ಅನೈತಿಕ ಸಂಬಂಧದ ಅನುಮಾನದಿಂದ ವ್ಯಕ್ತಿಯ ಬರ್ಬರ ಹತ್ಯೆ; ಹಾನಗಲ್ ತಾಲೂಕು ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಘಟನೆ
ಹಾವೇರಿ: ಅನೈತಿಕ ಸಂಬಂಧದ ಆರೋಪದ ಹಿನ್ನಲೆಯಲ್ಲಿ ಓರ್ವನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಜೀವಂತ ದಹಿಸುವ ಯತ್ನವು ದಿನಾಂಕ: ೨೬/೧೨/೨೦೨೪ ರಂದು ಜಿಲ್ಲೆಯ ಹಾನಗಲ್ಲ ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ನಡೆದಿದ್ದು, ತೀವೃಗಾಯಗಳಿಂದ ನರಳುತ್ತಿದ್ದ ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿರುವ ಘಟನೆ ನಡೆದಿದೆ.
ಹಲ್ಲೆಗೊಳಗಾಗಿ ಸಾವನ್ನಪ್ಪಿದವನನ್ನು ಪ್ರಕಾಶ ಓಲೇಕಾರ(೪೦)ಎಂದು ತಿಳಿದು ಬಂದಿದೆ. ಈ ಬಗ್ಗೆ ಮೃತನ ಸಹೋದರ ಫಕ್ಕೀರೇಶ ಹಾನಗಲ್ಲ ಪೊಲೀಸ್ ಠಾಣೆಗೆ ದೂರಿ ನೀಡಿದ್ದು, ಕೊಪ್ಪರಸಿಕೊಪ್ಪದ ಕೆಲವು ಆರೋಪಿತರು ಅಕ್ರಮ ಸಂಬಂಧ ಹೊಂದಿರುವುದಾಗಿ ನನ್ನ ತಮ್ಮ ಪ್ರಕಾಶನನ್ನು ಅವಾಚ್ಯವಾಗಿ ಶಬ್ದಗಳಿಂದ ನಿಂದಿಸಿದ್ದು, ಆಗ ಪ್ರಕಾಶನು ಆರೋಪಿತರಿಗೆ ಈ ರೀತಿಯಾಗಿ ಆರೋಪ ಮಾಡುವುದು ಸರಿಯಲ್ಲ, ನಾನು ಅವಳೊಂದಿಗೆ ಅನೈತಿಕ ಸಂಬಂಧ ಹೊಂದಿರುವುದಿಲ್ಲ ಎಂದರು ಕೂಡಾ ಆರೋಪಿತರು ಸಿಟ್ಟಾಗಿ ಹಲ್ಲೆ ಮಾಡಿ, ಕಂಬಕ್ಕೆ ಕಟ್ಟಿ ಮಾರಣಾಂತಿಕ ಹಲ್ಲೆ ಮಾಡಿದ್ದು ಕೊರಳಿಗೆ ಚಪ್ಪಲಿ ಹಾರ, ಕಾಲಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದರು. ಜಯಾ ಎಂಬುವವರಿಗೂ ಕೂಡಾ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾನೆ.
ಪ್ರಕಾಶ ಎಂಬುವವನ್ನು ಉಪಚಾರಕ್ಕೆ ಹಾನಗಲ್ಲ ಆಸ್ಪತ್ರೆಗೆ ದಾಖಲು ಮಾಡಿದರು ಕೂಡ ಉಪಚಾರ ಫಲಿಸದೇ ಆತ ಮರಣ ಹೊಂದಿದ್ದು, ಈ ಕುರಿತು ಪಿರ್ಯಾದಿ ಪಕ್ಕೀರೇಶನ ದೂರಿನ್ವಯ ಹಾನಗಲ್ಲ ಪೊಲೀಸ ಠಾಣೆಯಯಲ್ಲಿ ೨೮೯/೨೦೨೪.೫೦೦: ೧೦೩(೧),೭೪,೧೮೯(೨), ೧೯೧(೨),೧೯೧(೩), ೧೧೫(೨), ೧೧೮(೧)೩೫೨, ೩೫೧(೨)(೩), ೧೨೬(೨), ೧೩೩ ಸಹ ಕಲಂ: ೧೯೦ ಬಿಎನ್ಎಸ್ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು. ಸದರಿ ಪ್ರಕರಣದಲ್ಲಿ ೦೭ ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ. ತನಿಖೆ ಮುಂದುವರೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ತಿಳಿಸಿದ್ದಾರೆ.