ಹಾವೇರಿ: ಅತ್ಯಾಚಾರ-ದರೋಡೆ ಮಾಡಿದ ಆರೋಪಿತರಿಗೆ ೧೦ ವರ್ಷಗಳ ಕಠಿಣ ಕಾರವಾಸ ಶಿಕ್ಷೆ-ದಂಡ

Date:

ಹಾವೇರಿ: ಅತ್ಯಾಚಾರ-ದರೋಡೆ ಮಾಡಿದ ಆರೋಪಿತರಿಗೆ ೧೦ ವರ್ಷಗಳ ಕಠಿಣ ಕಾರವಾಸ ಶಿಕ್ಷೆ-ದಂಡ
ಹಾವೇರಿ:ಜಿಲ್ಲೆಯ ಬಂಕಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ರೋಣನಕೆರಿ -ಹೊಸೂರ ನಡುವಿನ ಕಾಡಿನಲ್ಲಿ ದಿನಾಂಕ: ೨೮-೯-೨೦೧೪ ರಂದು ಬೈಕ್‌ನಲ್ಲಿ ಹೊರಟಿದ್ದ ದಂಪತಿಗಳ ಮೇಲೆ ಹಲ್ಲೆ ನಡೆಸಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ದರೋಡೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಹಾವೇರಿಯ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-೧ ದ ನ್ಯಾಯಾಧೀಶರಾದ ನಿಂಗೌಡ ಪಾಟೀಲ್ ಅವರು ಆರೋಪಿ ನಂ.೦೧ ಮತ್ತು ೧೨ ನೇದವರಿಗೆ ತಲಾ ೧೦ ವರ್ಷಗಳ ಕಠಿಣ ಕಾರವಾಸ ಶಿಕ್ಷೆ ಹಾಗೂ ತಲಾ 1 ಲಕ್ಷ ರೂ. ಗಳ ದಂಡವನ್ನು ವಿಧಿಸಿ ಏ.೨೭-೨೦೨೩ ರಂದು ತೀರ್ಪು ನೀಡಿರುತ್ತಾರೆ.
ರೋಣನಕೆರಿ -ಹೊಸೂರ ನಡುವಿನ ಕಾಡಿನ ಮಧ್ಯದ ರಸ್ತೆಯಲ್ಲಿ ಆರೋಪಿತರು ಸುಲಿಗೆ ಮಾಡುವ ಉದ್ದೇಶದಿಂದ ಹೊಂಚು ಹಾಕಿ ಕುಳಿತುಕೊಂಡಿದ್ದಾಗ ದಿನಾಂಕ: ೨೮-೯-೨೦೧೪ ರಂದು ಮಧ್ಯಾಹ್ನ ೩-೩೦ ಗಂಟೆ ಸುಮಾರಿಗೆ ಪಿರ್ಯಾದಿದಾರಳು ತನ್ನ ಗಂಡನ ಜೊತೆಗೆ ತಮ್ಮ ಬೈಕ್ ನಲ್ಲಿ ಬೆಳಗಾಲ ಪೇಟೆಯಿಂದ ದುಂಢಶಿಗೆ ಇದೇ ಮಾರ್ಗದಲ್ಲಿ ಹೋಗುತ್ತಿದ್ದಾಗ ಕಾಡಿನಲ್ಲಿ ರಸ್ತೆಯ ಮೇಲೆ ಮೋಟಾರ ಸೈಕಲ್ ನಿಲ್ಲಿಸಿ ಪಿರ್ಯಾದಿಯ ಗಂಡ ಬಯಲು ವಿಸರ್ಜನೆಗೆ ಹೋದಾಗ ಆರೋಪಿತರ ಪೈಕಿ ಆರೋಪಿ ನಂ-೧ ಮೌಲಾಲಿ ಪಯಾತಸಾಬ್ ಅತ್ತಾರ ಮತ್ತು ಆರೋಪಿ ೦೨ ಚಂದನ ದೇವೇಂದ್ರಪ್ಪ ಮಡಿವಾಳರ ಇಬ್ಬರೂ ಹಾನಗಲ್ಲ ಇವರು ಪಿರ್ಯಾದಿಯ ಹತ್ತಿರ ಹೋಗಿ ಅವಳಿಗೆ ಹೆದರಿಸಿ ರಸ್ತೆಯ ಪಕ್ಕದ ಕಾಡಿನಲ್ಲಿ ಕರೆದುಕೊಂಡು ಹೋಗಿದ್ದಾರೆ.
