ಹಾವೇರಿ: ಅಪ್ರಾಪ್ತಳಿಗೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆಮಾಡಿದ ಅಪರಾಧಿಗೆ ಮರಣ ದಂಡನೆ ಶಿಕ್ಷೆ
ಹಾವೇರಿ: ಅಪ್ರಾಪ್ತಳಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕಯನ್ನು ಕೊಲೆಮಾಡಿದ ಅಪರಾಧಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಹಾವೇರಿಯ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ-೧ – ನ್ಯಾಯಾಧೀಶ ನಿಂಗೌಡ ಪಾಟೀಲ ಎಲ್ಲಾ ಅಪರಾಧಗಳಿಗೆ ಮರಣ ದಂಡನೆ ಶಿಕ್ಷೆ ಮತ್ತು ರೂ. ೧,೫೦,೦೦೦/- ರೂಗಳ ದಂಡವನ್ನು ವಿಧಿಸಿ ಅ.೨೧ರಂದು ತೀರ್ಪು ನೀಡಿದ್ದಾರೆ.
ಜಿಲ್ಲೆಯ ಶಿಗ್ಗಾಂವ ಪೊಲೀಸ್ ಠಾಣಾ ವ್ಯಾಪ್ತಿಯ ಖುರ್ಸಾಪುರ ಗ್ರಾಮಕ್ಕೆ ದಿನಾಂಕ: ೦೬-೦೫-೨೦೧೯ ರಂದು ಮದುವೆಗೆ ಬಂದಿದ್ದ ಅಪರಾಧಿ ಮದುವೆಯ ಮನೆಯವರು ಬೀಗರಿಗೆ ಉಳಿದುಕೊಳ್ಳಲು ತಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿರುವ ಯಲ್ಲವ್ವ ಕೋಂ ಶೇಖಪ್ಪ ಎಚ್ಚರ ಅವರ ಮನೆಯನ್ನು ಕೊಟ್ಟಿದ್ದರು. ಸದರಿ ಮನೆಯಲ್ಲಿ ಅಪ್ರಾಪ್ತಳನ್ನು ಆರೋಪಿ ಹುಬ್ಬಳ್ಳಿ ತಾಲೂಕಿನ ಕುರಡಿಕೇರಿಗ್ರಾಮದ ಶೆಟ್ಟಪ್ಪ ಬಸಪ್ಪ ವಡ್ಡರ ತಾನು ಉಳಿದುಕೊಂಡಿದ್ದ ಮನೆಯ ಬಾಜುವಿನ ಮನೆಯ ಶೌಚಾಲಯದಲ್ಲಿ ರಾತ್ರಿ ಅಪಹರಿಸಿಕೊಂಡು ಹೋಗಿ ಒತ್ತಾಯದಿಂದ ಬಲತ್ಕಾರ ಸಂಭೋಗ ಮಾಡಿದ್ದಲ್ಲದೇ, ಬಾಲಕಿಯನ್ನು ಹಾಗೆ ಬಿಟ್ಟರೆ ಹೊರಗೆ ಹೋಗಿ ವಿಷಯ ಹೇಳುತ್ತಾಳೆ ಎಂದು ಆರೋಪಿತನು ಬಾಲಕಿಯ ಕುತ್ತಿಗೆಯನ್ನು ಹಿಚುಕಿ ಕೊಲೆ ಮಾಡಿ ಶೌಚಾಲಯದಲ್ಲಿಯೇ ಒಗೆದು ಹೋಗಿದ್ದ.
ಈಬಗ್ಗೆ ಮೃತಬಾಲಕಿಯ ತಾಯಿ ಆರೋಪಿತನ ಮೇಲೆ ತಿಗ್ಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಶಿಗ್ಗಾಂವ ವೃತ್ತ ತನಿಖಾಧಿಕಾರಿ ಸಿ.ಪಿ.ಐ ಆರ್.ಎಫ್ ದೇಸಾಯಿ ಅವರು ಪ್ರಕರಣದ ಈ ತನಿಖೆಯನ್ನು ನಡೆಸಿ ದೋಷಾರೋಪಣಾ ಪತ್ರವನ್ನು ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಸದರಿ ಪ್ರಕರಣದಲ್ಲಿ ಆರೋಪಿತನಾದ ಶೆಟ್ಟಪ್ಪ ಬಸಪ್ಪ ವಡ್ಡರ ಮೇಲೆ ಹೊರಿಸಲಾದ ಅಪಾದನೆಗಳನ್ನು ಅಭಿಯೋಜನೆಯು ರುಜುವಾತು ಪಡಿಸಿರುತ್ತದೆ ಎಂದು ಹಾವೇರಿಯ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ-೧ – ನ್ಯಾಯಾಧೀಶರಾದ ನಿಂಗೌಡ ಪಾಟೀಲ ಅವರು ಅಪರಾಧಿಗೆ ಸದರಿ ಎಲ್ಲಾ ಅಪರಾಧಗಳಿಗೆ ಮರಣ ದಂಡನೆ ಶಿಕ್ಷೆ ಮತ್ತು ರೂ. ೧,೫೦,೦೦೦/- ರೂಗಳ ದಂಡವನ್ನು ವಿಧಿಸಿರುತ್ತಾರೆ. ದಂಡದ ಹಣದಲ್ಲಿ ಮೃತ ಬಾಲಕಿಯ ಪಾಲಕರಿಗೆ ರೂ. ೭೫೦೦೦/- ಗಳ ಪರಿಹಾರ ಹಾಗೂ ಕರ್ನಾಟಕ ಸರ್ಕಾರದ ನೊಂದವರ ಪರಿವಾರ ನಿಧಿ ಯೋಜನೆಯಡಿ ಇರುವ ಪರಿಹಾರ ನಿಧಿಯಿಂದ ಕರ್ನಾಟಕ ಸರ್ಕಾರ ಮೃತ ಬಾಲಕಿಯ ಪಾಲಕರಿಗೆ ರೂ. ೧೦,೦೦,೦೦೦/- ಗಳ ಪರಿಹಾರವನ್ನು ನೀಡಬೇಕೆಂದು ತೀರ್ಪು ನೀಡಿ ದಿನಾಂಕ: ೨೧-೧೦-೨೦೧೩ ರಂದು ಆದೇಶ ನೀಡಿರುತ್ತಾರೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರು ವಿಜಯಕುಮಾರ ಶಂಕರಗೌಡ ಪಾಟೀಲ್ ಅಧಿಕ ಜಿಲ್ಲಾ ಮತ್ತು ಸತ್ತ ನ್ಯಾಯಾಲಯ, ಎನ್.ಟಿ.ಎಸ್.ಸಿ-೧, ಹಾವೇರಿ ಇವರ ವಾದ ಮುಂಡಿಸಿದ್ದರು.