ಹಾವೇರಿ: ಎಸ್‌ಬಿಐ ಬ್ಯಾಂಕಿನ ನಿವೃತ್ತ ಮ್ಯಾನೇಜರ ಹತ್ಯೆಗೆ ಯತ್ನಿಸಿದ್ದ ೮ಜನ ಸುಪಾರಿ ಹಂತಕರ ಬಂಧನ

Date:

ಆ.೧೦-೨೦೨೩ರಂದು ಸುಪಾರಿ ಹಂತಕರಿಂದ ಚೂರಿ ಇರಿತಕ್ಕೆ ಒಳಗಾದ ಜಯರಾಮ ಕೊಲ್ಲಾಪುರ ಜಿಲ್ಲಾ ಆಸ್ಪತ್ತೆಯಲ್ಲಿ ಚಿಕಿತ್ಸೆ ಪಡೆದ ದೃಶ್ಯ.

ಹಾವೇರಿ: ಎಸ್‌ಬಿಐ ಬ್ಯಾಂಕಿನ ನಿವೃತ್ತ ಮ್ಯಾನೇಜರ ಹತ್ಯೆಗೆ ಯತ್ನಿಸಿದ್ದ ೮ಜನ ಸುಪಾರಿ ಹಂತಕರ ಬಂಧನ
ಹಾವೇರಿ: ಎಸ್‌ಬಿಐ ಬ್ಯಾಂಕಿನ ನಿವೃತ್ತ ಮ್ಯಾನೇಜರನ ಹತ್ಯೆಗೆ ಯತ್ನಿಸಿ ಆತನ ಬೆನ್ನಿಗೆ ಚೂರಿ ಇರಿದು ಹಲ್ಲೆ ನಡೆಸಿ ಪರಾರಿಯಾಗಿದ್ದ ೮ಜನ ಸುಪಾರಿ ಹಂತಕರನ್ನು ಭಾನುವಾರ ಗ್ರಾಮೀಣ ಪೊಲೀಸ್‌ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಂಧಿಸಿದ್ದಾರೆ.
ಘಟನೆ ಹಿನ್ನಲೆ: ಆ.೧೦-೨೦೨೩ರಂದು ಮಧ್ಯಾಹ್ನ ೪-೩೦ ಘಂಟೆಗೆ ಡಿಸಿ ಕಚೇರಿಹೋಗುವ ಜನ ನಿಬಿಡ ರಸ್ತೆಯಲ್ಲಿ ದೇವಿಗಿರಿ ಯಲ್ಲಾಪೂರ ಪೆಟ್ರೋಲ್ ಪಂಪ್ ಹತ್ತಿರ ಹಾವೇರಿ ನಗರದ ಜಯರಾಮ ಕಲ್ಲಾಪೂರ ಹಾಗೂ ಇವರ ಮಗ ವಾದಿರಾಜ ಕೊಲ್ಲಾಪೂರ ತಮ್ಮ ಮೋಟಾರ ಸೈಕಲ್ಲದಲ್ಲಿ ಬರುತ್ತಿದ್ದ ವೇಳೆ ಬೈಕ್ ಹಿಂದುಗಡೆ ಕುಳಿತಿದ್ದ ಜಯರಾಮ ಅವರನ್ನು ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಅಪರಿಚಿತ ದುಷ್ಕರ್ಮಿಗಳು ಚೂರಿ ಚುಚ್ಚಿ ಪರಾರಿಯಾಗಿದ್ದರು. ಈಘಟನೆ ಜಿಲ್ಲೆಯ ಜನರನ್ನು ಬೆಚ್ಚಿ ಬಿಳಿಸಿತ್ತು. ಜಿಲ್ಲಾಧಿಕಾರಿಗಳ ಕಚೇರಿರಸ್ತೆಯಲ್ಲಿಯೇ ಹಗಲು ಹೊತ್ತಿನಲ್ಲಿ ಕೊಲೆಯತ್ನ ನಡೆದಿರುವ ಬಗ್ಗೆ ಜನತೆ ಆತಂಕಗೊಂಡಿದ್ದರು. ಈಬಗ್ಗೆ ಹಾವೇರಿ ಗ್ರಾಮಾಂತರ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆ ಕೈಗೊಂಡ ಗ್ರಾಮೀಣಠಾಣೆಯ ಸಿಪಿಐ ಹಾಗೂ ಅಧಿಕಾರಿ ಸಿಬ್ಬಂದಿವರ್ಗದವರು ಜಯರಾಮ್‌ಅವರಿಗೆ ಚೂರಿ ಚುಚ್ಚಿ ಪರಾರಿಯಾಗಿದ್ದ ಧಾರವಾಡ ಜಿಲ್ಲೆಯ ಮಾಂತು ಮಾಹಾಂತೇಶ ಲಕ್ಷ್ಮಣ ಜಮನಾಳ, ಸಾಗರ ತಿರುಕಪ್ಪ ಜಮನಾಳ ಮತ್ತು ಬೆಳಗಾಂವ ಜಿಲ್ಲೆಯ ಪ್ರಜ್ವಲ್ ಗಣಪತಿ ದೊತರೆ, ರಾಘವೇಂದ್ರ ಸೋಮಪ್ಪ ದೊಡ್ಡಮನಿ, ಅಜಯ್ ಹನುಮಂತಪ್ಪ ಸಾಲಹಳ್ಳ, ಶಿವಾನಂದ ಅರ್ಜುನ ತಗಡಿನಮನಿ, ಬೆಂಗಳೂರ ನಗರದ ಸುನೀಲ್ ಕೆ.ಎನ್. ನಾಗರಾಜ, ಚಂಗಲರಾಯಪ್ಪ ಗಜಲಪ್ಪ ಈ ೮ಜನ ಸುಪಾರಿ ಹಂತಕರನ್ನು ಬಂಧಿಸಿದ್ದಾರೆ.
ರಾಘವೇಂದ್ರ ಮಠದ ಮತ್ತು ಅದರ ಆಸ್ತಿ ವಿಚಾರಕ್ಕೆ ಸುಪಾರಿ ನೀಡಿದ್ದ ಉಡಪಿ ಮೂಲದ ಹರಿಕೃಷ್ಣ: ಈ ಪ್ರಕರಣದಲ್ಲಿಯ ಪ್ರಮುಖ ಆರೋಪಿ ಉಡುಪಿ ಮೂಲದ ಹರಿಕೃಷ್ಣ ಅನಂತ ರಾವ್ ಹಾವೇರಿ ಶಹರದ ರಾಘವೇಂದ್ರಮಠದ ಮತ್ತು ಅದರ ಆಸ್ತಿ ವಿಚಾರವಾಗಿ ಹಾವೇರಿ ಜಯರಾಮ ಕೊಲ್ಲಾಪೂರ ಅವರ ಜೊತೆಗೆ ವೈಮನಸ್ಸು ಇತ್ತೆಂದು, ವೈಮನಸ್ಸಿನಿಂದಾಗಿ ಜಯರಾಮ ಕೊಲ್ಲಾಪುರ ಅವರನ್ನು ಕೊಲೆ ಮಾಡುವ ಬಗ್ಗೆ ಒಳ ಸಂಚು ರೂಪಿಸಿ ಮೇಲ್ದಾಣಿಸಿದ ೮ ಜನ ಆರೋಪಿತರಿಗೆ ಹಣದ ಆಸೆ ತೋರಿಸಿ ಅವರಿಗೆ ಸುಪಾರಿ ಕೊಟ್ಟಿದ್ದರೆಂದು, ಸುಪಾರಿ ಪಡೆದಿದ್ದ ಸುಪಾರಿ ಜಂತಕರು ಜಯರಾಮ ಅವರು ಬೈಕ್‌ನಲ್ಲಿ ಬರುತ್ತಿರುವಾಗ ದಾರಿ ಮಧ್ಯ ಅವರನ್ನು ಬೆನ್ನುಹತ್ತಿ ಅವರ ಪಕ್ಕಡಿಗೆ ಚಾಕುವಿನಿಂದ ಚುಚ್ಚಿ ಕೊಲೆ ಯತ್ನ ನಡೆಸಿದ್ದರು. ಅಂದು ಅದೃಷ್ಟವಶಾತ್ ಜಯರಾಮ್ ಅವರಿಗೆ ಚುಚ್ಚಿದ ಚೂರಿ ಪಕ್ಕಡಿಯಲ್ಲಿ ಇಳಿದ ಪರಿಣಾಮ ಅವರ ತೀವೃ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ಅವರನ್ನು ಹಾವೇರಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸಗೆ ಸಾಗಿಸಿ ಅವರಿಗೆ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿತ್ತು, ಇದೀಗ ಜಯರಾಮ್ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಕೊಲೆಗೆ ಯತ್ನಿಸಿದ್ದ ಸುಪಾರಿ ಹಂತಕರು ಜೇಲಿನ ಕಂಬಿಯ ಹಿಂದಿದ್ದಾರೆ.
ಪ್ರರಕಣ ಭೇದಿಸಿ ಆರೋಪಿರತನ್ನು ಪತ್ತೆ ಮಾಡುವಲ್ಲಿ ಹಾವೇರಿಯ ಡಿ ಎಸ್ ಪಿ ಎಮ್.ಎಸ್. ಪಾಟೀಲ್, ಸಿಪಿಸಿ ಎಸ್.ಕೆ. ಪವಾರ್, ಪಿಎಸ್‌ಐ ರವಿಕುಮಾರ ಡಿ, ಎಸ್ ಪಿ ಹೊಸಮನಿ ಹಾಗೂ ಸಿಬ್ಬಂದಿ ವಾಯ್.ಎಫ್. ತಹಶೀಲ್ದಾರ, ಸುರೇಶ ನಾಯಕ, ಎಮ್.ಕೆ. ನದಾಫ್ ಹಾಗೂ ಸಿ.ಡಿ.ಆರ್ ವಿಭಾಗದ ಮಾರುತಿ ಹಾಲಬಾವಿ, ಸತೀಶ ಮಾರಕ ಇವರು ಪ್ರಕರಣ ಭೇದಿಸಲು ಶ್ರಮಿಸಿದ ಬಗ್ಗೆ ಎಸ್‌ಪಿ ಡಾ. ಶಿಕುಮಾರ, ಹೆಚ್ಚುವರಿ ಎಸ್‌ಪಿ ಸಿ. ಗೋಪಾಲ, ಪ್ರಶಂಸೆ ವ್ಯಕ್ತಪಡಿಸಿದ್ದು ಬಹುಮಾನ ಘೋಷಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಆ.೧೦-೨೦೨೩ರಂದು ಸುಪಾರಿ ಹಂತಕರಿಂದ ಚೂರಿ ಇರಿತಕ್ಕೆ ಒಳಗಾದ ಜಯರಾಮ ಕೊಲ್ಲಾಪುರ ಜಿಲ್ಲಾ ಆಸ್ಪತ್ತೆಯಲ್ಲಿ ಚಿಕಿತ್ಸೆ ಪಡೆದ ದೃಶ್ಯ.

ಹಾವೇರಿ: ಎಸ್‌ಬಿಐ ಬ್ಯಾಂಕಿನ ನಿವೃತ್ತ ಮ್ಯಾನೇಜರ ಹತ್ಯೆಗೆ ಯತ್ನಿಸಿದ್ದ ೮ಜನ ಸುಪಾರಿ ಹಂತಕರ ಬಂಧನ
ಹಾವೇರಿ: ಎಸ್‌ಬಿಐ ಬ್ಯಾಂಕಿನ ನಿವೃತ್ತ ಮ್ಯಾನೇಜರನ ಹತ್ಯೆಗೆ ಯತ್ನಿಸಿ ಆತನ ಬೆನ್ನಿಗೆ ಚೂರಿ ಇರಿದು ಹಲ್ಲೆ ನಡೆಸಿ ಪರಾರಿಯಾಗಿದ್ದ ೮ಜನ ಸುಪಾರಿ ಹಂತಕರನ್ನು ಭಾನುವಾರ ಗ್ರಾಮೀಣ ಪೊಲೀಸ್‌ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಂಧಿಸಿದ್ದಾರೆ.
