ಹಾವೇರಿ: ವಾರಸದಾರರ ಖಾತೆಗೆ ಬೆಳೆವಿಮೆ ಬಿಡುಗಡೆಗೆ ಭೂಮಿಪುತ್ರ ರೈತ ಸಂಘ ಆಗ್ರಹ
ಹಾವೇರಿ: ಹಾವೇರಿ ಜಿಲ್ಲೆಯ ೨೦೧೯-೨೦೨೨ ಸಾಲಿನಲ್ಲಿ ವಿವಿಧ ಬೆಳೆಗಳಿಗೆ ರೈತರು ಕಟ್ಟಲಾಗಿದ್ದ ವಿಮಾ ಹಣ ಮಂಜೂರಾಗಿದ್ದು, ಆದರೆ ವಿಮೆ ಜಮಾ ಮಾಡಿದ ರೈತರಲ್ಲಿ ಕೆಲವರು ಮೃತಪಟ್ಟ ಹಿನ್ನಲೆಯಲ್ಲಿ ಅವರ ಮಂಜುರಾದ ವಿಮಾ ಹಣವನ್ನು ತಡೆಹಿಡಿಯಲಾಗಿದ್ದು, ಕೂಡಲೇ ಸಂಬಂಧಿಸಿದ ರೈತರ ವಾರಸದಾರರ ಬ್ಯಾಂಕ್ಖಾತೆಗಳಿಗೆ ಮಂಜುರಾದ ವಿಮಾ ಹಣವನ್ನು ಜಮೆಮಾಡುವಂತೆ ಭೂವಿಪುತ್ರ ರೈತ ಸಂಘದ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ರಘುನಂಧನಮೂರ್ತಿ ಅವರ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಿ ಆಗ್ರಹಿಸಿದ್ದಾರೆ.
ಮನವಿ ಅರ್ಪಿಸಿ ಮಾತನಾಡಿದ ಭೂಮಿಪುತ್ರ ರೈತ ಅಧ್ಯಕ್ಷ ಫಕ್ಕೀರಗೌಡ ಗಾಜಿಗೌಡ್ರ, ವಿಮಾಜಮಾ ಮಾಡಿದ ತಂದೆ, ತಾಯಿ, ಅಣ್ಣ, ತಮ್ಮ ಮಾಲೀಕತ್ವದ ೧೧೮ಕ್ಕೂ ಹೆಚ್ಚು ರೈತರು ತೀರಿ ಹೋದ ಕಾರಣ ಹೇಳಿ ಕೃಷಿ ಇಲಾಖೆಯ ಅಧಿಕಾರಿಗಳು ವಿಮಾ ಹಣ ಕೊಡಲು ಬರುವುದಿಲ್ಲ ಎಂದು ಹೇಳುತ್ತಿದ್ದು, ಸರಕಾರದವರೆ ಇದನ್ನು ಸರಿಪಡಿಸಿಕೊಡಬೇಕು ಎನ್ನುತ್ತಿದ್ದಾರೆ. ನ್ಯಾಯಯುತವಾಗಿ ಬಿಡುಗಡೆಯಾದ ವಿಮಾ ಹಣವನ್ನು ವಾರಸಾದಾರರ ಬ್ಯಾಂಕ್ ಖಾತೆಗೆ ಜಮೆ ಮಾಡಿಕೊಡಲು ಆದೇಶಿಸಬೇಕೆಂದು ಅವರು ಆಗ್ರಹಿಸಿದರು.
ಕನಕಾಪುರಗ್ರಾಮದಲ್ಲಿ ಫಕ್ಕೀರಗೌಡ ಶಂಕರಗೌಡ ಗಾಜೀಗೌಡ್ರ ತಮ್ಮ ತಂದೆ ಶಂಕರಗೌಡ ಹೆಸರಲ್ಲಿ ೭ ಎಕರೆ ಜಮೀನಿನ ೨೦೨೧-೨೦೨೨ಸಾಲಿನ ಬೆಳೆ ವಿಮೆ ಕಟ್ಟಿದ್ದು, ಬೆಳೆ ವಿಮೆ ಒಟ್ಟು ೧.೩೫.೦೦೦ ಸಾವಿರ ಮಂಜೂರಾಗಿದೆ. ಆದರೆ ಶಂಕರಗೌಡ ಗಾಜೀಗೌಡ್ರ ಅವರು ೧೭-೦೩-೨೨ ಮೃತಪಟ್ಟಿದ್ದಾರೆ. ಇವರಿಮಂಜೂರಾದ ವಿಮಾ ಹನವನ್ನು ವಾರಸದಾರರಿಗೆ ನೀಡುವಂತೆ ಮನವಿ ಮಾಡಿದ ವೇಳೆ ಅಧಿಕಾರಿಗಳು ನೀಡಲು ಬರುವುದಿಲ್ಲ ಎಂದಿದ್ದಾರೆ. ಖಾತೆ ಬದಲಾವಣೆಮಾಡಲು ಒಂದುವರ್ಷಕ್ಕೂ ಅಧಿಕ ಅವಧಿ ಬೇಕಾಗುವುದರಿಂದ ನಾನು ವಿಮೆಯಿಂದ ವಂಚಿತನಾಗಬಾರದು ಎಂದು ಬೆಳೆವಿಮೆ ಕಂತನ್ನು ಕಟ್ಟಲಾಗಿದೆ. ವಿಮೆ ಮಂಜೂರಾಗಿದೆ ಈ ಹಣವನ್ನು ಕೊಡಲು ಬರುವುದಿಲ್ಲ. ಕಾರಣ ನಿಮ್ಮ ತಂದೆ ಸತ್ತ ಮೇಲೆ ಕಟ್ಟಲಾಗಿದೆ ಆದ್ದರಿಂದ ಕೊಡಲು ಬರುವುದಿಲ್ಲ ಎಂದ ಹಾವೇರಿ ಜಿಲ್ಲೆಯ ಜಂಟಿ ನಿರ್ದೇಶಕರು ಹೇಳುತ್ತಿದ್ದಾರೆ.
ನೀವು ಸರಕಾರದ ಮಟ್ಟದಲ್ಲಿ ಪ್ರಯತ್ನ ಮಾಡಿ ಸರಕಾರಕ್ಕೆ ಇದಕ್ಕೆ ಪರಿಹಾರ ಮಾಡಿಕೊಡುವ ಅಧಿಕಾರ ಇದೆ. ಅಲ್ಲಿಂದ ಆದೇಶ ಬಂದ ನಂತರ ಕೊಡುತ್ತೇವೆ ಎಂದು ಹೇಳಿದ್ದು, ಈ ರೀತಿಯ ಪ್ರಕರಣಗಳು ೨೦೧೯ ರಿಂದ ೨೦೨೨ನೇಸಾಲಿನವರೆಗೆ ಒಟ್ಟು ೧೧೮ ಪ್ರಕರಣಗಳಿವೆ. ಹೀಗಾಗಿ ವಿಮೆ ಕಟ್ಟಿದ ಖಾತೆಗೆದಾರರು ಮೃತಪಟ್ಟವೇಳೆ ಅವರ ವಾರಸದಾರರಿಗೆ ವಿಮಾ ಹಣ ನೀಡಬೇಕು. ಆದರೆ ಅಧಿಕಾರಿಗಳು ವಿಮಾ ಹಣವನ್ನು ನೀಡುತ್ತಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಕೂಡಲೆ ಸಂಬಂಧಿಸಿದ ವಾರಸದಾರರ ಖಾತೆಗೆ ವಿಮಾ ಹಣವನ್ನು ಜಮೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಫಕ್ಕೀರಗೌಡ ಗಾಜೀಗೌಡ್ರ ಆಗ್ರಹಿಸಿದರು.
