ಅಲ್ಪಸಂಖ್ಯಾತರಿಗೆ ತಪ್ಪಿದ ಟಿಕೆಟ್, ಮುಖಂಡರ ಅಸಮದಾನಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಈಹಿಂದೆ ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರ ಇದ್ದ ವೇಳೆ ಅಲ್ಪಸಂಖ್ಯಾತ ಸಮುದಾಯದವರು 10 ಸಲ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.ಎರಡು ಸಲ ಸಲೀಂ ಅಹ್ಮದ್ ಸೋಲನ್ನು ಅನುಭವಿಸಿದ್ದರು.ಕಳೆದ ೨೦೧೮ರ ಲೋಕಸಭಾ ಚುನಾವಣೆಯಲ್ಲಿ ಡಿ.ಆರ್.ಪಾಟೀಲಸೋಲನ್ನು ಅನುಭಸಿದ್ದರು.ಆದರೆ ಪ್ರಸ್ತುತ ೩೦೨೪ರ ಚುನಾವಣೆಗೆ ಮಾಜಿ ಶಾಸಕ ಗಡ್ಡದ್ದೇವರಮಠ ಅವರ ಪುತ್ರ ಆನಂದ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಅಲ್ಪಸಂಖ್ಯಾತ ಸಮುದಾಯದ ಕೆಲವು ಮುಖಂಡರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿ ಕಾರಣದಿಂದ ೭ಜನ ಶಾಸಕರಾಗಿ ಆಯ್ಕೆಯಾಗಲು ಸಾಧಗಯವಾಗಿದೆ.ಆದರೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತ ಪಡೆದ ಶಾಸಕರು ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಿ ಎಂದು ಕಾಂಗ್ರೆಸ್ ವರಿಷ್ಠ ರಿಗೆ ಹೇಳಿಲ್ಲ .ಅಲ್ಪಸಂಖ್ಯಾತರನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿ ತರಬೇಕೆನ್ನುವ ಕಾಳಜಿಶಾಸಕರಿಗೆ ಇಲ್ಲವಾ?ನಮ್ಮ ಸಮುದಾಯ ಮತಹಾಕಲು ಮಾತ್ರ ಇವರಿಗೆ ಬೇಕಾ?ಎಂದು ಅನೇಕರು ಪ್ರಶ್ನಿಸಿದ್ದಾರೆ.ಕಳೆದ ಲೋಕಸಭಾ ಚುನಾವಣೆಯಲ್ಲಿಸ್ಪರ್ಧಿಸಿದ ಪಾಟೀಲರು ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿ ಪಡೆದ ಮತಗಳಿಗಿಂತ ಎರಡುಪಟ್ಟು ಹೆಚ್ಚಿನ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಅಲ್ಪಸಂಖ್ಯಾತರನ್ನು ಕಡೆಗಣಿಸಿರುವ ಬಗ್ಗೆ ಅಲ್ಪಸಂಖ್ಯಾತ ಸಮುದಾಯ ಗಂಭೀರವಾಗಿ ಅಲೋಚಿಸುತ್ತಿದೆ ಎಂದು ಅಲ್ಪಸಂಖ್ಯಾತ ಮುಖಂಡರು ತಿಳಿಸಿದ್ದಾರೆ.
ಅಲ್ಪಸಂಖ್ಯಾತರಿಗೆ ತಪ್ಪಿದ ಟಿಕೆಟ್, ಮುಖಂಡರ ಅಸಮದಾನ
Date: