ಆನ್ಲೈನ್ ರಮ್ಮಿ ಚಟಕ್ಕೆ ಬಿದ್ದ ಹಾವೇರಿಯ ಐಸಿಐಸಿ ಬ್ಯಾಂಕಿನ ಡೆಪ್ಯೂಟಿ ಮ್ಯಾನೇಜರ್ ವೀರೇಶ್ ಕಾಶಿಮಠ ೨ ಕೋಟಿ ಹಣ ದುರ್ಬಳಕೆ, ಬಂಧನ
ಹಾವೇರಿ: ಆನ್ಲೈನ್ ಜೂಜಾಟಕ್ಕೆ ನಿತ್ಯ ಒಂದಿಲ್ಲ ಒಂದು ಅವಘಡಗಳು ನಡೆಯತ್ತಲೇ ಇವೆ. ಇಂತ ಅವಘಡ ಜಿಲ್ಲಾ ಕೇಂದ್ರವಾದ ಹಾವೇರಿನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದ್ದು, ಇಲ್ಲಿನ ವಿದ್ಯಾನಗರದಲ್ಲಿರುವ ಐಸಿಐಸಿಐ ಬ್ಯಾಂಕ್ ಅಧಿಕಾರಿ ಮನೆ ಮುರಕ ಆನ್ಲೈನ್ ರಮ್ಮಿ ಚಟಕ್ಕೆ ಬಿದ್ದು ಬ್ಯಾಂಕ್ಗೆ ೨ಕೋಟಿರೂ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಹಾವೇರಿಯ ಐಸಿಐಸಿಐ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ವೀರೇಶ್ ಕಾಶಿಮಠ ವಿರುದ್ಧ ಈ ಆರೋಪ ಕೇಳಿಬಂದಿದೆ. ಬ್ಯಾಂಕ್ ಮ್ಯಾನೇಜರ ಈ ಕುರಿತು ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿರೇಶ್ ಕಾಶಿಮಠ ಕಳೆದ ಅಗಸ್ಟನಿಂದ ೨೩ ರ ಫೆಬ್ರುವರಿ ೭ ರವರೆಗೆ ಗ್ರಾಹಕರು ಬ್ಯಾಂಕ್ನಲ್ಲಿಟ್ಟ ಠೇವಣೆ ಹಣವನ್ನ ತನಗೆ ಬೇಕಾದವರ ಖಾತೆಗೆ ಜಮಾ ಮಾಡಿದ್ದಾನೆ. ಅಗಸ್ಟ್ ೨೦ -೨೦೨೨ ರಿಂದ ಫೆಬ್ರುವರ್ ೭ ರವರೆಗೆ ಸುಮಾರು ೨ ಕೋಟಿ ೩೬ ಲಕ್ಷ ರೂಪಾಯಿ ಹಣವನ್ನ ವೀರೇಶ್ ತನಗೆ ಬೇಕಾದವರ ಖಾತೆಗೆ ಜಮೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ಆ ಹಣ ತಗೆಸಿಕೊಂಡು ವೀರೇಶ್ ಆನಲೈನ್ ನಲ್ಲಿ ಜೂಜಾಟ ವಾಡುತ್ತಿದ್ದ ಎನ್ನಲಾಗಿದೆ. ಈ ಕುರಿತಂತೆ ಹಾವೇರಿ ಐಸಿಐಸಿಐ ಬ್ಯಾಂಕ್ ಮ್ಯಾನೇಜರ್ ಶಹರ ಠಾಣೆಗೆ ದೂರು ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಶಹರ ಪೊಲೀಸರು ಆರೋಪಿ ವೀರೇಶ್ ಕಾಶಿಮಠ ನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದಲ್ಲಿ ಎರಡು ಕೋಟಿಗೂ ಅಧಿಕ ಹಣ ದುರುಪಯೋಗವಾಗಿದ್ದರಿಂದ ಪ್ರಕರಣವನ್ನ ಆದಷ್ಟು ಬೇಗ ಸಿಐಡಿಗೆ ವರ್ಗಾಯಿಸಲಾಗುವದು ಎಂದು ಹಾವೇರಿ ಎಸ್ಪಿ ಶಿವಕುಮಾರ್ ತಿಳಿಸಿದ್ದಾರೆ. ಇದುವರೆಗೆ ಶಹರ ಠಾಣೆಯ ತನಿಖಾಧಿಕಾರಿ ಈ ಪ್ರಕರಣ ಹ್ಯಾಂಡಲ್ ಮಾಡಿದ್ದು ಇನ್ನೇರಡು ದಿನಗಳಲ್ಲಿ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಲಿದೆ. ಪ್ರಕರಣದಲ್ಲಿ ಶಹರ ಠಾಣೆಯ ತನಿಖಾಧಿಕಾರಿ ಆರೋಪಿಯು ಬಳಕೆ ಮಾಡಲು ಉದ್ದೇಶಿದ್ದ ೩೨ ಲಕ್ಷ ರೂಪಾಯಿಗಳ ವ್ಯವಹಾರವನ್ನ ತಡೆ ಹಿಡಿದಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.
ಡೆಪ್ಯೂಟಿ ಮ್ಯಾನೇಜರ್ ಆದವರಿಗೆ ಪ್ರತಿದಿನ ಸುಮಾರು ೫ ಲಕ್ಷ ರೂಪಾಯಿ ಅಷ್ಟು ಬ್ಯಾಂಕ್ ಹಣವನ್ನ ಬೇರೆ ಬೇರೆ ಖಾತೆಗೆ ವರ್ಗಾಯಿಸಲು ಅವಕಾಶ ಇರುತ್ತದೆ. ಈ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ಅಗಸ್ಟ್ ತಿಂಗಳಿನಿಂದ ಫೆಬ್ರವರಿ ವರಗೆ ತನ್ನ ಸ್ನೇಹಿತರ ಖಾತೆಗೆ ಹಣ ವರ್ಗಾಯಿಸಿ, ಆನ್??ಲೈನ್ ರಮ್ಮಿ ಆಟದಲ್ಲಿ ಹೂಡಿಕೆ ಮಾಡುತ್ತಿದ್ದ. ಈ ವಿಚಾರ ಬ್ಯಾಂಕ್ ಮ್ಯಾನೇಜರ್ ಗೆ ಗೊತ್ತಾಗುತ್ತಿದ್ದಂತೆ ಹಾವೇರಿ ನಗರ ಠಾಣೆಗೆ ದೂರು ನೀಡಿದ್ದ ಬೆನ್ನಲ್ಲೇ ಪ್ರಕರಣ ಬಯಲಾಗಿದ್ದು ಆರೋಪಿ ವೀರೇಶ್ ಸಾಲಿಮಠನನನ್ನು ಬಂಧಿಸಲಾಗಿದೆ.
ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಯಾರೋ ಒಬ್ಬ ತನ್ನ ಚಟಕ್ಕೆ ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಗ್ರಾಹಕರಿಗೆ ಒಂದು ರೂಪಾಯಿ ಕೂಡಾ ಮೊಸ ಆಗಬಾರದು ಅಲ್ಲದೆ, ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂದು ಸಾರ್ವಜನಿಕರ ಒತ್ತಾಯಿಸಿದ್ದಾರೆ.