ಅನಾಥವಾಗಿರುವ ಹಾವೇರಿ ಹೈಟೆಕ್‌ ರಂಗಮಂದಿರ…..

Date:

 

ಅನಾಥವಾಗಿರುವ ಹಾವೇರಿ ಹೈಟೆಕ್‌ ರಂಗಮಂದಿರ, ದುಷ್ಕರ್ಮಿಗಳಿಂದ ಭವನದ ಬಾಗಿಲು-ಕಿಟಕಿ ಧ್ವಂಸ
ಹಾವೇರಿ; ಜಿಲ್ಲಾ ಕೇಂದ್ರ ಸ್ಥಳವಾದ ಹಾವೇರಿನಗರದ ಹೃದಯಭಾಗದಲ್ಲಿ ನಾರಾಯಣ (ಜೆ.ಪಿ) ಸರ್ಕಲ್ ಬಳಿಯ ಗೂಗಿಕಟ್ಟಿಯಲ್ಲಿ ಹೈಟೆಕ್ ಹೆಸರಿನಲ್ಲಿ ರಂಗಮಂದಿರವನ್ನು ನಿರ್ಮಾಣ ಮಾಡಿದ್ದು, ಈ ರಂಗಮಂದಿರದ ಉದ್ಘಾಟನೆಯಾದಾಗಿನಿಂದ ಬೀಗಜಡಿಯಲಾಗಿದ್ದು, ಅನಾಥವಾಗಿದ್ದು ಇಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯದ ಕಾರಣ. ಈ ರಂಗಮಂದಿರ ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಯಾರೋ ದುಷ್ಕರ್ಮಿಗಳು ಈ ರಂಗಮಂದಿರದ ಗಾಜಿನ ಬಾಗಿಲು ಹಾಗೂ ಕಿಟಕಿಗಳನ್ನು ಒಡೆದುಹಾಕಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.
2016-17ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾವೇರಿಗೆ ಈ 50 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದ್ದರು. ಈ ಅನುದಾನದ ಪೈಕಿ 6.47 ಕೋಟಿ ವೆಚ್ಚದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ ಮತ್ತು ಹಾವೇರಿ ನಗರಸಭೆ ಆಶ್ರಯದಲ್ಲಿ ಈ ಹೈಟೆಕ್ ರಂಗಮಂದಿರ ನಿರ್ಮಿಸಲಾಗಿದೆ.
20 ಗುಂಟೆ ಜಾಗದಲ್ಲಿ 2019ರಲ್ಲಿ ಶುರುವಾಗಿದ್ದ ಕಟ್ಟಡದ ನಿರ್ಮಾಣ ಕೆಲಸ, 2021ರ ಮಾರ್ಚ್‌ಗೆ ಪೂರ್ಣಗೊಂಡಿತ್ತು. ಅದೇ ವರ್ಷವೇ ಕಟ್ಟಡವನ್ನು ಉದ್ಘಾಟನೆ ಮಾಡಲಾಗಿದ್ದು, ಇದಾದ ನಂತರ ಬಂದ್ ಮಾಡಿರುವ ಬಾಗಿಲನ್ನು
ಇದುವರೆಗೂ ತೆಗೆದಿಲ್ಲ.
 ಮೂರು ಅಂತಸ್ತಿನ ಕಟ್ಟಡದ ನೆಲಮಾಳಿಗೆಯಲ್ಲಿ ಕಾರು-ಬೈಕ್‌ಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಮೊದಲ ಮಹಡಿಯಲ್ಲಿ ಆಡಳಿತ ಕಚೇರಿ, ಸ್ವಾಗತಕಾರರ ಕಚೇರಿ. ಊಟದ ಜಾಗ, ಅಡುಗೆ ಮನೆ ಹಾಗೂ ಶೌಚಾಲಯ ನಿರ್ಮಿಸಲಾಗಿದೆ. ನೆಲ ಮಹಡಿಯಲ್ಲಿಯೇ ಚಿಕ್ಕದಾದ ‘ಸಮಾವೇಶ ಕೊಠಡಿ’ ಇದೆ. ಸಣ್ಣ ಪ್ರಮಾಣದ ಕಾರ್ಯಕ್ರಮಗಳ ಆಯೋಜನೆಗೆ ಈ ಕೊಠಡಿ ಅನುಕೂಲಕರವಾಗಿದೆ.
