ಇ-ಸ್ವತ್ತು ಉತಾರ ಪೂರೈಸಲು ಲಂಚ ಸ್ವೀಕಾರ, ಹಲಗೇರಿ ಪಿ.ಡಿ.ಓ,ಗ್ರಾ.ಪಂ ಉಪಾಧ್ಯಕ್ಷ ,03 ಜನ ಗ್ರಾ.ಪಂ ಸದಸ್ಯರ ಬಂಧನ
ಹಾವೇರಿ:ಇ-ಸ್ವತ್ತು ಉತಾರ ಪೂರೈಸಲು ಲಂಚ ಸ್ವೀಕಾರಿಸುತ್ತಿದ್ದ ಹಲಗೇರಿ ಪಿ.ಡಿ.ಓ,ಗ್ರಾ.ಪಂ ಉಪಾಧ್ಯಕ್ಷ ಹಾಗೂ 03 ಜನ ಗ್ರಾ.ಪಂ ಸದಸ್ಯರನ್ನು ಹಾವೇರಿ ಲೋಕಾಯುಕ್ತ ಪೊಲೀಸ್ ರು ಬಂಧಿಸಿದ್ದಾರೆ.
ರಾಣೆಬೆನ್ನೂರಿನ ನವೀನ ಮಲ್ಲೇಶಪ್ಪ ಅಂದನೂರ ಸಾಗಿ ರಾಣೆಬೆನ್ನೂರ ತಾಲೂಕು ಹಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಿ.ಸ.ನಂ 241/*/2ಅ ನೇ ಜಮೀನಿನನ್ನು ಎನ್.ಎ ಡೆವಲಪ್ಮೆಂಟ್ ಮಾಡಿಸಿದ್ದು, ಒಟ್ಟು 124 ಪ್ಲಾಟ್ಗಳ ಪೈಕಿ 60 ಪ್ಲಾಟುಗಳ ಇ-ಸ್ವತ್ತು ಉತಾರಗಳನ್ನು ಪೂರೈಸಲು ಪಿ.ಡಿ.ಓ ಕೆ ಮಂಜುನಾಥ ರೂ 1,00,000/- ಗಳ ಲಂಚದ ಹಣವನ್ನು ಈಗಾಗಲೇ ಸ್ವೀಕರಿಸಿಕೊಂಡಿದ್ದು, ಬಾಕಿ ಉಳಿದ 64 ಪ್ಲಾಟುಗಳ ಇ-ಸ್ವತ್ತು ಉತಾರಗಳನ್ನು ಪೂರೈಸಲು ಹಲಗೇರಿ ಗ್ರಾ.ಪಂಉಪಾಧ್ಯಕ್ಷ ಮಲ್ಲಪ್ಪ ತಿರಕಪ್ಪ ಬೂದಿಹಾಳ, ಗ್ರಾ.ಪಂ ಸದಸ್ಯರಾದ ಸೋಮಶೇಖರ ಕನ್ನಪ್ಪಳವರ , ಪ್ರಸನ್ನ ಬಣಕಾರ, ಸೈಯ್ಯದ್ರೆಹಮಾನ ಕರ್ಜಗಿ @ ಭಾಷಾಸಾಬ್ ಅವರು ಸದರಿ ಪ್ರಕರಣದ ದೂರುದಾರನಿಂದ ಇ-ಸ್ವತ್ತು ಉತಾರಗಳನ್ನು ಪೂರೈಸಲು ರೂ 4,50,000/-ಗಳಿಗೆ ಬೇಡಿಕೆ ಇಟ್ಟು ನಂತರ ರೂ 4,00,000/- ಗಳಿಗೆ ಒಪ್ಪಿಕೊಂಡು ಲಂಚದ ಹಣವನ್ನು ಪಡೆದುಕೊಳ್ಳುವಾಗ ಯಶಸ್ವಿಯಾಗಿ ಟ್ರ್ಯಾಪ್ ಮಾಡಿದ್ದಾರೆ.
.ಸದರಿ ಪ್ರಕರಣದ ತನಿಖೆಯನ್ನು ದಾವಣಗೆರೆ ಲೋಕಾಯುಕ್ತ ಎಸ್ಪಿ
ಎಮ್ ಎಸ್ ಕೌಲಾಪುರೆ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ
ಮಧುಸೂದನ ಸಿ,
ನೇತೃತ್ವದಲ್ಲಿ ತನಿಖಾಧಿಕಾರಿಗಳಾದ ಬಸವರಾಜ ಹಳಬಣ್ಣನವರ, ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿ ರವರಾದ ಸಿ ಎಮ್ ಬಾರ್ಕಿ, ಎಮ್ ಕೆ ನದಾಫ, ಟಿ ಇ ತಿರುಮಲೆ, ಬಿ ಎಮ್ ಕರ್ಜಗಿ, ಎಮ್ ಕೆ ಲಕ್ಷ್ಮೀಶ್ವರ, ಆನಂದ ತಳಕಲ್ಲ, ಎಸ್ ಎನ್ ಕಡಕೋಳ, ಎಮ್ ಬಿ ಲಂಗೋಟಿ, ಆರ್ ವೈ ಗೆಜ್ಜೆಹಳ್ಳಿ, ಶಿವರಾಜ ಲಿಂಗಮ್ಮನವರ, ಎಮ್ ಎಸ್ ಕೊಂಬಳಿ, ನಿರಂಜನ ಪಾಟೀಲ್, ಬಿ ಎಸ್ ಸಂಕಣ್ಣನವರ, ಆನಂದ ಶೆಟ್ಟರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುತ್ತಾರೆ. ಸದರಿ ಆರೋಪಿತರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ.