ಹಾವೇರಿ: ಒಂದೇ ಕುಟುಂಬದ ಮುವರು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅಗಡಿಗ್ರಾಮದಲ್ಲಿ ನಡೆದಿದೆ .ಅಗಡಿ ಗ್ರಾಮದಲ್ಲಿ ಹಾವನೂರು ಎಕ್ಕಂಬಿ ರಾಜ್ಯ ಹೆದ್ದಾರಿ ಗೆ ಹೊಂದಿಕೊಂಡು ಪ್ರೌಢಶಾಲೆಯ ಮುಂಭಾಗದಲ್ಲಿ ನ ಮನೆಯಲ್ಲಿ ನ ತಾಯಿ,ಮಗ ಹಾಗೂ ಸೊಸೆ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯ ರು ತಿಳಿಸಿದ್ದಾರೆ.
ಗುರುವಾರ ಮನೆಯ ಕದ ತೆರೆಯದ ಹಿನ್ನೆಲೆಯಲ್ಲಿ ಅಕ್ಕ ಪಕ್ಕದ ನಿವಾಸಿಗಳು ಗಮನಿಸಿದ ವೇಳೆಗೆ ಮೂವರು ನೆಣುಹಾಕಿಕೊಂಡಿರುವ ಬಗ್ಗೆ ತಿಳಿದಿದೆ.
ಮನೆಯಲ್ಲಿ ನೇಣಿಗೆ ಶರಣಾದ ಮೂವರು ಕುಟುಂಬ ಸದಸ್ಯರು ಭಾ ರತಿ ಕಮದೊಳ್ಳಿ (40) ತಾಯಿ , ಸೌಜನ್ಯ( ೨೦ )ಸೊಸೆ, ಕಿರಣ (೨೧) ಮಗ. ಕಿರಣ ಹಾಗೂಸೌಜನ್ಯ ಮುದುವೆಯಾಗಿ ಮೂರು ತಿಂಗಳಾಗಿತ್ತು.
ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ
ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ.
ಸ್ಥಳಕ್ಕೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಾವೇರಿಯ ಅಗಡಿ ಗ್ರಾಮದಲ್ಲಿ ಮೂವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಭ್ಯ ವಾದ ಮಾಹಿತಿಯನ್ನು ಆಧರಿಸಿ ದಂತೆ
ಅಗಡಿ ಗ್ರಾಮದ ಪಟ್ಟಣಶೆಟ್ಟಿ ಕುಟುಂಬಕ್ಕೆ ಸೇರಿದ ಯುವತಿಯ ಜೊತೆಗೆ ಪ್ರೀತಿ ಮಾಡಿದ್ದ ಅರುಣ ಐದಾರು ದಿನಗಳಿಂದ ನಾಪತ್ತೆಯಾಗಿದ್ದರೆಂದು, ಮಗಗಳನ್ನ ಕರೆ ತರುವಂತೆ ಅರುಣ ಕುಟುಂಬದವರಿಗೆ ಕಿರುಕುಳ ನೀಡಿದ್ದ ಪಟ್ಟಣಸೆಟ್ಟಿ ಕುಟುಂಬದವರು ಕಿರುಕುಳ ನೋಡಿದ್ದರೆಂದು, ಪಟ್ಟಣಶೆಟ್ಟಿ ಕುಟುಂಬದವರ ಕಿರುಕುಳವೆ ಕುಟುಂಬದವರ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿದ ಅರುಣ ತಂದೆ ವಿರೂಪಾಕ್ಷಪ್ಪ
ನಿತ್ಯವು ಕಿರುಕುಳ ನೀಡಿದ ಹಿನ್ನೆಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅರುಣ ಸಹೋದರ ಕಿರಣ, ಅತ್ತಿಗೆ ಸೌಜನ್ಯ, ತಾಯಿ ಭಾರತಿ ಆತ್ಮಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.