ಹಾವೇರಿ ಗ್ರಾಮೀಣ ಠಾಣೆಯ ಸಿಪಿಐ ಸಂತೋಷ ಪವಾರಗೆ ಸಿಎಂ ಪದಕ
ಹಾವೇರಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆಗೆ ನೀಡುವ ಮುಖ್ಯಮಂತ್ರಿ ಪದಕಕ್ಕೆ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯ (ಪೊಲೀಸ್ ವೃತ್ತ ನಿರೀಕ್ಷಕ) ಸಂತೋಷ ಕೆ ಪವಾರ ಭಾಜನರಾಗಿದ್ದಾರೆ.(ಪೊಲೀಸ್ ವೃತ್ತ ನಿರೀಕ್ಷಕ, ಹಾವೇರಿ ಗ್ರಾಮೀಣ ವೃತ್ತ, ಹಾವೇರಿ ಜಿಲ್ಲೆ).ಆ.೧೫ರಂದು ಬೆಂಗಳೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪದಕವನ್ನು ಸಂತೋಷ ಪವಾರಗೆ ಪ್ರದಾನಮಾಡಲಾಗಿದೆ ಎಂದು ತಿಳಿದು ಬಂದಿದೆ.
ಅತ್ಯುತ್ಯಮ ಸೇವೆಗೆ ಸಂದ ಮುಖ್ಯಮಂತ್ರಿ ಪದಕ: ಸಿಪಿಐ ಸಂತೋಷ ಪವಾರ ಅವರು ಪೊಲೀಸ್ ಇಲಾಖೆಯಲ್ಲಿ ಸೇವಾಧಕ್ಷತೆಗೆ ಹೆಸರಾಗಿದ್ದಾರೆ. ಇಲಾಖೆಯ ಅನೇಕ ಮಹತ್ವದ ಯೋಜನೆಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಇವರು ಕರ್ತವ್ಯ ನಿರ್ವಹಿಸಿದ ಠಾಣೆಗಳ ವ್ಯಾಪ್ತಿಯಲ್ಲಿ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಅನುಷ್ಠಾನಗೊಳಿಸುವ ಮೂಲಕ ಪೊಲೀಸ್ಠಾಣೆಗಳನ್ನು ಜನಸ್ನೇಹಿಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಇವರ ಕಾರ್ಯ ಶ್ಲಾಘನಿಯವಾಗಿದೆ.
ಈ ಹಿಂದೆ ಇವರು ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಸಿಪಿಐ ಆಗಿದ್ದ ಸಂದರ್ಭದಲ್ಲಿ ಕಳ್ಳತನಗ ನಿಯಂತ್ರಿಸುವ ನಿಟ್ಟಿನಲ್ಲಿ ಗೋಡೆಗಳ ಮೇಲೆ ಇಲಾಖೆಯ ಹಾಗೂ ಸಾರ್ವಜನಿಕರ ಮೊಬೈಲ್ ನಂಬರಗಳನ್ನು ಬರೆಸುವ ಮೂಲಕ ಕಳ್ಳತನ ನಿಯಂತ್ರಣಕ್ಕೆ ರಾಜ್ಯದಲ್ಲಿಯೇ ವಿನೂತನ ಪ್ರಯೋಗವನ್ನು ಇವರು ಮಾಡಿದ್ದರು. ನಂತರ ಇವರು ಸೈಬರ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ವೇಳೆ ಅಲ್ಲಿಯೂ ಸಹ ಅನೇಕ ಬದಲಾವಣೆಗಳನ್ನು ಮಾಡಿದ್ದರು. ಜನರೊಂದಿಗೆ ಸ್ನೇಹಭಾವನೆಯಿಂದ ಬೆರೆಯುವ ಪವಾರ ಎನ್ನುವ ಪವರ್ಗೆ ಅವರ ಅತ್ಯತ್ತಮ ಸೇವೆಗೆ ಮುಖ್ಯಮಂತ್ರಿ ಪದಕ ಇದೀಗ ಸಂದಿದೆ.