ಪಿರ್ಯಾದಿಯ ಗಂಡನು ಇದನ್ನು ನೋಡಿ ಇವರ ಹತ್ತಿರ ಹೋದಾಗ ಆರೋಪಿ ನಂ:೦೨ ನೇದವನ್ನು ಇವನಿಗೆ ಚಾಕು ತೋರಿಸಿ ಮುಂದಕ್ಕೆ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡಿದ್ದಾಗ ಆರೋಪಿ ನಂ: ೧ ನೇದವನು ಪಿರ್ಯಾದಿಗೆ ಕಾಡಿನಲ್ಲಿ ಮಲಗಿಸಿ ಕೊಸರಾಡಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಧಮಕಿ ಹಾಕಿ ಬಲವಂತವಾಗಿ ಅವಳ ಮೈ ಮೇಲಿನ ಬಟ್ಟೆಗಳನ್ನು ಬಿಚ್ಚಿಸಿ ಅವಳ ಇಚ್ಛೆಯ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ, ಅವಳ ಮೈ ಮೇಲಿನ ಬಂಗಾರದ ಆಭರಣಗಳನ್ನು ಸುಲಿಗೆ ಮಾಡಿದ ಬಗ್ಗೆ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಶಿಗ್ಗಾಂವ ವೃತ್ತದ ತನಿಖಾಧಿಕಾರಿಗಳಾದ ಎಂ.ಎಸ್ ಹೊಸಮನಿ ಸಿ.ಪಿ.ಐ ಅವರು ತನಿಖೆ ಕೈಗೊಂಡು ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಸದರಿ ಪ್ರಕರಣದಲ್ಲಿ ಆರೋಪಿತರಾದ ೧) ಮೌಲಾಲಿ ತಂದೆ ಹಯಾತಸಾಬ ಆಶಾರ ೨) .ಚಂದನ ತಂದ ದೇವೇಂದ್ರಪ್ಪ ಮಡಿವಾಳರ ಇವರ ಮೇಲೆ ಹೊರಿಸಲಾದ ಆಪಾದನೆಗಳಾದ ಕಲಂ ಭಾ.ದಂ.ಸಂ ಕಲಂ: ೩೯೨, ೩೭೬, ಐಪಿಸಿ ಮತ್ತು ೪೧(ಡಿ) ಸಿ.ಆರ್.ಪಿ.ಸಿ ಅಡಿಯಲ್ಲಿರುವ ಅಪಾಧನೆಯನ್ನು ಅಭಿಯೋಜನೆಯು ರುಜುವಾತು ಪಡಿಸಿರುತ್ತದೆ ಎಂದು ಹಾವೇರಿಯ ಮಾನ್ಯ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-೧ ದ ಮಾನ್ಯ ನ್ಯಾಯಾಧೀಶರಾದ ನಿಂಗೌಡ ಪಾಟೀಲ್ ಅವರು ಆರೋಪಿ ನಂ.೦೧ ಮತ್ತು ೧೨ ನೇದವರಿಗೆ ತಲಾ ೧೦ ವರ್ಷಗಳ ಕಠಿಣ ಕಾರವಾಸ ಶಿಕ್ಷೆ ಹಾಗೂ ತಲಾ 1 ಲಕ್ಷ ರೂ. ಗಳ ದಂಡವನ್ನು ವಿಧಿಸಿ ತೀರ್ಪು ನೀಡಿರುತ್ತಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸಿದ್ಧಾರೂಢ ಎಂ. ಗೆಜ್ಜೆಹಳ್ಳಿ ಅವರು ವಾದ ಮಂಡಿಸಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಹಾವೇರಿ: ಅತ್ಯಾಚಾರ-ದರೋಡೆ ಮಾಡಿದ ಆರೋಪಿತರಿಗೆ ೧೦ ವರ್ಷಗಳ ಕಠಿಣ ಕಾರವಾಸ ಶಿಕ್ಷೆ-ದಂಡ