ಉದ್ಘಾಟನೆ ಬಳಿಕ ರಂಗಮಂದಿರದ ಬಾಗಿಲು ಮುಚ್ಚಿದ್ದು, ಇದುವರೆಗೂ ತೆರೆದಿಲ್ಲ. ಹಣ ಖರ್ಚು ಮಾಡಿ ಕಟ್ಟಿದ್ದ ಕಟ್ಟಡ ಹಾಗೂ ಸುತ್ತಮುತ್ತಲಿನ ಸ್ಥಳವೆಲ್ಲವೂ ಕ್ರಮೇಣ ಹುಲ್ಲುಗಾವಲು ಪ್ರದೇಶವಾಗಿ ಮಾರ್ಪಡುತ್ತಿದೆ. ಜನಪದ ಕಲೆಗಳು ಹಾಗೂ ರಂಗಭೂಮಿ ಚಟುವಟಿಕೆಗಳ ನೆಲೆಯಾದ ಹಾವೇರಿ ಜಿಲ್ಲಾ ಕೇಂದ್ರದಲ್ಲಿ ರಂಗಮಂದಿರಗಳ
ಕೊರತೆಯಿದೆ. ವೃತ್ತಿ ರಂಗಭೂಮಿ ಕಲಾವಿದರು, ಬಯಲು ಪ್ರದೇಶಗಳಲ್ಲಿ ಟೆಂಟ್ ಹಾಕಿಕೊಂಡು నాటిక ప్రదF నుక్తిద్చాం. రవ్మాసి రంగభూమి ಕಲಾವಿದರು, ಖಾಸಗಿ ಸಭಾಭವನಗಳ ಮೊರೆ ಹೋಗುತ್ತಿದ್ದಾರೆ. ಸಾಹಿತ್ಯಕ ಹಾಗೂ ಇತರೆ ಸಾರ್ವಜನಿಕ ಕಾರ್ಯಕ್ರಮಗಳು, ಮನೆಗಳಲ್ಲಿ ನಡೆಯುತ್ತಿವೆ.
ಸಾಹಿತಿಗಳು, ಜನಪದ ಹಾಗೂ ರಂಗಭೂಮಿ ಕಲಾವಿದರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ್ದ ಜಿಲ್ಲಾಡಳಿತ, ಹೈಟೆಕ್ ರಂಗಮಂದಿರ ನಿರ್ಮಿಸಿದೆ. ನಗರಸಭೆ ಅಧೀನದಲ್ಲಿರುವ ಈ ರಂಗಮಂದಿರ, ನಿರ್ವಹಣೆ ಕೊರತೆ ಹಾಗೂ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸದಿದ್ದರಿಂದ ಪಾಳುಬಿದ್ದಿದ್ದು, ಹಾವೇರಿಯಲ್ಲೊಂದು ಸುಸಜ್ಜಿತ ರಂಗಮಂದಿರ ಆಯಿತೆಂದು ಸಂತಸಪಡುತ್ತಿದ್ದ ಸಾಹಿತಿಗಳು ಹಾಗೂ ಕಲಾವಿದರ ಕನಸು ಕಮರುತ್ತಿದೆ.
ಸಂಜೆಯಾದರೆ ಸಾಕು ಇಲ್ಲಿ ಕುಡುಕರು ಜಮಾಯಿಸುತ್ತಾರೆ. ಅನೈತಿಕ ಚಟುವಟಿಕೆಯ ತಾಣವಾಗಿರುವ ಹೈಟೆಕ್ ರಂಗಮಂದಿಂದ ಸುಂದರವಾಗಿದ್ದ ಗಾಜಿನ ಬಾಗಿಲಗಳು, ಕಿಟಕಿಗಳನ್ನು ದುಷ್ಕರ್ಮಿಗಳು ಒಡೆದುಹಾಕಿದ್ದು, ವ್ಯವಸ್ಥಿತವಾಗಿ ನಿರ್ಮಿಸಿರುವ ‘ಹೈಟೆಕ್ ರಂಗಮಂದಿರ’ ಇದೀಗ ಪಾಳು ಬಿದ್ದಿದೆ. ಮತ್ತೆ ಈ ರಂಗ ಮಂದಿರ ದುರಸ್ತಿಯಾಗಲು ಎನ್ನೇಷ್ಟು ವರ್ಷ ಕಾಯಬೇಕೋ?