ಹಾವೇರಿ ಗ್ರಾಮೀಣ ಠಾಣೆಯ ಸಿಪಿಐ ಸಂತೋಷ ಪವಾರಗೆ ಸಿಎಂ ಪದಕ
Date:
ಹಾವೇರಿ ಗ್ರಾಮೀಣ ಠಾಣೆಯ ಸಿಪಿಐ ಸಂತೋಷ ಪವಾರಗೆ ಸಿಎಂ ಪದಕ
ಹಾವೇರಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆಗೆ ನೀಡುವ ಮುಖ್ಯಮಂತ್ರಿ ಪದಕಕ್ಕೆ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯ (ಪೊಲೀಸ್ ವೃತ್ತ ನಿರೀಕ್ಷಕ) ಸಂತೋಷ ಕೆ ಪವಾರ ಭಾಜನರಾಗಿದ್ದಾರೆ.(ಪೊಲೀಸ್ ವೃತ್ತ ನಿರೀಕ್ಷಕ, ಹಾವೇರಿ ಗ್ರಾಮೀಣ ವೃತ್ತ, ಹಾವೇರಿ ಜಿಲ್ಲೆ).ಆ.೧೫ರಂದು ಬೆಂಗಳೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪದಕವನ್ನು ಸಂತೋಷ ಪವಾರಗೆ ಪ್ರದಾನಮಾಡಲಾಗಿದೆ ಎಂದು ತಿಳಿದು ಬಂದಿದೆ.
ಅತ್ಯುತ್ಯಮ ಸೇವೆಗೆ ಸಂದ ಮುಖ್ಯಮಂತ್ರಿ ಪದಕ: ಸಿಪಿಐ ಸಂತೋಷ ಪವಾರ ಅವರು ಪೊಲೀಸ್ ಇಲಾಖೆಯಲ್ಲಿ ಸೇವಾಧಕ್ಷತೆಗೆ ಹೆಸರಾಗಿದ್ದಾರೆ. ಇಲಾಖೆಯ ಅನೇಕ ಮಹತ್ವದ ಯೋಜನೆಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಇವರು ಕರ್ತವ್ಯ ನಿರ್ವಹಿಸಿದ ಠಾಣೆಗಳ ವ್ಯಾಪ್ತಿಯಲ್ಲಿ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಅನುಷ್ಠಾನಗೊಳಿಸುವ ಮೂಲಕ ಪೊಲೀಸ್ಠಾಣೆಗಳನ್ನು ಜನಸ್ನೇಹಿಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಇವರ ಕಾರ್ಯ ಶ್ಲಾಘನಿಯವಾಗಿದೆ.
ಈ ಹಿಂದೆ ಇವರು ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಸಿಪಿಐ ಆಗಿದ್ದ ಸಂದರ್ಭದಲ್ಲಿ ಕಳ್ಳತನಗ ನಿಯಂತ್ರಿಸುವ ನಿಟ್ಟಿನಲ್ಲಿ ಗೋಡೆಗಳ ಮೇಲೆ ಇಲಾಖೆಯ ಹಾಗೂ ಸಾರ್ವಜನಿಕರ ಮೊಬೈಲ್ ನಂಬರಗಳನ್ನು ಬರೆಸುವ ಮೂಲಕ ಕಳ್ಳತನ ನಿಯಂತ್ರಣಕ್ಕೆ ರಾಜ್ಯದಲ್ಲಿಯೇ ವಿನೂತನ ಪ್ರಯೋಗವನ್ನು ಇವರು ಮಾಡಿದ್ದರು. ನಂತರ ಇವರು ಸೈಬರ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ವೇಳೆ ಅಲ್ಲಿಯೂ ಸಹ ಅನೇಕ ಬದಲಾವಣೆಗಳನ್ನು ಮಾಡಿದ್ದರು. ಜನರೊಂದಿಗೆ ಸ್ನೇಹಭಾವನೆಯಿಂದ ಬೆರೆಯುವ ಪವಾರ ಎನ್ನುವ ಪವರ್ಗೆ ಅವರ ಅತ್ಯತ್ತಮ ಸೇವೆಗೆ ಮುಖ್ಯಮಂತ್ರಿ ಪದಕ ಇದೀಗ ಸಂದಿದೆ.