ಉತ್ತರ ಕರ್ನಾಟಕದ ಅಭಿವೃದ್ಧಿ ನಿರ್ಲಕ್ಷಿಸಿದರೆ ಉ.ಕ.ಪತ್ಯೇಕ ರಾಜ್ಯ ಹೋರಾಟ ಅನಿವಾರ್ಯ:
ನ್ಯಾ. ಹನುಮಂತಪ್ಪ ಬಂಡಿವಡ್ಡರ
ಹಾವೇರಿ; ಅಖಂಡ ಕರ್ನಾಟಕ ಅಸ್ತಿತ್ವಕ್ಕೆ ಬಂದ ಹಲವಾರು ದಶಕಗಳು ಕಳೆದರು ಸಹ ಉತ್ತರ ಕರ್ನಾಟಕ ಎಲ್ಲ ಕ್ಷೇತ್ರದಲ್ಲಿ ಹಿಂದುಳಿದೆ.ಆಳುವ ಸರ್ಕಾರ ಉತ್ತರ ಕರ್ನಾಟಕ ದ ಅಭಿವೃದ್ಧಿಗೆ ಪ್ರಸ್ತುತ ಬೆಳಗಾವಿ ಯಲ್ಲಿ ನಡೆದಿರುವ ಅಧಿವೇಶನದಲ್ಲಿ ಚರ್ಚಿಸಿ ನಿರ್ಣಯ ಅಂಗೀಕರಿಸಬೇಕೆಂದು ಉತ್ತರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ, ನ್ಯಾಯವಾದಿ ಹನುಮಂತಪ್ಪ.
ಬಂಡಿವಡ್ಡರ ಆಗ್ರಹಿಸಿದರು.
ಶುಕ್ರವಾರ ಈ ಬಗ್ಗೆ ಜಿಲ್ಲಾಡಳಿತ ದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿ ಮಾತನಾಡಿದ ಅವರು
ವರದಾ , ತುಂಗಭದ್ರಾ ನದಿಗಳ ನೀರು
ಬೇಡ್ತಿ, ಕಾಳಿನದಿಗಳ ನೀರಿನ ಸದ್ಬಳಕೆ ಆಗಬೇಕು, ರಸ್ತೆ ಗಳ ಸುಧಾ ರಣೆಯಾಗಬೇಕು.ಗಡಿ ವಿವಾದವನ್ನು ತ್ರಿಬಲಗ ಇಂಜನ್ ಬಿಜೆಪಿ ಸರ್ಕಾರ ಗಳು ಬಗೆ ಹರಿಸಬೇಕು. ಗಡಿ ಭಾಗಗಳ ರಕ್ಷಣೆ ಗಾಗಿ, ಅಲ್ಲಿನ ಜನತ ಬೇಡಿಕೆಯ ಬಗ್ಗೆ ಗಮನ ಹರಿಸಬೇಕು.
ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ದೊರೆಯುತ್ತಿಲ್ಲ. ಈ ಬಗ್ಗೆ ಸರೋಜನಿ ಮಹಿಷಿ ವರದಿ ಜಾರಿಮಾಡಿ ಕಾನೂನು ಮಾಡಬೇಕು.
ನಂಜುಂಡಪ್ಪನವರ ವರದಿ ಪ್ರಕಾರ ಉತ್ತರ ಕರ್ನಾಟಕ ಅಭಿವೃದ್ಧಿ ಆಗಿರುವದಿಲ್ಲ. ಸಮಗ್ರ ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕು.
ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗಕ್ಕೆ ಮೀಸಲು ಕಲ್ಪಿಸುವ ಕಾನೂನು ಜಾರಿಗೆ ತರಬೇಕು.