LEAVE A REPLY

Please enter your comment!
Please enter your name here

Subscribe

spot_imgspot_img

Popular

 

ಅನಾಥವಾಗಿರುವ ಹಾವೇರಿ ಹೈಟೆಕ್‌ ರಂಗಮಂದಿರ, ದುಷ್ಕರ್ಮಿಗಳಿಂದ ಭವನದ ಬಾಗಿಲು-ಕಿಟಕಿ ಧ್ವಂಸ
ಹಾವೇರಿ; ಜಿಲ್ಲಾ ಕೇಂದ್ರ ಸ್ಥಳವಾದ ಹಾವೇರಿನಗರದ ಹೃದಯಭಾಗದಲ್ಲಿ ನಾರಾಯಣ (ಜೆ.ಪಿ) ಸರ್ಕಲ್ ಬಳಿಯ ಗೂಗಿಕಟ್ಟಿಯಲ್ಲಿ ಹೈಟೆಕ್ ಹೆಸರಿನಲ್ಲಿ ರಂಗಮಂದಿರವನ್ನು ನಿರ್ಮಾಣ ಮಾಡಿದ್ದು, ಈ ರಂಗಮಂದಿರದ ಉದ್ಘಾಟನೆಯಾದಾಗಿನಿಂದ ಬೀಗಜಡಿಯಲಾಗಿದ್ದು, ಅನಾಥವಾಗಿದ್ದು ಇಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯದ ಕಾರಣ. ಈ ರಂಗಮಂದಿರ ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಯಾರೋ ದುಷ್ಕರ್ಮಿಗಳು ಈ ರಂಗಮಂದಿರದ ಗಾಜಿನ ಬಾಗಿಲು ಹಾಗೂ ಕಿಟಕಿಗಳನ್ನು ಒಡೆದುಹಾಕಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.
2016-17ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾವೇರಿಗೆ ಈ 50 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದ್ದರು. ಈ ಅನುದಾನದ ಪೈಕಿ 6.47 ಕೋಟಿ ವೆಚ್ಚದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ ಮತ್ತು ಹಾವೇರಿ ನಗರಸಭೆ ಆಶ್ರಯದಲ್ಲಿ ಈ ಹೈಟೆಕ್ ರಂಗಮಂದಿರ ನಿರ್ಮಿಸಲಾಗಿದೆ.
20 ಗುಂಟೆ ಜಾಗದಲ್ಲಿ 2019ರಲ್ಲಿ ಶುರುವಾಗಿದ್ದ ಕಟ್ಟಡದ ನಿರ್ಮಾಣ ಕೆಲಸ, 2021ರ ಮಾರ್ಚ್‌ಗೆ ಪೂರ್ಣಗೊಂಡಿತ್ತು. ಅದೇ ವರ್ಷವೇ ಕಟ್ಟಡವನ್ನು ಉದ್ಘಾಟನೆ ಮಾಡಲಾಗಿದ್ದು, ಇದಾದ ನಂತರ ಬಂದ್ ಮಾಡಿರುವ ಬಾಗಿಲನ್ನು
ಇದುವರೆಗೂ ತೆಗೆದಿಲ್ಲ.
 ಮೂರು ಅಂತಸ್ತಿನ ಕಟ್ಟಡದ ನೆಲಮಾಳಿಗೆಯಲ್ಲಿ ಕಾರು-ಬೈಕ್‌ಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಮೊದಲ ಮಹಡಿಯಲ್ಲಿ ಆಡಳಿತ ಕಚೇರಿ, ಸ್ವಾಗತಕಾರರ ಕಚೇರಿ. ಊಟದ ಜಾಗ, ಅಡುಗೆ ಮನೆ ಹಾಗೂ ಶೌಚಾಲಯ ನಿರ್ಮಿಸಲಾಗಿದೆ. ನೆಲ ಮಹಡಿಯಲ್ಲಿಯೇ ಚಿಕ್ಕದಾದ ‘ಸಮಾವೇಶ ಕೊಠಡಿ’ ಇದೆ. ಸಣ್ಣ ಪ್ರಮಾಣದ ಕಾರ್ಯಕ್ರಮಗಳ ಆಯೋಜನೆಗೆ ಈ ಕೊಠಡಿ ಅನುಕೂಲಕರವಾಗಿದೆ.
ಉದ್ಘಾಟನೆ ಬಳಿಕ ರಂಗಮಂದಿರದ ಬಾಗಿಲು ಮುಚ್ಚಿದ್ದು, ಇದುವರೆಗೂ ತೆರೆದಿಲ್ಲ. ಹಣ ಖರ್ಚು ಮಾಡಿ ಕಟ್ಟಿದ್ದ ಕಟ್ಟಡ ಹಾಗೂ ಸುತ್ತಮುತ್ತಲಿನ ಸ್ಥಳವೆಲ್ಲವೂ ಕ್ರಮೇಣ ಹುಲ್ಲುಗಾವಲು ಪ್ರದೇಶವಾಗಿ ಮಾರ್ಪಡುತ್ತಿದೆ. ಜನಪದ ಕಲೆಗಳು ಹಾಗೂ ರಂಗಭೂಮಿ ಚಟುವಟಿಕೆಗಳ ನೆಲೆಯಾದ ಹಾವೇರಿ ಜಿಲ್ಲಾ ಕೇಂದ್ರದಲ್ಲಿ ರಂಗಮಂದಿರಗಳ
ಕೊರತೆಯಿದೆ. ವೃತ್ತಿ ರಂಗಭೂಮಿ ಕಲಾವಿದರು, ಬಯಲು ಪ್ರದೇಶಗಳಲ್ಲಿ ಟೆಂಟ್ ಹಾಕಿಕೊಂಡು నాటిక ప్రదF నుక్తిద్చాం. రవ్మాసి రంగభూమి ಕಲಾವಿದರು, ಖಾಸಗಿ ಸಭಾಭವನಗಳ ಮೊರೆ ಹೋಗುತ್ತಿದ್ದಾರೆ. ಸಾಹಿತ್ಯಕ ಹಾಗೂ ಇತರೆ ಸಾರ್ವಜನಿಕ ಕಾರ್ಯಕ್ರಮಗಳು, ಮನೆಗಳಲ್ಲಿ ನಡೆಯುತ್ತಿವೆ.
ಸಾಹಿತಿಗಳು, ಜನಪದ ಹಾಗೂ ರಂಗಭೂಮಿ ಕಲಾವಿದರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ್ದ ಜಿಲ್ಲಾಡಳಿತ, ಹೈಟೆಕ್ ರಂಗಮಂದಿರ ನಿರ್ಮಿಸಿದೆ. ನಗರಸಭೆ ಅಧೀನದಲ್ಲಿರುವ ಈ ರಂಗಮಂದಿರ, ನಿರ್ವಹಣೆ ಕೊರತೆ ಹಾಗೂ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸದಿದ್ದರಿಂದ ಪಾಳುಬಿದ್ದಿದ್ದು, ಹಾವೇರಿಯಲ್ಲೊಂದು ಸುಸಜ್ಜಿತ ರಂಗಮಂದಿರ ಆಯಿತೆಂದು ಸಂತಸಪಡುತ್ತಿದ್ದ ಸಾಹಿತಿಗಳು ಹಾಗೂ ಕಲಾವಿದರ ಕನಸು ಕಮರುತ್ತಿದೆ.
ಸಂಜೆಯಾದರೆ ಸಾಕು ಇಲ್ಲಿ ಕುಡುಕರು ಜಮಾಯಿಸುತ್ತಾರೆ. ಅನೈತಿಕ ಚಟುವಟಿಕೆಯ ತಾಣವಾಗಿರುವ ಹೈಟೆಕ್ ರಂಗಮಂದಿಂದ ಸುಂದರವಾಗಿದ್ದ ಗಾಜಿನ ಬಾಗಿಲಗಳು, ಕಿಟಕಿಗಳನ್ನು ದುಷ್ಕರ್ಮಿಗಳು ಒಡೆದುಹಾಕಿದ್ದು, ವ್ಯವಸ್ಥಿತವಾಗಿ ನಿರ್ಮಿಸಿರುವ ‘ಹೈಟೆಕ್ ರಂಗಮಂದಿರ’ ಇದೀಗ ಪಾಳು ಬಿದ್ದಿದೆ. ಮತ್ತೆ ಈ ರಂಗ ಮಂದಿರ ದುರಸ್ತಿಯಾಗಲು ಎನ್ನೇಷ್ಟು ವರ್ಷ ಕಾಯಬೇಕೋ?

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು!

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು! ಹಾವೇರಿ: ದಾಸರು,...

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...