ಘಟನೆ ಹಿನ್ನಲೆ: ಆ.೧೦-೨೦೨೩ರಂದು ಮಧ್ಯಾಹ್ನ ೪-೩೦ ಘಂಟೆಗೆ ಡಿಸಿ ಕಚೇರಿಹೋಗುವ ಜನ ನಿಬಿಡ ರಸ್ತೆಯಲ್ಲಿ ದೇವಿಗಿರಿ ಯಲ್ಲಾಪೂರ ಪೆಟ್ರೋಲ್ ಪಂಪ್ ಹತ್ತಿರ ಹಾವೇರಿ ನಗರದ ಜಯರಾಮ ಕಲ್ಲಾಪೂರ ಹಾಗೂ ಇವರ ಮಗ ವಾದಿರಾಜ ಕೊಲ್ಲಾಪೂರ ತಮ್ಮ ಮೋಟಾರ ಸೈಕಲ್ಲದಲ್ಲಿ ಬರುತ್ತಿದ್ದ ವೇಳೆ ಬೈಕ್ ಹಿಂದುಗಡೆ ಕುಳಿತಿದ್ದ ಜಯರಾಮ ಅವರನ್ನು ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಅಪರಿಚಿತ ದುಷ್ಕರ್ಮಿಗಳು ಚೂರಿ ಚುಚ್ಚಿ ಪರಾರಿಯಾಗಿದ್ದರು. ಈಘಟನೆ ಜಿಲ್ಲೆಯ ಜನರನ್ನು ಬೆಚ್ಚಿ ಬಿಳಿಸಿತ್ತು. ಜಿಲ್ಲಾಧಿಕಾರಿಗಳ ಕಚೇರಿರಸ್ತೆಯಲ್ಲಿಯೇ ಹಗಲು ಹೊತ್ತಿನಲ್ಲಿ ಕೊಲೆಯತ್ನ ನಡೆದಿರುವ ಬಗ್ಗೆ ಜನತೆ ಆತಂಕಗೊಂಡಿದ್ದರು. ಈಬಗ್ಗೆ ಹಾವೇರಿ ಗ್ರಾಮಾಂತರ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆ ಕೈಗೊಂಡ ಗ್ರಾಮೀಣಠಾಣೆಯ ಸಿಪಿಐ ಹಾಗೂ ಅಧಿಕಾರಿ ಸಿಬ್ಬಂದಿವರ್ಗದವರು ಜಯರಾಮ್‌ಅವರಿಗೆ ಚೂರಿ ಚುಚ್ಚಿ ಪರಾರಿಯಾಗಿದ್ದ ಧಾರವಾಡ ಜಿಲ್ಲೆಯ ಮಾಂತು ಮಾಹಾಂತೇಶ ಲಕ್ಷ್ಮಣ ಜಮನಾಳ, ಸಾಗರ ತಿರುಕಪ್ಪ ಜಮನಾಳ ಮತ್ತು ಬೆಳಗಾಂವ ಜಿಲ್ಲೆಯ ಪ್ರಜ್ವಲ್ ಗಣಪತಿ ದೊತರೆ, ರಾಘವೇಂದ್ರ ಸೋಮಪ್ಪ ದೊಡ್ಡಮನಿ, ಅಜಯ್ ಹನುಮಂತಪ್ಪ ಸಾಲಹಳ್ಳ, ಶಿವಾನಂದ ಅರ್ಜುನ ತಗಡಿನಮನಿ, ಬೆಂಗಳೂರ ನಗರದ ಸುನೀಲ್ ಕೆ.ಎನ್. ನಾಗರಾಜ, ಚಂಗಲರಾಯಪ್ಪ ಗಜಲಪ್ಪ ಈ ೮ಜನ ಸುಪಾರಿ ಹಂತಕರನ್ನು ಬಂಧಿಸಿದ್ದಾರೆ.
