರೂಕ್ ಅಹ್ಮದ ಶಬ್ಬೀರ್ ಅಹ್ಮದ ಕುಂಚೂರ, ಸುಬಾಸ್‌ಸರ್ಕಲ್‌ನ  ೩ನೇ ಆರೋಪಿ  ೨೫ವರ್ಷ ಇಸ್ಮಾಯಿಲ್ ಮದರಸಾಬ್ ನದಾಪ್,  ನಾಗೇಂದ್ರಮಟ್ಟಿಯ ೪ ನೇ ಆರೋಪಿ  ೨೭ವರ್ಷ ಸಾಹೀಲ್ ಸಲೀಂ ಕರ್ಜಗಿ  ಈ ನಾಲ್ಕು ಆರೋಪಿಗಳಿಂದ ೯ಕೆ.ಜಿ ೯೦೦ ಗ್ರಾಂ ತೂಕದ ಹೂವು, ಮೊಗ್ಗು, ಬೀಜ ಮಿಶ್ರಿತ ಗಂಟು ಗಂಟಾದ ಒಣಗಿದ ಘಾಟು ವಾಸನೆಯುಳ್ಳ ಗಾಂಜಾ ಮತ್ತು ಆರೋಪಿತರಿಂದ ದಂಧೆಗೆ ಬಳಸಲಾಗುತ್ತಿದ್ದ ೪ ಎಂಡ್ರೈಡ್ ಮೋಬೈಲ್ ಪೋನು ಸೇರಿದಂತೆ ೭,೯೧೦೦೦ ಸಾವಿರ ಕಿಮ್ಮತ್ತಿನ ವಸ್ತುಗಳನ್ನು  ಶಹರ ಪೊಲೀಸರು ದಾಳಿ ನಡೆಸಿ ವಶಪಡಿಕೊಂಡಿದ್ದಾರೆ.                                     ಆರೋಪಿತರು  ಇತ್ತೀಚೆಗೆ ಗಾಂಜಾ ದಂಧೆಯಲ್ಲಿ ತೊಡಗಿಕೊಂಡು ಕಲ್ಕತ್ತಾದಿಂದ ಗಾಂಜಾವನ್ನು ತರಿಸಿ ಹಾನಗಲ್ಲ, ರಾಣೆಬೆನ್ನೂರ್, ಹಾವೇರಿ ತಾಲೂಕಿನಲ್ಲಿ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಈ ದಂಧೆಕೋರರ ಬಗ್ಗೆ ಮಾಹಿತಿ ಇತ್ತು. ಇದನ್ನು ಬೇಧಿಸಲು ಆರಂಭಿಸಿದ ಶಹರ ರಾಣೆ ಪೊಲೀಸರು ಶನಿವಾರ ರಾತ್ರಿ ೮ ಗಂಟೆ ಸಮಯದಲ್ಲಿ ಇವರನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.
ಈ ಪ್ರಕರಣ ಅತೀ ಸೂಕ್ಷ್ಮದಿಂದ ಕೂಡಿದ್ದಲ್ಲದೇ, ಬಾರಿ ಸಂಚಲನ ಮೂಡಿಸಿದ್ದ ಪ್ರಕರಣವಾಗಿತ್ತು. ಸಮಾಜದ ಯುವ ಜನತೆಯ ಭವಿಷ್ಯವನ್ನು ಕಾಪಾಡುವಲ್ಲಿ ಶಹರ ಪೊಲೀಸ್ ಅಧಿಕಾರಿಗಳ ತಂಡ ಯಶಸ್ವಿಯಾಗಿದೆ. ಶಹರ ಪೊಲೀಸ್ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಸಾರ್ವಜನಿಕರು ಅಭಿನಂದಿಸಿದ್ದಾರೆ ಎಂದು ಹೆಚ್ಚುವರಿ ಎಸ್.ಪಿ ಸಿ.ಗೋಪಾಲ್  ತಿಳಿಸಿದರು. ಈ ಕಾರ್ಯಾಚರಣೆಯನ್ನು ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಹಾಗೂ ಹೆಚ್ಚುವರಿ ಎಸ್.ಪಿ ಸಿ ಗೋಪಾಲ್, ಡಿವಾಯ್‌ಎಸ್‌ಪಿ ಗಣೇಶ ಕೆ.ಎಲ್ ಮಾರ್ಗದರ್ಶನದ ನೇತೃತ್ವದಲ್ಲಿ ಪ್ರಕರಣ ಪಿರ್ಯಾದಿ ಹಾವೇರಿ ಶಹರ ಸಿಪಿಐ ಮೋತಿಲಾಲ್ ಪವಾರ್ ಅವರ ತಂಡದ ತನಿಖಾಧಿಕಾರಿಗಳಾದ ಪಿಎಸ್‌ಐ ರಘು.ಟಿ, ಸಿಬ್ಬಂದಿಗಳಾದ ಎಂ.ಜಿ ಎರೇಶಿಮಿ, ಮುತ್ತು ಲಮಾಣಿ, ಕೆ.ಬಿ ಮುದಿಯಮ್ಮನವರ, ಚನ್ನಬಸಪ್ಪ ಆರ್.ಬಿ, ನೀಲಕಂಠ ಲಿಂಗರಾಜು, ಎಂ.ಎಸ್ ಮೆನಸಕ್ಕನವರ, ಚಂದ್ರಕಾಂತ ಎಲ್.ಆರ್, ಮಾಲತೇಶ ಕಬ್ಬೂರ್, ತಾಂತ್ರಿಕ ಸಿಬ್ಬಂದಿಗಳಾದ ಮಾರುತಿ ಹಾಲಭಾವಿ, ಸತೀಶ ಮಾಸನಕಟ್ಟಿ ಸೇರಿದಂತೆ  ಪ್ರಮುಖ ಸಿಬ್ಬಂದಿಗಳು ಒಟ್ಟಿಗೆ  ಚುರುಕಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿತರಿಂದ ವಶಪಡಿಸಿಕೊಂಡಿದ್ದ ಸುಮಾರು ೯.ಕೆಜಿ ೯೦೦ ಗ್ರಾಂಗಾಂಜಾ, ನಾಲ್ಕು ಮೊಬೈಲ್ ಪೋನ್, ಸುಮಾರು ೭, ೯೧೦೦೦ ಸಾವಿರ ಅಧಿಕ ಮೊತ್ತದ ವಸ್ತುಗಳನ್ನು ಹಾವೇರಿ ಶಹರ ಠಾಣೆ ಮುಂಬಾಗದಲ್ಲಿ ಮಾಧ್ಯಮದವರ ಮುಂದೆ ಬಹಿರಂಗ ಪಡಿಸಲಾಯಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್.ಪಿ ಸಿ.ಗೋಪಾಲ್, ಡಿವಾಯ್‌ಎಸ್ ಪಿ ಗಣೇಶ ಕೆ.ಎಲ್, ಸಿಪಿಐ ಮೋತಿಲಾಲ್ ಪವಾರ, ಪಿಎಸ್‌ಐ ರಘು ಟಿ, ಸಿಬ್ಬಂದಿಗಳಾದ ಎಂ.ಜಿ ಎರೇಶಿಮಿ,ಮುತ್ತು ಲಮಾಣಿ,ಕರಿಗಾರ, ಸೇರಿದಂತೆ ಇನ್ನು ಅನೇಕ ಪೊಲೀಸ್ ಸಿಬ್ಬಂದಿ ಹಾಜರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

 


ಹಾವೇರಿಯಲ್ಲಿ ೧೦ ಕೆ.ಜಿ ಗಾಂಜಾ ವಶ, ನಾಲ್ವರು ಆರೋಪಿಗಳ ಬಂಧನ
ಹಾವೇರಿ: ನಿಷೇಧಿತ ಗಾಂಜಾವನ್ನು ಕಲ್ಕತ್ತ ಮೂಲದ ವ್ಯಕ್ತಿಗಳಿಂದ ಖರೀದಿಸಿ ಹಾವೇರಿ ಜಿಲ್ಲಾ ಪ್ರದೇಶದ ವ್ಯಾಪ್ತಿಯಲ್ಲಿ ಮಾರಾಟದಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ಶನಿವಾರ ರಾತ್ರಿ  ಶಹರ ಪೊಲೀಸ್‌ಠಾಣೆಯ ಪೊಲೀಸ್‌ರು  ಖಚಿತ ಮಾಹಿತಿ ಮೇರೆಗೆ ದಾಳಿ ನಡಿಸಿ ಬಂಧಿಸಿದ್ದು,   ಬಂಧಿತರಿಂದ  ೯.ಕೆಜಿ ೯೦೦ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಗೋಪಾಲ್  ತಿಳಿಸಿದರು.
ಶಹರಠಾಣೆಯಲ್ಲಿ ಭಾನುವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು                                      ಹಾವೇರಿ ಶಹರದ ರೈಲ್ವೆ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿರುವ ತನಿಷ್ಕಾ ಹೋಟಲ್ ಎದುರಿಗೆ ಇರುವ ಬ್ರೀಡ್ಜ್ ಕೆಳಗೆ ಆರೋಪಿಗಳನ್ನು ಬಂಧಿಸಲಾಗಿದೆ. ಹಾವೇರಿ  ಜಿಲ್ಲೆಯಲ್ಲಿ ನಿಷೇಧಿತ ಗಾಂಜಾ ಬೆಳೆ ಉತ್ಪಾದನೆಗೆ ಜಿಲ್ಲಾ ಪೊಲೀಸ್ ಎಂದು ಅವಕಾಶ ನೀಡಿಲ್ಲ. ಆದರೆ ತಮ್ಮ ಪಾಯ್ದೆಗೋಸ್ಕರ್ ಯಾವುದೇ ಪಾಸ್- ಪರವಾನಗಿ ಇಲ್ಲದೇ ಅನಧಿಕೃತವಾಗಿ ಕಲ್ಕತ್ತಾ ವ್ಯಕ್ತಿಗಳ ಪರಿಚಯ ಮಾಡಿಕೊಂಡು ದಂಧೆಯಲ್ಲಿ  ತೊಡಗಿದ್ದ ಹಾವೇರಿ ಶಹರದ  ಆರೋಪಿಗಳ ಬಗ್ಗೆ ನಮ್ಮ ಶಹರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಅವರು ಖಚಿತ ಮಾಹಿತಿ ಸಂಗ್ರಹಿಸಿದ್ದರು.
ಅನಧಿಕೃತವಾಗಿ ಗಾಂಜಾ ದಂಧೆಯಲ್ಲಿ ತೊಡಗಿದ್ದ ಹಾವೇರಿ ಶಹರದ ನಾಗೇಂದ್ರಮಟ್ಟಿ ಓಣಿಯ ಪ್ರಥಮ ಆರೋಪಿ ೨೭ವರ್ಷ ದಿಳ್ಳೇಪ್ಪ ಮಲ್ಲಪ್ಪ ಅಳಲಗೇರಿ, ೨ನೇ ಆರೋಪಿ ನಗರದ ಸುಭಾಸ್ ಸರ್ಕಲ್‌ನ ೨೬ ವರ್ಷ ನವನಾದ  ಪಾರೂಕ್ ಅಹ್ಮದ ಶಬ್ಬೀರ್ ಅಹ್ಮದ ಕುಂಚೂರ, ಸುಬಾಸ್‌ಸರ್ಕಲ್‌ನ  ೩ನೇ ಆರೋಪಿ  ೨೫ವರ್ಷ ಇಸ್ಮಾಯಿಲ್ ಮದರಸಾಬ್ ನದಾಪ್,  ನಾಗೇಂದ್ರಮಟ್ಟಿಯ ೪ ನೇ ಆರೋಪಿ  ೨೭ವರ್ಷ ಸಾಹೀಲ್ ಸಲೀಂ ಕರ್ಜಗಿ  ಈ ನಾಲ್ಕು ಆರೋಪಿಗಳಿಂದ ೯ಕೆ.ಜಿ ೯೦೦ ಗ್ರಾಂ ತೂಕದ ಹೂವು, ಮೊಗ್ಗು, ಬೀಜ ಮಿಶ್ರಿತ ಗಂಟು ಗಂಟಾದ ಒಣಗಿದ ಘಾಟು ವಾಸನೆಯುಳ್ಳ ಗಾಂಜಾ ಮತ್ತು ಆರೋಪಿತರಿಂದ ದಂಧೆಗೆ ಬಳಸಲಾಗುತ್ತಿದ್ದ ೪ ಎಂಡ್ರೈಡ್ ಮೋಬೈಲ್ ಪೋನು ಸೇರಿದಂತೆ ೭,೯೧೦೦೦ ಸಾವಿರ ಕಿಮ್ಮತ್ತಿನ ವಸ್ತುಗಳನ್ನು  ಶಹರ ಪೊಲೀಸರು ದಾಳಿ ನಡೆಸಿ ವಶಪಡಿಕೊಂಡಿದ್ದಾರೆ.                                     ಆರೋಪಿತರು  ಇತ್ತೀಚೆಗೆ ಗಾಂಜಾ ದಂಧೆಯಲ್ಲಿ ತೊಡಗಿಕೊಂಡು ಕಲ್ಕತ್ತಾದಿಂದ ಗಾಂಜಾವನ್ನು ತರಿಸಿ ಹಾನಗಲ್ಲ, ರಾಣೆಬೆನ್ನೂರ್, ಹಾವೇರಿ ತಾಲೂಕಿನಲ್ಲಿ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಈ ದಂಧೆಕೋರರ ಬಗ್ಗೆ ಮಾಹಿತಿ ಇತ್ತು. ಇದನ್ನು ಬೇಧಿಸಲು ಆರಂಭಿಸಿದ ಶಹರ ರಾಣೆ ಪೊಲೀಸರು ಶನಿವಾರ ರಾತ್ರಿ ೮ ಗಂಟೆ ಸಮಯದಲ್ಲಿ ಇವರನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.
ಈ ಪ್ರಕರಣ ಅತೀ ಸೂಕ್ಷ್ಮದಿಂದ ಕೂಡಿದ್ದಲ್ಲದೇ, ಬಾರಿ ಸಂಚಲನ ಮೂಡಿಸಿದ್ದ ಪ್ರಕರಣವಾಗಿತ್ತು. ಸಮಾಜದ ಯುವ ಜನತೆಯ ಭವಿಷ್ಯವನ್ನು ಕಾಪಾಡುವಲ್ಲಿ ಶಹರ ಪೊಲೀಸ್ ಅಧಿಕಾರಿಗಳ ತಂಡ ಯಶಸ್ವಿಯಾಗಿದೆ. ಶಹರ ಪೊಲೀಸ್ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಸಾರ್ವಜನಿಕರು ಅಭಿನಂದಿಸಿದ್ದಾರೆ ಎಂದು ಹೆಚ್ಚುವರಿ ಎಸ್.ಪಿ ಸಿ.ಗೋಪಾಲ್  ತಿಳಿಸಿದರು. ಈ ಕಾರ್ಯಾಚರಣೆಯನ್ನು ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಹಾಗೂ ಹೆಚ್ಚುವರಿ ಎಸ್.ಪಿ ಸಿ ಗೋಪಾಲ್, ಡಿವಾಯ್‌ಎಸ್‌ಪಿ ಗಣೇಶ ಕೆ.ಎಲ್ ಮಾರ್ಗದರ್ಶನದ ನೇತೃತ್ವದಲ್ಲಿ ಪ್ರಕರಣ ಪಿರ್ಯಾದಿ ಹಾವೇರಿ ಶಹರ ಸಿಪಿಐ ಮೋತಿಲಾಲ್ ಪವಾರ್ ಅವರ ತಂಡದ ತನಿಖಾಧಿಕಾರಿಗಳಾದ ಪಿಎಸ್‌ಐ ರಘು.ಟಿ, ಸಿಬ್ಬಂದಿಗಳಾದ ಎಂ.ಜಿ ಎರೇಶಿಮಿ, ಮುತ್ತು ಲಮಾಣಿ, ಕೆ.ಬಿ ಮುದಿಯಮ್ಮನವರ, ಚನ್ನಬಸಪ್ಪ ಆರ್.ಬಿ, ನೀಲಕಂಠ ಲಿಂಗರಾಜು, ಎಂ.ಎಸ್ ಮೆನಸಕ್ಕನವರ, ಚಂದ್ರಕಾಂತ ಎಲ್.ಆರ್, ಮಾಲತೇಶ ಕಬ್ಬೂರ್, ತಾಂತ್ರಿಕ ಸಿಬ್ಬಂದಿಗಳಾದ ಮಾರುತಿ ಹಾಲಭಾವಿ, ಸತೀಶ ಮಾಸನಕಟ್ಟಿ ಸೇರಿದಂತೆ  ಪ್ರಮುಖ ಸಿಬ್ಬಂದಿಗಳು ಒಟ್ಟಿಗೆ  ಚುರುಕಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿತರಿಂದ ವಶಪಡಿಸಿಕೊಂಡಿದ್ದ ಸುಮಾರು ೯.ಕೆಜಿ ೯೦೦ ಗ್ರಾಂಗಾಂಜಾ, ನಾಲ್ಕು ಮೊಬೈಲ್ ಪೋನ್, ಸುಮಾರು ೭, ೯೧೦೦೦ ಸಾವಿರ ಅಧಿಕ ಮೊತ್ತದ ವಸ್ತುಗಳನ್ನು ಹಾವೇರಿ ಶಹರ ಠಾಣೆ ಮುಂಬಾಗದಲ್ಲಿ ಮಾಧ್ಯಮದವರ ಮುಂದೆ ಬಹಿರಂಗ ಪಡಿಸಲಾಯಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್.ಪಿ ಸಿ.ಗೋಪಾಲ್, ಡಿವಾಯ್‌ಎಸ್ ಪಿ ಗಣೇಶ ಕೆ.ಎಲ್, ಸಿಪಿಐ ಮೋತಿಲಾಲ್ ಪವಾರ, ಪಿಎಸ್‌ಐ ರಘು ಟಿ, ಸಿಬ್ಬಂದಿಗಳಾದ ಎಂ.ಜಿ ಎರೇಶಿಮಿ,ಮುತ್ತು ಲಮಾಣಿ,ಕರಿಗಾರ, ಸೇರಿದಂತೆ ಇನ್ನು ಅನೇಕ ಪೊಲೀಸ್ ಸಿಬ್ಬಂದಿ ಹಾಜರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು!

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು! ಹಾವೇರಿ: ದಾಸರು,...

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...