ಅಪೌಷ್ಟಿಕತೆಯಿಂದ ಬಳಲುವವರಿಗೆ ಹಾಲು ಅಮೃತ ಇದ್ದಹಾಗೆ: ರಮೇಶ ಆನವಟ್ಟಿ

Date:

ಅಪೌಷ್ಟಿಕತೆಯಿಂದ ಬಳಲುವವರಿಗೆ ಹಾಲು ಅಮೃತ ಇದ್ದಹಾಗೆ: ರಮೇಶ ಆನವಟ್ಟಿ
ಹಾವೇರಿ: ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ. ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ, ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ ಭಕ್ತಿಗೂ, ಮಾನವೀಯತೆಗೂ ಇದರಿಂದ ಒಂದು ಅರ್ಥ ಬರುತ್ತದೆ ಎಂದು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಮೇಶ ಆನವಟ್ಟಿ ಹೇಳಿದರು.
ಸೋಮವಾರ  ಮಾನವ ಬಂಧುತ್ವ ವೇದಿಕೆ, ಸತೀಶ ಜಾರಕಿಹೊಳಿ ಅಭಿಮಾನಿಬಳಗ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಇಲ್ಲಿನ ಹೊರವಲಯದಲ್ಲಿರುವ ಗಣಜೂರುರಸ್ತೆಗೆ ಹೊಂದಿಕೊAಡಿರುವ ಶಾಂತಿನಗರದಲ್ಲಿನ ಗುಡಿಸಲುವಾಸಿ ಅಲೆಮಾರಿ ಸಮುದಾಯದಮಕ್ಕಳಿಗೆ ಹಾಲುಣಿಸುವ ಕಾರ್ಯಕ್ರಮಕ್ಕೆ ಮಕ್ಕಳಿಗೆ ಹಾಲು ಹಾಗೂ ಸಿಹಿ ತಿನಿಸುಗಳನ್ನು ನೀಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
  ಹಬ್ಬದ ಹೆಸರಿನಲ್ಲಿ ಮೌಢ್ಯಾಚರಣೆ ಮತ್ತು ಆಹಾರ ವಸ್ತುಗಳ ವ್ಯರ್ಥವಾಗುವುದನ್ನು ತಡೆಯಬೇಕು, ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಸಾಕಷ್ಟು ಮಕ್ಕಳು ಹಾಗೂ ಜನರು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಅಂತಹವರಿಗೆ ಪೌಷ್ಟಿಕಾಂಶಗಳ ಆಗರವಾಗಿರುವ ಹಾಲು ಅಮೃತಕ್ಕೆ ಸಮಾನ. ಹಬ್ಬದ ನೆಪದಲ್ಲಾದರೂ ನಾವುಗಳ ಈರೀತಿಯ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಿ ಅಶಕ್ತರಿಗೆ ಹಾಲು, ಹಣ್ಣು , ಸಿಹಿತಿನಿಸುಗಳನ್ನು ನೀಡುವ ಮೂಲಕ  ವಿಧಾಯಕ ಕಾರ್ಯಕ್ರಮಗಳನ್ನು  ಆಯೋಜಿಸಬೇಕಿದೆ ಎಂದರು.
 ರಮಾಬಾಯಿ ಡಾ.ಬಿ.ಆರ್.ಅಂಬೇಡ್ಕರ್ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಂಜಯಗಾAಧಿ ಸಂಜೀವಣ್ಣನವರ ಮಾತನಾಡಿ  ಅಮೃತಕ್ಕೆ ಸಮಾನವಾದ ಹಾಲನ್ನು ಮಣ್ಣಿಗೆ ಸುರಿಯುವುದು, ಸಿನಿಮಾನಟರ ಕಟೌಟುಗಳಿಗೆ ಹಾಲಿನ ಅಭಿಷೇಕ, ಇನ್ಯಾರಿಗೋ ಸೇಬಿನ ಹಾರ, ಸಿನಿಮಾ –  ಧಾರವಾಹಿಗಳಲ್ಲಿ ಆಹಾರ ಪದಾರ್ಥಗಳನ್ನು ಚೆಲ್ಲುವ ಅಥವಾ ನಾಶಪಡಿಸುವ  ದೃಶ್ಯಗಳು ಎಲ್ಲವನ್ನೂ ನಿಲ್ಲಿಸಬೇಕು. ಹಾಲೇ ಇರಲಿ, ಹಣ್ಣು ತರಕಾರಿಗಳೇ ಇರಲಿ, ಬೇಳೆ ಕಾಳುಗಳೇ ಇರಲಿ ರೈತರು ಬಹಳ ಕಷ್ಟಪಟ್ಟು ಪ್ರಕೃತಿಯನ್ನು ಉಪಯೋಗಿಸಿಕೊಂಡು ಬೆಳೆಯುತ್ತಾರೆ. ಅದಕ್ಕೆ ಗೌರವ ಕೊಡಬೇಕಾದದ್ದು ಮತ್ತು ಸದುಪಯೋಗ ಪಡಿಸಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯ ಎಂದರು.
