

ಹಾವೇರಿ ಬೈಪಾಸ್ ನಲ್ಲಿ ಅಪಘಾತ-ಚಾಲಕನ ರಕ್ಷಣೆ
ಹಾವೇರಿ: ಹಾವೇರಿ ರಾಷ್ಟ್ರೀಯ ಹೆದ್ದಾರಿ ೪೮ರ ಬೈಪಾಸ್ ನಲ್ಲಿ ನಿಂತಿದ್ದ ಲಾರಿಗೆ ಇನ್ನೊಂದು ಲಾರಿ ಗುರುವಾದ ಬೆಳಿಗ್ಗೆ ಡಿಕ್ಕಿ ಹೊಡೆದಿದೆ.
ನುಜ್ಜು ಗುಜ್ಜಾದ ಲಾರಿಯಲ್ಲಿ ತೀವ್ರ ಗಾಯಗೊಂಡ ಚಾಲಕನನ್ನು ಹರಸಾಹಸ ಪಟ್ಟು
108 ಅಂಬುಲೆನ್ಸ್ ಸಿಬ್ಬಂದಿಯವರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ
ರಕ್ಷಣೆ ಮಾಡಿದ್ದಾರೆ.
ತಮಿಳುನಾಡಿಗೆ ಲಾರಿಯನ್ನು ಚಲಾಯಿಸಿ ಕೊಂಡು ಹೊರಟಿದ್ದ
ಚಾಲಕ ಕುಮರೇಶ್ ನ ನಿಯಂತ್ರಣ ಕಳೆದುಕೊಂಡ ಲಾರಿ ಹಾವೇರಿ ಬೈಪಾಸ್ ನಲ್ಲಿ ನಿಲ್ಲಿಸಲಾಗಿದ್ದ ಇನ್ನೊಂದು ಲಾರಿಗೆ ಡಿಕ್ಕಿ ಹೊಡೆದಿದೆ.
ಅಪಘಾತ ದ ರಭಸದಿಂದ
ಲಾರಿ ಚಾಲಕ ಲಾರಿಯಲ್ಲಿ ಸಿಲುಕಿ ಕೊಂಡ ನರಳಾಡಿದ್ದಾನೆ.
ತಕ್ಷಣವೇ ಕಾರ್ಯಚರಣೆಗೆ ಇಳಿದ ಹಾವೇರಿ ಯ 108 ಅಂಬುಲೆನ್ಸ್ ಸಿಬ್ಬಂದಿಯವರು
ಮತ್ತು ಅಗ್ನಿಶಾಮಕ ದಳದವರು
ಚಾಲಕನನ್ನು ಸುರಕ್ಷಿತವಾಗಿ ಲಾರಿಚಾಲಕನ ಹೊರತಗೆದು ಆತನ ಜೀವರಕ್ಷಣೆ ಮಾಡಿದ್ದಾರೆ. ಗಾಯಗೊಂಡ ಚಾಲಕನಿಗೆ ಸ್ಥಳದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ
ಸಿ ಆಂಬುಲೆನ್ಸ್ ಸಿಬ್ಬಂದಿಗಳಾದ ತೌಫಿಕ್ ಪಠಾಣ್ , ಸ್ಟಾಪ್ ನರ್ಸ್ ಆ ಶಂಕರ್ ಲಮಾಣಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

