ಅತ್ಯಾಚಾರ ಆರೋಪಿಗಳಿಗೆ ಜಾಮೀನು, ಜೇಲಿನಿಂದಲೇ ರೋಡ್ ಶೋ-೭ಆರೋಪಿಗಳ ಮೇಲೆ ಪ್ರಕರಣ ದಾಖಲು-ಬಂಧನ

Date:

 

  ಅತ್ಯಾಚಾರ ಆರೋಪಿಗಳಿಗೆ ಜಾಮೀನು, ಜೇಲಿನಿಂದಲೇ ರೋಡ್ ಶೋ-೭ಆರೋಪಿಗಳ ಮೇಲೆ ಪ್ರಕರಣ ದಾಖಲು-ಬಂಧನ
ಹಾವೇರಿ: ಮಾಡಿದ್ದು ಅನಾಚಾರವಾದರೂ ಏನೋ ಕಡೆದು ಕಟ್ಟೆಹಾಕಿದ್ದವೇ ಎನ್ನುವಂತೆ ಅತ್ಯಾಚಾರ ಪ್ರಕರಣದ ೭ ಪ್ರಮುಖ ಆರೋಪಿಗಳು ಜಾಮೀನು ದೊರೆತ ಹಿನ್ನಲೆಯಲ್ಲಿ  ಜೈಲಿನಿಂದಲೇ   ರೋಡ್ ಶೋ ನಡೆಸುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಬಗ್ಗೆ ವ್ಯಾಪಕ ಆಕ್ರೋಶ ಕೇಳಿಬಂದ ಹಿನ್ನಲೆಯಲ್ಲಿ ಏಳು ಜನ ಆರೋಪಿಗಳ ಮೇಲೆ ಮೇ.೨೩ರಂದು ಪೊಲೀಸರು ಹಲವಾರು ಕಲಂಗಳ ಅಡಿ ಪ್ರಕರಣ ದಾಖಲಿಸಿ, ಈ ೭ಜನ ಆರೋಪಿಗಳಲ್ಲಿ ೫ ಜನ ಆರೋಪಿಗಳನ್ನು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.  ಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳ ಪತ್ತೆಗೆ ಪೊಲೀಸರ ಶೋಧನಡೆಸಿದ್ದಾರೆ.
೨೦೨೪, ಜನವರಿ ೮ರಂದು ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ ದಾಖಲಾಗಿತ್ತು. ಹಾನಗಲ್ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ೩ ದಿನಗಳ ಹಿಂದೆ  ಪ್ರಮುಖ ೭ ಆರೋಪಿಗಳಿಗೆ ಜಾಮೀನು ಸಿಕ್ಕಿದೆ.  ಪ್ರಮುಖ ಆರೋಪಿಗಳ ಜಾಮೀನು ಅರ್ಜಿಗಳನ್ನು ಹಲವು ಬಾರಿ ನ್ಯಾಯಾಲಯ ತಿರಸ್ಕರಿಸಿತ್ತು. ಸಂತ್ರಸ್ತೆ ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ ಹೇಳಿಕೆಗಳನ್ನು ಉಳಿಸಿಕೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ಹಾವೇರಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು.  ಕಳೆದ ೩ ದಿನಗಳ ಹಿಂದೆ ಹಾವೇರಿ ಸಬ್ ಜೈಲಿನಿಂದ ಅಕ್ಕಿ ಆಲೂರಿನವರೆಗೆ ಪ್ರಮುಖ ಬೀದಿಗಳಲ್ಲಿ ಆರೋಪಿಗಳು ೫ ಕಾರುಗಳಲ್ಲಿ ೨೦ಕ್ಕೂ ಹೆಚ್ಚು ಹಿಂಬಾಲಕರ ಜೊತೆ  ರೋಡ್ ಶೋ ಮೂಲಕ ಜಯಕಾರ ಹಾಕುತ್ತಾ ಮೆರವಣಿಗೆ ನಡೆಸಿದ್ದಾರೆ. ಈ ಮೆರವಣಿಗೆಯ ವೀಡಿಯೋಗಳು ವೈರಲ್ ಆಗಿವೆ.
