ಇವು ನಮ್ಮ ಹಾವೇರಿನಗರದ (ಎಮ್ಮೆ)(ಹೆಮ್ಮೆಯ) ರಸ್ತೆ ಗಳು…….
ಹಾವೇರಿ: ಎಡಬಿಡದೇ ಸುರಿಯುತ್ತಿರುವ ಭಾರಿಮಳೆಗೆ ಜಿಲ್ಲಾ ಕೇಂದ್ರ ಹಾವೇರಿನಗರದ ರಸ್ತೆಗಳು ಸೇರಿದಂತೆ ಗ್ರಾಮೀಣಭಾಗದ ರಸ್ತೆಗಳು ಕೆಲವುಕಡೆಗಳಲ್ಲಿ ರಸ್ತೆಯ ಸ್ವರೂಪವನ್ನು ಕಳೆದು ಕೊಂಡಿವೆ. ಎಲ್ಲಂದರಲ್ಲಿ ತಗ್ಗು-ಗುಂಡಿಗಳು ನಿರ್ಮಾಣವಾಗಿದ್ದು, ಜನತೆ, ವಿದ್ಯಾರ್ಥಿಗಳು, ವಾಹನ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡು ಹರೋಹರಾ ಎನ್ನುತ್ತಾ ಓಡಾಡುತ್ತಿದ್ದಾರೆ.
ಹಾವೇರಿನಗರದ ಬಹತೇಕ ಕಡೆಗಳಲ್ಲಿ ರಸ್ತೆಯ ಡಾಂಬರ್ ಕಿತ್ತು ಹಾಳಾಗಿ ನೀರು ತುಂಬಿರುವ ಗುಂಡಿಗಳು ನಿರ್ಮಾಣ ವಾಗಿವೆ. ಹಾವೇರಿ ನಗರದ ಸುಭಾಸ್ಸರ್ಕಲ್ನಿಂದ ಮಹಾತ್ಮಾಗಾಂಧಿ ವೃತ್ತ ಸಂಪರ್ಕಿಸಿರುವ ರಸ್ತೆ, ಸುಭಾಸ್ ಸರ್ಕಲ್ನಿಂದ ಕವಲೊಡೆದ ರಸ್ತೆ ರೈಲ್ವೆನಿಲ್ದಾಣ, ಮುನಸಿಪಲ್ ಹೈಸ್ಕೂಲ್, ಎಸ್ಜೆಎಂ ಹೈಸ್ಕೂಲ್, ಕಾಲೇಜು, ಬಿಎಡ್ ಕಾಲೇಜು ಸೇರಿದಂತೆ ನಾಲ್ಕಾರು ಖ್ಯಾತ ಶಿಕ್ಷಣ ಸಂಸ್ಥೆಗಳಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣಹಾಳಾಗಿವೆ. ಈ ಮಾರ್ಗದಿಂದ ಬಸವೇಶ್ವರ ನಗರ ಸಂಪರ್ಕಿಸುವ ರಸ್ತೆ ರಸ್ತೆ ಸ್ವರೂಪವನ್ನು ಕಳೆದುಕೊಂಡಿದೆ.
ಈ ರಸ್ತೆ ಹೊಸಮಠ ಮತ್ತು ಹೊಸಮಠ ಕಾಲೇಜು ಹಾಗೂ ಪಿ.ಯು ಹಾಗೂ ಪದವಿ ಪೂರ್ವ ಕಾಲೇಜು, ಅಂಜುಮನ್ ಶಾದಿ ಮಹಲ್, ಉರ್ದು ಪ್ರೌಢಶಾಲೆ, ಮುಲ್ಲಾನ ಕೆರೆಯ ಮೂಲಕ ಹಾವೇರಿ ಸಿ ಬ್ಲಾಕ್ ಬಸವೇಶ್ವರ ನಗರದಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಗೆ ಸಂಪರ್ಕಿಸುತ್ತದೆ. ಈರಸ್ತೆಯ ಓಡಾಡಲು ಸಾರ್ವಜನಿಕರು ಗುಂಡಿಗೆಯನ್ನು ಗಟ್ಟಿಮಾಡಿಕೊಂಡು ಓಡಾಡಬೇಕಿದೆ.
ಸಾರ್ವಜನಿಕರು, ವಾಹನಸವಾರರು, ಪಾದಚಾರಿಗಳು ಹೇಳಲಾರದಷ್ಟು ಸಂಕಷ್ಠ ಎದುರಿಸುತ್ತಿದ್ದಾರೆ. ವಾಹನ ಸವಾರರು ಶಾಲಾ- ಕಾಲೇಜುಗಳಿಗೆ ಹೊಗುವ ವಿದ್ಯಾರ್ಥಿಗಳು ನಗರಸಭೆಗೆ, ಸಂಬಂಧಿದ ಇಲಾಖೆಯ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುವಂತಾಗಿದೆ. ತಗ್ಗು, ಗುಂಡಿಗಳನ್ನು ಸಣ್ಣ ಕಲ್ಲಿನಪುಡಿಯನ್ನು ಹಾಕಿ ಮುಚ್ಚುವ ಕೆಲಸಕ್ಕೆ ಸಂಬಂಧಿಸಿದವರು ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹತ್ತಾರು ಟ್ರಾಕ್ಟರ್ ಕಲ್ಲು ಮಿಶ್ರಿತ ಗೊರಚು, ಕಲ್ಲಿನ ಪುಡಿಹಾಕಿದರೆ ಸಾಕು ಸಂಚಾರಕ್ಕೆ ಅನುಕೂಲವಾಗುತ್ತದೆ. ಆದರೆ ನಗರಸಭೆಯ ನಿರ್ಲಕ್ಷದಿಂದಾಗಿ ವಾಹನ ಸವಾರರು ಆಯತಪ್ಪಿ ಗುಂಡಿಗಳಲ್ಲಿ ಬಿದ್ದಿದ್ದಾರೆ. ಕೆಲವರು ಆಸ್ಪತ್ರೆಯನ್ನು ಸೇರಿದ್ದಾರೆ. ಈ ಬಗ್ಗೆ ತೀವೃ ಆಕ್ರೋಶ ವ್ಯಕ್ತಪಡಿಸಿರುವ ನಿವೃತ್ತ ಡಿಡಿಪಿಯು ಎಂ.ಆಂಜನೇತ ಅವರು, ಈರಸ್ತೆಯ ದುರಸ್ತಿಯ ಬಗ್ಗೆ ಈ ಹಿಂದೆಯೇ ಸಂಬಂಧಿಸಿದ ಇಲಾಖೆಯ ವರ ಅವಗಾಹನೆಗೆ ತರಲಾಗಿತ್ತು. ಆದರೆ ಅವರು ರಸ್ತೆ ದುರಸ್ತಿಗೆ ಮುಂದಾಗಿಲ್ಲ. ಇಲ್ಲಿನ ನಿವಾಸಿಗಳು, ವಿದ್ಯಾರ್ಥಿಗಳು ವಾಹನ ಸವಾರರು ಸೇರಿ ಸಾರ್ವಜನಿಕರೊಂದಿಗೆ ರಸ್ತೆ ದುರಸ್ತಿಗಾಗಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದು ಹಾವೇರಿ ನಗರದ