ಹಾವೇರಿ: ಗಾಂಧಿ ಪುತ್ಥಳಿಗೆ ಅವಮಾನ, ಸಾರ್ವಜನಿಕರ ಆಕ್ರೋಶ
ಹಾವೇರಿ: ಸ್ವಾತಂತ್ರದ ಸವಿನೆನೆಪಿಗಾಗಿ ಇಲ್ಲಿನ ಹೈಸ್ಕೂಲ್ ಮುಂಭಾಗದಲ್ಲಿ ಸ್ಥಾಪಿಸಲಾಗಿರುವ ಮಹಾತ್ಮಾಗಾಂಧೀಜಿ ಪುತ್ಥಳಿಯನ್ನು ಕಿಡಗೇಡಿಗಳು ವಿರೂಪಗೊಳಿಸುವ ಮೂಲಕ ವಿಕೃತಿ ಮೆರೆದಿದ್ದಾರೆ. ೧೩೭ ವರ್ಷ ಇತಿಹಾಸ ಹೊಂದಿರುವ ಹಾವೇರಿಯ ಮುನ್ಸಿಪಲ್ ಹೈಸ್ಕೂಲ್ ಮುಂಭಾಗದಲ್ಲಿ ೧೯೪೭ರಲ್ಲಿ ಮಹಾತ್ಮಗಾಂಧೀಜಿಯವರ ಪುತ್ಥಳಿಯನ್ನು ಸ್ಥಾಪಿಸಲಾಗಿದ್ದು, ಕಿಡಗೇಡಿಗಳು ಗಾಂಧೀಜಿಯವರ ಪ್ರತಿಮೆಯ ಮೇಲೆ ಸಲ್ಲದ ಅಕ್ಷರಗಳನ್ನು ಗೀಚುವ ಮೂಲಕ ಪುತ್ಥಳಿಯನ್ನು ವಿರೂಪಗೊಳಿಸಿದ್ದಾರೆ.
ಪ್ರತಿಮೆಯನ್ನು ವಿರೂಪಗೊಳಿಸಿರುವುದಕ್ಕೆ ಸಾರ್ವಜನಿಕರ ಬೇಸರ ವ್ಯಕ್ತಪಡಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟ ಮಹಾತ್ಮನಿಗೆ ಈ ಗತಿ ಬರಬಾರದಿತ್ತು, ಈ ಕೃತ್ಯ ಬೇಸರದ ಸಂಗತಿಯಾಗಿದೆ. ಇದು ಕೇವಲ ಮಹಾತ್ಮಗಾಂಧೀಜಿಯವರಿಗೆ ಮಾಡಿದ ಅವಮಾನವಲ್ಲ, ನಮಗೆ ನಾವೇ ಮಾಡಿಕೊಂಡ ಅವಮನವಾಗಿದೆ. ಮುಂದೆ ಈ ರೀತಿಯ ಕೃತ್ಯಗಳ ನಡೆಯದಂತೆ ನಗರಸಭೆಯವರು ಗಾಂಧಿ ಪ್ರತಿಮೆಯ ಸುತ್ತ ಕಟಾಂಜನವನ್ನು ನಿರ್ಮಿಸುವ ಮೂಲಕ ಕಿಡಿಗೇಡಿಗಳ ಕೃತ್ಯಕ್ಕೆ ಕಡಿವಾಣ ಹಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.