ಸತೀಶ ಜಾರಿಕಿಹೊಳಿ ಅಭಿಮಾನಿ ಬಳಗದ ಅಧ್ಯಕ್ಷ ನಾಗರಾಜ ಬಡಮ್ಮನವರ ಮಾತನಾಡಿ, ನಾಗರಪಂಚಮಿಯ ಹಬ್ಬದಲ್ಲಿ  ಹಾವು ಅಥವಾ ಹುತ್ತಕ್ಕೆ ಹಾಲೆರೆಯದೇ ಅದೇ ಹಾಲು ಹಣ್ಣುಗಳನ್ನು  ಆಹಾರವಾಗಿ ಉಪಯೋಗಿಸಿಕೊಳ್ಳಬೇಕು.   ಅವಶ್ಯಕತೆ ಇರುವವ ವೃದ್ಧಾಶ್ರಮದ ವೃದ್ಧರಿಗೆ, ಅನಾಥ ಮಕ್ಕಳಿಗೆ, ಅಲೆಮಾರಿ ಸಮುದಾಯದ ಮಕ್ಕಳಿಗೆ ಇತರರಿಗೆ ದಾನ ಮಾಡುವ ಪರಿಪಾಠವನ್ನು ನಾವಿಂದು ಬೆಳೆಸಿಕೊಳ್ಳಬೇಕಿದೆ.  ನಾಗರ ಪಂಚಮಿ  ಹಬ್ಬವು ಹಸಿವು ನಿವಾರಣೆಯ ಹಬ್ಬವಾಗಲಿ, ನಾಗರ ಪಂಚಮಿ ಬಸವ ಪಂಚಮಿಯಾಗಲಿ ಎಂದರು.
ಶಾAತಿನಗರದ ಅಲೆಮಾರಿ ಸಮುದಾಯದ ೫೦ಕ್ಕೂ ಹೆಚ್ಚುಮಕ್ಕಳಿಗೆ ಬದಾಮಿ ಹಾಲು ಹಾಗೂ ಅನೇಕರು ತಮ್ಮ ತಮ್ಮ ಮನೆಗಳಿಂದ ತಂದಿದ್ದ  ಪಂಚಮಿ ಹಬ್ಬದ ಉಂಡಿ ಸೇರಿದಂತೆ ಸಿಹಿತಿನಿಸುಗಳನ್ನು ವಿತರಿಸುವ ಮೂಲಕ ಸಾರ್ಥಕ ಕಾರ್ಯಕ್ರಮದಲ್ಲಿ ಭಾಗಿಯಾದರು, ಅಲೆಮಾರಿ ಸಮುದಾಯದ ಮಕ್ಕಳು, ಮಹಿಳೆಯರು, ಪುರುಶರು ಹಾಲು ಹಾಗೂ ಸಿಹಿತಿನಿಸುಗಳನ್ನು ಸವಿದ ನಮ್ಮ ಬಳಿ ಪಂಚಮಿ ಹಬ್ಬದಂದು ಯಾರು ಬಂದು ಹಾಲು-ಉಂಡಿಗಳನ್ನು ನೀಡಿರಲಿಲ್ಲ. ನಮ್ಮ ಮಕ್ಕಳು ಊರಿನಲ್ಲಿ ಅವರಿವರ ಮನೆಗಳಿಗೆ ಹೋಗಿ ಉಂಡಿಯನ್ನು ಕೇಳಿ ತರುತ್ತಿದ್ದರು. ನೀವುಗಳು ನಮ್ಮ ಗುಡಿಸಲಿಗೆ ಬಂದು ಉಂಡಿ, ಹಾಲು ನೀಡಿರುವಿರಿ, ನಿಮ್ಮಿಂದ ನಾವು ಹಾಲು-ಉಂಡಿಗಳನ್ನು ಸವಿಯುವಂತಾಗಿದೆ. ನಿಮಗೆ ಒಳ್ಳೆಯದಾಗಲಿ ಎಂದು ಹರಸಿದರು.
