‘ಅಭಿಮಾನಿಗಳಿಗೆ ನಾನೆಂದಿಗೂ ಚಿರಋಣಿ’  ಪುನೀತ್ ದೇವಸ್ಥಾನ ಉದ್ಘಾಟಿಸಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭಾವುಕ ನುಡಿ  

Date:

ಅಭಿಮಾನಿಗಳಿಗೆ ನಾನೆಂದಿಗೂ ಚಿರಋಣಿ’
 ಪುನೀತ್ ದೇವಸ್ಥಾನ ಉದ್ಘಾಟಿಸಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭಾವುಕ ನುಡಿ  
ಹಾವೇರಿ: ಕನ್ನಡಿಗರ ಹೃದಯದಲ್ಲಿ ಭದ್ರಸ್ಥಾನ ಗಿಟ್ಟಿಸಿಕೊಂಡಿರುವ ಚಂದನವನದ ನಗುಮೊಗದ ಒಡೆಯ ಪುನೀತ್ ರಾಜ್ ಕುಮಾರ್  ಅಪ್ಪು ಹೆಸರಿನಲ್ಲಿ ಮಾನವೀಯ ಕಾರ್ಯಗಳು ಮುಂದುವರಿದಿವೆ.  ಇದೀಗ ಅಂಥದ್ದೇ ಒಂದು ಸುಂದರ ಕ್ಷಣಕ್ಕೆ ಹಾವೇರಿ ಸಾಕ್ಷಿಯಾಗಿದೆ. ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ಪ್ರಕಾಶ್ ಮೊರಬದ ಎಂಬ ಅಪ್ಪು ಅಭಿಮಾನಿ ತನ್ನ ಮನೆಯೆದುರು ನಿರ್ಮಿಸಿರುವ ಪುನೀತ್ ರಾಜ್‌ಕುಮಾರ್‌ದೇಗುಲ ಹಾಗೂ ಅಪ್ಪು ಪುತ್ಥಳಿಯನ್ನು ಗುರುವಾರ ನೂರಾರು ಅಭಿಮಾನಿಗಳ ಸಜಃಓಷದ ನಡುವೆ ಅಶ್ವಿನಿ ಪುನೀತ್ ರಾಜ್‌ಕುಮಾರ್  ಉದ್ಘಾಟಿಸಿದರು. ಅಭಿಮಾನಿಗಳ ಅಭಿಮಾನ ಕಂಡು ಅಶ್ವಿನಿ ಭಾವುಕರಾದರು.
ಅಭಿಮಾನಿ ಮಗಳಿಗೆ ಹೆಸರಿಟ್ಟ ಅಶ್ವಿನಿ: ಜನಮೆಚ್ಚಿದ ನಟರಿಂದ ತಮ್ಮ ಮಕ್ಕಳ ನಾಮಕರಣ ಮಾಡಿಸಬೇಕೆಂಬುದು ಅದೆಷ್ಟೋ ಅಭಿಮಾನಿಗಳ ಆಶಯ. ಅದರಂತೆ ಅಪ್ಪು ಅಭಿಮಾನಿ ಪ್ರಕಾಶ್ ಮೊರಬದ  ದಂಪತಿಯ ಮಗಳಿಗೆ ‘ಅಪೇಕ್ಷಾ’ ಎಂದು ಅಶ್ವಿನಿ ಪುನೀತ್ ರಾಜ್?ಕುಮಾರ್ ನಾಮಕರಣ ಮಾಡಿದ್ದಾರೆ. ಅಪ್ಪು ಕೆಲಸಗಳನ್ನು ಸದ್ಯ ಅಶ್ವಿನಿಯವರು ನಡೆಸಿಕೊಂಡು ಹೋಗುತ್ತಿದ್ದಾರೆ. ಅದರಂತೆ, ದೇಗುಲ ನಿರ್ಮಿಸಿರುವ ಅಭಿಮಾನಿ ಪ್ರಕಾಶ್ ಪುತ್ರಿ ಮಗಳ ನಾಮಕರಣ ಮಾಡುವ ಮೂಲಕ ಅಶ್ವಿನಿ ತಮ್ಮ ಪತಿಯಂತೆ ಅಭಿಮಾನಿಯ ಕನಸು ನನಸು ಮಾಡಿದ್ದಾರೆ.
ಭಾವುಕರಾದ ಅಶ್ವಿನಿ:  ಉದ್ಘಾಟನೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್, ಅಭಿಮಾನಿಗಳಿಗೆ ನಾನೆಂದಿಗೂ ಚಿರಋಣಿ. ಅಭಿಮಾನಿಯ ಸ್ವಂತ ಜಾಗದಲ್ಲಿ ಅಪ್ಪು ದೇವಸ್ಥಾನ ನಿರ್ಮಾಣಗೊಂಡಿದೆ. ಇಂಥ ಅಭಿಮಾನಿ ಇರುವುದು ನಮ್ಮ ಪುಣ್ಯ. ಅಪ್ಪು ಅವರ ದೇವಸ್ಥಾನ ನಿರ್ಮಾಣಗೊಂಡಿರುವುದು ಬಹಳ ಖುಷಿ ತಂದಿದೆ ಎಂದು ಭಾವುಕರಾದರು.
ಕಾರ್ಯಕ್ರಮದಲ್ಲಿ ಹೊಸರಿತ್ತಿಯ ಗುದ್ದಲೀಶ್ವರ ಸ್ವಾಮೀಜಿ ಭಾಗಿಯಾಗಿದ್ದರು. ಅಭಿಮಾನಿ ಸ್ವಂತ ಹಣ ಹಾಕಿ ದೇಗುಲ ನಿರ್ಮಿಸಿದ್ದಾರೆ. ನಿರ್ಮಾಣ ಕಾರ್ಯಕ್ಕೆ ೧೦ ಲಕ್ಷ ರೂಪಾಯಿ ವೆಚ್ಚವಾಗಿದೆ. ವಿವಿಧ ಕಲಾತಂಡಗಳು, ಕುಂಬಮೇಳ ಕಾರ್ಯಕ್ರಮದ ಮೆರುಗು ಹೆಚ್ಚಿಸಿದ್ದವು. ಜಿಲ್ಲೆಯ ಅಪ್ಪು ಅಭಿಮಾನಿಗಳು ಭಾಗಿಯಾಗುವ ಮೂಲಕ ಸಂಭ್ರಮವನ್ನು ದ್ವಿಗುಣಗೊಳಿಸಿದರು.
ಕಾರ್ಯಕ್ರಮದಲ್ಲಿ ವಿಧಾನಸಭೆಯ ಉಪಾಧ್ಯಕ್ಷ,  ಶಾಸಕ ರುದ್ರಪ್ಪ ಲಮಾಣಿ, ಜಿ.ಪಂ.ಮಾಜಿ ಅಧ್ಯಕ್ಷ ಕೆ.ಆರ್.ಬಸೇಗೆಣ್ಣಿ, ಸಂಜಯಗಾಂಧಿ ಸಂಜೀವಣ್ಣನವರ, ಅಪ್ಪು ಅಭಿಮಾನಿ ಪ್ರಕಾಶ ಮೊರಬದ, ಮಾದೇವಕ್ಕ ಮೊರಬದ, ಋಷಿ ಮೊರಬದ, ಮಧು, ಆನಂದ ಕುಂಬಾರಿ, ಆನಂದ ಮುರುಡಪ್ಪನವರ ಸೇರಿದಂತೆ ಮತ್ತಿತರರು ಇದ್ದರು.
ಮೊದಲಿಗೆ ಹಾವೇರಿಗೆ ಆಗಮಿಸಿದ ಅಶ್ವಿನಿ ಅವರು ಇಲ್ಲಿನ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರಾಷ್ಟ್ರಭಕ್ತ ಹೊಸಮನಿ ಸಿದ್ದಪ್ಪ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಅಶ್ವಿನಿ ಅವರನ್ನು ಅದ್ದೂರಿಯಾಗ ಬರಮಾಡಿಕೊಂಡ ಪ್ರಕಾಶ ಮೊರಬದ, ಸಂಜಯಗಾಂಧಿ ಸಂಜೀವಣ್ಣನವರ ಮತ್ತಿತರರು  ಅವರಿಗೆ ಭವ್ಯ ಸ್ವಾಗತ ನೀಡುವ ಮೂಲಕ ಯಲಗಚ್ಚಗ್ರಾಮಕ್ಕೆ ಕರೆದೊಯ್ದರು. ಯಲಗಚ್ಚಗ್ರಾಮದ ಶಾಲಾ ಮೈದಾನದಲ್ಲಿ ಸಾಂಸ್ಕ್ರತಿಕ ಕಾರ್ಯಗಳು ನಡೆದವು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಅಭಿಮಾನಿಗಳಿಗೆ ನಾನೆಂದಿಗೂ ಚಿರಋಣಿ’
 ಪುನೀತ್ ದೇವಸ್ಥಾನ ಉದ್ಘಾಟಿಸಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭಾವುಕ ನುಡಿ  
ಹಾವೇರಿ: ಕನ್ನಡಿಗರ ಹೃದಯದಲ್ಲಿ ಭದ್ರಸ್ಥಾನ ಗಿಟ್ಟಿಸಿಕೊಂಡಿರುವ ಚಂದನವನದ ನಗುಮೊಗದ ಒಡೆಯ ಪುನೀತ್ ರಾಜ್ ಕುಮಾರ್  ಅಪ್ಪು ಹೆಸರಿನಲ್ಲಿ ಮಾನವೀಯ ಕಾರ್ಯಗಳು ಮುಂದುವರಿದಿವೆ.  ಇದೀಗ ಅಂಥದ್ದೇ ಒಂದು ಸುಂದರ ಕ್ಷಣಕ್ಕೆ ಹಾವೇರಿ ಸಾಕ್ಷಿಯಾಗಿದೆ. ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ಪ್ರಕಾಶ್ ಮೊರಬದ ಎಂಬ ಅಪ್ಪು ಅಭಿಮಾನಿ ತನ್ನ ಮನೆಯೆದುರು ನಿರ್ಮಿಸಿರುವ ಪುನೀತ್ ರಾಜ್‌ಕುಮಾರ್‌ದೇಗುಲ ಹಾಗೂ ಅಪ್ಪು ಪುತ್ಥಳಿಯನ್ನು ಗುರುವಾರ ನೂರಾರು ಅಭಿಮಾನಿಗಳ ಸಜಃಓಷದ ನಡುವೆ ಅಶ್ವಿನಿ ಪುನೀತ್ ರಾಜ್‌ಕುಮಾರ್  ಉದ್ಘಾಟಿಸಿದರು. ಅಭಿಮಾನಿಗಳ ಅಭಿಮಾನ ಕಂಡು ಅಶ್ವಿನಿ ಭಾವುಕರಾದರು.
ಅಭಿಮಾನಿ ಮಗಳಿಗೆ ಹೆಸರಿಟ್ಟ ಅಶ್ವಿನಿ: ಜನಮೆಚ್ಚಿದ ನಟರಿಂದ ತಮ್ಮ ಮಕ್ಕಳ ನಾಮಕರಣ ಮಾಡಿಸಬೇಕೆಂಬುದು ಅದೆಷ್ಟೋ ಅಭಿಮಾನಿಗಳ ಆಶಯ. ಅದರಂತೆ ಅಪ್ಪು ಅಭಿಮಾನಿ ಪ್ರಕಾಶ್ ಮೊರಬದ  ದಂಪತಿಯ ಮಗಳಿಗೆ ‘ಅಪೇಕ್ಷಾ’ ಎಂದು ಅಶ್ವಿನಿ ಪುನೀತ್ ರಾಜ್?ಕುಮಾರ್ ನಾಮಕರಣ ಮಾಡಿದ್ದಾರೆ. ಅಪ್ಪು ಕೆಲಸಗಳನ್ನು ಸದ್ಯ ಅಶ್ವಿನಿಯವರು ನಡೆಸಿಕೊಂಡು ಹೋಗುತ್ತಿದ್ದಾರೆ. ಅದರಂತೆ, ದೇಗುಲ ನಿರ್ಮಿಸಿರುವ ಅಭಿಮಾನಿ ಪ್ರಕಾಶ್ ಪುತ್ರಿ ಮಗಳ ನಾಮಕರಣ ಮಾಡುವ ಮೂಲಕ ಅಶ್ವಿನಿ ತಮ್ಮ ಪತಿಯಂತೆ ಅಭಿಮಾನಿಯ ಕನಸು ನನಸು ಮಾಡಿದ್ದಾರೆ.