ಹಾವೇರಿ ಜಿಲ್ಲೆಯ ಹಾನಗಲ್‌ಠಾಣೆ ವ್ಯಾಪ್ತಿಯ ಹೊರವಲಯದಲ್ಲಿ  ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು ೧೯ ಜನರನ್ನು ಬಂಧಿಸಿ ನ್ಯಾಯಾಂಗ್ ಬಂಧನಕ್ಕೆ ಒಪ್ಪಿಸಲಾಗಿತ್ತು. ೧೨ ಆರೋಪಿಗಳು ೧೦ ತಿಂಗಳ ಹಿಂದೆಯೇ ಜಾಮೀನು ಪಡೆದಿದ್ದರು. ಸದರಿ ಪ್ರಕರಣದ ಎ೧ ಆರೋಪಿ ಅಪ್ತಾಬ್ ಚಂದನಕಟ್ಟಿ, ಎ೨ ಮದರ್ ಸಾಬ್ ಮಂಡಕ್ಕಿ, ಎ೩ ಸಮಿವುಲ್ಲಾ ಲಾಲನವರ, ಎ೪ ಮಹಮದ್ ಸಾದಿಕ್ ಅಗಸಿಮನಿ, ಎ೮ ಶೋಯಿಬ್ ಮುಲ್ಲಾ, ಎ೧೧ ತೌಸಿಪ್ ಚೋಟಿ, ಎ೧೩ ರಿಯಾಜ್ ಸಾವಿಕೇರಿಗೆ  ನ್ಯಾಯಾಲಯವರು ಜಾಮೀನು ಮಂಜೂರು ಮಾಡಿದೆ.

ಜಾಮೀನು ರದ್ದತಿಗೆ ಆಗ್ರಹ
ಆರೋಪಿಗಳು ಜಾಮೀನು ದೊರೆತ ಹಿನ್ನಲೆಯಲ್ಲಿ ತಾವು ಮಾಡಿದ್ದ ಹೇಯ ಕೃತ್ಯವನ್ನು ಸಮರ್ಥಿಸಿಕೊಳ್ಳುವಂತೆ  ಕಾರು ಮತ್ತು ಬೈಕ್‌ಗಳಲ್ಲಿ ರೋಡ್ ಶೋ ನಡೆಸಿರುವುದು ಜಿಲ್ಲೆಯ ಜನರ ಆಕ್ರೋಶ ಕಾರಣವಾಗಿದೆ. ಪೊಲೀಸ್ ಇಲಾಖೆ ಮತ್ತೆ ಇವರ ಪ್ರಕರಣ ದಾಖಲಿಸಿಕೊಂಡು ಜಾಮೀನು ರದ್ದು ಮಾಡುವಂತೆ ಜಿಲ್ಲೆಯ ಜನರು ಆಗ್ರಹಿಸಿದ್ದಾರೆ.

ತನಿಖೆ ಮಾಡಿ ಮುಂದಿನ ಕಾನೂನು ಕ್ರಮ
ಹಾನಗಲ್ಲ ಪ್ರಕರಣದ ೧೯ ಆರೋಪಿತರಲ್ಲಿ  ಈ ಹಿಂದೆ ೧೨ ಜನರಿಗೆ  ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ದಿನಾಂಕ: ೨೦.೦೫.೨೦೨೫ ರಂದು ಇನ್ನೂಳಿದ ೦೭ ಜನರಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿರುತ್ತದೆ. ೦೭ ಜನರು ಜಾಮೀನು ಪಡೆದು ಜೈಲ್‌ನಿಂದ ಅಕ್ಕಿ-ಆಲೂರ ಗೆ ತೆರಳುವವರೆಗೆ ಹಾಗೂ ಅಕ್ಕಿ-ಆಲೂರ ಗ್ರಾಮದಲ್ಲಿ ಕಾರ್ ಮತ್ತು ಬೈಕ್‌ಗಳಲ್ಲಿ ವಿಜಯೋತ್ಸವ ಮೆರವಣಿಗೆ ಮಾಡಿದ್ದಾರೆ ಎಂದು ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿರುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ವಿಡಿಯೋಗಳು ಸಹ ಹರಿದಾಡಿರುತ್ತವೆ.
ವಿಜಯೋತ್ಸವ ಮೆರವಣಿಗೆ ಮಾಡಿದ ೦೭ ಜನರ ಮೇಲೆ ಈಗಾಗಲೇ ಹಾನಗಲ್ ಠಾಣೆಯಲ್ಲಿ ರೌಡಿ ಹಾಳೆಯನ್ನು ತೆರೆದಿರುತ್ತದೆ. ಜಾಮೀನು ಮಂಜೂರಾದ ನಂತರ ವಿಜಯೋತ್ಸವ ಮೆರವಣಿಗೆ ಮಾಡಿದ ಹಿನ್ನಲೆಯಲ್ಲಿ, ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಹಾನಗಲ್ ಠಾಣೆ ಅಪರಾಧ ಸಂಖ್ಯೆಃ ೧೨/೨೦೨೪ ಕಲಂ:೧೪೩. ೧೪೭. ೧೪೮, ೪೪೮. ೩೨೩. ೩೨೪, ೩೫೪. ೩೫೪(ಬಿ). ೩೦೭, ೩೬೩, ೩೭೬ ಡಿ, ೫೦೪. ೫೦೬, ೫೦೯ ಸಹ ಕಲಂ ೧೪೯ ಐಪಿಸಿ ನೇದ್ದರ,  ೦೭ ಜನ ಆರೋಪಿತರ ಮೇಲೆ ಜಾಮೀನು ರದ್ಧತಿಗಾಗಿ ತನಿಖಾಧಿಕಾರಿಗಳು  ನ್ಯಾಯಾಲಂiiಕ್ಕೆ ಅರ್ಜಿ ಸಲ್ಲಿಸಿದ್ದು, ಹಾಗೂ ಸದರಿ ೦೭ ಜನರ ಮೇಲೆ ಹಾನಗಲ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: ೮೪/೨೦೨೫ ಕಲಂ: ೧೮೯(೨), ೧೯೧(೨), ೨೮೧, ೩೫೧(೨), ೩೫೧(೩), ಸಹ ಕಲಂ: ೧೯೦ ಬಿಎನ್‌ಎಸ್-೨೦೨೩ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಇವರ ಬಗ್ಗೆ ತನಿಖೆ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ತಿಳಿಸಿದ್ದಾರೆ.

ಹಾವೇರಿಯಲ್ಲಿ ಐವರು ಆರೋಪಿಗಳ ಬಂಧನ
ಹಾವೇರಿಯ ಸಬ್ ಜೇಲಿನಿಂದ ಅಕ್ಕಿಆಲೂರುವರೆಗೆ ರೋಡ್ ಶೋ ನಡೆಸಿದ್ದ ೭ ಆರೋಪಿಗಳ ಪೈಕಿ ಐವರು ಆರೋಪಿಗಳನ್ನು ಸಿಪಿಐ ಆಂಜನೇಯ ನೇತೃತ್ವದ ಪೊಲೀಸ್ ತಂಡವು ಶುಕ್ರವಾರ ಹಾವೇರಿಯ ಪ್ರವಾಸಿ ಮಂದಿರದಬಳಿ ಬಂಧಿಸಿದೆ.  ತಲೆ ಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳ ಪತ್ತೆಗೆ ಪೊಲೀಸರ ಶೋಧನಡೆಸಿದ್ದಾರೆ. ರೋಡ್ ಶೋ ನಡೆಸಿದ್ದ ಗ್ಯಾಂಗ್ ರೇಪ್ ಆರೋಪಿಗಳ ಮೇಲೆ ಮತ್ತೆ ಕೇಸ್ ದಾಖಲಾಗಿದೆ ಬೇಲ್ ಷರತ್ತುಗಳನ್ನು ಉಲ್ಲಂಘಿಸಿದ ಹಿನ್ನಲೆ ೭ ಪ್ರಮುಖ ಆರೋಪಿಗಳ ಜಾಮೀನು ರದ್ದತಿಗೆ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಆರೋಪಿಗಳು  ಶುಕ್ರವಾರ ಹಾವೇರಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿ  ವಾಪಾಸ್ ಹೊರ ಬರುತ್ತಿದ್ದಂತೆ  ರೋಡ್ ಶೋ ನಡೆಸಿದ್ದ ೭ ಪ್ರಮುಖ ಆರೋಪಿಗಳಲ್ಲಿ ಐವರು ಆರೋಪಿಗಳನ್ನು ವಶಕ್ಕೆ ಪಡೆದ ಖಾಕಿ ಪಡೆ ಇನ್ನಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಿದ್ದು,   ರೋಡ್ ಶೋ ನಡೆಸಿದ ೭ ಪ್ರಮುಖ ಆರೋಪಿಗಳ ಮೇಲೆ ಹೊಸ ಕೇಸ್ ದಾಖಲಿಸೋ ಸಾಧ್ಯತೆಇದೆ.
೭ ಆರೋಪಿಗಳು ನ್ಯಾಯಾಲಯಕ್ಕೆ ತಪ್ಪದೇ ಹಾಜರಾಗಬೇಕು, ಮತ್ತೆ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಕೂಡದು ಎಂಬ ನಿಯಮಗಳಡಿ ನ್ಯಾಯಾಲಯ ಜಾಮೀನು ನೀಡಿತ್ತು. ಆದರೆ ಬೇಲ್ ಪಡೆದು ಜೈಲಿಂದ ವಾಪಾಸ್ ಆಗುವಾಗ ರೋಡ್ ಶೋ ನಡೆಸಿ ಆರೋಪಿಗಳು ಪುಂಡಾಟಿಕೆ ಮೆರೆದ ಹಿನ್ನಲೆ ಜಾಮೀನು ಷರತ್ತು  ಉಲ್ಲಂಘನೆ ಹಿನ್ನಲೆ ಐವರನ್ನು ವಶಕ್ಕೆ ಪಡೆದ ಪೊಲೀಸರು ಮತ್ತೆ  ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

 

  ಅತ್ಯಾಚಾರ ಆರೋಪಿಗಳಿಗೆ ಜಾಮೀನು, ಜೇಲಿನಿಂದಲೇ ರೋಡ್ ಶೋ-೭ಆರೋಪಿಗಳ ಮೇಲೆ ಪ್ರಕರಣ ದಾಖಲು-ಬಂಧನ
ಹಾವೇರಿ: ಮಾಡಿದ್ದು ಅನಾಚಾರವಾದರೂ ಏನೋ ಕಡೆದು ಕಟ್ಟೆಹಾಕಿದ್ದವೇ ಎನ್ನುವಂತೆ ಅತ್ಯಾಚಾರ ಪ್ರಕರಣದ ೭ ಪ್ರಮುಖ ಆರೋಪಿಗಳು ಜಾಮೀನು ದೊರೆತ ಹಿನ್ನಲೆಯಲ್ಲಿ  ಜೈಲಿನಿಂದಲೇ   ರೋಡ್ ಶೋ ನಡೆಸುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಬಗ್ಗೆ ವ್ಯಾಪಕ ಆಕ್ರೋಶ ಕೇಳಿಬಂದ ಹಿನ್ನಲೆಯಲ್ಲಿ ಏಳು ಜನ ಆರೋಪಿಗಳ ಮೇಲೆ ಮೇ.೨೩ರಂದು ಪೊಲೀಸರು ಹಲವಾರು ಕಲಂಗಳ ಅಡಿ ಪ್ರಕರಣ ದಾಖಲಿಸಿ, ಈ ೭ಜನ ಆರೋಪಿಗಳಲ್ಲಿ ೫ ಜನ ಆರೋಪಿಗಳನ್ನು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.  ಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳ ಪತ್ತೆಗೆ ಪೊಲೀಸರ ಶೋಧನಡೆಸಿದ್ದಾರೆ.
೨೦೨೪, ಜನವರಿ ೮ರಂದು ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ ದಾಖಲಾಗಿತ್ತು. ಹಾನಗಲ್ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ೩ ದಿನಗಳ ಹಿಂದೆ  ಪ್ರಮುಖ ೭ ಆರೋಪಿಗಳಿಗೆ ಜಾಮೀನು ಸಿಕ್ಕಿದೆ.  ಪ್ರಮುಖ ಆರೋಪಿಗಳ ಜಾಮೀನು ಅರ್ಜಿಗಳನ್ನು ಹಲವು ಬಾರಿ ನ್ಯಾಯಾಲಯ ತಿರಸ್ಕರಿಸಿತ್ತು. ಸಂತ್ರಸ್ತೆ ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ ಹೇಳಿಕೆಗಳನ್ನು ಉಳಿಸಿಕೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ಹಾವೇರಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು.  ಕಳೆದ ೩ ದಿನಗಳ ಹಿಂದೆ ಹಾವೇರಿ ಸಬ್ ಜೈಲಿನಿಂದ ಅಕ್ಕಿ ಆಲೂರಿನವರೆಗೆ ಪ್ರಮುಖ ಬೀದಿಗಳಲ್ಲಿ ಆರೋಪಿಗಳು ೫ ಕಾರುಗಳಲ್ಲಿ ೨೦ಕ್ಕೂ ಹೆಚ್ಚು ಹಿಂಬಾಲಕರ ಜೊತೆ  ರೋಡ್ ಶೋ ಮೂಲಕ ಜಯಕಾರ ಹಾಕುತ್ತಾ ಮೆರವಣಿಗೆ ನಡೆಸಿದ್ದಾರೆ. ಈ ಮೆರವಣಿಗೆಯ ವೀಡಿಯೋಗಳು ವೈರಲ್ ಆಗಿವೆ.
ಹಾವೇರಿ ಜಿಲ್ಲೆಯ ಹಾನಗಲ್‌ಠಾಣೆ ವ್ಯಾಪ್ತಿಯ ಹೊರವಲಯದಲ್ಲಿ  ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು ೧೯ ಜನರನ್ನು ಬಂಧಿಸಿ ನ್ಯಾಯಾಂಗ್ ಬಂಧನಕ್ಕೆ ಒಪ್ಪಿಸಲಾಗಿತ್ತು. ೧೨ ಆರೋಪಿಗಳು ೧೦ ತಿಂಗಳ ಹಿಂದೆಯೇ ಜಾಮೀನು ಪಡೆದಿದ್ದರು. ಸದರಿ ಪ್ರಕರಣದ ಎ೧ ಆರೋಪಿ ಅಪ್ತಾಬ್ ಚಂದನಕಟ್ಟಿ, ಎ೨ ಮದರ್ ಸಾಬ್ ಮಂಡಕ್ಕಿ, ಎ೩ ಸಮಿವುಲ್ಲಾ ಲಾಲನವರ, ಎ೪ ಮಹಮದ್ ಸಾದಿಕ್ ಅಗಸಿಮನಿ, ಎ೮ ಶೋಯಿಬ್ ಮುಲ್ಲಾ, ಎ೧೧ ತೌಸಿಪ್ ಚೋಟಿ, ಎ೧೩ ರಿಯಾಜ್ ಸಾವಿಕೇರಿಗೆ  ನ್ಯಾಯಾಲಯವರು ಜಾಮೀನು ಮಂಜೂರು ಮಾಡಿದೆ.

ಜಾಮೀನು ರದ್ದತಿಗೆ ಆಗ್ರಹ
ಆರೋಪಿಗಳು ಜಾಮೀನು ದೊರೆತ ಹಿನ್ನಲೆಯಲ್ಲಿ ತಾವು ಮಾಡಿದ್ದ ಹೇಯ ಕೃತ್ಯವನ್ನು ಸಮರ್ಥಿಸಿಕೊಳ್ಳುವಂತೆ  ಕಾರು ಮತ್ತು ಬೈಕ್‌ಗಳಲ್ಲಿ ರೋಡ್ ಶೋ ನಡೆಸಿರುವುದು ಜಿಲ್ಲೆಯ ಜನರ ಆಕ್ರೋಶ ಕಾರಣವಾಗಿದೆ. ಪೊಲೀಸ್ ಇಲಾಖೆ ಮತ್ತೆ ಇವರ ಪ್ರಕರಣ ದಾಖಲಿಸಿಕೊಂಡು ಜಾಮೀನು ರದ್ದು ಮಾಡುವಂತೆ ಜಿಲ್ಲೆಯ ಜನರು ಆಗ್ರಹಿಸಿದ್ದಾರೆ.

ತನಿಖೆ ಮಾಡಿ ಮುಂದಿನ ಕಾನೂನು ಕ್ರಮ
ಹಾನಗಲ್ಲ ಪ್ರಕರಣದ ೧೯ ಆರೋಪಿತರಲ್ಲಿ  ಈ ಹಿಂದೆ ೧೨ ಜನರಿಗೆ  ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ದಿನಾಂಕ: ೨೦.೦೫.೨೦೨೫ ರಂದು ಇನ್ನೂಳಿದ ೦೭ ಜನರಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿರುತ್ತದೆ. ೦೭ ಜನರು ಜಾಮೀನು ಪಡೆದು ಜೈಲ್‌ನಿಂದ ಅಕ್ಕಿ-ಆಲೂರ ಗೆ ತೆರಳುವವರೆಗೆ ಹಾಗೂ ಅಕ್ಕಿ-ಆಲೂರ ಗ್ರಾಮದಲ್ಲಿ ಕಾರ್ ಮತ್ತು ಬೈಕ್‌ಗಳಲ್ಲಿ ವಿಜಯೋತ್ಸವ ಮೆರವಣಿಗೆ ಮಾಡಿದ್ದಾರೆ ಎಂದು ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿರುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ವಿಡಿಯೋಗಳು ಸಹ ಹರಿದಾಡಿರುತ್ತವೆ.
ವಿಜಯೋತ್ಸವ ಮೆರವಣಿಗೆ ಮಾಡಿದ ೦೭ ಜನರ ಮೇಲೆ ಈಗಾಗಲೇ ಹಾನಗಲ್ ಠಾಣೆಯಲ್ಲಿ ರೌಡಿ ಹಾಳೆಯನ್ನು ತೆರೆದಿರುತ್ತದೆ. ಜಾಮೀನು ಮಂಜೂರಾದ ನಂತರ ವಿಜಯೋತ್ಸವ ಮೆರವಣಿಗೆ ಮಾಡಿದ ಹಿನ್ನಲೆಯಲ್ಲಿ, ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಹಾನಗಲ್ ಠಾಣೆ ಅಪರಾಧ ಸಂಖ್ಯೆಃ ೧೨/೨೦೨೪ ಕಲಂ:೧೪೩. ೧೪೭. ೧೪೮, ೪೪೮. ೩೨೩. ೩೨೪, ೩೫೪. ೩೫೪(ಬಿ). ೩೦೭, ೩೬೩, ೩೭೬ ಡಿ, ೫೦೪. ೫೦೬, ೫೦೯ ಸಹ ಕಲಂ ೧೪೯ ಐಪಿಸಿ ನೇದ್ದರ,  ೦೭ ಜನ ಆರೋಪಿತರ ಮೇಲೆ ಜಾಮೀನು ರದ್ಧತಿಗಾಗಿ ತನಿಖಾಧಿಕಾರಿಗಳು  ನ್ಯಾಯಾಲಂiiಕ್ಕೆ ಅರ್ಜಿ ಸಲ್ಲಿಸಿದ್ದು, ಹಾಗೂ ಸದರಿ ೦೭ ಜನರ ಮೇಲೆ ಹಾನಗಲ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: ೮೪/೨೦೨೫ ಕಲಂ: ೧೮೯(೨), ೧೯೧(೨), ೨೮೧, ೩೫೧(೨), ೩೫೧(೩), ಸಹ ಕಲಂ: ೧೯೦ ಬಿಎನ್‌ಎಸ್-೨೦೨೩ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಇವರ ಬಗ್ಗೆ ತನಿಖೆ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ತಿಳಿಸಿದ್ದಾರೆ.