ರಾಘವೇಂದ್ರ ಮಠದ ಮತ್ತು ಅದರ ಆಸ್ತಿ ವಿಚಾರಕ್ಕೆ ಸುಪಾರಿ ನೀಡಿದ್ದ ಉಡಪಿ ಮೂಲದ ಹರಿಕೃಷ್ಣ: ಈ ಪ್ರಕರಣದಲ್ಲಿಯ ಪ್ರಮುಖ ಆರೋಪಿ ಉಡುಪಿ ಮೂಲದ ಹರಿಕೃಷ್ಣ ಅನಂತ ರಾವ್ ಹಾವೇರಿ ಶಹರದ ರಾಘವೇಂದ್ರಮಠದ ಮತ್ತು ಅದರ ಆಸ್ತಿ ವಿಚಾರವಾಗಿ ಹಾವೇರಿ ಜಯರಾಮ ಕೊಲ್ಲಾಪೂರ ಅವರ ಜೊತೆಗೆ ವೈಮನಸ್ಸು ಇತ್ತೆಂದು, ವೈಮನಸ್ಸಿನಿಂದಾಗಿ ಜಯರಾಮ ಕೊಲ್ಲಾಪುರ ಅವರನ್ನು ಕೊಲೆ ಮಾಡುವ ಬಗ್ಗೆ ಒಳ ಸಂಚು ರೂಪಿಸಿ ಮೇಲ್ದಾಣಿಸಿದ ೮ ಜನ ಆರೋಪಿತರಿಗೆ ಹಣದ ಆಸೆ ತೋರಿಸಿ ಅವರಿಗೆ ಸುಪಾರಿ ಕೊಟ್ಟಿದ್ದರೆಂದು, ಸುಪಾರಿ ಪಡೆದಿದ್ದ ಸುಪಾರಿ ಜಂತಕರು ಜಯರಾಮ ಅವರು ಬೈಕ್‌ನಲ್ಲಿ ಬರುತ್ತಿರುವಾಗ ದಾರಿ ಮಧ್ಯ ಅವರನ್ನು ಬೆನ್ನುಹತ್ತಿ ಅವರ ಪಕ್ಕಡಿಗೆ ಚಾಕುವಿನಿಂದ ಚುಚ್ಚಿ ಕೊಲೆ ಯತ್ನ ನಡೆಸಿದ್ದರು. ಅಂದು ಅದೃಷ್ಟವಶಾತ್ ಜಯರಾಮ್ ಅವರಿಗೆ ಚುಚ್ಚಿದ ಚೂರಿ ಪಕ್ಕಡಿಯಲ್ಲಿ ಇಳಿದ ಪರಿಣಾಮ ಅವರ ತೀವೃ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ಅವರನ್ನು ಹಾವೇರಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸಗೆ ಸಾಗಿಸಿ ಅವರಿಗೆ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿತ್ತು, ಇದೀಗ ಜಯರಾಮ್ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಕೊಲೆಗೆ ಯತ್ನಿಸಿದ್ದ ಸುಪಾರಿ ಹಂತಕರು ಜೇಲಿನ ಕಂಬಿಯ ಹಿಂದಿದ್ದಾರೆ.
ಪ್ರರಕಣ ಭೇದಿಸಿ ಆರೋಪಿರತನ್ನು ಪತ್ತೆ ಮಾಡುವಲ್ಲಿ ಹಾವೇರಿಯ ಡಿ ಎಸ್ ಪಿ ಎಮ್.ಎಸ್. ಪಾಟೀಲ್, ಸಿಪಿಸಿ ಎಸ್.ಕೆ. ಪವಾರ್, ಪಿಎಸ್‌ಐ ರವಿಕುಮಾರ ಡಿ, ಎಸ್ ಪಿ ಹೊಸಮನಿ ಹಾಗೂ ಸಿಬ್ಬಂದಿ ವಾಯ್.ಎಫ್. ತಹಶೀಲ್ದಾರ, ಸುರೇಶ ನಾಯಕ, ಎಮ್.ಕೆ. ನದಾಫ್ ಹಾಗೂ ಸಿ.ಡಿ.ಆರ್ ವಿಭಾಗದ ಮಾರುತಿ ಹಾಲಬಾವಿ, ಸತೀಶ ಮಾರಕ ಇವರು ಪ್ರಕರಣ ಭೇದಿಸಲು ಶ್ರಮಿಸಿದ ಬಗ್ಗೆ ಎಸ್‌ಪಿ ಡಾ. ಶಿಕುಮಾರ, ಹೆಚ್ಚುವರಿ ಎಸ್‌ಪಿ ಸಿ. ಗೋಪಾಲ, ಪ್ರಶಂಸೆ ವ್ಯಕ್ತಪಡಿಸಿದ್ದು ಬಹುಮಾನ ಘೋಷಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...