ಒಂದು ವಾರದ ಒಳಗೆ ವಾರಸುದಾರರ ಕುಟುಂಬಕ್ಕೆ ವಿಮಾ ಹಣವನ್ನು ಅವರ ಖಾತೆಗೆ ಜಮಾ ಮಾಡದೇ ಹೋದರೆ ಅಗಷ್ಟ-೧೫ ರಂದು ಹಾವೇರಿಯ ಮಹಾತ್ಮಾ ಗಾಂಧಿ ಸರ್ಕಲ್ ಹತ್ತಿರ ಉಪವಾಸ ಸತ್ಯಾಗ್ರಹವನ್ನು ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಮನವಿ ಅರ್ಪಿಸುವ ಸಂದರ್ಭದಲ್ಲಿ ಭೂಮಿಪುತ್ರ ರೈತ ಸಂಘದ ಅಧ್ಯಕ್ಷ ಫಕ್ಕೀರಗೌಡ ಗಾಜೀಗೌಡ್ರ, ಕಾರ್ಯದರ್ಶಿ ಸಂಗಮೇಶ ನಾಗನೂರ, ಪ್ರಮುಖರಾದ ಗುಡ್ಡಪ್ಪ ಕಳಸಪ್ಪನವರ, ಫಕ್ಕೀರಪ್ಪ ಒಡೆಯನಪುರ, ರಾಮಪ್ಪ ಲಮಾಣಿ, ನೀಲಪ್ಪ ಹುಲಗಮ್ಮನವರ, ಸರೋಜಮ್ಮ ಕರ್ಜಗಿ, ಶ್ರೀಕಾಂತಗೌಡ ಮುದಿಗೌಡ್ರ, ಬಸಣ್ಣ ಕಜ್ಜರಿ, ಕೆಂಚನಗೌಡ ಕೆಂಚನಗೌಡ್ರ, ರಾಮಪ್ಪ ರಾಮಜ್ಜನವರ, ಗುಡ್ಡಪ್ಪ ಮಾಯಕ್ಕನವರ, ಬಾಬುಸಾಬ ಕನವಳ್ಳಿ, ನಾಗಪ್ಪ ಸಂಗಣ್ಣನವರ, ನಾಗಪ್ಪ ಗುಡುಗುಡಿ, ವಿಜಯ ಕಾಟೇನಹಳ್ಳಿ, ತಿರಕಪ್ಪ ಕಾಟೇನಹಳ್ಳಿ ಮತ್ತಿತರರು ಇದ್ದರು.
ಹಾವೇರಿ: ವಾರಸದಾರರ ಖಾತೆಗೆ ಬೆಳೆವಿಮೆ ಬಿಡುಗಡೆಗೆ ಭೂಮಿಪುತ್ರ ರೈತ ಸಂಘ ಆಗ್ರಹ
Date:
ಹಾವೇರಿ: ವಾರಸದಾರರ ಖಾತೆಗೆ ಬೆಳೆವಿಮೆ ಬಿಡುಗಡೆಗೆ ಭೂಮಿಪುತ್ರ ರೈತ ಸಂಘ ಆಗ್ರಹ
ಹಾವೇರಿ: ಹಾವೇರಿ ಜಿಲ್ಲೆಯ ೨೦೧೯-೨೦೨೨ ಸಾಲಿನಲ್ಲಿ ವಿವಿಧ ಬೆಳೆಗಳಿಗೆ ರೈತರು ಕಟ್ಟಲಾಗಿದ್ದ ವಿಮಾ ಹಣ ಮಂಜೂರಾಗಿದ್ದು, ಆದರೆ ವಿಮೆ ಜಮಾ ಮಾಡಿದ ರೈತರಲ್ಲಿ ಕೆಲವರು ಮೃತಪಟ್ಟ ಹಿನ್ನಲೆಯಲ್ಲಿ ಅವರ ಮಂಜುರಾದ ವಿಮಾ ಹಣವನ್ನು ತಡೆಹಿಡಿಯಲಾಗಿದ್ದು, ಕೂಡಲೇ ಸಂಬಂಧಿಸಿದ ರೈತರ ವಾರಸದಾರರ ಬ್ಯಾಂಕ್ಖಾತೆಗಳಿಗೆ ಮಂಜುರಾದ ವಿಮಾ ಹಣವನ್ನು ಜಮೆಮಾಡುವಂತೆ ಭೂವಿಪುತ್ರ ರೈತ ಸಂಘದ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ರಘುನಂಧನಮೂರ್ತಿ ಅವರ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಿ ಆಗ್ರಹಿಸಿದ್ದಾರೆ.