ಹಾವೇರಿಯಲ್ಲಿ ಐವರು ಆರೋಪಿಗಳ ಬಂಧನ
ಹಾವೇರಿಯ ಸಬ್ ಜೇಲಿನಿಂದ ಅಕ್ಕಿಆಲೂರುವರೆಗೆ ರೋಡ್ ಶೋ ನಡೆಸಿದ್ದ ೭ ಆರೋಪಿಗಳ ಪೈಕಿ ಐವರು ಆರೋಪಿಗಳನ್ನು ಸಿಪಿಐ ಆಂಜನೇಯ ನೇತೃತ್ವದ ಪೊಲೀಸ್ ತಂಡವು ಶುಕ್ರವಾರ ಹಾವೇರಿಯ ಪ್ರವಾಸಿ ಮಂದಿರದಬಳಿ ಬಂಧಿಸಿದೆ.  ತಲೆ ಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳ ಪತ್ತೆಗೆ ಪೊಲೀಸರ ಶೋಧನಡೆಸಿದ್ದಾರೆ. ರೋಡ್ ಶೋ ನಡೆಸಿದ್ದ ಗ್ಯಾಂಗ್ ರೇಪ್ ಆರೋಪಿಗಳ ಮೇಲೆ ಮತ್ತೆ ಕೇಸ್ ದಾಖಲಾಗಿದೆ ಬೇಲ್ ಷರತ್ತುಗಳನ್ನು ಉಲ್ಲಂಘಿಸಿದ ಹಿನ್ನಲೆ ೭ ಪ್ರಮುಖ ಆರೋಪಿಗಳ ಜಾಮೀನು ರದ್ದತಿಗೆ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಆರೋಪಿಗಳು  ಶುಕ್ರವಾರ ಹಾವೇರಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿ  ವಾಪಾಸ್ ಹೊರ ಬರುತ್ತಿದ್ದಂತೆ  ರೋಡ್ ಶೋ ನಡೆಸಿದ್ದ ೭ ಪ್ರಮುಖ ಆರೋಪಿಗಳಲ್ಲಿ ಐವರು ಆರೋಪಿಗಳನ್ನು ವಶಕ್ಕೆ ಪಡೆದ ಖಾಕಿ ಪಡೆ ಇನ್ನಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಿದ್ದು,   ರೋಡ್ ಶೋ ನಡೆಸಿದ ೭ ಪ್ರಮುಖ ಆರೋಪಿಗಳ ಮೇಲೆ ಹೊಸ ಕೇಸ್ ದಾಖಲಿಸೋ ಸಾಧ್ಯತೆಇದೆ.
೭ ಆರೋಪಿಗಳು ನ್ಯಾಯಾಲಯಕ್ಕೆ ತಪ್ಪದೇ ಹಾಜರಾಗಬೇಕು, ಮತ್ತೆ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಕೂಡದು ಎಂಬ ನಿಯಮಗಳಡಿ ನ್ಯಾಯಾಲಯ ಜಾಮೀನು ನೀಡಿತ್ತು. ಆದರೆ ಬೇಲ್ ಪಡೆದು ಜೈಲಿಂದ ವಾಪಾಸ್ ಆಗುವಾಗ ರೋಡ್ ಶೋ ನಡೆಸಿ ಆರೋಪಿಗಳು ಪುಂಡಾಟಿಕೆ ಮೆರೆದ ಹಿನ್ನಲೆ ಜಾಮೀನು ಷರತ್ತು  ಉಲ್ಲಂಘನೆ ಹಿನ್ನಲೆ ಐವರನ್ನು ವಶಕ್ಕೆ ಪಡೆದ ಪೊಲೀಸರು ಮತ್ತೆ  ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...