ಉದ್ಯೋಗ ಸೃಷ್ಠಿಸದ ಉದ್ಯಮಗಳು ನಮಗೆ ಬೇಡ. ಜಾಗತಿಕ ಹೂಡಿಕೆಯಾಗಲಿ, ಸ್ಥಳೀಯ ಹೂಡಿಕೆಗಳಾಗಲಿ ಕಡ್ಡಾಯವಾಗಿ ಸ್ಥಳೀಯರಿಗೆ ಉದ್ಯೋಗಕ್ಕೆ ಮೀಸಲು ಕಲ್ಪಿಸುವ ಕಾನೂನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಶಿಕ್ಷಣ, ಉದ್ಯೋಗ, ಆರೋಗ್ಯದ ಪ್ರಶ್ನೆಗಳು ಮುಖ್ಯವಾಗಿರಬೇಕಾಗಿದ್ದ ಈ ಸಂಕಷ್ಟದ ಸಂದರ್ಭದಲ್ಲಿ ಯುವಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಸರಕಾರಗಳೇ ಕೆಲಸ ಮಾಡುತ್ತಿವೆ. ವಿರೋಧ ಪಕ್ಷಗಳು ಕೂಡ ಇದನ್ನು ಗಂಭೀರವಾಗಿ ಪರಿಗಣಿಸದಿರುವುದು ಶೋಚನೀಯ ಎಂದು ಹನುಮಂತ ಬಂಡಿವಡ್ಡರ ಆರೋಪಿಸಿದರು.
ಸರೋಜಿನಿ ಮಹಿಷಿ ವರದಿಯನ್ನು ಈಗ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ತೀರ್ಮಾನಿಸಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಸಮಗ್ರ ಕರ್ನಾಟಕ ನಿರ್ಮಾಣವಾಗಿ ಏಳು ದಶಕ ಕಳೆದರೂ ಉತ್ತರ ಕರ್ನಾಟಕದ ೧೪ ಜಿಲ್ಲೆಗಳು ಯಾವುದೇ ಅಭಿವೃದ್ಧಿ ಕಾಣಲು ಇಂದಿಗೂ ಸಾಧ್ಯವಾಗಿಲ್ಲ. ಇದು ಅತ್ಯಂತ ಬೇಸರ ಸಂಗತಿಯಾಗಿದೆ. ತೆಲಂಗಾಣ ಮಾದರಿಯಲ್ಲಿ ಹೋರಾಟ ಮುಂದುವರೆಯಲಿದೆ .
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ನಮ್ಮ ಹಕ್ಕು ಹೊಸ ರಾಜ್ಯಕ್ಕಾಗಿ ಕಳೆದ ಎರಡು ದಶಕದಿಂದ ಕೂಗು ಇದ್ದು, ಸಾಕಷ್ಟು ಬಾರಿ ಹೋರಾಟ ಕೂಡ ನಡೆದುಕೊಂಡ ಬಂದಿವೆ .
ಉತ್ತರ ಕರ್ನಾಟಕ ರಕ್ಷಣಾ ವೇದಿಕೆ ನಾಡಿನ ನೆಲ,ಜಲ,ಭಾಷೆ ಉಳಿಸಲು ಸದಾ ಹೋರಾಟ ನಡೆಸಿಕೊಂಡು ಬಂದಿದೆ. ಉತ್ತರ ಕರ್ನಾಟಕ ಜನರಿಗಾದ ಅನ್ಯಾಯವನ್ನು ಎಂದು ಸಹಿಸಲ್ಲ. ಪತ್ಯೇಕ ರಾಜ್ಯ ನೀಡಿಲೇ ಬೇಕು ಇದರ ಕುರಿತು ಈಗ ನಡೆದಿರುವ ಬೆಳಗಾವಿ ಸುವರ್ಣಸೌಧ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ನಡೆಯಲಿ ಎಂದು ಉತ್ತರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಹನುಮಂತಪ್ಪ ಬಂಡಿವಡ್ಡರ್ ಆಗ್ರಹ ಮಾಡಿದರು. ಹಾವೇರಿ ಜಿಲ್ಲೆಯವರೇ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದರು ಅವರ ಕೊಡುಗೆ ಶೂನ್ಯ. ಮಲತಾಯಿ ಧೋರಣೆ ಮುಂದುವರೆಸಿಕೊಂಡು ಹೋಗಿತ್ತಿದ್ದಾರೆ. ತಮ್ಮ ಸ್ವಕ್ಷೇತ್ರದ ಬಡ ರೈತರು ಹಕ್ಕುಪತ್ರಕ್ಕಾಗಿ ಅಂಗಲಾಚಿದರೂ ನ್ಯಾಯ ದೊರೆಯುತ್ತಿಲ್ಲ. ಇದೇ ತರಹ ಇಡಿ ಉತ್ತರ ಕರ್ನಾಟಕ ಪರಿಸ್ಥಿತಿ ಜೀವಂತವಾಗಿ ಇಟ್ಟುಕೊಂಡು ಬಂದಿದ್ದಾರೆ.
ತಮ್ಮ ರಾಜಕೀಯ ಲಾಭಕ್ಕಾಗಿ ಬಡಿದಾಡುತ್ತಿರುವ ಇಂತಹ ಸ್ವಾರ್ಥ ರಾಜಕಾರಣಿ ಗಳಿಂದ ಉತ್ತರ ಕರ್ನಾಟಕ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಉತ್ತರ ಕರ್ನಾಟಕ ಹೆಸರಲ್ಲಿ ಲಕಾಂತರ ಕೋಟಿ ಸಾರ್ವಜನಿಕ ಹಣ ಲೂಟಿ ಮಾಡಲಾಗಿದೆ. ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕಾದರೆ ಈ ಭಾಗದ ಜನರು ಸರ್ವಾಂಗೀಣ ಅಭಿವೃದ್ಧಿ ಕಾಣಬೇಕಾದರೆ ಪತ್ಯೇಕತೆ ಅನಿವಾರ್ಯ ಎಂದು ಆಡಳಿತ ಸರಕಾರಗಳ ವೈಪಲ್ಯಗಳ ವಿರುದ್ಧ ಹರಿಹಾಯ್ದರು. ಹಾವೇರಿ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್, ವಿಮಾನ ನಿಲ್ದಾಣ, ಕೈಗಾರಿಕಾ, ಐಟಿ,ಬಿಟಿ ತಂತ್ರಜ್ಞಾನ ಕೇಂದ್ರಗಳ ಸ್ಥಾಪನೆ ಯುವಕರಿಗೆ ಹೆಚ್ಚೇಚ್ಚು ಉದ್ಯೋಗಕ್ಕಾಗಿ ಉತ್ತರ ಕರ್ನಾಟಕದ ಯುವಕರಿಗೆ ಆದ್ಯತೆ, ರೈತರ ಏಳಿಗೆಗೆ ನೀರಾವರಿ, ಬೆಂಬಲ ಬೆಲೆ, ಬಡವರಿಗೆ ನಿರಂತರ ಕೂಲಿ, ಮನೆ,ಶಿಕ್ಷಣ,ರಸ್ತೆ, ವಿದ್ಯುತ್, ಇವೇಲ್ಲ ಸೌಲಭ್ಯ ದೊರಯಲೇ ಬೇಕು ಆದರೆ ಇಲ್ಲಿಯ ವರೆಗೂ ಈ ಬಾಗಕ್ಕೆ ಅನ್ಯಾಯ ಮಾಡಲಾಗಿದೆ. ಇದಕ್ಕೆ ಒಂದೆ ದಾರಿ ಅದೇ ಪತ್ಯೇಕ ರಾಜ್ಯದ ನಮ್ಮ ಹಕ್ಕು ಪಡೆಯಲು ಎಲ್ಲರೂ ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸಿ.ಎಂ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಹನುಮಂತಪ್ಪ ಬಂಡಿವಡ್ಡರ್, ಜಿಲ್ಲಾಧ್ಯಕ್ಷ ರಾಜುಗೌಡ ಪಾಟೀಲ್, ತಾಲೂಕಾಧ್ಯಕ್ಷ ಮಂಜು ಹುರಳಿಕೊಪ್ಪಿ, ಬಸವರಾಜ ಹಂಚಿನಮನಿ, ಲೋಕೇಶ ಹಂಚಿನಮನಿ ಹನುಮಂತಪ್ಪ ಕಾಳಿ, ಲಕ್ಷ್ಮವ್ಬ ಹರಿಜನ, ಹಜರತಬಿ ನದಾಪ್, ಸೇರಿದಂತೆ ಇನ್ನುಅನೇಕರು ಹಾಜರಿದ್ದರು.