ಕಾರ್ಯಕ್ರಮದಲ್ಲಿ ದಲಿತಮುಖಂಡರಾದ ಎನ್.ಎನ್.ಗಾಳೆಮ್ಮನವರ, ರಮೇಶ ಜಾಲಿಹಾಳ, ಮಲ್ಲೇಶಪ್ಪ ಕಡಕೋಳ, ಮಲ್ಲಿಕಾರ್ಜುನ ಬೂದಗಟ್ಟಿ, ಶಿವರಾಜ್ ಹರಿಜನ, ಗುಡ್ಡಪ್ಪ ಬಣಕಾರ್, ಸಂಗಪ್ಪ ಮಲ್ಲಿಗಾರ, ಈರಪ್ಪ ತಳವಾರ, ಮತ್ತಿತರರು ಭಾಗವಹಿಸಿದ್ದರು. ಮಾನವ ಬಂಧುತ್ವ ವೇದಿಕೆಯ ತಾಲೂಕಾ ಸಂಚಾಲಕ ಮಾಲತೇಶ ಅಂಗೂರ ಪ್ರಾಸ್ಥಾವಿಕವಾಗಿ ಮಾತನಾಡಿ ಬಸವ ಪಂಚಮಿಯ ಹಬ್ಬದ ಔಚಿತ್ಯವನ್ನು ವಿವರಿಸಿದರು, ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಅಧ್ಯಕ್ಷ ಶೆಟ್ಟಿ ವಿಭೂತಿ ಸ್ವಾಗತಿಸಿದರು. ಆಕಾಶ ಮಂಟಗಣಿ ವಂದಿಸಿದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಅಪೌಷ್ಟಿಕತೆಯಿಂದ ಬಳಲುವವರಿಗೆ ಹಾಲು ಅಮೃತ ಇದ್ದಹಾಗೆ: ರಮೇಶ ಆನವಟ್ಟಿ
ಹಾವೇರಿ: ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ. ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ, ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ ಭಕ್ತಿಗೂ, ಮಾನವೀಯತೆಗೂ ಇದರಿಂದ ಒಂದು ಅರ್ಥ ಬರುತ್ತದೆ ಎಂದು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಮೇಶ ಆನವಟ್ಟಿ ಹೇಳಿದರು.
ಸೋಮವಾರ  ಮಾನವ ಬಂಧುತ್ವ ವೇದಿಕೆ, ಸತೀಶ ಜಾರಕಿಹೊಳಿ ಅಭಿಮಾನಿಬಳಗ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಇಲ್ಲಿನ ಹೊರವಲಯದಲ್ಲಿರುವ ಗಣಜೂರುರಸ್ತೆಗೆ ಹೊಂದಿಕೊAಡಿರುವ ಶಾಂತಿನಗರದಲ್ಲಿನ ಗುಡಿಸಲುವಾಸಿ ಅಲೆಮಾರಿ ಸಮುದಾಯದಮಕ್ಕಳಿಗೆ ಹಾಲುಣಿಸುವ ಕಾರ್ಯಕ್ರಮಕ್ಕೆ ಮಕ್ಕಳಿಗೆ ಹಾಲು ಹಾಗೂ ಸಿಹಿ ತಿನಿಸುಗಳನ್ನು ನೀಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
  ಹಬ್ಬದ ಹೆಸರಿನಲ್ಲಿ ಮೌಢ್ಯಾಚರಣೆ ಮತ್ತು ಆಹಾರ ವಸ್ತುಗಳ ವ್ಯರ್ಥವಾಗುವುದನ್ನು ತಡೆಯಬೇಕು, ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಸಾಕಷ್ಟು ಮಕ್ಕಳು ಹಾಗೂ ಜನರು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಅಂತಹವರಿಗೆ ಪೌಷ್ಟಿಕಾಂಶಗಳ ಆಗರವಾಗಿರುವ ಹಾಲು ಅಮೃತಕ್ಕೆ ಸಮಾನ. ಹಬ್ಬದ ನೆಪದಲ್ಲಾದರೂ ನಾವುಗಳ ಈರೀತಿಯ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಿ ಅಶಕ್ತರಿಗೆ ಹಾಲು, ಹಣ್ಣು , ಸಿಹಿತಿನಿಸುಗಳನ್ನು ನೀಡುವ ಮೂಲಕ  ವಿಧಾಯಕ ಕಾರ್ಯಕ್ರಮಗಳನ್ನು  ಆಯೋಜಿಸಬೇಕಿದೆ ಎಂದರು.
 ರಮಾಬಾಯಿ ಡಾ.ಬಿ.ಆರ್.ಅಂಬೇಡ್ಕರ್ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಂಜಯಗಾAಧಿ ಸಂಜೀವಣ್ಣನವರ ಮಾತನಾಡಿ  ಅಮೃತಕ್ಕೆ ಸಮಾನವಾದ ಹಾಲನ್ನು ಮಣ್ಣಿಗೆ ಸುರಿಯುವುದು, ಸಿನಿಮಾನಟರ ಕಟೌಟುಗಳಿಗೆ ಹಾಲಿನ ಅಭಿಷೇಕ, ಇನ್ಯಾರಿಗೋ ಸೇಬಿನ ಹಾರ, ಸಿನಿಮಾ –  ಧಾರವಾಹಿಗಳಲ್ಲಿ ಆಹಾರ ಪದಾರ್ಥಗಳನ್ನು ಚೆಲ್ಲುವ ಅಥವಾ ನಾಶಪಡಿಸುವ  ದೃಶ್ಯಗಳು ಎಲ್ಲವನ್ನೂ ನಿಲ್ಲಿಸಬೇಕು. ಹಾಲೇ ಇರಲಿ, ಹಣ್ಣು ತರಕಾರಿಗಳೇ ಇರಲಿ, ಬೇಳೆ ಕಾಳುಗಳೇ ಇರಲಿ ರೈತರು ಬಹಳ ಕಷ್ಟಪಟ್ಟು ಪ್ರಕೃತಿಯನ್ನು ಉಪಯೋಗಿಸಿಕೊಂಡು ಬೆಳೆಯುತ್ತಾರೆ. ಅದಕ್ಕೆ ಗೌರವ ಕೊಡಬೇಕಾದದ್ದು ಮತ್ತು ಸದುಪಯೋಗ ಪಡಿಸಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯ ಎಂದರು.
ಸತೀಶ ಜಾರಿಕಿಹೊಳಿ ಅಭಿಮಾನಿ ಬಳಗದ ಅಧ್ಯಕ್ಷ ನಾಗರಾಜ ಬಡಮ್ಮನವರ ಮಾತನಾಡಿ, ನಾಗರಪಂಚಮಿಯ ಹಬ್ಬದಲ್ಲಿ  ಹಾವು ಅಥವಾ ಹುತ್ತಕ್ಕೆ ಹಾಲೆರೆಯದೇ ಅದೇ ಹಾಲು ಹಣ್ಣುಗಳನ್ನು  ಆಹಾರವಾಗಿ ಉಪಯೋಗಿಸಿಕೊಳ್ಳಬೇಕು.   ಅವಶ್ಯಕತೆ ಇರುವವ ವೃದ್ಧಾಶ್ರಮದ ವೃದ್ಧರಿಗೆ, ಅನಾಥ ಮಕ್ಕಳಿಗೆ, ಅಲೆಮಾರಿ ಸಮುದಾಯದ ಮಕ್ಕಳಿಗೆ ಇತರರಿಗೆ ದಾನ ಮಾಡುವ ಪರಿಪಾಠವನ್ನು ನಾವಿಂದು ಬೆಳೆಸಿಕೊಳ್ಳಬೇಕಿದೆ.  ನಾಗರ ಪಂಚಮಿ  ಹಬ್ಬವು ಹಸಿವು ನಿವಾರಣೆಯ ಹಬ್ಬವಾಗಲಿ, ನಾಗರ ಪಂಚಮಿ ಬಸವ ಪಂಚಮಿಯಾಗಲಿ ಎಂದರು.