ಮನವಿ ಅರ್ಪಿಸಿ ಮಾತನಾಡಿದ ಭೂಮಿಪುತ್ರ ರೈತ ಅಧ್ಯಕ್ಷ ಫಕ್ಕೀರಗೌಡ ಗಾಜಿಗೌಡ್ರ, ವಿಮಾಜಮಾ ಮಾಡಿದ ತಂದೆ, ತಾಯಿ, ಅಣ್ಣ, ತಮ್ಮ ಮಾಲೀಕತ್ವದ ೧೧೮ಕ್ಕೂ ಹೆಚ್ಚು ರೈತರು ತೀರಿ ಹೋದ ಕಾರಣ ಹೇಳಿ ಕೃಷಿ ಇಲಾಖೆಯ ಅಧಿಕಾರಿಗಳು ವಿಮಾ ಹಣ ಕೊಡಲು ಬರುವುದಿಲ್ಲ ಎಂದು ಹೇಳುತ್ತಿದ್ದು, ಸರಕಾರದವರೆ ಇದನ್ನು ಸರಿಪಡಿಸಿಕೊಡಬೇಕು ಎನ್ನುತ್ತಿದ್ದಾರೆ. ನ್ಯಾಯಯುತವಾಗಿ ಬಿಡುಗಡೆಯಾದ ವಿಮಾ ಹಣವನ್ನು ವಾರಸಾದಾರರ ಬ್ಯಾಂಕ್ ಖಾತೆಗೆ ಜಮೆ ಮಾಡಿಕೊಡಲು ಆದೇಶಿಸಬೇಕೆಂದು ಅವರು ಆಗ್ರಹಿಸಿದರು.
ಕನಕಾಪುರಗ್ರಾಮದಲ್ಲಿ ಫಕ್ಕೀರಗೌಡ ಶಂಕರಗೌಡ ಗಾಜೀಗೌಡ್ರ ತಮ್ಮ ತಂದೆ ಶಂಕರಗೌಡ ಹೆಸರಲ್ಲಿ ೭ ಎಕರೆ ಜಮೀನಿನ ೨೦೨೧-೨೦೨೨ಸಾಲಿನ ಬೆಳೆ ವಿಮೆ ಕಟ್ಟಿದ್ದು, ಬೆಳೆ ವಿಮೆ ಒಟ್ಟು ೧.೩೫.೦೦೦ ಸಾವಿರ ಮಂಜೂರಾಗಿದೆ. ಆದರೆ ಶಂಕರಗೌಡ ಗಾಜೀಗೌಡ್ರ ಅವರು ೧೭-೦೩-೨೨ ಮೃತಪಟ್ಟಿದ್ದಾರೆ. ಇವರಿಮಂಜೂರಾದ ವಿಮಾ ಹನವನ್ನು ವಾರಸದಾರರಿಗೆ ನೀಡುವಂತೆ ಮನವಿ ಮಾಡಿದ ವೇಳೆ ಅಧಿಕಾರಿಗಳು ನೀಡಲು ಬರುವುದಿಲ್ಲ ಎಂದಿದ್ದಾರೆ. ಖಾತೆ ಬದಲಾವಣೆಮಾಡಲು ಒಂದುವರ್ಷಕ್ಕೂ ಅಧಿಕ ಅವಧಿ ಬೇಕಾಗುವುದರಿಂದ ನಾನು ವಿಮೆಯಿಂದ ವಂಚಿತನಾಗಬಾರದು ಎಂದು ಬೆಳೆವಿಮೆ ಕಂತನ್ನು ಕಟ್ಟಲಾಗಿದೆ. ವಿಮೆ ಮಂಜೂರಾಗಿದೆ ಈ ಹಣವನ್ನು ಕೊಡಲು ಬರುವುದಿಲ್ಲ. ಕಾರಣ ನಿಮ್ಮ ತಂದೆ ಸತ್ತ ಮೇಲೆ ಕಟ್ಟಲಾಗಿದೆ ಆದ್ದರಿಂದ ಕೊಡಲು ಬರುವುದಿಲ್ಲ ಎಂದ ಹಾವೇರಿ ಜಿಲ್ಲೆಯ ಜಂಟಿ ನಿರ್ದೇಶಕರು ಹೇಳುತ್ತಿದ್ದಾರೆ.