ಹಾವೇರಿ:ಜಿಲ್ಲೆಯ ಬಂಕಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ರೋಣನಕೆರಿ -ಹೊಸೂರ ನಡುವಿನ ಕಾಡಿನಲ್ಲಿ ದಿನಾಂಕ: ೨೮-೯-೨೦೧೪ ರಂದು ಬೈಕ್‌ನಲ್ಲಿ ಹೊರಟಿದ್ದ ದಂಪತಿಗಳ ಮೇಲೆ ಹಲ್ಲೆ ನಡೆಸಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ದರೋಡೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಹಾವೇರಿಯ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-೧ ದ ನ್ಯಾಯಾಧೀಶರಾದ ನಿಂಗೌಡ ಪಾಟೀಲ್ ಅವರು ಆರೋಪಿ ನಂ.೦೧ ಮತ್ತು ೧೨ ನೇದವರಿಗೆ ತಲಾ ೧೦ ವರ್ಷಗಳ ಕಠಿಣ ಕಾರವಾಸ ಶಿಕ್ಷೆ ಹಾಗೂ ತಲಾ 1 ಲಕ್ಷ ರೂ. ಗಳ ದಂಡವನ್ನು ವಿಧಿಸಿ ಏ.೨೭-೨೦೨೩ ರಂದು ತೀರ್ಪು ನೀಡಿರುತ್ತಾರೆ.
ರೋಣನಕೆರಿ -ಹೊಸೂರ ನಡುವಿನ ಕಾಡಿನ ಮಧ್ಯದ ರಸ್ತೆಯಲ್ಲಿ ಆರೋಪಿತರು ಸುಲಿಗೆ ಮಾಡುವ ಉದ್ದೇಶದಿಂದ ಹೊಂಚು ಹಾಕಿ ಕುಳಿತುಕೊಂಡಿದ್ದಾಗ ದಿನಾಂಕ: ೨೮-೯-೨೦೧೪ ರಂದು ಮಧ್ಯಾಹ್ನ ೩-೩೦ ಗಂಟೆ ಸುಮಾರಿಗೆ ಪಿರ್ಯಾದಿದಾರಳು ತನ್ನ ಗಂಡನ ಜೊತೆಗೆ ತಮ್ಮ ಬೈಕ್ ನಲ್ಲಿ ಬೆಳಗಾಲ ಪೇಟೆಯಿಂದ ದುಂಢಶಿಗೆ ಇದೇ ಮಾರ್ಗದಲ್ಲಿ ಹೋಗುತ್ತಿದ್ದಾಗ ಕಾಡಿನಲ್ಲಿ ರಸ್ತೆಯ ಮೇಲೆ ಮೋಟಾರ ಸೈಕಲ್ ನಿಲ್ಲಿಸಿ ಪಿರ್ಯಾದಿಯ ಗಂಡ ಬಯಲು ವಿಸರ್ಜನೆಗೆ ಹೋದಾಗ ಆರೋಪಿತರ ಪೈಕಿ ಆರೋಪಿ ನಂ-೧ ಮೌಲಾಲಿ ಪಯಾತಸಾಬ್ ಅತ್ತಾರ ಮತ್ತು ಆರೋಪಿ ೦೨ ಚಂದನ ದೇವೇಂದ್ರಪ್ಪ ಮಡಿವಾಳರ ಇಬ್ಬರೂ ಹಾನಗಲ್ಲ ಇವರು ಪಿರ್ಯಾದಿಯ ಹತ್ತಿರ ಹೋಗಿ ಅವಳಿಗೆ ಹೆದರಿಸಿ ರಸ್ತೆಯ ಪಕ್ಕದ ಕಾಡಿನಲ್ಲಿ ಕರೆದುಕೊಂಡು ಹೋಗಿದ್ದಾರೆ.