ಶಾAತಿನಗರದ ಅಲೆಮಾರಿ ಸಮುದಾಯದ ೫೦ಕ್ಕೂ ಹೆಚ್ಚುಮಕ್ಕಳಿಗೆ ಬದಾಮಿ ಹಾಲು ಹಾಗೂ ಅನೇಕರು ತಮ್ಮ ತಮ್ಮ ಮನೆಗಳಿಂದ ತಂದಿದ್ದ  ಪಂಚಮಿ ಹಬ್ಬದ ಉಂಡಿ ಸೇರಿದಂತೆ ಸಿಹಿತಿನಿಸುಗಳನ್ನು ವಿತರಿಸುವ ಮೂಲಕ ಸಾರ್ಥಕ ಕಾರ್ಯಕ್ರಮದಲ್ಲಿ ಭಾಗಿಯಾದರು, ಅಲೆಮಾರಿ ಸಮುದಾಯದ ಮಕ್ಕಳು, ಮಹಿಳೆಯರು, ಪುರುಶರು ಹಾಲು ಹಾಗೂ ಸಿಹಿತಿನಿಸುಗಳನ್ನು ಸವಿದ ನಮ್ಮ ಬಳಿ ಪಂಚಮಿ ಹಬ್ಬದಂದು ಯಾರು ಬಂದು ಹಾಲು-ಉಂಡಿಗಳನ್ನು ನೀಡಿರಲಿಲ್ಲ. ನಮ್ಮ ಮಕ್ಕಳು ಊರಿನಲ್ಲಿ ಅವರಿವರ ಮನೆಗಳಿಗೆ ಹೋಗಿ ಉಂಡಿಯನ್ನು ಕೇಳಿ ತರುತ್ತಿದ್ದರು. ನೀವುಗಳು ನಮ್ಮ ಗುಡಿಸಲಿಗೆ ಬಂದು ಉಂಡಿ, ಹಾಲು ನೀಡಿರುವಿರಿ, ನಿಮ್ಮಿಂದ ನಾವು ಹಾಲು-ಉಂಡಿಗಳನ್ನು ಸವಿಯುವಂತಾಗಿದೆ. ನಿಮಗೆ ಒಳ್ಳೆಯದಾಗಲಿ ಎಂದು ಹರಸಿದರು.
ಕಾರ್ಯಕ್ರಮದಲ್ಲಿ ದಲಿತಮುಖಂಡರಾದ ಎನ್.ಎನ್.ಗಾಳೆಮ್ಮನವರ, ರಮೇಶ ಜಾಲಿಹಾಳ, ಮಲ್ಲೇಶಪ್ಪ ಕಡಕೋಳ, ಮಲ್ಲಿಕಾರ್ಜುನ ಬೂದಗಟ್ಟಿ, ಶಿವರಾಜ್ ಹರಿಜನ, ಗುಡ್ಡಪ್ಪ ಬಣಕಾರ್, ಸಂಗಪ್ಪ ಮಲ್ಲಿಗಾರ, ಈರಪ್ಪ ತಳವಾರ, ಮತ್ತಿತರರು ಭಾಗವಹಿಸಿದ್ದರು. ಮಾನವ ಬಂಧುತ್ವ ವೇದಿಕೆಯ ತಾಲೂಕಾ ಸಂಚಾಲಕ ಮಾಲತೇಶ ಅಂಗೂರ ಪ್ರಾಸ್ಥಾವಿಕವಾಗಿ ಮಾತನಾಡಿ ಬಸವ ಪಂಚಮಿಯ ಹಬ್ಬದ ಔಚಿತ್ಯವನ್ನು ವಿವರಿಸಿದರು, ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಅಧ್ಯಕ್ಷ ಶೆಟ್ಟಿ ವಿಭೂತಿ ಸ್ವಾಗತಿಸಿದರು. ಆಕಾಶ ಮಂಟಗಣಿ ವಂದಿಸಿದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...