ನೀವು ಸರಕಾರದ ಮಟ್ಟದಲ್ಲಿ ಪ್ರಯತ್ನ ಮಾಡಿ ಸರಕಾರಕ್ಕೆ ಇದಕ್ಕೆ ಪರಿಹಾರ ಮಾಡಿಕೊಡುವ ಅಧಿಕಾರ ಇದೆ. ಅಲ್ಲಿಂದ ಆದೇಶ ಬಂದ ನಂತರ ಕೊಡುತ್ತೇವೆ ಎಂದು ಹೇಳಿದ್ದು, ಈ ರೀತಿಯ ಪ್ರಕರಣಗಳು ೨೦೧೯ ರಿಂದ ೨೦೨೨ನೇಸಾಲಿನವರೆಗೆ ಒಟ್ಟು ೧೧೮ ಪ್ರಕರಣಗಳಿವೆ. ಹೀಗಾಗಿ ವಿಮೆ ಕಟ್ಟಿದ ಖಾತೆಗೆದಾರರು ಮೃತಪಟ್ಟವೇಳೆ ಅವರ ವಾರಸದಾರರಿಗೆ ವಿಮಾ ಹಣ ನೀಡಬೇಕು. ಆದರೆ ಅಧಿಕಾರಿಗಳು ವಿಮಾ ಹಣವನ್ನು ನೀಡುತ್ತಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಕೂಡಲೆ ಸಂಬಂಧಿಸಿದ ವಾರಸದಾರರ ಖಾತೆಗೆ ವಿಮಾ ಹಣವನ್ನು ಜಮೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಫಕ್ಕೀರಗೌಡ ಗಾಜೀಗೌಡ್ರ ಆಗ್ರಹಿಸಿದರು.
ಒಂದು ವಾರದ ಒಳಗೆ ವಾರಸುದಾರರ ಕುಟುಂಬಕ್ಕೆ ವಿಮಾ ಹಣವನ್ನು ಅವರ ಖಾತೆಗೆ ಜಮಾ ಮಾಡದೇ ಹೋದರೆ ಅಗಷ್ಟ-೧೫ ರಂದು ಹಾವೇರಿಯ ಮಹಾತ್ಮಾ ಗಾಂಧಿ ಸರ್ಕಲ್ ಹತ್ತಿರ ಉಪವಾಸ ಸತ್ಯಾಗ್ರಹವನ್ನು ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಮನವಿ ಅರ್ಪಿಸುವ ಸಂದರ್ಭದಲ್ಲಿ ಭೂಮಿಪುತ್ರ ರೈತ ಸಂಘದ ಅಧ್ಯಕ್ಷ ಫಕ್ಕೀರಗೌಡ ಗಾಜೀಗೌಡ್ರ, ಕಾರ್ಯದರ್ಶಿ ಸಂಗಮೇಶ ನಾಗನೂರ, ಪ್ರಮುಖರಾದ ಗುಡ್ಡಪ್ಪ ಕಳಸಪ್ಪನವರ, ಫಕ್ಕೀರಪ್ಪ ಒಡೆಯನಪುರ, ರಾಮಪ್ಪ ಲಮಾಣಿ, ನೀಲಪ್ಪ ಹುಲಗಮ್ಮನವರ, ಸರೋಜಮ್ಮ ಕರ್ಜಗಿ, ಶ್ರೀಕಾಂತಗೌಡ ಮುದಿಗೌಡ್ರ, ಬಸಣ್ಣ ಕಜ್ಜರಿ, ಕೆಂಚನಗೌಡ ಕೆಂಚನಗೌಡ್ರ, ರಾಮಪ್ಪ ರಾಮಜ್ಜನವರ, ಗುಡ್ಡಪ್ಪ ಮಾಯಕ್ಕನವರ, ಬಾಬುಸಾಬ ಕನವಳ್ಳಿ, ನಾಗಪ್ಪ ಸಂಗಣ್ಣನವರ, ನಾಗಪ್ಪ ಗುಡುಗುಡಿ, ವಿಜಯ ಕಾಟೇನಹಳ್ಳಿ, ತಿರಕಪ್ಪ ಕಾಟೇನಹಳ್ಳಿ ಮತ್ತಿತರರು ಇದ್ದರು.