ಪಿರ್ಯಾದಿಯ ಗಂಡನು ಇದನ್ನು ನೋಡಿ ಇವರ ಹತ್ತಿರ ಹೋದಾಗ ಆರೋಪಿ ನಂ:೦೨ ನೇದವನ್ನು ಇವನಿಗೆ ಚಾಕು ತೋರಿಸಿ ಮುಂದಕ್ಕೆ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡಿದ್ದಾಗ ಆರೋಪಿ ನಂ: ೧ ನೇದವನು ಪಿರ್ಯಾದಿಗೆ ಕಾಡಿನಲ್ಲಿ ಮಲಗಿಸಿ ಕೊಸರಾಡಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಧಮಕಿ ಹಾಕಿ ಬಲವಂತವಾಗಿ ಅವಳ ಮೈ ಮೇಲಿನ ಬಟ್ಟೆಗಳನ್ನು ಬಿಚ್ಚಿಸಿ ಅವಳ ಇಚ್ಛೆಯ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ, ಅವಳ ಮೈ ಮೇಲಿನ ಬಂಗಾರದ ಆಭರಣಗಳನ್ನು ಸುಲಿಗೆ ಮಾಡಿದ ಬಗ್ಗೆ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಶಿಗ್ಗಾಂವ ವೃತ್ತದ ತನಿಖಾಧಿಕಾರಿಗಳಾದ ಎಂ.ಎಸ್ ಹೊಸಮನಿ ಸಿ.ಪಿ.ಐ ಅವರು ತನಿಖೆ ಕೈಗೊಂಡು ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಸದರಿ ಪ್ರಕರಣದಲ್ಲಿ ಆರೋಪಿತರಾದ ೧) ಮೌಲಾಲಿ ತಂದೆ ಹಯಾತಸಾಬ ಆಶಾರ ೨) .ಚಂದನ ತಂದ ದೇವೇಂದ್ರಪ್ಪ ಮಡಿವಾಳರ ಇವರ ಮೇಲೆ ಹೊರಿಸಲಾದ ಆಪಾದನೆಗಳಾದ ಕಲಂ ಭಾ.ದಂ.ಸಂ ಕಲಂ: ೩೯೨, ೩೭೬, ಐಪಿಸಿ ಮತ್ತು ೪೧(ಡಿ) ಸಿ.ಆರ್.ಪಿ.ಸಿ ಅಡಿಯಲ್ಲಿರುವ ಅಪಾಧನೆಯನ್ನು ಅಭಿಯೋಜನೆಯು ರುಜುವಾತು ಪಡಿಸಿರುತ್ತದೆ ಎಂದು ಹಾವೇರಿಯ ಮಾನ್ಯ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-೧ ದ ಮಾನ್ಯ ನ್ಯಾಯಾಧೀಶರಾದ ನಿಂಗೌಡ ಪಾಟೀಲ್ ಅವರು ಆರೋಪಿ ನಂ.೦೧ ಮತ್ತು ೧೨ ನೇದವರಿಗೆ ತಲಾ ೧೦ ವರ್ಷಗಳ ಕಠಿಣ ಕಾರವಾಸ ಶಿಕ್ಷೆ ಹಾಗೂ ತಲಾ 1 ಲಕ್ಷ ರೂ. ಗಳ ದಂಡವನ್ನು ವಿಧಿಸಿ ತೀರ್ಪು ನೀಡಿರುತ್ತಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸಿದ್ಧಾರೂಢ ಎಂ. ಗೆಜ್ಜೆಹಳ್ಳಿ ಅವರು ವಾದ ಮಂಡಿಸಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...