ಭಾವುಕರಾದ ಅಶ್ವಿನಿ:  ಉದ್ಘಾಟನೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್, ಅಭಿಮಾನಿಗಳಿಗೆ ನಾನೆಂದಿಗೂ ಚಿರಋಣಿ. ಅಭಿಮಾನಿಯ ಸ್ವಂತ ಜಾಗದಲ್ಲಿ ಅಪ್ಪು ದೇವಸ್ಥಾನ ನಿರ್ಮಾಣಗೊಂಡಿದೆ. ಇಂಥ ಅಭಿಮಾನಿ ಇರುವುದು ನಮ್ಮ ಪುಣ್ಯ. ಅಪ್ಪು ಅವರ ದೇವಸ್ಥಾನ ನಿರ್ಮಾಣಗೊಂಡಿರುವುದು ಬಹಳ ಖುಷಿ ತಂದಿದೆ ಎಂದು ಭಾವುಕರಾದರು.
ಕಾರ್ಯಕ್ರಮದಲ್ಲಿ ಹೊಸರಿತ್ತಿಯ ಗುದ್ದಲೀಶ್ವರ ಸ್ವಾಮೀಜಿ ಭಾಗಿಯಾಗಿದ್ದರು. ಅಭಿಮಾನಿ ಸ್ವಂತ ಹಣ ಹಾಕಿ ದೇಗುಲ ನಿರ್ಮಿಸಿದ್ದಾರೆ. ನಿರ್ಮಾಣ ಕಾರ್ಯಕ್ಕೆ ೧೦ ಲಕ್ಷ ರೂಪಾಯಿ ವೆಚ್ಚವಾಗಿದೆ. ವಿವಿಧ ಕಲಾತಂಡಗಳು, ಕುಂಬಮೇಳ ಕಾರ್ಯಕ್ರಮದ ಮೆರುಗು ಹೆಚ್ಚಿಸಿದ್ದವು. ಜಿಲ್ಲೆಯ ಅಪ್ಪು ಅಭಿಮಾನಿಗಳು ಭಾಗಿಯಾಗುವ ಮೂಲಕ ಸಂಭ್ರಮವನ್ನು ದ್ವಿಗುಣಗೊಳಿಸಿದರು.
ಕಾರ್ಯಕ್ರಮದಲ್ಲಿ ವಿಧಾನಸಭೆಯ ಉಪಾಧ್ಯಕ್ಷ,  ಶಾಸಕ ರುದ್ರಪ್ಪ ಲಮಾಣಿ, ಜಿ.ಪಂ.ಮಾಜಿ ಅಧ್ಯಕ್ಷ ಕೆ.ಆರ್.ಬಸೇಗೆಣ್ಣಿ, ಸಂಜಯಗಾಂಧಿ ಸಂಜೀವಣ್ಣನವರ, ಅಪ್ಪು ಅಭಿಮಾನಿ ಪ್ರಕಾಶ ಮೊರಬದ, ಮಾದೇವಕ್ಕ ಮೊರಬದ, ಋಷಿ ಮೊರಬದ, ಮಧು, ಆನಂದ ಕುಂಬಾರಿ, ಆನಂದ ಮುರುಡಪ್ಪನವರ ಸೇರಿದಂತೆ ಮತ್ತಿತರರು ಇದ್ದರು.
ಮೊದಲಿಗೆ ಹಾವೇರಿಗೆ ಆಗಮಿಸಿದ ಅಶ್ವಿನಿ ಅವರು ಇಲ್ಲಿನ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರಾಷ್ಟ್ರಭಕ್ತ ಹೊಸಮನಿ ಸಿದ್ದಪ್ಪ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಅಶ್ವಿನಿ ಅವರನ್ನು ಅದ್ದೂರಿಯಾಗ ಬರಮಾಡಿಕೊಂಡ ಪ್ರಕಾಶ ಮೊರಬದ, ಸಂಜಯಗಾಂಧಿ ಸಂಜೀವಣ್ಣನವರ ಮತ್ತಿತರರು  ಅವರಿಗೆ ಭವ್ಯ ಸ್ವಾಗತ ನೀಡುವ ಮೂಲಕ ಯಲಗಚ್ಚಗ್ರಾಮಕ್ಕೆ ಕರೆದೊಯ್ದರು. ಯಲಗಚ್ಚಗ್ರಾಮದ ಶಾಲಾ ಮೈದಾನದಲ್ಲಿ ಸಾಂಸ್ಕ್ರತಿಕ ಕಾರ್ಯಗಳು ನಡೆದವು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...